ವಿಷಯಕ್ಕೆ ಹೋಗಿ

ಮೂರನೆಯವಳು ಸಂಕಲನದ ಅವಲೋಕನ - ವಿಮರ್ಶೆ - ದೀಕ್ಷಿತ್ ನಾಯರ್


     ಮೂರು ರಾತ್ರಿಯಲ್ಲಿ ಮೂರು ಬಾರಿ ಓದಿ, ಇನ್ನೂ ಓದಬೇಕೆನಿಸುವ ಕೃತಿ ಅನಂತ ಕುಣಿಗಲ್ ಅವರ 'ಮೂರನೆಯವಳು'.

     "ಮೂರನೆಯವಳು" ಯುವ ಬರಹಗಾರ ಅನಂತ ಅವರು ಇತ್ತೀಚೆಗೆ ಪ್ರಕಟಿಸಿದ ಕವನ ಸಂಕಲನದ ಹೆಸರು. ಯಾವುದೇ ಪುಸ್ತಕವನ್ನಾದರೂ ಬಹಳ ತದೇಕಚಿತ್ತದಿಂದ ಮನಸ್ಸನ್ನು ಅತ್ತಿತ್ತ ಹರಿಯ ಬಿಡದೆ ಒಂದೇ ಗುಕ್ಕಿಗೆ ಓದಿ ಮುಗಿಸಿ ಗೆಳೆಯರೊಂದಿಗೆ ಹಂಚಿಕೊಳ್ಳುವ ನಾನು "ಮೂರನೆಯವಳು" ಪುಸ್ತಕವನ್ನು ಮೂರು ರಾತ್ರಿಗಳಲ್ಲಿ ಮೂರು ಬಾರಿ ಓದಿ ಮುಗಿಸಿದೆ. ಅವಕಾಶ ಸಿಕ್ಕಿದರೆ ಮತ್ತೂ ಓದುವೆ. "ಮೂರನೆಯವಳು" ಪುಸ್ತಕದ ತೊಂಬತ್ತೆರಡು ಪುಟಗಳ ಪ್ರತೀ ಕವಿತೆಗಳೊಂದಿಗೆ ಬೆರೆತು ಹೋಗಿ ಪಳಗಿದ ನನಗೆ ಈ ಕ್ಷಣಕ್ಕೂ ಹಾಳೆ ಹರವಿಕೊಂಡು ಅನಿಸಿಕೆ ಬರೆಯಲು ಮನಸ್ಸಾಗುತ್ತಿಲ್ಲ. ಎಲ್ಲಿ ನನ್ನ ಅನಿಸಿಕೆ ಅಂತಹ ಉತ್ತಮ ಕೃತಿಯ ಮುಂದೆ ಬಾಲಿಶವೆನಿಸಿ ಬಿಡುತ್ತದೆಯೋ ಎಂಬ ಸಣ್ಣ ಅಳುಕು. ಆದರೆ ಇನ್ನೂ ನಾನು ತಡ ಮಾಡಿದರೆ ಓದುಗ ದೊರೆಗಳಿಗೆ ಆ ಪುಸ್ತಕ ಎಟುಕದೆ ಹೋಗುತ್ತದೆ ಎಂಬ ಭಾವನೆಯಲ್ಲಿ ಈ ನನ್ನ ಅನಿಸಿಕೆ ಅಥವಾ ವಿಮರ್ಶಾತ್ಮಕ ಲೇಖನವನ್ನು ಬಿಚ್ಚಿಡುತ್ತಿದ್ದೇನೆ.

       ( ಯುವಬರಹಗಾರ ಅನಂತ ಕುಣಿಗಲ್ )

   ವರುಷದ ಹಿಂದೆಯಷ್ಟೆ "ಋಣಭಾರ" ಎಂಬ ಕಥಾ ಸಂಕಲನವನ್ನು ಪ್ರಕಟಿಸಿ ಸದ್ದಿಲ್ಲದೆ ಸುದ್ದಿಯಾದ ಅನಂತ ಅವರು "ಮೂರನೆಯವಳು" ಕವನ ಸಂಕಲನವನ್ನು ಹೊರ ತಂದು ನಾನು ಕಥೆಗಾರ ಮಾತ್ರವಲ್ಲ ಕವಿಯೂ ಹೌದು ಎಂದು ಸಾಬೀತು ಪಡಿಸಿದ್ದಾರೆ. ಮತ್ತು ಪದಗಳೊಂದಿಗೆ ಸರಸವಾಡುವವನು ಮಾತ್ರ ಕವಿ ಎಂಬುದನ್ನು ಅವರ ಕವಿತೆಗಳ ಮೂಲಕ ಓದುಗ ದೊರೆಗಳಿಗೆ ತಿಳಿಸಿಕೊಟ್ಟಿದ್ದಾರೆ. ಹಡೆದ ತಾಯಿ ಮತ್ತು ಸಮಾಜದ ಸ್ತ್ರೀ ಕುಲಕ್ಕೆ ಅರ್ಪಿತವಾಗಿರುವ ಈ ಕೃತಿಗೆ ವಾಸುದೇವ ನಾಡಿಗ್ ಅವರು ಮುನ್ನುಡಿ ಬರೆದು ಅದರ ತೂಕವನ್ನು ಹೆಚ್ಚಿಸಿದ್ದಾರೆ. ಇಂತಹ ಉತ್ಕೃಷ್ಟ ಪುಸ್ತಕವನ್ನು ಪ್ರಕಟಿಸುವುದರ ಮೂಲಕ "ಅವ್ವಾ" ಪುಸ್ತಕಾಲಯವು ಕೂಡ ಒಂದು ಹೆಜ್ಜೆ ಮುಂದೆ ಹೋಗಿದೆ. ಮೂರನೆಯವಳು, ನನ್ನವಳು, ಅದೇ ರಾಗ ಅದೇ ಹಾಡು, ಹೆಣ್ಣೆಂದರೆ ಅಷ್ಟೇ ಸಾಕೆ?, ನೀ ಎಲ್ಲವನ್ನೂ ಮರೆತೆಯಾ, ಎಂಬ ಐದು ಭಾಗಗಳಲ್ಲಿ ಕವಿ ತನ್ನ ಕವಿತೆಗಳ ರಸದೌತಣವನ್ನು ಬಡಿಸಿದ್ದಾರೆ. ಅಮ್ಮ, ಪ್ರೀತಿ, ಪ್ರೇಮ, ಹಸಿವು, ಸಮಾಜದ ವಾಸ್ತವದ ಸತ್ಯ ಸಂಗತಿಗಳೊಂದಿಗೆ ಆತುಕೊಂಡಿರುವ ಅನಂತ ಅವರ ಕವಿತೆಗಳು ಓದುಗನ ಅನತಿ ದೂರದಲ್ಲಿಯೇ ಜನ್ಮ ತಾಳಿದೆಯೇನೊ ಎಂಬಂತೆ ಭಾಸವಾಗುತ್ತದೆ. ಅಂದರೆ ಒಂದಷ್ಟು ಕವಿತೆಗಳು ಓದುಗನ ಅನುಭವ ಮತ್ತು ಆತನ ಬದುಕನ್ನೇ ಚಿತ್ರಿಸಿದಂತೆ, ಕ್ಲಿಷ್ಟ ಪದಗಳ ಬಳಕೆ ಮಾಡದೆ ಮತ್ತು ಪ್ರಾಸಕ್ಕೆ ದುಂಬಾಲು ಬೀಳದೆ ಸರಳಗನ್ನಡದಲ್ಲಿ ಹೆಣೆಯುತ್ತಾ ಹೋಗಿದ್ದಾರೆ.

"ಇರುವುದು ಎರಡೇ ಕಣ್ಣು,
ಒಂದು ಗಂಡು ಇನ್ನೊಂದು ಹೆಣ್ಣು
ಆದರೆ...
ಮೂರನೆಯವಳು ಕಾಣುವುದು ಮಾತ್ರ 
ಎರಡು ಕಣ್ಣುಗಳನ್ನು ತಿಂದುಕೊಂಡವರಿಗೆ "

ಎಂಬ ಸಾಲುಗಳ ಮೂಲಕ ಪ್ರಾರಂಭದಲ್ಲಿಯೇ ಒಂದು ರೋಚಕ ತಿರುವನ್ನು ನೀಡಿದ್ದಾರೆ. ಮುಂದೆ ಪೆಟ್ಟು, ಕಟ್ಟು, ಮುಟ್ಟು,  ತವಕ ಹೀಗೆ ಹಲವಾರು ಶೀರ್ಷಿಕೆಯೊಂದಿಗೆ ಆರ್ದಗೊಂಡಿರುವ ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಸ್ವತಃ ಕವಿಯೇ ಹೆಣ್ಣಾಗಿ ಬರೆದಿದ್ದಾರೆ. ಕೆಲ ಕವಿತೆಗಳಲ್ಲಿ ಕವಿಯು ಕಾಮೋನ್ಮಾದ ಪರಾಕಾಷ್ಠೆಯಲ್ಲಿ ಮಿಂದಿರುವಂತೆ ಕಂಡರೂ ಕೊನೆಯ ಸಾಲುಗಳ ಮೂಲಕ ಅರಿವಿನ ಪಾಠ ಹೇಳಿದ್ದಾರೆ. ಖಿನ್ನತೆಯ ಚಾದರ ಹೊದ್ದುಕೊಂಡವರಿಗೆ ಕೆಲ ಕವಿತೆಗಳು ಸ್ಫೂರ್ತಿ  ತುಂಬಿವೆ. ಲವಲೇಶವೂ ಉತ್ಪ್ರೇಕ್ಷೆ ಎನಿಸದೆ ವಾಸ್ತವದ ಚಿತ್ರಣಗಳನ್ನು ಕಣ್ಣ ಮುಂದೆ ತಂದಿಟ್ಟಿರುವ ಕವಿಯ ಪ್ರಾಮಾಣಿಕ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಹಲವೆಡೆ ಸನ್ನಿವೇಶಗಳನ್ನು ಸೃಷ್ಟಿ ಮಾಡುವಲ್ಲಿ ಕವಿಯು ಹೋಲಿಕೆಯಾಗದ ಪದಗಳನ್ನು ಬಳಸಿ ಎಡವಿದ್ದಾರಾದರೂ ಮುಂದೆ ಬಲಿಷ್ಠರಾಗುತ್ತಾ ಹೋಗಿದ್ದಾರೆ. ಹಾಗು ಒಂದೆರಡು ಕವಿತೆಗಳಲ್ಲಿ ಅಕ್ಷರ ದೋಷಗಳಾಗಿ, ಕವಿಗೆ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದೆನಿಸುತ್ತದೆ. ರಸದಲ್ಲಿ ಕಸ ಹುಡುಕುವುದು ಬೇಡವೆಂಬ ನಿರ್ಧಾರಕ್ಕೆ ಓದುಗರು ಬಂದರೂ ಬರಬಹುದು.

"ಹೊಳೆದಂಡೆ ಮೇಲಣ
ಕರಿಬಂಡೆ ಕೆಳಗಣ
ಕಪ್ಪಂಚಿನ ನೆರಳಿನ ತುದಿಯಲ್ಲಿ
ಕೆರೆ ನೀರಿನ ಹಿತ
ತಂಪು ಗಾಳಿಯ ಮೊರೆತ
ಬಂಡೆ ನೆರಳಿನ ತಂತ್ರಗಳೆಲ್ಲವೂ ಸಜ್ಜಾಗಿವೆ
ಮೈದೊಗಲುಗಳ ಸಮಾಗಮಕ್ಕೆ ಕಣ್ಣಾಗಲು "

ಸಮ್ಮಿಲನ ಶೀರ್ಷಿಕೆ ಹೊಂದಿರುವ ಈ ಕವಿತೆಯ ಮೊದಲ ಏಳು ಸಾಲುಗಳು ಒಂದು ಕ್ಷಣ ನನ್ನನ್ನು ಸೆಳೆಯಿತು. ಒಂದಷ್ಟು ಪದ ಪ್ರಯೋಗಗಳು ಹೆಣ್ಣು ಮಕ್ಕಳನ್ನು ಕಮ್ಮಗೆ ನಾಚುವಂತೆ ಮಾಡಿದರೂ ಇನ್ನೊಂದಷ್ಟು ಪದಗಳು ಬಿಕ್ಕುವಂತೆಯೂ ಮಾಡಿದೆ. ಒಟ್ಟಾರೆ ಮೊದಲ ಪ್ರಯತ್ನದಲ್ಲಿಯೇ ಅದ್ಬುತ  ಯಶಸ್ಸು ಕಂಡ ಅನಂತ ಅವರಿಗೆ ಅಭಿನಂದನೆಗಳು. ಗೋಪಾಲಕೃಷ್ಣ ಅಡಿಗ, ಡಾ. ಎಚ್.ಎಸ್ ವೆಂಕಟೇಶಮೂರ್ತಿ, ನಿಸಾರ್ ಅಹಮದ್, ಸುಬ್ರಾಯ ಚೊಕ್ಕಾಡಿ, ಬಿ.ಆರ್.ಎಲ್ ಹೀಗೆ ಹಲವಾರು ಹಳೆ ತಲೆಮಾರಿನ ಖ್ಯಾತ ಕವಿಗಳ ಕವಿತೆಗಳನ್ನು ಓದಿದರೆ ಅನಂತ ರವರ ಕಾವ್ಯದ ಶಕ್ತಿ ಮತ್ತಷ್ಟು  ಹೆಚ್ಚುತ್ತದೆ ಎಂಬ ಸಲಹೆಯೊಂದಿಗೆ ಅವರಿಂದ ಮತ್ತಷ್ಟು ಪುಸ್ತಕಗಳು ಪ್ರಕಟವಾಗಲಿ ಎಂದು ಆಶಿಸುತ್ತೇನೆ. ಕೊನೆಯದಾಗಿ ಅವರ "ಮೂರನೆಯವಳು" ಕೃತಿಗೆ ಶಿರಸಾವಹಿಸಿ ಪ್ರಣಾಮಿಸುವೆ.

                       - ದೀಕ್ಷಿತ್ ನಾಯರ್
                   (ಯುವ ಲೇಖಕ, ಮಂಡ್ಯ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...