ಯಾಕೆ ಬರೆಯಬೇಕು??
ಬರೆಯಬೇಕು
ಮನರಂಜನೆಗಾಗಿ..
ಬಿಡುವಿಲ್ಲದೆ ದುಡಿದು
ಹಣ್ಣಾಗುವವರ ಶ್ರೇಯಕ್ಕೆ
ವಿಶ್ರಾಂತಿ ಕೊಡಲು
ಬರೆಯಲೇಬೇಕು
ಬರೆಯಬೇಕು
ಸಂಸ್ಕೃತಿಯ ಉಳಿಸಲು
ಹಿಂದೆ ನೋಡದೆ ನುಗ್ಗುತ್ತಿರುವ
ತ್ವರಿತ ವೇಗದ ನಾಗರೀಕತೆಯಲ್ಲಿ
ಆಗಾಗ ಬೇಕೆನಿಸುವ ವಿರಾಮಕ್ಕಾಗಿ
ಬರೆಯಲೇಬೇಕು
ಬರೆಯಬೇಕು
ಇತಿಹಾಸವ ತಿಳಿಸಲು
ತಿಳಿಯದ ಸತ್ಯವ ತಿಳಿಸಲು
ಅಂಧರಿಗೆ ದಾರಿ ಕಾಣಿಸಲು
ಅಧ್ಯಯನದ ಮಹತ್ವವ ಸಾರಲು
ಬರೆಯಲೇಬೇಕು
ಬರೆಯಬೇಕು
ಮಾಹಿತಿಯ ಕಲೆಹಾಕಲು
ಜ್ಞಾನ ಸಂಪತ್ತನ್ನು ಹೆಚ್ಚಿಸಲು
ಪ್ರತಿಭೆಗಳ ಗುರುತಿಸಿ
ಆಡಂಬರವ ತೊಳೆಯಲು
ವಿಜ್ಞಾನದ ಅರಿವಿಗಾಗಿ
ತಂತ್ರಜ್ಞಾನದ ಮಿತಿಯ ಗುರುತಿಗಾಗಿ
ಬರೆಯಲೇಬೇಕು
ಬರೆಯಬೇಕು
ಮನರಂಜನೆಗಾಗಿ..
ಬಿಡುವಿಲ್ಲದೆ ದುಡಿದು
ಹಣ್ಣಾಗುವವರ ಶ್ರೇಯಕ್ಕೆ
ವಿಶ್ರಾಂತಿ ಕೊಡಲು
ಬರೆಯಲೇಬೇಕು
ಬರೆಯಬೇಕು
ಸಂಸ್ಕೃತಿಯ ಉಳಿಸಲು
ಹಿಂದೆ ನೋಡದೆ ನುಗ್ಗುತ್ತಿರುವ
ತ್ವರಿತ ವೇಗದ ನಾಗರೀಕತೆಯಲ್ಲಿ
ಆಗಾಗ ಬೇಕೆನಿಸುವ ವಿರಾಮಕ್ಕಾಗಿ
ಬರೆಯಲೇಬೇಕು
ಬರೆಯಬೇಕು
ಇತಿಹಾಸವ ತಿಳಿಸಲು
ತಿಳಿಯದ ಸತ್ಯವ ತಿಳಿಸಲು
ಅಂಧರಿಗೆ ದಾರಿ ಕಾಣಿಸಲು
ಅಧ್ಯಯನದ ಮಹತ್ವವ ಸಾರಲು
ಬರೆಯಲೇಬೇಕು
ಬರೆಯಬೇಕು
ಮಾಹಿತಿಯ ಕಲೆಹಾಕಲು
ಜ್ಞಾನ ಸಂಪತ್ತನ್ನು ಹೆಚ್ಚಿಸಲು
ಪ್ರತಿಭೆಗಳ ಗುರುತಿಸಿ
ಆಡಂಬರವ ತೊಳೆಯಲು
ವಿಜ್ಞಾನದ ಅರಿವಿಗಾಗಿ
ತಂತ್ರಜ್ಞಾನದ ಮಿತಿಯ ಗುರುತಿಗಾಗಿ
ಬರೆಯಲೇಬೇಕು
ಬರೆಯಬೇಕು
ಮೂಢತೆಯನ್ನು ಕಿತ್ತೊಗೆಯಲು
ಅತಿಮಾನುಷ ಕೃತ್ಯಗಳಿಂದ
ಮಾನುಷ ವೀರ್ಯವ ರಕ್ಷಿಸಲು
ಜಾತಿ-ಪಂಗಡಗಳ ಮೀರಿ ಬದುಕಲು
ಸಾಮರಸ್ಯವ ಸಾರಿ ಸಮಾನತೆಯ ಹಂಚಲು
ಬರೆಯಲೇಬೇಕು
ಬರೆಯಬೇಕು
ಪ್ರಗತಿಶೀಲ ಬೆಳವಣಿಗೆಗಾಗಿ
ನೈತಿಕತೆ-ತಾತ್ವಿಕತೆಯ ನೆಲೆಗಟ್ಟಿನಲ್ಲಿ
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಸೋಸಿ
ಸಮಾಜದ ಸ್ವಾಸ್ಥ್ಯ ಕಟ್ಟಲು
ಎಲ್ಲರನ್ನು ಎಚ್ಚರಿಸಲು
ನಿದ್ರೆಯಿಂದ ಜಾಗೃತಗೊಳಿಸಲು
ಬರೆಯಲೇಬೇಕು
ಬರೆಯಬೇಕು
ಕೊನೆಯದಾಗಿ ಭಾವನೆಗಳ
ಹೊರ ಚೆಲ್ಲಿ.. ಜಗವ ಅಪ್ಪಲು
ತನ್ನ ಪ್ರತಿಬಿಂಬವ ಕಂಡು
ತನ್ನನ್ನೇ ತಿದ್ದುಕೊಳ್ಳುವ
ಆತ್ಮಾವಲೋಕನದ ಹುಡುಕಾಟಕ್ಕಾಗಿ
ಸಾವಧಾನದಿಂದ ಬರೆಯಲೇಬೇಕು
ಸಂಯಮವಿಲ್ಲದೆ ಸುಮ್ಮನೆ
ಯಾರನ್ನೋ ಮೆಚ್ಚಿಸಲಿಕ್ಕಾಗಿ
ಯಾಕೆ ಬರೆಯಬೇಕು?!
ಅನಂತ ಕುಣಿಗಲ್
ಯುವಬರಹಗಾರ & ರಂಗಕಲಾವಿದ
😊😊😊😊
ಪ್ರತ್ಯುತ್ತರಅಳಿಸಿಬರೆಯಬೇಕು
ಪ್ರತ್ಯುತ್ತರಅಳಿಸಿಬಂಧಿಯಾದ ಬಂಧನಗಳ ಬಂಧಮುಕ್ತಗೊಳಿಸಲು..
ಸ್ವಾತಂತ್ರದ ಹುಚ್ಚು ಕಿಚ್ಚ ಚಿಲುಮೆ ಚಿಮ್ಮಿಸಲು
ಒಡಲಾಳದಿಂದ ಭರವಸೆಯ ಜ್ಯೋತಿ ಹಚ್ಚಲು
ಬರೆಯಬೇಕು
ಅಸಮಾನತೆಯ ಸಮಾಧಿ ಗೋರಿಯ ಮೇಲೆ
ಸಮಾನತೆಯ ಬಿಳಿಯ ಧ್ವಜ ಏರಿಸಲು
ಅನಕ್ಷರತೆಯ ಅಧಃಪತನದ ಅಡಿಯಿಂದ ಅಕ್ಷರತೆ, ಸಾಕ್ಷರತೆಯ ವಿಜಯಕಹಳೆ ಮೊಳಗಿಸಲು.
ಬರೆಯಬೇಕು
ಅಜ್ಞಾನವನು ಸುಟ್ಟು, ಜ್ಞಾನದ ಯಜ್ಞವ ಕೈಗೊಳ್ಳಲು.
ಜ್ಞಾನದ ವೃಕ್ಷವ ಬೆಳೆಸಿ, ವಿಜ್ಞಾನ , ತಂತ್ರಜ್ಞಾನದ ಫಲವ ಉಣ್ಣಲು
ಮಾನವ ತತ್ವವ ಈ ಲೋಕಕ್ಕೆ ಸಾರಲು.....