ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯುವ ಉತ್ಸಾಹಿ ಬೋರೇಗೌಡನ ಅನಂತಯಾನ - ಸ್ಪೂರ್ತಿದಾಯಕ ಲೇಖನ - ಸಂತೋಷ್ ಕುಮಾರ್ ಸಿ

ಯುವ ಉತ್ಸಾಹಿ ಬೋರೇಗೌಡನ ಅನಂತಯಾನ      ನನ್ನ ಪ್ರಕಾರ ಸಾಧಕ ಎಂದರೆ ನಿರ್ದಿಷ್ಟವಾದ ಗುರಿ ಮುಟ್ಟುವುದು. ಸಾಧಕ ಎಂದಿಗೂ ಗುರಿ ಮುಟ್ಟಿ ನಿಲ್ಲಬಾರದು, ನಿರಂತರ ಶ್ರಮದ ಮೂಲಕ ಸಾಧನೆಯ ಉತ್ತುಂಗ ಮಟ್ಟವನ್ನು ಅಲಂಕರಿಸಿ, ಇತರರಿಗೆ ಮಾದರಿಯಾಗಬೇಕು. ನಾನು ಪರಿಚಯಿಸುತ್ತಿರುವ ವ್ಯಕ್ತಿಯನ್ನು ಸಾಧಕ ಅನ್ನುವುದರ ಬದಲು ಸಾಧನೆಯ ಹಾದಿಯಲ್ಲಿ ಚಲಿಸುತ್ತಿರುವ ಛಲಗಾರ ಎನ್ನಲು ಇಚ್ಛಿಸುವೆ.      ಬೋರೇಗೌಡ ಕೆ.ಎನ್ ಅವರು ಈಗಾಗಲೇ ಸಾಹಿತ್ಯ ಸೇವೆ ಹಾಗೂ ರಂಗಭೂಮಿಯ ಮೂಲಕ ಹಲವರಿಗೆ ಅನಂತ ಎಂದು ಪರಿಚಯವಿರಬಹುದು. ಇವರು ಹುಟ್ಟಿದ್ದು ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಒಂದು ಬಡ ಕುಟುಂಬದಲ್ಲಿ. ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲೆ, ರಾಮನಗರ ಜಿಲ್ಲೆಯಲ್ಲಿ ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ. ಬೆಂಗಳೂರಿನಲ್ಲಿ ವಿಜ್ಞಾನ ಪದವಿ ಹಾಗೂ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿಯಲ್ಲಿ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ ಮುಗಿಸಿ, ಸಧ್ಯ ಚಲನಚಿತ್ರ ನಿರ್ದೇಶಕರಾಗುವ ತಮ್ಮ ಕನಸಿನತ್ತ ಪಯಣಿಸುತ್ತಿದ್ದಾರೆ. ಈಗಾಗಲೇ ಹಲವಾರು ಕಿರು ನಾಟಕಗಳು ಹಾಗೂ ಕಿರುಚಿತ್ರಗಳನ್ನು ನಿರ್ದೇಶಿಸಿ ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.      ಇವರಿಗೆ ಸುಮಾರು 21 ವರ್ಷ ಆಗಿತ್ತು ಬೋರೇಗೌಡ ಅನಂತನಾಗಿ ಕಾಣಿಸಿಕೊಂಡಾಗ. ಅನಂತ ಎಂಬ ಹೆಸರಿನಲ್ಲೇ ಇದೆ 'ಕೊನೆ...

ನನ್ನಪ್ಪ - ಅಪ್ಪಂದಿರ ದಿನದ ವಿಶೇಷ ಕವಿತೆ - ಅನಂತ ಕುಣಿಗಲ್

ನನ್ನಪ್ಪ ಉಳ್ಳವರು ಬರೆಯುವರು ಇಲ್ಲದವನು ನಾನೇನ ಬರೆಯಲಿ? ಅಪ್ಪನೆಂಬುದು ನೆಪ್ಪು ಕಾಪಿಟ್ಟುಕೊಂಡಿರುವ ನೆನಪುಗಳೇ ನನಗೆ ಅಪ್ಪ ಆದರೂ ಬರೆಯುವೆ ನೋವ ಕಳೆಯುವೆ ಜಗದ ಪರಿವೆ ಮರೆತು ಹಾಡುವೆ ಅಪ್ಪನ ನೆನೆದು ದಿನವೂ ಪ್ರತಿದಿನವೂ ಜನ್ಮವೂ ಪ್ರತಿಜನ್ಮವು ಇಲ್ಲದ ಭಾವ ಬಲಿಸಿದ ಜೀವ ಎತ್ತ ನೋಡಿದರೂ ಅದೇ ಮುಖ, ಅದೇ ಸದ್ಧು ಅದೇ ಚಹರೆ ಅದೇ ಪಹರೆ ಅದೇ ರೂಪ, ಅದೇ ಕೋಪ ಬಡವ ಕಣ್ರೀ ನನ್ನಪ್ಪ ಮದ್ಯಪ್ರಿಯ, ಶೋಕ ವ್ಯಯ ಲೋಕೋಪಚಾರಿ ನನ್ನಪ್ಪ ಅಪ್ಪನಾಗುವುದೆಂದರೆ ಸುಲಭವೇನು? ಮಕ್ಕಳಾದ ಹಾಗೆ! ಗಾಯಗಳಿಗೆ ಸಾರಾಯಿ ಕುಡಿವ ವೈದ್ಯ ನನ್ನಪ್ಪ ಕಳ್ಳ ಮೋಸ ಮಾಡಿದ ಪಾಪವ ಅಮಲಿನಲ್ಲೇ ಒಪ್ಪಿಕೊಳ್ಳುವ ಪೋಲೀಸು ನನ್ನಪ್ಪ ಹೆಗಲ ಮೇಲೆ ಹೊತ್ತು ಊರ ಸುತ್ತಿಸಿ, ಜಗವ ತೋರಿದ ಮಹಾಗುರು ನನ್ನಪ್ಪ ಹರಿದ ಬಟ್ಟೆಗೆ ತ್ಯಾಪೆ ಹಾಕಿ ವರ್ಷ ಕಳೆದವನೇ ನನ್ನಪ್ಪ ಯಾರಿಗೆ ಹೇಳಲಿ ಶುಭಾಷಯ ಇಲ್ಲದ ಅಪ್ಪನ ನೆನೆದು? ನಾನೇ ಈಗ ಅಪ್ಪನ ರೂಪ ಎಂದು ತಿಳಿದು ನುಂಗುವೆ ಗಂಟಲಲ್ಲೇ ಶುಭಾಷಯ ಇದು ನೋವನು ಮರೆವ ಪರಿ ಅಪ್ಪ ನನ್ನನ್ನು ಕಾಡುವ ಪರಿ!                            - ಅನಂತ ಕುಣಿಗಲ್

ಅಪ್ಪಂದಿರ ದಿನದ ಶುಭಾಷಯಗಳು - ದೀಕ್ಷಿತ್ ನಾಯರ್ ಮಂಡ್ಯ

ಅದೆಷ್ಟೋ ಮಕ್ಕಳ ಪಾಲಿಗೆ ಅಪ್ಪ ಎಂಬುವವನು ಇಂದಿಗೂ ರಾಕ್ಷಸನಾಗಿ ಉಳಿದಿದ್ದಾನೆ. ನಮಗೆ ಒಳ್ಳೆಯ ಅಪ್ಪನಿರಬಹುದು ಆದರೆ ಇತರರಿಗೆ? ಸಂತಸದ ಉಯ್ಯಾಲೆಯಲ್ಲಿ ಜೀಕುತ್ತಿರುವ ನಾವುಗಳು ಎಲ್ಲರ ಮನೆಯ ಅಪ್ಪನ ನಿಜ ಸ್ವರೂಪ  ತಿಳಿಯೋಣವೇ? ಕಥೆ ಗೆಳೆಯನದು ಕವಿತೆಯ ರೂಪ ಕೊಟ್ಟವನು ನಾನು. ಅಪ್ಪಂದಿರ ದಿನದ ಶುಭಾಶಯಗಳು ಮದ್ಯದಂಗಡಿಯ ಖಾಯಂ ಗಿರಾಕಿ ನನ್ನಪ್ಪ! ಮನೆಯಾಚೆಗಿನ ಪಡಸಾಲೆಯಲ್ಲಿ ಕೂತು ಕೆಮ್ಮಿ ಕ್ಯಾಕರಿಸಿ ಕಾರಿಕೊಳ್ಳು -ವವನು ನನ್ನಪ್ಪ! ಅವನಿಗೆ "ಅಪ್ಪಂದಿರ ದಿನದ ಶುಭಾಶಯಗಳು" ಹೆಂಗಸರ ಖಯಾಲಿಗೆ ಬಿದ್ದು ನನ್ನವ್ವನನ್ನು ಪಶುವಿನಂತೆ ಹಿಂಸಿಸಿದ ಲೋಲುಪ ನನ್ನಪ್ಪ! ಸಮಾಜಕ್ಕೆ ಅಂಜಿ ಬದುಕ ನೇರ್ಪುಗೊಳಿಸುತ್ತಿದ್ದ ನನ್ನವ್ವನಿಗೆ ಸೂಳೆಯ ಪಟ್ಟ ಕಟ್ಟಿದವನು ನನ್ನಪ್ಪ! ಅವನಿಗೆ "ಅಪ್ಪಂದಿರ ದಿನದ ಶುಭಾಶಯಗಳು" ಮಕ್ಕಳೆಂಬ ಕಬರಿಲ್ಲದೆ ವಾಚಾಮಗೋಚರ ಬೈದು ಸದಾ ಬಡಿಯುತ್ತಿದ್ದವನು ನನ್ನಪ್ಪ! ಅವ್ವನ ದುಪ್ಪಟದೊಳಗೆ ಕೈ ಹಾಕಿ ಹಣ ಒಯ್ಯುತ್ತಿದ್ದವನು ನನ್ನಪ್ಪ! ಅವನಿಗೆ "ಅಪ್ಪಂದಿರ ದಿನದ ಶುಭಾಶಯಗಳು" ಅವನಲ್ಲಿ ವಾತ್ಸಲ್ಯವೆಂಬುದು ಎಂದೋ ಸತ್ತು ಹೋಗಿತ್ತು, ಕೋಟಿ ವಂಚನೆಗಳ ಕಲ್ಪನಾ ಲೋಕದಲ್ಲಿ ಸಿಲುಕಿಕೊಂಡಿದ್ದ! ಅವನ ಕೊಳಕು ದಿರಿಸು ನೋಡಿದರೆ ಗಂಟಲುಬ್ಬಿ ಬರುತ್ತಿತ್ತು. ನನ್ನ ಹುಟ್ಟಿಗೆ ಕಾರಣನಾದನಲ್ಲ? ಅದಕ್ಕಾಗಿ ಅವನಿಗೆ "ಅಪ್ಪಂದಿರ ದಿನದ ಶುಭಾಶಯಗಳು" ಕೊನೆ ಘಳಿಗೆಯವರೆಗೂ "ಮಗ...

ಮಾತಿನ ಸಲ್ಲಾಪ - ಕವಿತೆ - ದೀಪಿಕಾ ಮಾರಗಟ್ಟ

ಮಾತಿನ ಸಲ್ಲಾಪ ಮೌನದೂರಲ್ಲೂ ಒಂದು ಮಾತಿತ್ತು ನಿಶಬ್ಧತೆಯಲ್ಲೂ ಒಂದು ಶಬ್ದ ಅಡಕವಾಗಿತ್ತು, ಅದೇ ಪ್ರೀತಿಯ ಚಹರೆಯಂತೆ..! ಅವಳು ವಟ ಗುಟ್ಟುವ ಕಪ್ಪೆಯಂತೆ, ಇವನು ಅವಳ ಮಾತಿಗೆ ತಲೆದೂಗುವ  ಮಾತುಬಾರದ  ಹುಂಬನಂತ..! ಅವಳು ಹೇಳುತಲೇ ಇದ್ದಾಳೆ, ಅವನು ಮಾತ್ರ ಅವಳ ಕಣ್ಣ ಕೊಳದಲ್ಲಿ ಮಿಂದು ಕಾಡಿಗೆಯ ತೀಡಿ ಬಲು ಮಜುಬೂತಾದ ಮೋಹಕತೆಗೆ ಜಾರಿದ್ದಾನೆ..! ಅವಳು ಹೇಳುತಲೇ ಇದ್ದಾಳೆ, ಅವನೋ, ಆ ಅದರದ  ಮಧು ಸವೆದ ನಶೆಗೆ ತೆಲಾಡಿ ಮುಂಗುರುಳ ಕಳ್ಳಾಟಕ್ಕೆ ರೋಮಗಳು ನವೀರಾದಂತೆ ಕಂಪಿಸುತ್ತಿದ್ದಾನೆ..! ಅವಳು ಹೇಳುತಲೇ ಹೋದಳು, ಅವನೋ ಅವಳ ಭಾವ ಪರವಶಕ್ಕೆ ತನ್ನನ್ನೇ ಅವಳಿಗರ್ಪಿಸುತ್ತ ಸುಂದರವಾದ ಯೋಜನೆಯಲ್ಲಿ ಹೇರಳಕ್ಕೆ ಕೈ ಸೋಕಿಸಿದಾಗ ಅವಳಲ್ಲೊಂದು ಸಂಚಲನ..! ಇನ್ನೂ ಅವಳ ಮಾತು ಸ್ತಬ್ಧ...! ಇನ್ನೂ ಮಾತೆಲ್ಲ ಅವನದೇ..! ಮಧುರ ಮಾತು, ಸುಮಧುರ ಮೌನ ಇನ್ನೂ ಹೇಳಲೆನಿದೆ.... ದೀಪದ ಕಿರಣವದು ಪ್ರಜ್ವಲಿಸಿ ಸಣ್ಣದೊಂದು ಕಥೆಯ ಸಾರುವ ಬಗೆಗೆ ಸಾಕ್ಷಿಯಾಗದೆ ಆ ಕತ್ತಲು ಬೆಳಕಿನ ಆಟಕ್ಕೆ..! ಮನದ ನೂರೆಂಟು ಬಯಕೆಯ ಕೂಟಕ್ಕೆ ಅವನ ಮಾತು....ಅವಳ ಮೌನ... ತೆಕರಿಕೆಯಲ್ಲೂ ಬೆವರಿನ ಉಮ್ಮಳಿಕೆ. ಎಲ್ಲಾ ಚಂದ ಚಂದ ಚಂದ...! ಪ್ರಕೃತಿಯ ರಸಿಕತೆಯ ಭಾವ ಅಂದ..! ಇದು ಹೊಸಗೆಯ ಸೊಗಸ ಮಿಲನ..!! ಅವರಿಬ್ಬರ ಮಧುರತೆಯ ಸಮ್ಮಿಲನ..!!                       - ದೀಪಿಕಾ ಮಾರ...

ಅಮ್ಮಾ ಎಂದರೆ - ಕವಿತೆ - ರಂಜಿತ ಪಿ ಆರ್

ಅಮ್ಮಾ ಎಂದರೆ ! ಮೈನೆರೆದು ವರುಷ ಕಳೆದರೂ ಹುಡುಗರೊಂದಿಗೆ ಗೋಲಿ,ಚಿನ್ನಿ ಆಡುತ್ತಿದ್ದ ನನ್ನ ಕಪಿಚೇಷ್ಟೆಯ  ಸಹಿಸಲಾಗದೆ ಪೊರಕೆ ಪೂಜೆ ಮಾಡಿದರೂ ಮತ್ತೆ ಪ್ರೀತಿಯಿಂದ ಮೀನು ಸಾರು,ಮುದ್ದೆ ಬಡಿಸುತ್ತಿದ್ದ ನನ್ನಮ್ಮನ ಪ್ರೀತಿ ಆಕಾಶಕ್ಕೂ ಅಗಲದ್ದು! ಇದ್ದೊಂದು ಚೆಂದದ ಸೀರೆ ಹರಿದು  ರವಿಕೆ ಲಂಗ ಹೊಲಿಸಿದ್ದಳು ಕೋಲಾಟಕ್ಕೆಂದು ಪಾಪ,ಎಷ್ಟೋ ಬಾರಿ ನನ್ನ ಕುಣಿತ ನೋಡಲು ಬಾರದಿದ್ದರೂ ಬೆನ್ನುಲಾಬಾಗಿ ನಿಂತ ಅವಳ ಸ್ಫೂರ್ತಿ  ಉಸಿರೆರೆವ ಗಾಳಿಗೂ ಮೀರಿದ್ದು! ಮಾತು ಕಲಿಸಿದ್ದ ಮರೆತು ನಾಲಿಗೆ ಶಕ್ತಿ ಪ್ರದರ್ಶಿಸಿದ್ದೂ ಇದೆ ಅಂದು, ಸೋಮಾರಿಯಾಗಿ ಆ ಸಣಕಲು  ಶರೀರಕ್ಕೆ ನೆರವಾಗದಿದ್ದರೂ ಸುಮ್ಮನಾಗುತ್ತಿದ್ದಳು ಇನ್ನೂ ಚಿಕ್ಕವಳೆಂದು,ಅವಳ ಮಾನವತೆ ತಿಳಿನೀರಿಗೂ ಪರಿಶುದ್ಧವಾದದ್ದು! ನಗುತ್ತಾ ನಗಿಸುತ್ತಾ ದೇಹಿ ಎಂದವರಿಗೆ ಕೈತುಂಬಾ ಕೊಡುವ ದಾನಗುಣವ ಊರೇ ಹೊಗಳುತ್ತಿತ್ತು,ಮೆಲ್ಲಗೆ ನಮ್ಮ ಅಂಗಡಿಗೆ ಬಂದು ಚುಡಾಯಿಸುತ್ತಿದ್ದ ಹುಡುಗರ ಉಗಿದು ಅಟ್ಟುತ್ತಿದ್ದ ಆ ಕೋಪ ಉರಿವ ಅಗ್ನಿಗೆ ಸಮವಾಗಿತ್ತು! ಕಾಯಿಲೆ ಇಡೀ ದೇಹವ ಸುಡುತ್ತಿದ್ದರೂ ನೋವ ನುಂಗಿದಳು,ನೋವಲ್ಲೇ ಹುಟ್ಟಿ, ನೋವಲ್ಲೇ ಬೆಳೆದು, ನೋವಲ್ಲೇ ಸತ್ತು ಬಾಲ್ಯದಲ್ಲೇ ನನಗೆ ಶಾಶ್ವತ ನೋವು ಕೊಟ್ಟು ಹೋದ ಅವಳ ತ್ಯಾಗ ಭೂಮಿತಾಯಿಗೂ ಮಿಗಿಲಾದದ್ದು ! ಇರಬೇಕಿತ್ತು ನನ್ನಮ್ಮ ನಾ ಸೋತಾಗ ಸಂತೈಸಲು, ಗೆದ್ದಾಗ ಹರ್ಷಿಸಲು, ಈ ತಬ್ಬಲಿ ಕಂಗಳು ಇಂದಿಗೂ ಕಾಯುತಿದೆ ಸಿಕ್ಕರೆ...

ಅಪ್ಪಂದಿರ ದಿನಕ್ಕೆ ವಿಶೇಷ ಗಜಲ್ - ಸುಜಾತಾ ರವೀಶ್

ಗಝಲ್    ರೂವಾರಿಯಾಗಿ ಜೀವ ಜೀವನದ ನಕ್ಷೆಯ  ಬರೆಸಿದವರು ನೀವು  ಮಾದರಿಯಾಗಿ ಭಾವ ಭಾವನೆಗಳ ಹತೋಟಿ ಮೆರೆಸಿದವರು ನೀವು  ಚದುರಂಗ ಆಡುವ ಚಾತುರ್ಯವನು  ಮಸ್ತಕದಲಿ ತುಂಬಿದಿರಿ  ಪದರಂಗ ಬಿಡಿಸುವ ಕೌಶಲ್ಯವನು  ಕಲಿಸಿದವರು ನೀವು  ಮುನ್ನುಡಿಯಂತೆ ಸಮರ್ಥ ಶಿಕ್ಷಣದ  ಮಹತ್ವ ತಿಳಿಸಿದಿರಿ  ಕನ್ನಡಿಯಂತೆ ನಿರ್ಮಲ ಚಿಂತನೆಯ  ಮೂಡಿಸಿದವರು ನೀವು  ಹಣದ ವ್ಯಾಮೋಹವನ್ನು ಬೆಳೆಸಿಕೊಳ್ಳದ  ಅರಿವು ನೀಡಿದಿರಿ  ಗುಣದ ಪ್ರಾಮುಖ್ಯತೆಯ ಮೆಚ್ಚಿಕೊಳ್ಳುವಂತೆ ಮಾಡಿಸಿದವರು ನೀವು  ದಾರಿದೀಪವಾಗಿ ಜವಾಬ್ದಾರಿಗಳ ನಿಭಾವಣೆ  ನಿರ್ವಹಿಸಿದಿರಿ  ನಂದಾದೀಪವಾಗಿ ಸುಜಿಯ ಅಂತರಂಗವನು ಬೆಳಗಿಸಿದವರು ನೀವು                      - ಸುಜಾ ತಾ ರವೀಶ್

ಕೇಳು ಜಾಣೆ - ಕವಿತೆ - ಭರತ್ ಕುಮಾರ್ ಸಿ

ಕೇಳು ಜಾಣೆ ಧರೆಗೆ ಬಂದ ಒಂದು ಅಂದ  ನಮ್ಮ ಬದುಕು ನೋಡೇ ಜಾಣೆ, ಬದುಕು ಸಾಯಲೆಂದು ಅಲ್ಲ ಸಾದಿಸೋಕೆ ಕೇಳೇ ಜಾಣೆ. ಈಗ ಉಸಿರು ಹೊರಗೋ ಒಳಗೊ ಅದೇ ಬದುಕು ನೋಡೇ ಜಾಣೆ, ಉಸಿರು ನಿಂತರೇನು ಹೆಸರ ಹಸಿರು  ಮಾಸದಂತೆ ಬಾಳ ಬೇಕು ಜಾಣೆ. ಬಾಳ ಹಾದಿ ತುಂಬಾ ಕಲ್ಲು ಮುಳ್ಳು ಸುಮದ ಹಾದಿ ನೋಡು ಜಾಣೆ, ಹೆಜ್ಜೆ ಸಾಗಿಸೋದ ಕಲಿತು ಅರಿತು ಮುಂದೆ ಸಾಗು ಜಾಣೆ. ಪ್ರೀತಿ ಸಾಲು ಬರೆಯುವಾಗ ಮೊದಲ  ಸಾಲು ನಿನ್ನ ಬದುಕಿಗಿರಲಿ ಜಾಣೆ, ನೀನು ಸತ್ತರೂನು ನೀನು ಬರೆದ  ಪ್ರೀತಿ ಸಾಲು ಉಸಿರ ಆಡಬೇಕು ಜಾಣೆ. ಬದುಕ ಜಗಳವೆಲ್ಲ ಜಯಿಸಿ ಎದ್ದು ಗೆದ್ದು ನಿಲ್ಲ ಬೇಕು ಜಾಣೆ, ಆಗ ನೋಡು ಎಲ್ಲ ಖುಷಿಗೆ ಕಾರಣ ನೀನೇ ನೀನೇ ಜಾಣೆ. ಹರಿದ ಬಟ್ಟೆ ತೊಟ್ಟು ನಿನಗೆ ಒಲೆದ ಬಟ್ಟೆ ಕೊಟ್ಟರು ನೋಡು ಜಾಣೆ, ನಿಂಗೆ ಬದುಕ ಕೊಟ್ಟರವರು; ಅವರ ನೇತ್ರ ನೆಲವ ನೋಡದಂತೆ ಬಾಳು ಜಾಣೆ. - ಭರತ್‌ಕುಮಾರ್ ಸಿ , ಕೊರಟಗೆರೆ

ಆಕೆಗೆ ಅದೇ ಮೊದಲ ರಾತ್ರಿ! - ಕವಿತೆ - ದೀಕ್ಷಿತ್ ನಾಯರ್

ಆಕೆಗೆ ಅದೇ ಮೊದಲ ರಾತ್ರಿ! ಅವನಿಗೆ ಅದೆಷ್ಟನೇ ರಾತ್ರಿಯೋ? ಅವಳಿಗೆ ಮೊದಲ ರಾತ್ರಿ! ಅಪ್ಪನ ಹೊರತು ಬೇರೆ ಗಂಡಸಿನ ದೇಹದ ಬಿಸುಪು ಅನುಭವಿಸಿರದ ಆಕೆಗೆ ಅದೇ ಮೊದಲ ರಾತ್ರಿ! ಹೆಣ್ಣು ಕಾಣದ ಗಾವಿಲನಂತೆ ಖಿಲ್ಲನೆ ನಗುತ್ತಾ ಹೊಕ್ಕುಳ ಹುಡುಕುವ ಅವನಿಗೆ ಅದೆಷ್ಟನೇ ರಾತ್ರಿಯೋ? ವಗರು ವಗರಾದ ಆಸೆಯ ಕಿಬ್ಬೊಟ್ಟೆಯಲ್ಲಿ ಬಚ್ಚಿಟ್ಟು ಅನರ್ಘ್ಯ ಶೀಲವ ಬಹುಕಾಲ ರಕ್ಷಿಸಿದ ಆಕೆಗೆ ಅದೇ ಮೊದಲ ರಾತ್ರಿ! ಹಠಕ್ಕೆ ಬಿದ್ದ ಹೋರಿಯಂತೆ ಛಂಗನೆ ಎಗರುವ ಭೂಪತಿಗೆ ಅದೆಷ್ಟನೇ ರಾತ್ರಿಯೋ? ಗರ ಬಡಿದವಳಂತೆ ಕಣ್ಣು ಮಿಟುಕಿಸದೆ ಎಲ್ಲಾ ಚಟುವಟಿಕೆಗಳಿಗೂ ಸ್ಪಂದಿಸುವ ಆಕೆಗೆ ಅದೇ ಮೊದಲ ರಾತ್ರಿ! ಗುಬ್ಬಿ ಒಡಲೊಳು ಆನೆ ಹೊಕ್ಕರೆ ಉಳಿದಿತೇ? ಹುಟ್ಟಿನಿಂದಲೇ ಅರ ಪಾವಿನಷ್ಟು ಕಾಮವ ಪೂಸಿಕೊಂಡು ಬೆಳೆದ ಅವನಿಗೆ ಅದೆಷ್ಟನೇ ರಾತ್ರಿಯೋ? ಕಮ್ಮಗೆ ಬರುವ ಬೆವರ ವಾಸನೆಯ ಎಂದೂ ಸ್ವಾದಿಸದ ಆಕೆಗೆ ಅದೇ ಮೊದಲ ರಾತ್ರಿ! ಮೂರು ಜಾವ ಬಿಟ್ಟೂ ಬಿಡದೆ ಆಕೆಯ ದೇಹವ ಒದ್ದೆ ಮಾಡಿದ ಅವನಿಗೆ ಅದೆಷ್ಟನೇ ರಾತ್ರಿಯೋ? ಆಗಷ್ಟೇ ಅನೂಹ್ಯವಾದ ಲೋಕದ ಪರಿಚಯ ಮಾಡಿಕೊಂಡ ಆಕೆಗೆ ಅದೇ ಮೊದಲ ರಾತ್ರಿ! ಏನು ಆಗಿಲ್ಲವೆಂಬಂತೆ ಗಳಿಸಿದ ಸುಖವ ಬಚ್ಚಲು ಮನೆಯಲ್ಲಿ ತೊಳೆದು ಬರುವ ಅವನಿಗೆ ಅದೆಷ್ಟನೇ ರಾತ್ರಿಯೋ? ಮೈಯ್ಯ ಸತುವನ್ನೆಲ್ಲಾ ಕ್ರೋಢಿಕರಿಸಿ ಎದ್ದು ನಿಂತರೂ ತಾರಾಡಿ ಬೀಳುತ್ತಿದ್ದ ಆಕೆಗೆ ಅದೇ ಮೊದಲ ರಾತ್ರಿ!.. - ದೀಕ್ಷಿತ್ ನಾಯರ್   ಯುವ ಬರಹಗಾರ, ಮಂಡ್ಯ

ಮೆಜೆಸ್ಟಿಕ್ ಎಂಬ ಮಾಯಾಜಾಲದೊಳಗೆ - ಕಥೆ - ಸಂಚಾರಿ ವಿಜಯ್

ಮೆಜೆಸ್ಟಿಕ್ ಎಂಬ ಮಾಯಾಜಾಲದೊಳಗೆ (ಇದು ಸಂಚಾರಿ ವಿಜಯ್ ಸಾಯುವ ಎರಡು ದಿನ ಮುಂಚೆ ಬರೆದಿದ್ದ ಬರಹ. ಬಹಳಷ್ಟು ಕಡೆ ಪ್ರಕಟವಾಗಿದೆ. ಈಗ ಅವ್ವ ಪುಸ್ತಕಾಲಯ ಬಳಗದಿಂದ ಓದುಗರಿಗಾಗಿ ಮರುಪ್ರಕಟಿಸಲಾಗುತ್ತಿದೆ. ವಿಜಯ್ ಅವರ ಆತ್ಮಕ್ಕೆ ಅವ್ವ ಬಳಗವು ಸಂತಾಪ ಸೂಚಿಸಿದೆ. ನಮ್ಮೆಲ್ಲರ ಮಧ್ಯೆ ವಿಜಯ್ ಮತ್ತೊಮ್ಮೆ ಹುಟ್ಟಿ ಬರಲಿ.. ಓಂ ಶಾಂತಿ.. ನಮನಗಳು) ವರುಷಗಳ ಹಿಂದೆ ನಮ್ಮ ಮನೆಯಲ್ಲಿ ನನ್ನ ಕೈಗೆ ಒಂದಿಷ್ಟು ಹಣ ಸಿಕ್ಕರೆ ಮುಗಿಯಿತು. ಹೇಳಿ ಕೇಳಿ ಶೋಕಿವಾಲನ ಬ್ರೀಡಿನಂತಿದ್ದ ನಾನು ಬೆಳ್ಳಂಬೆಳಗ್ಗೆ ಎದ್ದು ರೆಡಿಯಾಗಿ ಮುರುಕು ಮಸುಕು ಕನ್ನಡಿ ಮುಂದೆ ನಿಂತು ಕನ್ನಡಿಯ ಮೇಲಿನ ಧೂಳ್ಯಾವುದೂ ಪೌಡರ್ ಯಾವುದು ಗೊತ್ತಾಗದೆ ಅಳತೆ ಮೀರಿ ಮುಖದ ತುಂಬಾ ಪಾಂಡ್ಸ್ ಪೌಡರ್ ಮೆತ್ತಿಕೊಂಡು, ತಲೆಗೆ ಕೊಬ್ಬರಿ ಎಣ್ಣೆ ಸುರಿದು ಸೈಡಿನಿಂದ ಕ್ರಾಪು ತೆಗೆದು ಮೂವತ್ತು ರೂಪಾಯಿಯ ಕನ್ನಡಕ ಕಣ್ಣಿಗೆ ಬಿತ್ತೆಂದರೆ ಆಹಾ!!! ಜಗತ್ತೇ ಕಲರ್ಫುಲ್. ನಮ್ಮ ತಂದೆಯ ಶೂ ನನಗೂ ಮುಕ್ಕಾಲು ಭಾಗ ಸೈಜ್ ಆಗುತ್ತಿದ್ದರಿಂದ ಸ್ವಲ್ಪ ಬಟ್ಟೆಯನ್ನು ಹಿಮ್ಮಡಿಯ ಜಾಗಕ್ಕೆ ತುರುಕಿ ಬಿಗಿ ಮಾಡಿ ನೀರಿನಿಂದ ಅದರ ಮೇಲ್ಮೈ ಎಲ್ಲ ಒರೆಸಿ ಎರೆಡೂ ಪಾದಗಳಿಗೆ ಕೂರಿಸಿ ಊರಲ್ಲಿ ಟಾರ್ ರೋಡ್ ಇರುತ್ತಿರಲಿಲ್ಲ. ಹೀಗಾಗಿ ಶೂಗೆ ಮಣ್ಣು ಮೆತ್ತಿಕೊಳ್ಳಬಾರದೆಂದು ತುದಿಗಾಲಿನಲ್ಲೇ ಸೂಕ್ಷ್ಮವಾಗಿ ನಡೆಯುತ್ತಾ ದಾರಿಯಲ್ಲಿ ಎದುರು ಸಿಗುತ್ತಿದ್ದ ಶನಿ ಮಹಾತ್ಮನ ಗುಡಿಗೆ ಡೈ ಹೊಡೆದು ಬಸ್ ಸ್ಟಾಂಡ್...

ಅಲ್ಲಿ ನಿಂತು ನೋಡಿದಾಗ - ತೃತೀಯ ಲಿಂಗಿಗಳನ್ನು ಕುರಿತ ಕವಿತೆ - ಅನಂತ ಕುಣಿಗಲ್

ಅಲ್ಲಿ ನಿಂತು ನೋಡಿದಾಗ ಅಲ್ಲಿ ನಿಂತು ನೋಡಿದಾಗ ಏನು ಕಾಂಬುದೋ? ನುಣ್ಣಗೆ ದೂರದೆಲ್ಲ ಸಂಗತಿ ಹಾಳಾದ ಈ ಬೋಳು ಕಣ್ಣಿಗೆ ಸರಿದು ನೋಡು ತೆರೆದು ನೋಡು ಕಾಂಬುದೆಲ್ಲ ಮುಳ್ಳು ಒಳಗೆಲ್ಲಾ ಟೊಳ್ಳು ಮೂಟೆ ಮೂಟೆ ಸುಳ್ಳು ಅವರ ಕಷ್ಟ ನಿನಗೇನು ನಷ್ಟ ನೋಡಿ ಸರಿದು ಬಿಡು ಮಾತು ಬೇಡ ಸುಮ್ಮನಿರು ಮೌನವಹಿಸಿ ಬಂದುಬಿಡು ಹತ್ತಿರಕ್ಕೆ ಸುಳಿಯಲು ಗಡಗಡ ಬೋಳಿಸಿದ ಮೀಸೆ, ಮಾರುದ್ದ ಜಡೆ ಅತಿಯಾದ ಉಬ್ಬು ಎದೆಗಳಲ್ಲಿ ಒರಟು ಸೊಂಟು, ಮಾತಿನಲ್ಲಿ ನವ್ಯತೆ ಚಪ್ಪಾಳೆಯ ಗಡುಸುತನ ಎಲ್ಲರಲ್ಲೂ ಭಯ ಹುಟ್ಟಿಸುತ್ತಿತ್ತು ಒಮ್ಮೆ ಕಣ್ಣು ಹೊಡೆದು ತುಟಿಯಗಲಿಸಿ ಸೆರಗು ಜಾರಿಸಿದರೆ ಪ್ರಾಣವೇ ಹೋಗುತ್ತಿತ್ತು ಎದುರಿದ್ದವರಿಗೆ ಭಂಡರೋ, ಬಡಾಯಿಗಳೋ ಬಾಯಿಬಡುಕರೋ ಎನಿಸುವುದು ದೂರದಲ್ಲಿ ನಿಂತು ನೋಡಿದಾಗ ಮೃದು ಮನಸ್ಸಿನವರು ಮನುಷ್ಯತ್ವ ಮೆರೆದರು ಎಂದರಿವಾಗುವುದು ಹತ್ತಿರದಿಂದ ನೋಡಲು ಬಯಸಿದಾಗ ಚಿಲ್ಲರೆ ಕಾಸಿಗಾಗಿ ಅಲೆಯುವರು ದಿನವಿಡೀ ಪದೇ ಪದೇ ಜಾರುವ ಸೆರಗಿನಡಿ ಕಳೆವರು ರಾತ್ರಿಯ ಅಂಗೈಯಗಲ ಸೂರಿನಡಿ ವಂಚಿತರು, ದೂರ ಸರಿದವರು, ನಮ್ಮವರು ನಮ್ಮಂತೆಯೇ ಅವರೂ ಕೂಡ ಮನುಷ್ಯರು ಕೈಲಾದ್ದು ಕೊಡು ಇಲ್ಲವೇ ಹೊರಟುಬಿಡು ಹೊರಡುವ ಮೊದಲು ಸಣ್ಣ ಮಂದಹಾಸ ಬೀರಿಬಿಡು ಅಯ್ಯೋ.. ಎಂದು ಮರುಕಪಡು ಅಲ್ಲಿ ನಿಂತು ನೋಡಿದ ತಪ್ಪಿಗೆ ಹತ್ತಿರದಿಂದೊಮ್ಮೆ ಕ್ಷಮೆಯಾಚಿಸಿಬಿಡು - ಅನಂತ ಕುಣಿಗಲ್

ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು - ಲೇಖನ - ರಾಕೇಶ್ ವಿ ಪತ್ತಾರ

ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು      ಬಾಲ್ಯವಿವಾಹ ಎಂಬುದು ನಮ್ಮ ಸಮಾಜವನ್ನು ಕಾಡಿದ ಒಂದು ಸಾಮಾಜಿಕ ಸಮಸ್ಯೆಯಾಗಿದೆ. 21 ವರ್ಷದ ಒಳಗಿನ ಹುಡುಗ ಹಾಗೂ 18 ವರ್ಷದ ಒಳಗಿನ ಹುಡುಗಿಯ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನ ಒಳಗಿದ್ದರೂ ಇಂಥಹ ಮದುವೆಗೆ ಬಾಲ್ಯವಿವಾಹ ಎಂದು ಕರೆಯುತ್ತಾರೆ.ಈ  ಸಾಮಾಜಿಕ ಸಮಸ್ಯೆಯನ್ನು ತಡೆಯೋಕೆ ಕಠಿಣ ಕಾನೂನನ್ನು ಜಾರಿಗೊಳಿಸಿದರೂ ಸದ್ಯ ಇದರ ನಿಯಂತ್ರಣ ಇನ್ನು ಆಗಿಲ್ಲ. ಬಾಲ್ಯವಿವಾಹ ಮಾಡುವುದು ಕಾನೂನು ಪ್ರಕಾರ ಅಪರಾಧ.ಒಂದು ಹೆಣ್ಣು ಮದುವೆಯಾಗಬೇಕಾದರೆ ಅವಳ ದೇಹ,ಮನಸ್ಸು, ಮಾನಸಿಕ ಪ್ರಬುದ್ಧತೆ ಹಾಗೆ ಆಕೆಯ ಶಾರೀರಿಕ ಸಾಮರ್ಥ್ಯ ಬೆಳೆಯಲು 18 ವರ್ಷ ಅವಶ್ಯಕವಾಗಿ ಬೇಕೇ ಬೇಕು, ಆದರೆ ನಮ್ಮ ಹಳ್ಳಿಯಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ಸಂಭವಿಸುತ್ತಿವೆ ಯಾಕೆಂದರೆ ನಮ್ಮ ಹಳ್ಳಿಯಲ್ಲಿ ಬಾಲ್ಯವಿವಾಹಕ್ಕೆ ಒಳಗಾದ ಗಂಡು ಅಥವಾ ಹೆಣ್ಣಿನ ಪೋಷಕರಿಗೆ ಸರಿಯಾದ ಶಿಕ್ಷಣ ಇಲ್ಲದಿರುವುದರಿಂದ ಮತ್ತು  ಬಾಲಕಾರ್ಮಿಕ ಪದ್ಧತಿ ಹೆಚ್ಚಾಗುತ್ತಿರುವುದರಿಂದ ಈ ಪಿಡುಗು ಹೆಮ್ಮರವಾಗಿ ಬೆಳೆದಿದೆ.ಈ ಕೊರೋನಾ ಸೋಂಕು ಮಕ್ಕಳ ಬಾಲ್ಯವನ್ನೇ ಕಸಿಯುತ್ತಿದೆ. 'ಯುನಿಸೆಫ್' ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಬಾಲಕಿಯರು 18 ವರ್ಷ ತುಂಬುವ ಮೊದಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ ಹಾಗೆ ಜಗತ್ತಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತ...

ಹೆಜ್ಜೆ - ಕವಿತೆ - ಶಂಭುಗೌಡ ಆರ್ ಜಿ

ಹೆಜ್ಜೆ   ಬದುಕು ಮತ್ತು ಸಾವು ಅಲೆ ಅಲೆದು ಸಾಕಾಗಿ ವಿಶ್ರಮಿಸುತ್ತಿವೆ ಬದುಕಿನ ಕಣ್ಣು  ಬದುಕು ಕಟ್ಟಿಕೊಳ್ಳುವುದರ ಮೇಲೆ; ಸಾವಿನ ಕಣ್ಣು ಬದುಕಿನ ಮೇಲೆ ಒಂದು ಹೆಜ್ಜೆ ಮುಂದಿಟ್ಚರೂ ಬದುಕು ಬದುಕ ಕಟ್ಟಕೊಳ್ಳಬಹುದು ಸಾವು ಬದುಕುನ್ನ ಸಾಯಿಸಬಹುದು ಬದುಕೋ! ಸಾವೋ!  ಮೊದಲಿಡುವ  ಹೆಜ್ಜೆ ಯಾರದ್ದೋ?  ಯೋಚಿಸಿದ ಬ್ರಹ್ಮ ಬದುಕು ಒಂದು ಹೆಜ್ಜೆ ಇಟ್ಟರೆ ಬದುಕು ಕಟ್ಟಿಕೊಳ್ಳಬಹುದು,  ಇನ್ನು ಒಂದು ಹೆಜ್ಜೆ ಇಟ್ಟರೆ  ಮತ್ತೇನನ್ನೋ ತನ್ನದಾಗಿಸಿಕೊಳ್ಳಬಹುದು ಇಷ್ಟರ ಮೇಲೂ ಬದುಕು ಮತ್ತೊಂದು ಹೆಜ್ಜೆಯನ್ನೂ ಇಡಬಹುದು ವಿಶ್ರಮಿಸುತ್ತಿದ್ದ ಸಾವೊಮ್ಮೆ ಎದ್ದು ಹೆಜ್ಜೆ ಇಡುವವರೆಗೂ ಆದರೆ ಬದುಕು ಬದುಕ ಕಟ್ಟಿಕೊಳ್ಳಲಿಲ್ಲ ಸಾವು ಕೂಡ! - ಶಂಭುಗೌಡ. ಆರ್. ಜಿ

ಲೆಕ್ಕಾಚಾರ (ಅಂಕಣ) - ನಾನು ನಾನಲ್ಲ, ನಾನಾರೆಂಬುದು ಗೊತ್ತಿಲ್ಲ! - ಅನಂತ ಕುಣಿಗಲ್

" ನಾನು ನಾನಲ್ಲ, ನಾನಾರೆಂಬುದು ಗೊತ್ತಿಲ್ಲ "      ನಾವು ಯಾರನ್ನೋ ಹುಡುಕುತ್ತಿರುತ್ತೇವೆ. ಅವರು ಬೇಗ ಸಿಗುವುದಿಲ್ಲ. ಸಿಕ್ಕರೂ ಹೆಚ್ಚು ಕಾಲ ನಮ್ಮೊಂದಿಗೆ ಉಳಿಯುವುದಿಲ್ಲ. ಕಾರಣ, ಬೇರೆಯವರಲ್ಲಿ ನಾವು ನಮ್ಮನ್ನೇ ಹುಡುಕುತ್ತಿರುತ್ತೇವೆ. ಅರ್ಥಾತ್ ನಮ್ಮಲ್ಲಿರುವ ಕೆಲವು ಗುಣಗಳಾದರೂ ಇನ್ನೊಬ್ಬರಲ್ಲಿ ಇರದಿದ್ದರೆ, ಖಂಡಿತ ಅವರು ನಮಗೆ ಇಷ್ಟವಾಗುವುದಿಲ್ಲ. ಅನ್ಯ ಕಾರಣಕ್ಕೆ ಇಷ್ಟವಾದರೂ ಹೆಚ್ಚು ದಿನ ಉಳಿಯೋದಿಲ್ಲ. ಈ ಹುಡುಕಾಟದಲ್ಲಿ ನಾವು ನಮ್ಮನ್ನೇ ಹುಡುಕುತ್ತಿದ್ದೇವೆ ಎಂಬುದನ್ನು ನಾವೇ ಮರೆತ್ತಿದ್ದೇವೆ ಎಂದು ನಮ್ಮ ಅರಿವಿಗೆ ಬರುವುದೇ ಇಲ್ಲ. ಅಯ್ಯೋ.. ಇದೆಂಥಾ ಹುಡುಕಾಟ?? ಹೀಗೊಂದು ಹುಡುಕಾಟವುಂಟೆ?? ಹೌದು, ಉಂಟು! ಮನುಷ್ಯ ತಾನು ಸಂಘಜೀವಿಯಾಗಿ, ಏಕಾಂತವನ್ನು ಇಷ್ಟಪಡುವುದರಲ್ಲಿ ಆಶ್ಚರ್ಯವೇನಿಲ್ಲ. ಆ ಏಕಾಂತದಲ್ಲೂ ಕೂಡ ತಾನು ಯಾವುದಕ್ಕಾದರೂ ಹುಡುಕಾಡುತ್ತಿರುತ್ತಾನೆ. ತಾನು ಸಾಯುವವರೆಗೂ, ಬಹುಶಃ ಸತ್ತಮೇಲೂ ಆತ ಏನನ್ನು ಹುಡುಕುತ್ತಿದ್ದ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಅದಕ್ಕಾಗಿಯೇ ಆ ಹುಡುಕಾಟ ಮನುಷ್ಯನ ಜೀವನದಲ್ಲಿ ಅಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಎನಿಸುತ್ತದೆ. ಮನುಷ್ಯ ಯಾವಾಗ ಹುಡುಕಲು ಫ್ರಾರಂಭಿಸುತ್ತಾನೆಂದರೆ, ತಾನು ಏನನ್ನಾದರೂ ಕಳೆದುಕೊಂಡಾಗ. ತಾನು ಯಾವಾಗ ಕಳೆದುಕೊಳ್ಳುತ್ತಾನೆಂದರೆ, ಆತ ಏನನ್ನಾದರೂ ಸಂಪಾದಿಸಿದ್ದಾಗ. ಈ ಸಂಪಾದನೆ ಎಲ್ಲಿಂದ ಬಂದಿತೆಂದರೆ, ಹೊ...

ಲೆಕ್ಕಾಚಾರ - ಪೀಠಿಕೆ - ಅನಂತ ಕುಣಿಗಲ್

" ನೊಂದವರ ನೋವ ನೋಯದವರೆತ್ತಬಲ್ಲರೋ..  "      ಬರೆಯುತ್ತಿರುವುದು ಅಂಕಣವಾದರೂ, ಈ ಸರಣಿಯಲ್ಲಿ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿಯ ತೊಳಲಾಟಗಳು ಹೇಗಿರುತ್ತವೆಂದು ನನ್ನದೇ ಕುಟುಂಬವನ್ನು ಉದಾಹರಿಸಿ ನಿಮಗೆ ಉಣ್ಣಲು ಸಿದ್ದಪಡಿಸುತ್ತಿದ್ದೇನೆ . ಹಾಗಂತ ಇದನ್ನು ನಾನು ಖಂಡಿತ ಆತ್ಮಕಥನ ಎಂದು ಕರೆದುಕೊಳ್ಳುವುದಿಲ್ಲ. ಹಾಗೆಯೇ ಇಲ್ಲಿ ನಮೂದಿಸುವ ವಿಷಯಗಳು ಸುಳ್ಳಾಗಿರುವುದಿಲ್ಲ (ಅಗತ್ಯವಿದ್ದಲ್ಲಿ ವ್ಯಕ್ತಿಗಳ ಹಾಗೂ ಸ್ಥಳಗಳ ಹೆಸರನ್ನು ಬದಲಾಯಿಸಿರುತ್ತೇನೆ). ಬಡತನ ಎಲ್ಲರಿಗೂ ಬೇಡವಾದರೂ ಕೂಡ ಅದರ ಕತೆಗಳು ಎಲ್ಲರಿಗೂ ಹತ್ತಿರವಾಗುತ್ತವೆ ಎಂದು ನಾನಾದರೂ ಭಾವಿಸಿದ್ದೇನೆ. ಈ ಅಂಕಣವನ್ನು ನಾನು ಯಾಕೆ ಬರೆಯಲೇಬೇಕು? ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ಕೊನೆಯ ಅಂಕಣದಲ್ಲಿ ನಿಮ್ಮೆಲ್ಲರಿಗೂ ತಿಳಿಸುವೆ . ಅಲ್ಲಿಯವರೆಗೂ ಕಾದು, ಎಲ್ಲ ಅಂಕಣಗಳನ್ನ ಓದಿ, ಕಮೆಂಟ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿ ಪ್ರೋತ್ಸಾಹಿಸಬೇಕೆಂದು ಓದುಗದೊರೆಗಳಲ್ಲಿ ನಾನು ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ. ಲೆಕ್ಕಾಚಾರ ಎಂದರೆ ಎಲ್ಲರಿಗೂ ತಿಳಿದದ್ದೇ.. ಸರಿಯಾದ ಲೆಕ್ಕಾಚಾರವಿಲ್ಲದೆ ಯಾವೊಬ್ಬ ಮನುಷ್ಯನೂ ಅರ್ಥಪೂರ್ಣ ಹಾಗೂ ಸಮರ್ಥ ಬದುಕನ್ನು ಬದುಕಲು ಸಾಧ್ಯವಿಲ್ಲವೆಂಬುದು ನನ್ನ ಅಭಿಪ್ರಾಯ . ಪ್ರತೀ ಕ್ಷಣವೂ ನಾವು ಯಾವುದಾದರೊಂದು ಲೆಕ್ಕಾಚಾರದಲ್ಲಿ ಬದುಕುತ್ತಿರುತ್ತೇವೆ. ಎಷ್ಟು ಗಂಟೆಗೆ, ಯಾವ ದಿಕ್ಕಿಗೆ ಎದ್...

ಪ್ರೀತಿ, ಪ್ರೇಮ ಹಾಗೂ ಬ್ರೇಕಪ್ ಗಳು - ಲೇಖನ - ಚಂದ್ರು ಎಂ ಎಲ್

ಪ್ರೀತಿ, ಪ್ರೇಮ ಹಾಗೂ ಬ್ರೇಕಪ್ ಗಳು (ಅವರಿಬ್ಬರೂ ಪ್ರೀತಿಸುತ್ತಿದ್ದರು ಆದರೆ..)      ಪಕ್ಕದ ಮನೆಯ ಹುಡುಗ, ಕಾಲೇಜ್ ಎಂಬ ಬಣ್ಣದ ಗೂಡಿಗೆ ಕಾಲಿಟ್ಟು ಸ್ವಲ್ಪ ದಿನ ಕಳೆದಿದ್ದವು. ಮೊದ ಮೊದಲು  ಸರಿಯಾಗೇ ಇದ್ದ ಆದರೆ ಕೆಲ ದಿನಗಳಿಂದ ಬದಲಾಗಿದ್ದಾನೆ.  ಅವನು ಮರೆತಿದ್ದಾನೆ  ಅವನಪ್ಪ ಅವನನ್ನ ಸೈಕಲ್ ಕಂಬಿಯ ಮೇಲೆ‌ ಟವಲ್ ಹಾಸಿ ಮೇಲೆ ಮಗನನ್ನು ಕೂರಿಸಿ ಬೀಳ್ತಾನೆ ಅಂತ ಅಪ್ಪ ಅದೆಷ್ಟು ದೂರ ಸೈಕಲ್ ತಳ್ಳಿದ್ದು, ಇವನ ಕೂದಲಿಗೆ ಕತ್ತರಿ ಇಟ್ಟಾಗ ಕಣ್ಣೀರು, ಗೊಣ್ಣೆ ಒಂದಾಗಿ ಬಂದಾಗ ಅವನಪ್ಪ ಅದೆಷ್ಟು ಸಲ ಸ್ವಚ್ಚಮಾಡಿದ್ದ. ಕ್ರಾಪು ಬಾಚಿ ತಲೆಯನ್ನು ಹಿಡಿದು ಗಲ್ಲ ಹಿಡಿದ ಅವನ ಅಮ್ಮ ತಲೆ ಕೂದಲು ಬಾಚುವುದೇ ಪೌಡರ್ ಹಚ್ಚಿ, ಸಣ್ಣಗೆ ಮುತ್ತಿಟ್ಟು  ಬ್ಯಾಗಿಗೆ ತಿನ್ನಲು ಇಟ್ಟು ಕಳಿಸುತ್ತಿದ್ದಳಲ್ಲ ಆ ನೆನಪುಗಳೆಲ್ಲ ಇವನ ತಲೆ ಇಂದ ಎಣಿಸಲಾಗದಷ್ಟು ಕಿಲೋಮೀಟರ್ ದೂರ ಸಾಗಿದೆ. ಕೆಲದಿನಗಳಿಂದ ಕಿವಿಯಲ್ಲಿನ ಫೋನು ತೆಗೆಯುತ್ತಿರಲಿಲ್ಲ, ಸಣ್ಣಗೆ ಮುಗುಳು ನಗುತ್ತ ತನ್ನ ಇಡೀಯ ದಿನದ ಎಲ್ಲ ವಿಚಾರವನ್ನು  ತನ್ನದೇ ಇನ್ನೊಂದು ಜೀವ ಆಕಡೆ ಇದೆ ಎಂಬಂತೆ ಎಲ್ಲವನ್ನೂ ಹೇಳುತ್ತಿದ್ದ. ಮಾತನಾಡುವಾಗೆಲ್ಲ ಆತನ ಮುಖದಲ್ಲಿ ಪ್ರಪಂಚವನ್ನೇ ಗೆದ್ದಷ್ಟು ಸಂತೋಷವಿತ್ತು. ಅದೆಷ್ಟು ಮಾತುಗಳು ?ಈ ಇಬ್ಬರ ನಡುವೆ ಅದೆಷ್ಟು ಕನಸುಗಳ ಬಗ್ಗೆ ಚರ್ಚೆ ? ಪ್ರೀತಿ ಎಂದರೆ ಇದೇನಾ ? ಎಲ್ಲ ವಿಷಯವನ್ನು ಇಬ್ಬರೂ ಹಂಚಿಕೊ...

ಕವನವೊಂದು ಹೀಗಿರಬೇಕು - ಕವಿತೆ - ಸುಜಾತಾ ರವೀಶ್

ಕವನವೊಂದು ಹೀಗಿರಬೇಕು  ಮುದ್ದುಕಂದನ ನಿಷ್ಕಪಟ ನಗೆಯ ಹಾಗೆ ಮುಂಜಾನೆ ಹುಲ್ಲ ಹಾಸಿನ ತುಷಾರಮಣಿಯಂತೆ  ಮುಸ್ಸಂಜೆ ತಂಪಿನಲಿ ಬಿರಿದ ಮಲ್ಲಿಗೆಯ ಹಾಗೆ ಚಂದ್ರಿಕೆಗೆ ಕಂಪು ತುಂಬಿ ಘಮಘಮಿಸುವಂತೆ ಹರೆಯದ ಒಂದಾದ ನಯನಗಳ ನೋಟದೊಲು ಆಡದೇ ಉಳಿದ ಮಾತುಗಳ ಮಧುರ ಗೀತೆಯೊಲು  ಎದೆಯಾಳದೆ ಸದಾ ಕಾಡುವ ಅವ್ಯಕ್ತ ನೆನಪಿನಂತೆ  ಮಳೆನಿಂತ ಮೇಲೂ ತೊಟ್ಟಿಕ್ಕುವ ಹನಿಯಂತೆ   ಭಾವದ ಬಸಿರ ಹೆರಿಗೆಯಲಿ ಹಡೆದ ಹಗುರಾದಂತೆ  ಮನದ ಮೈಲಿಗೆಯ ತೊಳೆದು ಮಿಂದು ಮಡಿಯಾದಂತೆ  ಹೃದಯದ ಭಾವಗಳೆಲ್ಲ ಹೂವಾಗಿ ಮಾಲೆಯಾದಂತೆ  ಜನ್ಮಕೊಟ್ಟ ಮಗುವಿನ ನೆತ್ತಿಗೆ ಮುತ್ತಿಡುವ ಅಮ್ಮನಂತೆ  ತಲೆಯ ಮೇಲಿನ ಭಾರವನಿಳುಹಿ ನಿರುಮ್ಮಳವಾದಂತೆ  ಮನದುಮ್ಮಳವೆಲ್ಲ ಕೊಚ್ಚಿಹಾಕುವ ಉಕ್ಕಿದ ಬಿಕ್ಕಿನಂತೆ  ಕವಿಯೋ ಕಾವ್ಯವೋ ತಾಧ್ಯಾತ್ಮವಾದ ಹೊಸ ಬೆಸುಗೆಯಂತೆ  ಪ್ರತ್ಯೇಕಿಸಲಾಗದ ಭಾವ ಅನುಭಾವಗಳ ಒಸಗೆಯಂತೆ - ಸುಜಾತಾ ರವೀಶ್, ಮೈಸೂರು   

ಮದುವೆ - ಲೇಖನ - ಅಶ್ವಿನಿ ಭೀ ಬರಗಾಲಿ

ಮದುವೆ ಎಂಬ ಮೂರಕ್ಷರ ನಂಟಿನ‌ ಜಾಡು ಹಿಡಿದು ಕೋಪದ ನಂಜಿಗೆ, ನಗುವೇ ಸಾಕು ದ್ವೇಷದ ಮಂಜಿಗೆ, ಸ್ನೇಹದ ಕಡಲು ಸಾಕು ಬದುಕ ಬಂಡಿಗೆ, ನಮ್ಮಿಬ್ಬರ ಮಿಲನವಾಗಬೇಕು ಮದುವೆಯ ಮೂರು ಗಂಟಿಗೆ, ನೀನೆ ಜೊತೆಯಾಗಬೇಕು...!!       "ಮದುವೆ" ಎಂಬುದು ಕೇವಲ ಮನಗಳ‌ ಮಿಲನ ಅಲ್ಲ, ಅದು ಎರಡು ಮನೆಗಳ ಸಂಕಲನ‌‌ ಎಂದು ಹಿರಿಯರು ನುಡಿದರು.‌ ಶಾಸ್ತ್ರಗಳ ಸುರಿಮಳೆ, ಬಂಧು- ಬಳಗ ಆನಂದದಿ‌ ಒಂದೆಡೆ ಸೇರುವಿಕೆ, ಸಡಗರ, ಸಂಭ್ರಮ‌ ಎಲ್ಲರಲ್ಲೂ... ಆದರೆ ಆ ಸಂಭ್ರಮ ಮದುವೆಯ ಹಸೆಮಣೆ ಏರಲು ಸಿದ್ಧರಿರುವ ಆ ಎರಡು ಮನಗಳಲ್ಲೂ ಇರಬೇಕೆಂದರೆ ಅವರ ನಡುವೆ ಒಪ್ಪಿಗೆಯ ಬಂಧ ಬಿಗಿದಿರಬೇಕು.       "ಮದುವೆ" ಎನ್ನುವದು ಒಂದು ಸಮಾಜದ ವ್ಯವಸ್ಥೆ. ಶಿಸ್ತು ಬದ್ಧ ಜೀವನಕ್ಕೆ ಹಾಕಿಕೊಂಡ ಸರಪಳಿಯ ಗಂಟು. ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಮದುವೆ ಎಂಬುದು ಸಮಾಜ ನಿರ್ಮಾಣದ ಸಾಂಸ್ಥಿಕ ವ್ಯವಸ್ಥೆ. ಇದು ಎಲ್ಲರಿಗೂ ಅಗತ್ಯ,  ನಿಜ. ಅನೂಕೂಲಿಸಿದವರಿಗೆ ಅವಶ್ಯ. ಅನಾನೂಕೂಲಿಸಿದವರಿಗೆ ಅನಗತ್ಯ. ಮದುವೆ ಎಂಬುದು ಮನುಷ್ಯ ಜೀವಿಸುತ್ತಿರೋ ಅವನ‌ ಪರಿಸರ ಮತ್ತು ಅವನು ನೋಡೋ ಜಗದ  ದೃಷ್ಟಿಕೋನವ ಅವಲಂಬಿಸಿದೆ.        ಮನುಷ್ಯನ ವಯೋಸಹಜಕ್ಕನುಗುಣವಾಗಿ " ಮದುವೆ. ". ಮದುವೆ ಎಂದರೆ ಹೆಣ್ಣು- ಗಂಡು ಇಬ್ಬರಲ್ಲೂ ಏನೋ ಹೇಳಲಾಗದ ಪುಳಕ. ಮದುವೆಯಾಗಿ ಅದರ ಸವಿಯ ಸವೆದು ಸಿ...

ನಿಜ ಪರಿಸರ ಪ್ರೇಮಿ - ಲೇಖನ - ಡಾ. ಗುರುಸಿದ್ಧಯ್ಯ ಸ್ವಾಮಿ

ನಿಜ ಪರಿಸರ ಪ್ರೇಮಿ : ಸೊಲ್ಲಾಪುರದ ವೀರೇಶ್ವರ ಶರಣರು           ಮೂಡಣದಲ್ಲಿ ರವಿ ಆಗಮಿಸಿ ಬಾನಂಗಳದ ತುಂಬ ಬಂಗಾರ ಬಣ್ಣದ ರಂಗವಲ್ಲಿಯನ್ನು ಬರೆದಿದ್ದನು. ಇದನ್ನು ಕಂಡ ಹಕ್ಕಿಗಳು ಸಂತಸದಿಂದ ಚಿಲಿ ಪಿಲಿ ಸುಪ್ರಭಾತ ಹಾಡತೊಡಗಿದವು. ಹಕ್ಕಿಗಳ ಈ ಕಲರವ ಕೇಳಿ ರವಿ ಬಂದನೆಂದರಿತ ಮೊಗ್ಗುಗಳೆಲ್ಲ ಕೂಡ ರಂಗವಲ್ಲಿ ನೋಡುವ ಕುತೂಹಲ ತಡೆಯದೆ ಕಣ್ಣು ತೆರೆದೇ ಬಿಟ್ಟವು. ಕೆಲವು ಹೂಗಳು ಆನಂದದ ಭಾರ ತಡೆಯಲಾಗದೆ ಧರೆಗುರುಳುತ್ತಿದ್ದವು.           ಗಿಡದಿಂದ ಉದುರಿದ ಹೂಗಳು  ನೆಲದ ಮೇಲೆ ರಂಗವಲ್ಲಿಯನ್ನೊಮ್ಮೆ ಹಾಗೂ ಬಾನಂಗಳದ ರಂಗವಲ್ಲಿಯನ್ನೊಮ್ಮೆ ಕಣ್ಣು ತುಂಬ ನೋಡುತ್ತ ಶರಣರೊಬ್ಬರು ನಿಂತಿದ್ದರು. ಒಂದು ಕ್ಷಣ ಕಣ್ಣು ಮುಚ್ಚಿ ಕೈ ಮುಗಿದರು. ನಂತರ ಕಣ್ಣು ತೆರೆದು ಮತ್ತೆ ನೆಲದತ್ತ ನೋಡತೊಡಗಿದರು. ಕೆಳಗೆ ಬಿದ್ದ ಹೂಗಳನ್ನು ಆಯ್ದುಕೊಳ್ಳತೊಡಗಿದರು.            ಅದೇ ಮಾರ್ಗದಿಂದ ಹೊರಟಿದ್ದ ಯುವಕನೊಬ್ಬ ಇದನ್ನು ನೋಡಿದ. ಅವಸರದಿಂದ ಅವರ ಹತ್ತಿರ ಓಡಿದ.     "ಪೂಜ್ಯರೆ, ಈ ಬಿದ್ದ ಹೂಗಳನ್ನು ನೀವೇಕೆ ತೆಗೆಯುತ್ತಿರುವಿರಿ? ನಾನು ಈಗಲೇ ಕಸಗುಡಿಸುತ್ತೇನೆ ತಡೆಯಿರಿ." ಎಂದ.       "ಇಲ್ಲಪ್ಪ, ನಾನು ಇಷ್ಟಲಿ...

ಮೂರನೆಯವಳು ಸಂಕಲನದ ಅವಲೋಕನ - ವಿಮರ್ಶೆ - ದೀಕ್ಷಿತ್ ನಾಯರ್

      ಮೂರು ರಾತ್ರಿಯಲ್ಲಿ ಮೂರು ಬಾರಿ ಓದಿ, ಇನ್ನೂ ಓದಬೇಕೆನಿಸುವ ಕೃತಿ ಅನಂತ ಕುಣಿಗಲ್ ಅವರ 'ಮೂರನೆಯವಳು'.      "ಮೂರನೆಯವಳು" ಯುವ ಬರಹಗಾರ ಅನಂತ ಅವರು ಇತ್ತೀಚೆಗೆ ಪ್ರಕಟಿಸಿದ ಕವನ ಸಂಕಲನದ ಹೆಸರು. ಯಾವುದೇ ಪುಸ್ತಕವನ್ನಾದರೂ ಬಹಳ ತದೇಕಚಿತ್ತದಿಂದ ಮನಸ್ಸನ್ನು ಅತ್ತಿತ್ತ ಹರಿಯ ಬಿಡದೆ ಒಂದೇ ಗುಕ್ಕಿಗೆ ಓದಿ ಮುಗಿಸಿ ಗೆಳೆಯರೊಂದಿಗೆ ಹಂಚಿಕೊಳ್ಳುವ ನಾನು "ಮೂರನೆಯವಳು" ಪುಸ್ತಕವನ್ನು ಮೂರು ರಾತ್ರಿಗಳಲ್ಲಿ ಮೂರು ಬಾರಿ ಓದಿ ಮುಗಿಸಿದೆ. ಅವಕಾಶ ಸಿಕ್ಕಿದರೆ ಮತ್ತೂ ಓದುವೆ. "ಮೂರನೆಯವಳು" ಪುಸ್ತಕದ ತೊಂಬತ್ತೆರಡು ಪುಟಗಳ ಪ್ರತೀ ಕವಿತೆಗಳೊಂದಿಗೆ ಬೆರೆತು ಹೋಗಿ ಪಳಗಿದ ನನಗೆ ಈ ಕ್ಷಣಕ್ಕೂ ಹಾಳೆ ಹರವಿಕೊಂಡು ಅನಿಸಿಕೆ ಬರೆಯಲು ಮನಸ್ಸಾಗುತ್ತಿಲ್ಲ. ಎಲ್ಲಿ ನನ್ನ ಅನಿಸಿಕೆ ಅಂತಹ ಉತ್ತಮ ಕೃತಿಯ ಮುಂದೆ ಬಾಲಿಶವೆನಿಸಿ ಬಿಡುತ್ತದೆಯೋ ಎಂಬ ಸಣ್ಣ ಅಳುಕು. ಆದರೆ ಇನ್ನೂ ನಾನು ತಡ ಮಾಡಿದರೆ ಓದುಗ ದೊರೆಗಳಿಗೆ ಆ ಪುಸ್ತಕ ಎಟುಕದೆ ಹೋಗುತ್ತದೆ ಎಂಬ ಭಾವನೆಯಲ್ಲಿ ಈ ನನ್ನ ಅನಿಸಿಕೆ ಅಥವಾ ವಿಮರ್ಶಾತ್ಮಕ ಲೇಖನವನ್ನು ಬಿಚ್ಚಿಡುತ್ತಿದ್ದೇನೆ.        ( ಯುವಬರಹಗಾರ ಅನಂತ ಕುಣಿಗಲ್ )    ವರುಷದ ಹಿಂದೆಯಷ್ಟೆ "ಋಣಭಾರ" ಎಂಬ ಕಥಾ ಸಂಕಲನವನ್ನು ಪ್ರಕಟಿಸಿ ಸದ್ದಿಲ್ಲದೆ ಸುದ್ದಿಯಾದ ಅನಂತ ಅವರು "ಮೂರನೆಯವಳು" ಕವನ ಸಂಕಲನವನ್ನು ಹೊರ ತಂದು ನಾನು ...

ನಾನೆಂಬುದು ಅಹಂಕಾರವಲ್ಲ - ಕಿರು ಲೇಖನ - ರಕ್ಷಿತ ಹೆಚ್

ನಾನೆಂಬುದು ಅಹಂಕಾರವಲ್ಲ "ನಾನು ಎಂಬುದು ಅಹಂಕಾರವಲ್ಲ, ನನ್ನೊಳಗಿನ ಆತ್ಮ ವಿಶ್ವಾಸ"      ನೀವು ಇತರರನ್ನು ನಂಬುವ ಮೊದಲು ನಿಮ್ಮನ್ನು ನೀವು ಮೊದಲು ನಂಬಿ. ನಾನು ನಿನ್ನ ಜೊತೆ ಇರುತ್ತೇನೆ, ನಾನು ನಿನ್ನ ಜೊತೆ ಬರ್ತೀನಿ ಅಂದವರನ್ನು ನಂಬಿಕೊಂಡು ಕಾಲಕಳೆಯಬೇಡಿ. ಯಾರೂ ಬರಲ್ಲ, ಯಾರೂ ಇರಲ್ಲ. ಇನ್ನೊಬ್ಬರ ಋಣದಲ್ಲಿ ಯಾವತ್ತೂ ಇರಬೇಡಿ. ಸ್ವಾಭಿಮಾನದಿಂದ ನೀವೇ ದುಡಿದು ನೀವೆ ತಿನ್ನಿ. ಯಾರು ನಿಮ್ಮವರು ಎನ್ನುವುದನ್ನು ಚೆನ್ನಾಗಿ ಅರಿತುಕೊಳ್ಳಿ. ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಕೈ ಹಿಡಿಯುವರೇ ನಿಮ್ಮವರು. ಎಲ್ಲರನ್ನು ನಂಬಿ ಮೋಸ ಹೋಗಬೇಡಿ. ನಿಮ್ಮ ತನವನ್ನು ಬೇರೆ ಯಾರಿಗೂಗೋಸ್ಕರ ಬಿಟ್ಟುಕೊಡಬೇಡಿ. ಎಲ್ಲರೂ ನಿಮ್ಮ ಕೈ ಬಿಟ್ಟು ನಡೆದರೂ ಕೂಡ, ಕೊನೆಪಕ್ಷ ನಿಮ್ಮತನ ನಿಮ್ಮನ್ನು ಎಂದಿಗೂ ಬಿಡುವುದಿಲ್ಲ. ನಿಮ್ಮ ಕಷ್ಟ ಅಥವಾ ನಿಮ್ಮ ನೋವನ್ನು ಅರ್ಥಮಾಡಿಕೊಳ್ಳದೆ ಇರೋರ ಹತ್ರ ವಾದ ಅಲ್ಲ ಮಾತಾಡಲೇಬೇಡಿ. ನಿಮ್ಮೊಂದಿಗೆ ನೀವು ಹೆಚ್ಚು ಕಾಲ ಕಳೆಯಿರಿ. ಯಾರಾದರೂ ನನ್ನ ಬಳಿ ಬಂದು 'ನಿನಗೆ ನೆಚ್ಚಿನ ವ್ಯಕ್ತಿ ಯಾರು?' ಎಂದು ಕೇಳಿದರೆ ನನಗೆ ನಾನೇ ನೆಚ್ಚಿನ ವ್ಯಕ್ತಿ ಎಂದು ಉತ್ತರಿಸುತ್ತೇನೆ. ಕೋಪದಿಂದ ಕ್ಷಣಮಾತ್ರದ ಸಾಧನೆ ಸಿಕ್ಕಿತೇ ಹೊರತು, ದೀರ್ಘಕಾಲದ ಬಾಳಿಕೆಯ ಸಂಬಂಧ ಎಂದೂ ಸಿಗುವುದಿಲ್ಲ. ಕೋಪಕ್ಕಿಂತ ನಿಮ್ಮನ್ನು ನೀವು ಪ್ರೀತಿಸಿ, ಹಾಗೆ ಇತರರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳಿ. ನಿಸ್ವಾರ್ಥ ಪ್ರ...

ಪರಿಸರ - ಪರಿಸದ ದಿನದ ಅಂಗವಾಗಿ ಬರೆದ ಕವಿತೆ - ಪುನೀತ್ ಕುಮಾರ್

ಪರಿಸರ ಹೂವು-ಬಳ್ಳಿ, ಗಿಡ-ಮರ ಪ್ರಾಣಿ-ಪಕ್ಷಿ ಜಲಚರ ಬೆಟ್ಟ-ಗುಡ್ಡ, ಬಾನು-ಬಯಲು ಕೀಟ, ಕಾನು, ಸರೋವರ... ಇವೇ ನಮ್ಮ ಪರಿಸರ ಇವು ಸೃಷ್ಟಿಗಾನದಿಂಚರ ಹಾಡು ನೀ ನಲಿದಾಡು ನೀ ಪರಿಸರದ ಸಿರಿ ನೋಡು ನೀ ಮೂಡಲು ನೇಸರ ಆ ನೀಲಿ ಬಾನಲ್ಲಿ ಸವಿರಾಗ ಕೇಳು ನೀ ಕೋಗಿಲೆ ಹಾಡಲ್ಲಿ ಸಮರಸ ಸಾರುವ ಆ ಜೇನಗೂಡು ಸಾಲಾಗಿ ಹಾರುವ ಬೆಳ್ಳಕ್ಕಿ ನೋಡು ಸುಗಂಧ ಬೀರುವ ನೂರಾರು ಮಂದಾರ ಫಲಗಳ ನೀಡುವ ಮಣ್ಣೇ ಬಂಗಾರ ಬೆಳ್ಳಿ ಬೆಳಕ ಚೆಲ್ಲುವ ಚಂದಿರ ತಂಪನೀಯುವ ತರುಗಳು ಸುಂದರ ಮಳೆಯ ತರುವ ಮೇಘಗಳ ಸಂಚಾರ ಮಳೆಬಿಲ್ಲು- ಸೃಷ್ಟಿಯ ಸೊಂಪಾದ ಚಿತ್ತಾರ! ತೊರೆಗಳ, ತೆರೆಗಳ ವಿವಿಧ ಝೇಂಕಾರ ಮಿರಮಿರ ಮಿನಗುವ ಮುಕ್ಕೋಟಿ ತಾರಾ ಕಡಲೊಡಲಲಿ ಅಲೆವ ವಿವಿಧ ಜಲಚರ ಮುಗಿಲನ್ನೆ ಮುಟ್ಟಿಸಿ ಬೀಗುವ ಶಿಖರ ಹೊಲದೊಳು ತೆನೆಹೊತ್ತು ಮಿರುಗುವ ಪೈರು ನೆಲದೊಳಗೆ ಸಿಗುವುದು ಲೋಹದ ಅದಿರು ಸೃಷ್ಟಿಸಿರಿಯ ಚರಾಚರ ಸವಿವ ಮನಕೆ ಸಡಗರ! ಗಾಳಿ ಬೆಳಕು ನೀರು ಮಣ್ಣು ಇವೇ ನಮ್ಮ ಬಾಳ ಕಣ್ಣು ಕಣ್ಣ ಕಳೆದುಕೊಂಡು ನೀನು ಆಗಬೇಡ ಕುರುಡನು ಇಂದು ನೆಟ್ಟ ಗಿಡ ಹಸಿರು ನಾಳೆ ಅದೇ ನೆಳಲು, ಉಸಿರು ಮರೆತು ನಡೆದೆಯೆಂದರಿದನು ಆಗದೆಂದೂ ಬಾಳು ಹಸನು ಸೃಷ್ಟಿ ಸಿರಿಯ ಚರಾಚರ ನರಗೆ ಸಿಕ್ಕ ಮಹಾವರ ಕಣ್ಣು ಬಿಟ್ಟು ಕಾಣ್ಬ ಮನಕೆ ಪರಿಸರದೊಳು ಪ್ರತಿಸ್ವರದೊಳು ಪ್ರತಿಮನದೊಳು ಕಣಕಣದೊಳು ದೈವ ದೃಗ್ಗೋಚರ. ದೈವ ದೃಗ್ಗೋಚ್ಚರ. - ಪುನೀತ್ ಕುಮಾರ್ ವಿ

ಗಂಗೆಯ ಮಡಿಲಲ್ಲಿ - ತಿರಸ್ಕರಿಸಲ್ಪಟ್ಟ ಕವಿತೆ - ಅನಂತ ಕುಣಿಗಲ್

      ಈ ಕವಿತೆಯಲ್ಲಿ ಅವರಿಗೆ ಕಂಡಂತಹ ತಪ್ಪು ಏನು ಎಂದು ನಿಜಕ್ಕೂ ತಿಳಿಯುತ್ತಿಲ್ಲ. ನಮ್ಮಂಥ ಬರಹಗಾರರಿಂದ ಬೇಕಾದಷ್ಟು ಬರೆಸಿಕೊಂಡು ಘನತೆ ಹೆಚ್ಚಿಸಿಕೊಳ್ಳುವ ಕೆಲವು ಪತ್ರಿಕೆ, ಬ್ಲಾಗ್ ಗಳು, ಇ-ಪತ್ರಿಕೆಗಳಿಗೆ ನಿಜಾಂಶಗಳಿರುವ ಬರಹಗಳನ್ನು ಕಂಡರೆ ನಿರಾಕರಿಸುವುದೇಕೆ?? ಇದರಿಂದ ಅವರು ಸಮಾಜಕ್ಕೆ ಸಾರುವುದಾದರೂ ಏನು??? ಬೆತ್ತಲೆ ಬರಹಗಳನ್ನು ಚಪ್ಪರಿಕೊಂಡು ಓದುವಂತೆ ಚಿತ್ರಗಳ ಚಿತ್ತಾರದೊಂದಿಗೆ ಪ್ರಕಟಿಸುವ ಇಂತಹ ಹತ್ತಾರು ದಿನಪತ್ರಿಕೆಗಳಿಗೆ, ಇ- ಪತ್ರಿಕೆಗಳಿಗೆ ಹಾಗೂ ಬ್ಲಾಗ್ ಗಳಿಗೆ ನಾಚಿಕೆಯಾಗಬೇಕು. ಕನಿಷ್ಠ ಕಾರಣವನ್ನಾದರೂ ಕೊಟ್ಟಿದ್ದರೆ ಕಳೆದುಕೊಳ್ಳುತ್ತಿದ್ದ ಗಂಟು ಏನು ಎಂಬುದೇ ನನ್ನ ಮುಂದಿರುವ ಪ್ರಶ್ನೆ. ಕವಿತೆಯಲ್ಲಿ ಅಂದಿನ ಗಂಗೆಗೂ ಇಂದಿನ ಗಂಗೆಗೂ ಹೋಲಿಕೆ ಮಾಡಿ, ದುರಂತಗಳಿಗೆ ಕಾರಣವಾದ ಪರಿಸರವನ್ನು ಹಾನಿ ಮಾಡಬಹುದಾದ ನಮ್ಮ ಕೆಲವು ಹಾಳು ಚಟುವಟಿಕೆಗಳ ಬಗ್ಗೆ ನಮ್ಮನ್ನೇ ಪ್ರಶ್ನಿಸಿಕೊಳ್ಳುವ ಹಾಗೂ ದೂಷಿಸಿಕೊಳ್ಳುವ ಸಾಲುಗಳಿವೆ. ಅದರಲ್ಲಿ ಕಾಣುವ ತಪ್ಪೇನು ಅಂತ ನನಗೆ ತಿಳಿದಿಲ್ಲ. ಓದಿದಾಗ ನಿಮಗೆ ತಿಳಿದರೆ, ದಯವಿಟ್ಟು ತಿಳಿಸಿ. (ಗಂಗಾಮಾತೆ ಕಲುಷಿತಗೊಳ್ಳಲು ಇವರ ಕೊಡುಗೆ ಏನೂ ಇಲ್ಲ ಅಂತ ಕಾಣ್ತದೆ. ಬಹುಶಃ ಇವರು ಭಾರತದಲ್ಲಿಲ್ಲ!) " ಗಂಗೆಯ ಮಡಿಲಲ್ಲಿ " ಭಾರತದ ಜಲ ಇತಿಹಾಸವನ್ನೇ ಬರೆದ ಮಾತೆ; ಗಂಗಾ ಅದೆಷ್ಟು ಸ್ವಚ್ಚಂದ! ಅದೆಂತಾ ಸೊಬಗು!! ಅದೆಲ್ಲಾ ಈಗ ಮ...