ವಿಷಯಕ್ಕೆ ಹೋಗಿ

ನಿಜ ಪರಿಸರ ಪ್ರೇಮಿ - ಲೇಖನ - ಡಾ. ಗುರುಸಿದ್ಧಯ್ಯ ಸ್ವಾಮಿ


ನಿಜ ಪರಿಸರ ಪ್ರೇಮಿ : ಸೊಲ್ಲಾಪುರದ ವೀರೇಶ್ವರ ಶರಣರು

          ಮೂಡಣದಲ್ಲಿ ರವಿ ಆಗಮಿಸಿ ಬಾನಂಗಳದ ತುಂಬ ಬಂಗಾರ ಬಣ್ಣದ ರಂಗವಲ್ಲಿಯನ್ನು ಬರೆದಿದ್ದನು. ಇದನ್ನು ಕಂಡ ಹಕ್ಕಿಗಳು ಸಂತಸದಿಂದ ಚಿಲಿ ಪಿಲಿ ಸುಪ್ರಭಾತ ಹಾಡತೊಡಗಿದವು. ಹಕ್ಕಿಗಳ ಈ ಕಲರವ ಕೇಳಿ ರವಿ ಬಂದನೆಂದರಿತ ಮೊಗ್ಗುಗಳೆಲ್ಲ ಕೂಡ ರಂಗವಲ್ಲಿ ನೋಡುವ ಕುತೂಹಲ ತಡೆಯದೆ ಕಣ್ಣು ತೆರೆದೇ ಬಿಟ್ಟವು. ಕೆಲವು ಹೂಗಳು ಆನಂದದ ಭಾರ ತಡೆಯಲಾಗದೆ ಧರೆಗುರುಳುತ್ತಿದ್ದವು.
          ಗಿಡದಿಂದ ಉದುರಿದ ಹೂಗಳು  ನೆಲದ ಮೇಲೆ ರಂಗವಲ್ಲಿಯನ್ನೊಮ್ಮೆ ಹಾಗೂ ಬಾನಂಗಳದ ರಂಗವಲ್ಲಿಯನ್ನೊಮ್ಮೆ ಕಣ್ಣು ತುಂಬ ನೋಡುತ್ತ ಶರಣರೊಬ್ಬರು ನಿಂತಿದ್ದರು. ಒಂದು ಕ್ಷಣ ಕಣ್ಣು ಮುಚ್ಚಿ ಕೈ ಮುಗಿದರು. ನಂತರ ಕಣ್ಣು ತೆರೆದು ಮತ್ತೆ ನೆಲದತ್ತ ನೋಡತೊಡಗಿದರು. ಕೆಳಗೆ ಬಿದ್ದ ಹೂಗಳನ್ನು ಆಯ್ದುಕೊಳ್ಳತೊಡಗಿದರು.
           ಅದೇ ಮಾರ್ಗದಿಂದ ಹೊರಟಿದ್ದ ಯುವಕನೊಬ್ಬ ಇದನ್ನು ನೋಡಿದ. ಅವಸರದಿಂದ ಅವರ ಹತ್ತಿರ ಓಡಿದ.
    "ಪೂಜ್ಯರೆ, ಈ ಬಿದ್ದ ಹೂಗಳನ್ನು ನೀವೇಕೆ ತೆಗೆಯುತ್ತಿರುವಿರಿ? ನಾನು ಈಗಲೇ ಕಸಗುಡಿಸುತ್ತೇನೆ ತಡೆಯಿರಿ." ಎಂದ.
      "ಇಲ್ಲಪ್ಪ, ನಾನು ಇಷ್ಟಲಿಂಗ ಪೂಜೆಗಾಗಿ ಈ ಹೂಗಳನ್ನು ಆಯ್ದುಕೊಳ್ಳುತ್ತಿರುವೆ." ಎಂದರು.
      "ಪೂಜೆಗಾಗಿ ಬಿದ್ದ ಹೂಗಳನ್ನೇಕೆ ಆಯ್ದುಕೊಳ್ಳುತ್ತಿರುವಿರಿ. ಸ್ವಲ್ಪ ತಡೆಯಿರಿ. ನಾನು ತಮಗೆ ಒಂದು ನಿಮಿಷದಲ್ಲಿ ಒಂದು ಬುಟ್ಟಿ ಹೂಗಳನ್ನು ತೆಗೆದುಕೊಡುವೆ" ಎನ್ನುತ್ತ ಅವರ ಕೈಯಲ್ಲಿ ಇರುವ ಪಾತ್ರೆಯತ್ತ ಕೈ ಮಾಡಿದ.
         "ಬೇಡಪ್ಪಾ, ನಾನು ಗಿಡದಲ್ಲಿರುವ ಹೂಗಳನ್ನು ಕುಡಿಯುವುದಿಲ್ಲ. ಹೂಗಳನ್ನು ಅದರ ತಾಯಿಯಿಂದ ಬೇರ್ಪಡಿಸುವುದು ನನಗೆ ಇಷ್ಟವಾಗುವುದಿಲ್ಲ. ಹೂಗಳನ್ನು ಕೀಳುವುದರಿಂದ ವನಸ್ಪತಿಗಳಿಗೂ ನೋವು ಆಗಬಹುದು. ನೋವು ಮಾಡಿ ತಂದ ಹೂವಿನಿಂದ ಪೂಜೆ ಮಾಡಿದರೆ ಅದು ಇಷ್ಟಲಿಂಗ ದೇವರಿಗೂ ಇಷ್ಟವಾಗಲಿಕ್ಕಿಲ್ಲ." ಎನ್ನುತ್ತ ಮತ್ತೆ ಬಿದ್ದ ಹೂಗಳನ್ನು ಆಯ್ದುಕೊಳ್ಳತೊಡಗಿದರು.
            "೧೨ ನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರು 'ದಯೆ ಬೇಕು ಸಕಲ ಪ್ರಾಣಿಗಳಲ್ಲಿ' ಎಂದು ಹೇಳಿದ್ದರು. ಇಂದು ೨೦ ನೆಯ ಶತಮಾನದಲ್ಲಿಯೂ ವನಸ್ಪತಿಗಳ ಮೇಲೂ ದಯೆ ತೋರುವ ದಯಾನಿಧಿ ನಾಲ್ವತವಾಡದ ಶ್ರೀ ವೀರೇಶ್ವರ ಶರಣರು ನಮ್ಮ ಸೊಲ್ಲಾಪುರದದಲ್ಲಿ ನಮ್ಮ ಪುಣ್ಯ" ಎನ್ನುತ್ತಿದ್ದಂತೆಯೇ ಆ ಯುವಕನ ಕೈಗಳು ತಾನಾಗಿಯೇ ಜೋಡಿಸಲ್ಪಟ್ಟವು.
           ಈ ಸುದ್ದಿಯನ್ನು ನಾನು ನಾಡಿಗೆಲ್ಲ ತಿಳಿಸುವೆ ಎಂದು ಮಾರುತದೇವ ಭರ್ರನೆ  ತನ್ನ ಪಯಣ ಆರಂಭಿಸಿದ. ಸೂಕ್ಷ್ಮ ಸಂವೇದಿ ಶರಣರ ವರ್ತನೆಗೆ ಹೂವಿನ ಗಿಡಕ್ಕೂ ಅಳು ಉಕ್ಕಿ ಬಂತೋ ಏನೋ.. ಬಾಗಿ ಹೂಗಳನ್ನು ಆಯುತ್ತಿರುವ  ಶ್ರೀ ವೀರೇಶ್ವರ ಶರಣರ ಮೇಲೆ ಹೂಗಳ ಮಳೆ ಸುರಿಯತೊಡಗಿತು.

- ಡಾ. ಗುರುಸಿದ್ಧಯ್ಯಾ ಸ್ವಾಮಿ
ಅಕ್ಕಲಕೋಟ, ಮಹಾರಾಷ್ಟ್ರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...