ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಋತುಗಾನ - ಲೇಖನ - ಅಶ್ವಿನಿ ಬರಗಾಲಿ

ಋತುಗಾನ       ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ‌ ಎಣಿಕೆಯೊಳಗೆ ಕುಸಿದು ಹೋದ ಬದುಕು ಅವಳೊಳಗಿನ ನೋವನ್ನ  ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ ಪದಗಳ ಜೋಡಣೆ ಈ ಬರಹ....          ಅವಳು ಬಾಲ್ಯವ ಬಯಸಿದವಳು, ತಾನೇ ಚೆಂದ ಎಂದು ಕುಣಿದಾಡಿದವಳು. ಬೆಳೆದಾಗ ಬದುಕು ಚಿಂತೆ ಎಂದು ನೊಂದವಳು. ಅವಳಿಗರಿವಿಲ್ಲದೆಯೇ ನೆನಪಾಗಿ ಉಳಿವಂತೆ ಕಳೆದು ಹೋದದ್ದು ಬಾಲ್ಯ. ಯಾರಲ್ಲಿಯೂ ಬೇಡಿಕೊಳ್ಳದೇ ಧುತ್ ಎಂದು ಬಂದು ನಿಂತದ್ದು ಯವ್ವನ. ಎರಡರ ನಡುವಿನ ಗೊಂದಲದ ಗೂಡು ಬಾಳೆಂಬ ನಿರರ್ಥಕ ಪಯಣ‌.          ದಿನದಿನವೂ ರೋಮಾಂಚಕವಾಗುತ್ತ ಪ್ರತಿ ನಿಮಿಷದಿ ಮಿಡಿವ ಭಾವಗಳಲ್ಲಿ ಹಿಗ್ಗಿದ ದೇಹ ಕಂಡು ಬೆರಗಾದಳು. ಎಲ್ಲರ ಕಣ್ಣು ಕುಕ್ಕುವಂತೆ ಬಿರಿದ ಮೌಂಸ ಖಂಡಗಳ ನಡುವೆ ಸೋತು ನಿಂತಳು. ಕೆಂಪಾಗಿ ಮೂಡಿದ ಮೊಡವೆಗಳು ಮುಖದ ಸೌಜನ್ಯವ ಕೆಡವಿದಾಗ ಧಿಕ್ಕಾರದಿ ಭಾವಾವೇಶಕ್ಕೆ ಒಳಗಾದವಳು.          ಕಾಣದೆ ಸವೆದ ದಿನಗಳಲ್ಲಿ ಮಾವಿನ ಹಣ್ಣಂತೆ ಮಾಗಿದ ಅವಳ ದೇಹಕ್ಕೆ ಪರರ ಬಾಯಲ್ಲಿ 'ದೊಡ್ಡವಳಾದಳು' ಎಂದು ಹೆಸರಿಟ್ಟಿದ್ದ ಕಂಡು ಬೆಚ್ಚಿದಳು, ಬೆವರಿದಳು. ಅದೇ ದಿನ , ಅದೇ ಕ್ಷಣ ಆರಂಭವಾದದ್ದು ಅವಳ ' ಋತುಗಾನ'. ...

ಯಾಕೆ ಬರೆಯಬೇಕು?! - ಭಾನುವಾರದ ಕವಿತೆ - ಅನಂತ ಕುಣಿಗಲ್

ಯಾಕೆ ಬರೆಯಬೇಕು?? ಬರೆಯಬೇಕು ಮನರಂಜನೆಗಾಗಿ.. ಬಿಡುವಿಲ್ಲದೆ ದುಡಿದು ಹಣ್ಣಾಗುವವರ ಶ್ರೇಯಕ್ಕೆ ವಿಶ್ರಾಂತಿ ಕೊಡಲು ಬರೆಯಲೇಬೇಕು ಬರೆಯಬೇಕು ಸಂಸ್ಕೃತಿಯ ಉಳಿಸಲು ಹಿಂದೆ ನೋಡದೆ ನುಗ್ಗುತ್ತಿರುವ ತ್ವರಿತ ವೇಗದ ನಾಗರೀಕತೆಯಲ್ಲಿ ಆಗಾಗ ಬೇಕೆನಿಸುವ ವಿರಾಮಕ್ಕಾಗಿ ಬರೆಯಲೇಬೇಕು ಬರೆಯಬೇಕು ಇತಿಹಾಸವ ತಿಳಿಸಲು ತಿಳಿಯದ ಸತ್ಯವ ತಿಳಿಸಲು ಅಂಧರಿಗೆ ದಾರಿ ಕಾಣಿಸಲು ಅಧ್ಯಯನದ ಮಹತ್ವವ ಸಾರಲು ಬರೆಯಲೇಬೇಕು ಬರೆಯಬೇಕು ಮಾಹಿತಿಯ ಕಲೆಹಾಕಲು ಜ್ಞಾನ ಸಂಪತ್ತನ್ನು ಹೆಚ್ಚಿಸಲು ಪ್ರತಿಭೆಗಳ ಗುರುತಿಸಿ ಆಡಂಬರವ ತೊಳೆಯಲು ವಿಜ್ಞಾನದ ಅರಿವಿಗಾಗಿ ತಂತ್ರಜ್ಞಾನದ ಮಿತಿಯ ಗುರುತಿಗಾಗಿ ಬರೆಯಲೇಬೇಕು ಬರೆಯಬೇಕು ಮೂಢತೆಯನ್ನು ಕಿತ್ತೊಗೆಯಲು ಅತಿಮಾನುಷ ಕೃತ್ಯಗಳಿಂದ ಮಾನುಷ ವೀರ್ಯವ ರಕ್ಷಿಸಲು ಜಾತಿ-ಪಂಗಡಗಳ ಮೀರಿ ಬದುಕಲು ಸಾಮರಸ್ಯವ ಸಾರಿ ಸಮಾನತೆಯ ಹಂಚಲು ಬರೆಯಲೇಬೇಕು ಬರೆಯಬೇಕು ಪ್ರಗತಿಶೀಲ ಬೆಳವಣಿಗೆಗಾಗಿ ನೈತಿಕತೆ-ತಾತ್ವಿಕತೆಯ ನೆಲೆಗಟ್ಟಿನಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಸೋಸಿ ಸಮಾಜದ ಸ್ವಾಸ್ಥ್ಯ ಕಟ್ಟಲು ಎಲ್ಲರನ್ನು ಎಚ್ಚರಿಸಲು ನಿದ್ರೆಯಿಂದ ಜಾಗೃತಗೊಳಿಸಲು ಬರೆಯಲೇಬೇಕು ಬರೆಯಬೇಕು ಕೊನೆಯದಾಗಿ ಭಾವನೆಗಳ ಹೊರ ಚೆಲ್ಲಿ.. ಜಗವ ಅಪ್ಪಲು ತನ್ನ ಪ್ರತಿಬಿಂಬವ ಕಂಡು ತನ್ನನ್ನೇ ತಿದ್ದುಕೊಳ್ಳುವ ಆತ್ಮಾವಲೋಕನದ ಹುಡುಕಾಟಕ್ಕಾಗಿ ಸಾವಧಾನದಿಂದ ಬರೆಯಲೇಬೇಕು ಸಂಯಮ...

ಲೋಕದ ಕಣ್ಣಿಗೆ ಹೆಣ್ಣಾದರೂ.. - ವಿಮರ್ಶಾ ಲೇಖನ - ನಂದಾದೀಪ

ಲೋಕದ ಕಣ್ಣಿಗೆ ಹೆಣ್ಣಾದರೂ ಅದೇ ಲೋಕ ನೋಡುವ ದೃಷ್ಟಿಗೆ ಮೂರನೆಯವಳು! ಅವಳೆಂದರೆ ಶಕ್ತಿ! ಜಗತ್ತಿನ ಎಲ್ಲಾ ಸಹನ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಎಲ್ಲವನ್ನು ಸಹಿಸುವವಳು, ಪ್ರೀತಿಸುವವಳು. ಅಂಥವಳನ್ನು ಕವಿ ಅನಂತ ಅವರು " ಮೂರನೆಯವಳು " ಎಂಬ ತಮ್ಮ ಕವನ ಸಂಕಲನದಲ್ಲಿ ಅವಳ ಸ್ವರೂಪನ್ನು ಅಕ್ಷರಗಳ ಮೂಲಕ ಚಿತ್ರಿಸಿದ್ದಾರೆ..! ವಿಭಿನ್ನವಾದ ಮುಖಪುಟ ಆಕೆಯ ಬದುಕಿನ ಸಾಗುವ ಹೆಜ್ಜೆಗಳನ್ನು, ಆಕೆಯು ಅನುಭವಿಸುವ ತನ್ನೊಳಗಿನ ನೋವನ್ನು ಬಿಂಬಿಸುತ್ತದೆ. ಮುಖಪುಟ ಸರಿಸಿ ಮುಂದೆ ಹೋದಂತೆ  ತನ್ನ ತಾಯಿ ಹಾಗೂ ಕಾಮದ ಕಣ್ಣಿಗೆ ಬಲಿಯಾದ ಹೆಣ್ಣು ಮಕ್ಕಳ ಅತೃಪ್ತ ಆತ್ಮಗಳಿಗೆ  ಎಂಬ ಕವಿಯ ಅರ್ಪಣಾ ಭಾವ ಮನ ಹೊಕ್ಕುತ್ತದೆ..! ಮೂರನೆಯವಳು ಕವನ ಸಂಕಲನವನ್ನು ಐದು ಭಾಗಗಳಾಗಿ ವಿಂಗಡಿಸಿ.. ಪ್ರತಿ ಭಾಗದಲ್ಲೂ ಹೆಣ್ಣಿನ ವಿಭಿನ್ನ ರೂಪಗಳನ್ನು ಸೆರೆಹಿಡಿದಿದ್ದಾರೆ. ಎಳೆ ವಯಸ್ಸಿನಲ್ಲಿ ಹೆಣ್ಣು ಗಂಡು ಎಂಬ ಯಾವುದೇ ಬೇಧವಿಲ್ಲದೆ ಆಡಿ ಬೆಳೆಯುತ್ತಿದ್ದ ನಾವು ಕ್ರಮೇಣ ಆಕೆ ಗಂಡು ಮಕ್ಕಳನ್ನು ಮಾತನಾಡಿಸಲು ಹಿಂಜರಿಯುತ್ತಾಳೆ. ಕಾರಣ ಮನಸ್ಥಿತಿ ಒಂದೇ ಇದ್ದರೂ ದೇಹಸ್ಥಿತಿ ಬದಲಾಗಿ ಹೋಗಿರುತ್ತದೆ.. "ನೀನು ಹೆಣ್ಣು ನೀ ಇನ್ನು ಮುಂದೆ ಹೀಗೆ ಇರಬೇಕು ಅನ್ನೋ ಕಟ್ಟು ಪಾಡುಗಳಿಂದ ಅವಳನ್ನು ಸಮಾಜ ಬಂಧಿಸಿಬಿಡುತ್ತದೆ.!" ಆಗ ಅವಳು ಮೂರನೆಯವಳಾಗಿ ಬದುಕಬೇಕು! ಲೋಕದ ಕಣ್ಣಿಗೆ ಹೆಣ್ಣಾದರೂ ಅದೇ ಲೋಕ ನೋಡುವ ದೃಷ...

ಮುಳ್ಳ ಬೇಲಿಯ ಹೂವು - ಕವಿತೆ - ವಿದ್ಯಾಶ್ರೀ ಅಡೂರ್

ಮುಳ್ಳ ಬೇಲಿಯ ಹೂವು ಮುಳ್ಳ ಬೇಲಿಯ ಮೇಲೆ ಬಳ್ಳಿ ಹೂವದು ಹರಡಿ ಘಮಿಸುತಿದೆ ಪರಿಮಳವ ಒಲವು ಹೆಚ್ಚಿ.. ಅಂತರಂಗದ ತಮವ ಕಳೆಯಲೆಂದೇ ನಾನು ಹೊರಟಿಹೆನು ಕತ್ತಲಲಿ ದೀಪ ಹಚ್ಚಿ.. ಘಮವ ಬೀರುವ ಹೂವು ಉಳಿಯುವುದೇ ಗಿಡದಲ್ಲಿ ಬಗೆ ಬಗೆಯ ಕಾರಣಕೆ ಬಲಿಯದಾಗಿ ನನ್ನಿರವು ನನ್ನುಳಿವು ನನ್ನದಾಗುಳಿಯುವುದೇ? ಹೋರಾಡುತಿರುವೆ ನಾನಲ್ಲಿ ಏಕಾಂಗಿ... ಹೂವ ಬಂಧಿಸಬಹುದು ಬಗೆ ಬಗೆಯ ರೀತಿಯಲಿ ಗಾಳಿ ಗಂಧದ ಜತೆಯ ಬಿಡಿಸ ಬಹುದೇ.. ಕುಗ್ಗಿಸಿಯು ಬಗ್ಗಿಸಿಯು ಜಗ್ಗಲಾರೆನು ನಾನು ಹಿಗ್ಗಿ ಬೆಳೆಯುವ ಇಚ್ಛೆ ನೂರ್ಮಡಿಸಿದೇ..                 ವಿದ್ಯಾಶ್ರೀ ಅಡೂರ್, ಮುಂಡಾಜೆ

ಕ್ಷಮಿಸಿಬಿಡು ಭಾರತಾಂಬೆ - ಕವಿತೆ - ಡಾ ಗುರುಸಿದ್ದಯ್ಯಾ ಸ್ವಾಮಿ

ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ ಬುದ್ಧಿ ಬೆಳೆಯದ ಅಮಾಯಕರು ನಾವು ಚಹದ ವ್ಯಾಪಾರಿಗಳಾಗಿ ಬಂದು ದೊರೆಗಳಾಗಿ ಒಂದೂವರೆ ಶತಮಾನಗಳ ಕಾಲ ನಮ್ಮನು ಗುಲಾಮರಾಗಿರಿಸಿದರೂ ಜಪಾನೀ ಜರ್ಮನಿ ಜನರಿಗೆ ಬಂದ ಬುದ್ಧಿ ಬರಲಿಲ್ಲ ನಮಗೆ ಸ್ವಾತಂತ್ರ್ಯಯಾಗದಿ ಧುಮುಕಿದ ಅಸಂಖ್ಯರು ಅಮರ ಹುತಾತ್ಮರಾದ ಸಹಸ್ರಾರು ಜನರು ಬಾಬು ಗೇನುವಿನಿಂದ ಹಿಡಿದು ಅನೇಕರ ಹೆಸರುಗಳು ನೆನಪೇ ಆಗುತ್ತಿಲ್ಲ ಇತ್ತೀಚಿಗೆ ಸ್ವಾತಂತ್ರ್ಯ ಎಂದರೆ ಸ್ವೈರಾಚಾರವಲ್ಲ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದರೂ ಸ್ವೈರಾಚಾರವೇ ನಮ್ಮ ಜನ್ಮ ಸಿದ್ಧ ಹಕ್ಕು ಎನ್ನುವಂತಿರುವರು ಇನ್ನೂ ಕೆಲವರು ಅವರ ಕಸವನ್ನು ನಮ್ಮ ದೇಶದಲ್ಲಿ ಮಾರಿ ಹಣ ಗಳಿಸುತ್ತ ನಮ್ಮನ್ನೇ ಮುಗಿಸುವ ಚೀನಾದ ಹುನ್ನಾರ ಗೊತ್ತಾಗುವುದೆಮಗೆ ನಮ್ಮ ಸೈನಿಕರು ಮಡಿದ ದಿನ ಮಾತ್ರ ಕ್ಷಮಿಸಿಬಿಡು ಭಾರತಾಂಬೆ ಕ್ಷಮಿಸಿಬಿಡು ಒಮ್ಮೆ ಬುದ್ಧಿ ಬೆಳೆಯದ  ಅಮಾಯಕರು ನಾವು ನೂರಾರು ಸಂತ ಶರಣರು ತಿಳಿ ಹೇಳಿದರೂ ಮತ್ತೆ ಮತ್ತೆ ಸ್ಮೃತಿ ಕಳೆದುಕೊಳ್ಳುವೆವು ನಾವು ಡಾ. ಗುರುಸಿದ್ಧಯ್ಯಾ ಸ್ವಾಮಿ ಅಕ್ಕಲಕೋಟ ಮಹಾರಾಷ್ಟ್ರ

ಅವ್ವ ಪ್ರಶಸ್ತಿಗಾಗಿ ಹಸ್ತಪ್ರತಿ & ಕೃತಿಗಳ ಆಹ್ವಾನ - ಅವ್ವ ಪುಸ್ತಕಾಲಯ

      ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ಶ್ರೀಮಾನ್ ಲೇ. ನರಸಯ್ಯ ಅವರ ಸ್ಮರಣಾರ್ಥ, ಅವ್ವ ಪುಸ್ತಕಾಲಯದಿಂದ ಕೊಡಮಾಡುವ 'ಅವ್ವ ಪ್ರಶಸ್ತಿ - 2021' ಕ್ಕೆ ನಾಡಿನಾದ್ಯಂತ ಲೇಖಕರಿಂದ ಹಸ್ತಪ್ರತಿ ಹಾಗೂ ಕೃತಿಗಳನ್ನು ಆಹ್ವಾನಿಸಲಾಗಿದೆ. ಅವ್ವ ಯುವ ಸಾಹಿತ್ಯ ಪುರಸ್ಕಾರ 2021 ಕ್ಕೆ ಹಸ್ತಪ್ರತಿಗಳ ಆಹ್ವಾನ : * ಇದುವರೆಗೂ ಒಂದು ಕೃತಿಯನ್ನೂ ಸ್ವತಂತ್ರವಾಗಿ ಪ್ರಕಟಿಸದಿರುವ 50 ವರ್ಷ ಒಳಗಿನ ಯಾರು ಬೇಕಾದರೂ ಅವ್ವ ಯುವ ಸಾಹಿತ್ಯ ಪುರಸ್ಕಾರಕ್ಕಾಗಿ ಕನ್ನಡದಲ್ಲಿ ಹಸ್ತಪ್ರತಿ ಸಲ್ಲಿಸಬಹುದು. * 1/8 ಡೆಮಿ ಅಳತೆಯಲ್ಲಿ ಕನಿಷ್ಟ 70 ಪುಟಗಳನ್ನು ಮೀರಿದ ಕಥೆಗಳು (8-10 ಕಥೆಗಳು), ಕವನಗಳು(35-40 ಕವನಗಳು), ಕಾದಂಬರಿ, ಪ್ರವಾಸ ಕಥನ ಮತ್ತು ನಾಟಕ ಪ್ರಕಾರದ ಸಾಹಿತ್ಯವನ್ನು ಮಾತ್ರ ಡಿಟಿಪಿ/ಮೊಬೈಲ್ ನಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದು ಕಳಿಸಬೇಕು. * ಹಸ್ತಪ್ರತಿಯ ಜೊತೆ ನಿಮ್ಮ ಎಸ್.ಎಸ್.ಎಲ್.ಸಿ ಅಥವಾ ಆಧಾರ್ ಕಾರ್ಡಿನ ನಕಲು ಪ್ರತಿಯನ್ನು ಕಳುಹಿಸಬೇಕು. ಪ್ರತಿಯ ಮೇಲೆ ಸಂಪರ್ಕಿಸಬೇಕಾದ ಫೋನ್ ನಂಬರನ್ನು ನಮೂದಿಸಿರಬೇಕು. * ಹಸ್ತ ಪ್ರತಿಯು ಶೀರ್ಷಿಕೆಯನ್ನು ಒಳಗೊಂಡಿರಬೇಕು. ಕೈಬರಹದ ಹಸ್ತಪ್ರತಿಗಳನ್ನು ಪರಿಗಣಿಸುವುದಿಲ್ಲ. ಒಬ್ಬರು ಒಂದು ಹಸ್ತಪ್ರತಿಯನ್ನು ಮಾತ್ರ ಸಲ್ಲಿಸಬಹುದು. * ಆಯ್ಕೆಯಾದ ಒಂದು ಹಸ್ತಪ್ರತಿಗೆ 2500 ರೂಗಳ ನಗದು ಪ್ರೋತ್ಸಾಹ ಬಹುಮಾನ ಹಾಗೂ ಪ್ರಶಸ್ತಿ ನೀಡಿ ಅಭ...

ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!! - ಕವಿತೆ - ಅನಂತ ಕುಣಿಗಲ್

ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!! ಪ್ರತಿ ದಿನ ಸಾವಿನ ಸುದ್ಧಿ ಕೇಳಿ ಭಯವಾಗುತ್ತಿತ್ತು ನನಗ್ಯಾರು ಮಕ್ಕಳಿಲ್ಲವೆಂದು ಏಕಾಂತ ಕಾಡುತ್ತಿತ್ತು ಅದಕ್ಕಾಗಿ ತುಂಬಾ ಹುಡುಕಾಡಿದೆ ನನ್ನೊಂದಿಗಿರಲು ಯಾರೂ ಒಪ್ಪಲಿಲ್ಲ ನಾಲ್ಕು ಪುಟ್ಟ ಗಿಡಗಳು ಸಿಕ್ಕವು ಹೊಂದಾಣಿಕೆ ಇಲ್ಲದೆಯೂ ಬಾಳಲು ಅಷ್ಟು ದಿನ ಒಂಟಿಯಾಗಿ ಕಳೆದಿದ್ದರಿಂದ ನನ್ನ ಮೇಲೆ ನನಗೆ ಅಸಹ್ಯ ಅನಿಸಿತ್ತು ಆದರೆ ಯಾರ ಬಳಿ ಹೇಳಬೇಕಿತ್ತು? ನನಗೂ ಬಿಡುವಿಲ್ಲದೆ, ದುಡಿಮೆಯಲ್ಲಿ ನಿರಂತರವಾಗಿ ಓಡಿದ್ದೆ ಈಗ ನಡೆಯಲೂ ಶಕ್ತಿ ಇಲ್ಲ ಎಲ್ಲದರ ನಡುವೆ ನಾನೇ ಊತು ಹೋಗಿದ್ದೆ ಯಾವುದರ ಪರಿವೆಯಿಲ್ಲದೆ ಈಗ ಬಾಲ್ಯ ಬೇಕೆನಿಸುತ್ತಿದೆ ಸಾವು ಹತ್ತಿರವಾಗುತ್ತಿದೆಯಲ್ಲಾ.. ನನ್ನ ಅಸಹಾಯಕ ಸ್ಥಿತಿಯನ್ನು ಯಾರೂ ಗುರುತಿಸಲಿಲ್ಲ ಹೆಚ್ಚಾಗಿ ನಾನು ಬೆರೆಯಲೇ ಇಲ್ಲ ಬಿಡಿ ಗಳಿಸಿದ್ದೆಲ್ಲವನ್ನೂ ಬಿಟ್ಟು ಬಂದೆ ಈಗ ಪರವಾಗಿಲ್ಲ, ಉಸಿರಾಡುತ್ತಿದ್ದೇನೆ ನನಗೆ ಸಿಕ್ಕ ಗಿಡಗಳಿಂದ ಅದೆಷ್ಟು ಬೇಗನೆ ಬೆಳೆದುಬಿಟ್ಟವು ನನಗೆ ಕನಸಲ್ಲಿಯೂ ತಿಳಿಸಿರಲಿಲ್ಲ ನಾನೇ ಚಿಕ್ಕವನೆಂಬಂತೆ ಕಾಣುತ್ತಿದ್ದೇನೆ ನಾನೇ ನೆಟ್ಟು, ನೀರುಣಿಸಿದ ಮರಗಳ ಕೆಳಗೆ ಈಗ ಆವ ಚಿಂತೆಯೂ ಇಲ್ಲದೆ ಸಾಯುವ ಯೋಜನೆಯನ್ನು ಮುಂದೂಡಲಾಗಿದೆ ಸಂತಸದ ಹಬ್ಬ ನಡೆದಿದೆ ಪ್ರತಿದಿನವೂ ಹಸಿರು, ನೆರಳು, ಗಾಳಿ, ತಂಪು, ಮಧುರ ಹಕ್ಕಿಗಳ ಕಲರವ, ಮೊರೆತ, ಹಣ್ಣು-ಬೇರು ಎಲ್ಲವೂ ನನ್ನದಾಗಿವೆ; ನನಗೆ ಸಿಕ್ಕ ನಾಲ್ಕು...

ಶಿಕ್ಷಣ ಮಾರಾಟಕ್ಕಲ್ಲ - ಲೇಖನ - ಪ್ರಿಯಾ ಡಿ

ಶಿಕ್ಷಣ ಮಾರಾಟವಲ್ಲ; ಕಲಿತು ನಲಿ      ಭೂಮಿಗೆ ಪಾದಾರ್ಪಣೆ ಮಾಡುವ ಮಗುವಿಗೆ ಅರಿವಿಲ್ಲದೆ ಅಮ್ಮ ಎಂಬ ಪದವ ಕಲಿತು ತಾಯಿಯ ಜೊತೆ ನಲಿಯುತ್ತದೆ, ಹೆಜ್ಜೆಯ ಜೊತೆ ಗೆಜ್ಜೆಯ ಕಟ್ಟಿ ನಲಿಯುವಾಗ ಸಮಾಜದಲ್ಲಿ ಸಾಧಕನಾಗಲು ಶಿಕ್ಷಣದ ಅನಿವಾರ್ಯ‌ ಅರಿವಾಗಿ ಗುರುವಿನ ಮೊರೆಹೋಗಬೇಕಾಗುತ್ತದೆ. ತಾಯಿಯಿಂದ ಕಲಿತ ಶಿಕ್ಷಣದ ಜೊತೆ ಶಿಕ್ಷಕರು ನೀಡುವ ಶಾಲೆಯ ಶಿಕ್ಷಣ ಮಕ್ಕಳ ಸಾಧನೆಯ ನಾನಾ ದಾರಿಯಲ್ಲಿ ಪಯಣ ಸಾಧಿಸಲು ಸಹಕಾರಿಯಾಗುತ್ತದೆ, ಪ್ರತಿ ಮಗು ಕಲಿಯುವ ಶಿಕ್ಷಣ ಮಾರಾಟದ ವಸ್ತುವಾಗಬಾರದು ಎಂಬ ಗುರುಕುಲ ಶಿಕ್ಷಣ ಪದ್ದತಿ ಮರೆಯಾಗಿ ಖಾಸಗೀಕರಣ ಎಂಬ ಮಹಾ ಭೂತ ಇಂದಿನ ಶಿಕ್ಷಣ‌ದ ಮೇಲೆ ಪ್ರಭಾವ ಭೀರುವ ಮೂಲಕ ಶಿಕ್ಷಣ ಮಾರಾಟದ ಅಂಗವಾಗುವಂತೆ ಮಾಡುತ್ತಿದೆ.ಆದರೆ ನಮ್ಮ‌ಸರ್ಕಾರಿ ಶಾಲೆಗಳು  ಉಚಿತ ಶಿಕ್ಷಣ ನೀಡುವ ಮೂಲಕ  ಇಂದು ಶಿಕ್ಷಣ ಮಾರಾಟದ ವಸ್ತುವಲ್ಲ ಎಂಬ  ಸಂದೇಶ ಸಾರುತ್ತಿವೆ. ಮನುಷ್ಯ ಬೇಕು ಆದರೆ ಮನುಷ್ಯನ ಜಾತಿ ಬೇಡ ಎಂದಾಯಿತು,ಮಗುವಿಗೆ ಜನ್ಮ ನೀಡಿ ತಾನು ಮರುಜನ್ಮ ತಾಳಲು ತಾಯಿಬೇಕು ಆದರೆ ಹೆಣ್ಣುಮಗು ಬೇಡವೆಂದಾಯಿತು,ತಿನ್ನಲು ರುಚಿಯಾದ ಆಹಾರಬೇಕು  ದೇಹಕ್ಕೆ ಆರೋಗ್ಯ ಬೇಕು ಆದರೆ ಸಾವಯವ ಗೊಬ್ಬರ ಬೇಡವೆಂದಾಯಿತು, ಕಣ್ಣುತುಂಬಿಕೊಳ್ಳಲು ಹರಿಯುವ ನದಿ-ಸರೋವರಗಳು ಬೇಕು ಆದರೆ ಅವುಗಳ ಸಂರಕ್ಷಣೆ ಬೇಡವೆಂದಾಯಿತು.ಎಂತ ಸೋಜಿಗ!.ಒಳ್ಳೆಯದು ಎಂಬುದೆಲ್ಲ ಎನಗೆ ಮಾತ್ರ ಇರಲಿ,ಉಳಿದಿದೆಲ್ಲ ....?. ನಾ...

ಒಮ್ಮೆ ಇಣುಕಿ ನೋಡು! - ಗದ್ಯ ಕವಿತೆ - ಅನಂತ ಕುಣಿಗಲ್

ಒಮ್ಮೆ ಇಣುಕಿ ನೋಡು! ಬಣ್ಣ ಬಣ್ಣದ ತರ-ತರಹದ ಬ್ಯಾಗುಗಳು ಅಂಗಡಿಯ ಧೂಳಿಡಿದ ತಂತಿಯ ಮೇಲೋ ಹರೆಯದ ಹುಡುಗಿಯರ ಟ್ಯಾಟೂ ಕೈಯಲ್ಲೋ ಮೋಹಕ ಕಣ್ಣುಗಳುಳ್ಳ ಆಂಟಿಯ ತೋಳುಗಳಲ್ಲೋ ಹೆಂಗಸಿನಂತೆ ವರ್ತಿಸುವ ಗಂಡಸರ ಗಾಡಿಗಳಲ್ಲೋ ಏನೂ ಅರಿಯದ ಎಳೆ ಮನಸ್ಸಿನ ಮಕ್ಕಳ ಕೈಯಲ್ಲಿ ಅಟಿಕೆಗಳಾಗಿಯೋ ತೂಗಾಡುತ್ತಾ.. ನೋಡಿದವರನ್ನೆಲ್ಲ ತನ್ನೆಡೆಗೆ ಸೆಳೆಯುವ ವಿಶಿಷ್ಟವಾದ ಬ್ಯಾಗು; ವ್ಯಾನಿಟಿ ಬ್ಯಾಗು ಲೋಕದೊಳಗೊಂದು ಲೋಕ; ಈ ಬ್ಯಾಗು ಕೈಯಲ್ಲಿ ಹಿಡಿಯುವಂತೆ, ತೋಳುಗಳಿಗೆ ನೇತಾಕಿಕೊಳ್ಳುವಂತೆ ಕಾಟನ್, ರಬ್ಬರ್, ನೈಲಾನ್, ಲೆಧರ್ ವಸ್ತುಗಳಿಂದ ಚಿತ್ರ-ವಿಚಿತ್ರ ಹಾಗೂ ಆಕರ್ಷಣೀಯವಾಗಿ ಇಂಪೋರ್ಟೆಡ್ ಮಾಡಿಕೊಂಡು ಹೆಗಲಿಗೇರಿಸಿಕೊಳ್ಳಬಹುದಾದ ಪುಟ್ಟ ಹಾಗೂ ದೊಡ್ಡ ಬ್ಯಾಗು ಕೈಚೀಲ, ಜೋಳಿಗೆ, ಹ್ಯಾಂಡ್ ಬ್ಯಾಗ್ ಎಂದೆಲ್ಲಾ ಕರೆಯಬಹುದು ಆಧಾರ್, ಡ್ರೈವಿಂಗ್ ಲೈಸೆನ್ಸ್, ಎಂಟಿಎಂ ಕಾರ್ಡು ರಸೀದಿ ಚೀಟಿ ಮತ್ತು ಫೋಟೋಗಳು; ಗುರುತಿಗಾಗಿ ಲಿಪ್ಸ್ಟಿಕ್, ಕಾಜಲ್, ಬಾಚಣಿಕೆ ನೇಲ್ ಕಟರ್, ಹಣೆಬೊಟ್ಟು; ಶೃಂಗಾರಕ್ಕಾಗಿ ಹೊಸದಾಗಿ ಕರೀದಿಸಿದ ಒಳ ಉಡುಪುಗಳು ಪ್ಯಾಡ್, ಕಾಂಡೋಮ್, ಗ್ಲೂಕೋಸ್; ಆರೋಗ್ಯಕ್ಕಾಗಿ ನೀರಿನ ಬಾಟಲಿ, ಟಿಫನ್ ಬಾಕ್ಸ್, ಮೊಬೈಲ್ ಆಫೀಸ್ ಫೈಲ್ಸ್, ಚಿಲ್ಲರೆ ಕಾಸು; ಕೆಲಸಕ್ಕಾಗಿ ಓಲೆ, ಜುಮುಕಿ, ಮೂಗುತಿ, ಕಾಲುಂಗುರ ಕಾಲ್ಗೆಜ್ಜೆ, ಪ್ರೇಮಿಯೊಬ್ಬನ ಒಲವಿನ ಪತ್ರ; ನೆನಪಿಗಾಗಿ ಜೀವವನ್ನೇ ಸ...

ನಲುಗಿದರೂ ನಗುವ ಜೀವ - ಕವಿತೆ - ಸಿದ್ಧುಮೂರ್ತಿ

ನಲುಗಿದರೂ ನಗುವ ಜೀವ ಬದುಕು ಕಟ್ಟಿಕೊಳ್ಳಲು  ಅಪ್ಪನಿಗೆ ಹೆಗಲಾಗಿ, ಒದಗುವ  ಬವಣೆಗೆ  ಎದೆಯೊಡ್ಡಿ ಛಲವಾಗಿ...., ತೊಡಕಿನ ನೋವಿನೆಳೆಗೆ  ಅಂಜದೆ ಬದುಕ ಅಪ್ಪಿದಾಕೆ ಒಡಲ ದನಿಯೊಳಗೆ, ಒಲುಮೆರಾಗ ಹೊಮ್ಮಿಸಿದಾಕೆ..! ಬಿಕ್ಕುವ ಯಾತನೆಗಳ ಬದಿಗೊತ್ತಿ,  ಆಡಿಸಿ,ನಕ್ಕುನಲಿಸಿ ಉಕ್ಕುವ ಭಾವನೆಯ ಕಟ್ಟಿ, ಮಮತೆಯ ಎರೆದು ಪೋಷಿಸಿ ಎದೆಯ ಕನಸುಗಳ ಕರಗಿಸಿ,  ಎರಕ ಹೊಯ್ದ ಹೊಳಪು ನಮ್ಮ ಬದುಕಿನ ಮೆರುಗು, ಜಿನುಗಿದ ನನಸ ಕಣ್ಣ ಹನಿಯು ಬದುಕ ಉಳುಕುಗಳ, ಸುಳಿವ ನೋವುಗಳ ನಡುವೆ ನಲುಗಿದ ಜೀವ, ದುಗುಡಗಳ ಹೊದ್ದರೂ ಸದ್ದಿಲ್ಲದೆ, ನಗೆಯ ಮಿಂಚು ಮೊಗದಿ ಬೀರಿ,  ನಡೆದವಳು ಈಕೆ. ಬೊಗಸೆಯಲಿ ಮೊಗೆದು ಪ್ರೀತಿ ವಾತ್ಸಲ್ಯಗಳ ನೀಡಿದಾಕೆ! ಒಡಲ ಕರುಳುಗಳು ಮರುಗುವ ನೋವ ಕುರುಹುಗಳು ಮೊಗದಿ ನಗವಿನೆಸಳ ಮುಡಿದು ಮೌನದೊಳು ಜೊತೆಯಾಗಲು ನಿತ್ಯದ ತಾಲೀಮು ಹೊಸತೇನಲ್ಲ ಈ ಹೆಂಗರುಳಿಗೆ.. ಕೊನರುವ ಆಸೆಯ ಚಿವುಟಿ ಕೊರಡಾಗಿಸಿ ಸಹಿಸಿದ ಒತ್ತಡಕೆ ಸಹನೆಗೆ ಹೆಸರಾಗಿ ಉಳಿದಳು ಬವಣೆಯ ಹೊತ್ತ ಬದುಕಿನೊಳಗೆ..!!! ಸಿದ್ದುಮೂರ್ತಿ, ತುಮಕೂರು

ಅಂದು ಮತ್ತು ಇಂದು - ಕವಿತೆ - ದೀಕ್ಷಿತ್ ನಾಯರ್

(ವೇಶ್ಯೆ ಎಂದಾಕ್ಷಣ ಮುಖ ಸಿಂಡರಿಸುವ ವ್ಯಕ್ತಿಗಳಿಗೆ ಅವಳ ಮತ್ತೊಂದು ರೂಪವನ್ನು ಪರಿಚಯಿಸುವುದೇ ಈ ಕವಿತೆಯ ಉದ್ದೇಶವಾಗಿರುತ್ತದೆ.) ಅಂದು ಮತ್ತು ಇಂದು ಹೇವರಿಕೆ ಹುಟ್ಟಿಸುವಂತಹ ಉದ್ಯೋಗ ನನ್ನದು ಹೌದು ಆದರೆ ಅರಸಿ ಬಂದದ್ದಲ್ಲ ಹಸಿ ಮಾಂಸದ ಥರಾ ಮಾರಾಟವಾದದ್ದು! ಬಡತನವೆಂಬುದು ನಿಗಿನಿಗಿ ಪ್ರಾಯದೊಂದಿಗೆ ಸ್ಪರ್ಧೆಗೆ ನಿಂತಿದ್ದಾಗ ನನ್ನವರೇ ದೂಡಿದ್ದು! ಅಂದು ಮುರುಕಲು ಮತ್ತು ಗಾಳಿ ಬೆಳಕಿಲ್ಲದ ಕೋಣೆಯಲ್ಲಿ ಕಚ್ಚೆ ಹರುಕನಿಗೆ ಸೆರಗ ಹಾಸಿದ್ದೇನೋ ಹೌದು. ನೂರು ರೂಪಾಯಿಯ ಒಂದು ನೋಟಿಗೆ ಒದ್ದೆಯಾಗಿ ಹೋದದ್ದು ನಿಜವೇ. ಇಂದು ನನ್ನ ವ್ಯವಹಾರವೆಲ್ಲಾ ಪಂಚ ತಾರೆ ಹೋಟೆಲುಗಳಲ್ಲಿ ನಡೆಯುತ್ತಿದೆ ನೂರಾರು ಮಹಲಿನ ಮೆಟ್ಟಿಲುಗಳ ಹತ್ತಿ ಇಳಿಯುತ್ತಿದ್ದೇನೆ ಆದರೆ ಈ ಹಿಂದಿನಂತೆಯೇ ಕುತ್ತಿಗೆಯಲ್ಲಿ ಪರಚಿದ ಗುರುತು,ತೋಳುಗಳಲ್ಲಿ ಜಿನುಗುವ ರಕ್ತ, ಪ್ರಾಣಿಯಂತೆ ಅಪರಿಚಿತನೊಬ್ಬ ಕಚ್ಚಿದ ಪ್ರತಿಫಲವಾಗಿ ಊದಿದ ತುಟಿಗಳ ದರುಶನ ನಿಮಗಾಗುತ್ತದೆ. ನನ್ನಲ್ಲಿನ ತಾಯ ಕರುಳು ಮಡತೆ ಬಿದ್ದು ದಶಕಗಳಾಗಿವೆ ಹೆಣ್ತನವೆಂಬುದು ರಾತ್ರೋರಾತ್ರಿ ಸತ್ತು ಹೋಗಿದೆ ನನ್ನ ಮೈ ಮೇಲೆ ಸವಾರಿ ಮಾಡುವವರಿಗೆ ನಾನು ಭೋಗದ ವಸ್ತುವಷ್ಟೆ ಈಗ! ರೇಡ್ ಆಗುವ ರಸ್ತೆಗಳಲ್ಲಿ 'ಹೋ' ಎಂದು ಚೀರಾಡುವುದೆ ನನ್ನ ಸದ್ಯದ ಯೋಗ! ಭೂತಕಾಲದಲ್ಲಿ ಧಕ್ಕಡಿಯ ದಿನಗಳೊಂದಿಗೆ ಬದುಕುತ್ತಿದ್ದೆ ಈಗ ತಕ್ಕಡಿ ತುಂಬುವಷ್ಟು ಹಣವಿದೆ. ಆದರೆ ಜೊತೆಯಲ್ಲಿ 'ವೇಶ್ಯೆ' ಎಂಬ ಪಟ್ಟವಿ...

ವಿಪರ್ಯಾಸ - ಕವಿತೆ - ದೇವರಾಜ ನಾಯಕ

ವಿಪರ್ಯಾಸ ಕೀಲು ಕುದುರೆಯ ಕನಸು ಮೂರು ಗೇಣಿನ ಓಟ ಕ್ರಮಿಸಿ ಕ್ರಮಿಸಿ ಸುಸ್ತಾಯ್ತು ನಿಂತ ನೆಲ ಬಿಟ್ಟಿಲ್ಲ. ಕೆರೆ ತೆಪ್ಪ ಟೈಟಾನಿಕ್ಕು ಸಾವಿರ ಹುಟ್ಟು ಹಾಕಿದರೂ ಕಾಲಸುತ್ತುವ ಬೆಕ್ಕು. ಪರಿಧಿಯೊಳಗೆ ಬಂಧಿ. ಖಾವಿ ತೊಟ್ಟ ಕಾಕಗೆ  ಸಗ್ಗ ನೆರೆ ಬೀದಿ ಶೆಟ್ಟರಂಗಡಿ ಕೈಗೆಟುಕದ ಲೌಕಿಕ ಸುಖ ಆಧ್ಯಾತ್ಮದ ಭುರ್ಖ. ಉದ್ದಗಲದ ತಿಳಿಯದ ಮಗ ಅಪ್ಪನ ಜಮೀನು ಬಂಜೆ ಕೈಕೆಸರು ಮಾಡದ ಮೂಢ ನಗರದ ವ್ಯಾಮೋಹ. ಮನೆಮಂಗಳದ ಪುಷ್ಪ  ಕೀಳಲಾರದವರ  ಗಗನ ಕುಸುಮ ಗುರಿ ಇತಿಮಿತಿಯರಿಯದ ಯತಿ ಬೆವರರಿಸದ ಪತಿ ವಿಪರ್ಯಾಸ, ಕಣ್ಣೀರಿಡುವವರಿಗೆ ಪುರುಸೊತ್ತಿಲ್ಲ.                           ದೇವರಾಜ ನಾಯಕ

ಬದುಕು - ಕವಿತೆ - ದೀಪಿಕಾ ಮಾರಗಟ್ಟ

ಬದುಕು ಎಲ್ಲವನ್ನು ಒಂದೇ ಸಾಲಲ್ಲಿ ಬರೆದು ಇಷ್ಟೇ ಅರ್ಥ ಎಂದು ಹೇಳಬೇಕೆ.. ಯಾವ ಅರ್ಥ ಸಿಗಬಹುದು...! ಯಾವುದನ್ನು ಹುಡುಕಬೇಕು..! ಎಲ್ಲ ಎನ್ನುವುದರ ಮೂಲವೇನು‌.? ಹುಟ್ಟಿಗೆ...ಸಾವಿನ ಕೊನೆಯೆ, ನಗುವಿಗೆ...ಅಳುವೆ, ಆರೋಗ್ಯಕ್ಕೆ... ಅನಾರೋಗ್ಯವೇ, ಸುಖಕ್ಕೆ...ದುಃಖವೆ, ಎಲ್ಲವೂ ವಿರುದ್ದ ಪಥದ ಬಡಿದಾಟಗಳು..! ಬದುಕಿನ ತುಂಬಾ ಸುಂದರ ಬಣ್ಣಗಳ ತುಂಬಿ ಕತ್ತಲ್ಲನ್ನೇ ಜೀವಿಸುವುದು ಸುಲಭವ, ಕಪ್ಪೆಂಬ  ರಂಗಿನ ಎಲೆಗೆ ಕರ್ಪುರದ ಹೂ ಬೆಳಕ ಕಿಡಿಗಳೆ ಅರಳಿ ಘಮಿಸಲಿ ನಾಳೆಂಗೋಚೂರು ಬಾಡದ ನಗುವ..! ಹುಡುಕ ಹೊರಟ್ಟಿದ್ದೆ ಅಲೆಮಾರಿಯಂತೆ ಹಾದಿಯಲ್ಲಿ ಬಿದ್ದಿದ್ದ ಬಂಧುಗಳ ಛಾಯೆಯ ಲಾಭ ಲೋಭ ಕಂಡದ್ದಿಷ್ಟೇ ಬಾಯಾರಿ ಗಂಟಲು ಒಣಗಿದರು ನೀರು ಬಿಡಲು ಒಬ್ಬರಿಲ್ಲ ಸಾಯುವಾಗ...! ದೂರದಲ್ಲೇ ನಗುತ್ತಿರುವ ಅವನ್ಯಾರೋ ಕೇಳುಗ ಬರಿ ದೂರವಾಣಿಯಲ್ಲೇ ಕನವರಿಕೆಗೂ ಬಂದವ ಆಪ್ತತಕೆ ಹೆಸರು ಕೊಟ್ಟು  ನೋವಿಗೂ ಕಿವಿಗೊಟ್ಟು ಬಳಿಯಲ್ಲೇ ಇದ್ದಂತೆ ಅನುಭವ ಕೊಟ್ಟವ..! ಎಲ್ಲವೂ ಇತ್ತಂದು, ಬಾಚಿ ಕೊಟ್ಟಿದ್ದು ಅವರಿವರಿಗೆ ಕಿತ್ತು ತಿಂದದ್ದು ರಣ ಹದ್ದುಗಳಂತೆ ಉಳಿದದ್ದು ಏನಿದೆ ನನಗಿಂದು ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಬೀಗಿದವರ ಕಥೆಯ ವ್ಯಥೆಯೆಷ್ಟೋ.! ಬಿಟ್ಟು ಕೊಡುವುದು ಸುಲಭವಲ್ಲ ಗಳಿಸಲು ಪಟ್ಟ ಕಷ್ಟದ ಅರಿವಿದ್ದ ಮೇಲೆ, ಸಾಯುವುದು ಖಚಿತ ವೆಂದಾದ ಮೇಲೆ ಸೆಣಸಾಡಿಯೇ ಹೊರಡೋಣ ಸಾವನ್ನು ಅಷ್ಟು ಸುಲಭದಿ ಸ್ವೀಕರಿಸಲಾರೆ...! ಒಂದಿಷ್ಟು ನೋವು, ಒಂದಿಷ...

ಸತ್ತ ಭಾವನೆಗಳು - ಕವಿತೆ - ರಘುವೀರ

ಸತ್ತ ಭಾವನೆಗಳು ಸತ್ತು ಹೋಗಿವೆ ಎನ್ನ ಭಾವನೆಗಳು ಶೋಷಣೆಗಾರರ ಕಾಲಡಿಯಲಿ ಸಿಕ್ಕಿ ಉಕ್ಕುವುದಿನ್ನೆಲ್ಲಿ ಹರ್ಷೋದ್ಘಾರ ತಪ್ಪುವುದಿನ್ನೆಲ್ಲಿ ದುಃಖದಾಗರ... ಕಂಡ ಕನಸುಗಳಿಗೆಲ್ಲ ಬೆಂಕಿಬಿದ್ದುದಲ್ಲದೇ ಬದುಕುವಾಸೆಯೂ ಕಮರಿಹೋಗಿದೆ ಆವ ಕಲ್ಯಾಣಾರ್ಥವೀ ಜೀವನವೆನಿಸಿದೆ ಬರಿ ಕಲ್ಪನೆಯಲಿ ಸಾವದು ಕೈಬೀಸಿ ಕರೆಯುತಿದೆ... ಮನಸದು ಮರುಗಿ ರೋಸಿ ಹೋಗಿದೆ ಜವರಾಯನ ಆಜ್ಞೆಯದು ಬಾರದೇ ಜೀವವದು ಪ್ರತಿಕ್ಷಣ ಹಪಹಪಿಸುತಿದೆ ಯಮರಾಜನ ಆ ಪಾಶ ಕಾಣದೇ... ದಿಕ್ಕು-ದಿಕ್ಕಲಿ ಕೇಳುತಿದೆ ಅಣಕಿಸಿ ನಗುವ ಹಾಹಾಕಾರ ಎಲ್ಲೆಲ್ಲೂ ಕವಿದಿದೆ ಗಾಢಾಂಧಕಾರ ಇಲ್ಲವೆನಗಿನ್ನು ಬದುಕುವಾ ಹುನ್ನಾರ ಅನಿಸಿದೆ ಸಾವದೊಂದೇ ಎಲ್ಲದಕ್ಕೂ ಪರಿಹಾರ.... "ರಘುವೀರ (ರನ್ನ)" ಶಿವಪ್ರಸಾದ ಪುರುಷೋತ್ತಮ ಮಂಡಿ

ಅವ್ವ ನನಗಿನ್ನೂ ಅರ್ಥವಾಗಿಲ್ಲ - ಕವಿತೆ - ಆಯ್. ಸಿ. ಸಬರದ

ಅವ್ವಾ , ನನಗಿನ್ನೂ ಅರ್ಥವಾಗಿಲ್ಲ  ! ಅವ್ವಾ, ನಿನ್ನ ಕರುಳು ಬಳ್ಳಿಯಲ್ಲಿ ನಾನು ಉಣ್ಣುವಾಗ ನೀನು ಪಡುವ ಸುಖ ಹೆರುವ ನೋವಿನಲೂ ನಿನ್ನ ನಗು ನನಗೆ ಇನ್ನೂವರೆಗೂ ಅರ್ಥವಾಗಿಲ್ಲ  ! ಅವ್ವಾ, ನಿನ್ನೆದೆಯ ಶಕ್ತಿಯನು ಜಗ್ಗಿ ಹಿಗ್ಗಿ ಹೀರುವಾಗಲೂ, ಒದ್ದು ನಿದ್ದೆಗೆಡಿಸಿದಾಗಲೂ, ನೀನು ಖುಷಿಯ ದೇವಿಯಾದುದು ಅವಸಾನದಲೂ ನನಗೆ ಅರ್ಥವಾಗಲಿಲ್ಲ  ! ಅವ್ವಾ, ನಿನ್ನ ಪ್ರೀತಿಯನುಂಡು, ನಿನ್ನ ವಾತ್ಸಲ್ಯವನುಟ್ಟು, ಮಣ್ಣಾಟವಾಡಿ ಮನೆಗೆ ಬಂದಾಗ, ಮುತ್ತಿಟ್ಟು ಮತ್ತೇ ಮಡಿಮಾಡಿದ್ದು ಅನ್ನ ಉಣ್ಣುವಾಗಲೂ ನನಗೆ ಅರ್ಥವಾಗಲಿಲ್ಲ  ! ಅವ್ವಾ, ನಿನ್ನ ದೂರದೃಷ್ಟಿಯಲ್ಲಿ ನನ್ನ ಭವಿಷ್ಯ ಬಿತ್ತಿದ್ದು, ಅಕ್ಷರ ಆರಂಭ ಮಾಡಿದ್ದು, ತಿದ್ದಿ ತೀಡಲು ಮಹಾಭಾರತ ನಡೆದದ್ದು ಇಂದಿನೀ ಸ್ಥಿತಿಯಲ್ಲೂ ಅರ್ಥವಾಗಲಿಲ್ಲ   ! -  ಆಯ್. ಸಿ. ಸಬರದ (ಐ.ಸಿ.ಎಸ್.) ಜವಾಹರ ನವೋದಯ ವಿದ್ಯಾಲಯ ರಾಯಪುರ, ಛತ್ತೀಸ್ ಗಢ.