ವಿಷಯಕ್ಕೆ ಹೋಗಿ

ಋತುಗಾನ - ಲೇಖನ - ಅಶ್ವಿನಿ ಬರಗಾಲಿ


ಋತುಗಾನ

      ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ‌ ಎಣಿಕೆಯೊಳಗೆ ಕುಸಿದು ಹೋದ ಬದುಕು ಅವಳೊಳಗಿನ ನೋವನ್ನ  ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ ಪದಗಳ ಜೋಡಣೆ ಈ ಬರಹ....
         ಅವಳು ಬಾಲ್ಯವ ಬಯಸಿದವಳು, ತಾನೇ ಚೆಂದ ಎಂದು ಕುಣಿದಾಡಿದವಳು. ಬೆಳೆದಾಗ ಬದುಕು ಚಿಂತೆ ಎಂದು ನೊಂದವಳು. ಅವಳಿಗರಿವಿಲ್ಲದೆಯೇ ನೆನಪಾಗಿ ಉಳಿವಂತೆ ಕಳೆದು ಹೋದದ್ದು ಬಾಲ್ಯ. ಯಾರಲ್ಲಿಯೂ ಬೇಡಿಕೊಳ್ಳದೇ ಧುತ್ ಎಂದು ಬಂದು ನಿಂತದ್ದು ಯವ್ವನ. ಎರಡರ ನಡುವಿನ ಗೊಂದಲದ ಗೂಡು ಬಾಳೆಂಬ ನಿರರ್ಥಕ ಪಯಣ‌.
         ದಿನದಿನವೂ ರೋಮಾಂಚಕವಾಗುತ್ತ ಪ್ರತಿ ನಿಮಿಷದಿ ಮಿಡಿವ ಭಾವಗಳಲ್ಲಿ ಹಿಗ್ಗಿದ ದೇಹ ಕಂಡು ಬೆರಗಾದಳು. ಎಲ್ಲರ ಕಣ್ಣು ಕುಕ್ಕುವಂತೆ ಬಿರಿದ ಮೌಂಸ ಖಂಡಗಳ ನಡುವೆ ಸೋತು ನಿಂತಳು. ಕೆಂಪಾಗಿ ಮೂಡಿದ ಮೊಡವೆಗಳು ಮುಖದ ಸೌಜನ್ಯವ ಕೆಡವಿದಾಗ ಧಿಕ್ಕಾರದಿ ಭಾವಾವೇಶಕ್ಕೆ ಒಳಗಾದವಳು.
         ಕಾಣದೆ ಸವೆದ ದಿನಗಳಲ್ಲಿ ಮಾವಿನ ಹಣ್ಣಂತೆ ಮಾಗಿದ ಅವಳ ದೇಹಕ್ಕೆ ಪರರ ಬಾಯಲ್ಲಿ 'ದೊಡ್ಡವಳಾದಳು' ಎಂದು ಹೆಸರಿಟ್ಟಿದ್ದ ಕಂಡು ಬೆಚ್ಚಿದಳು, ಬೆವರಿದಳು. ಅದೇ ದಿನ , ಅದೇ ಕ್ಷಣ ಆರಂಭವಾದದ್ದು ಅವಳ ' ಋತುಗಾನ'.
        ಅಲ್ಲಿಗೆ ಕಸಿದು ಹೋಯ್ತು ಅವಳದೆಲ್ಲ ಸ್ವಾತಂತ್ರ್ಯ. ಕೂತರೂ, ನಿಂತರೂ, ಆಟವಾಡಲೂ ಹೋದರೂ, ಊರು ಸುತ್ತಿದರೂ ಎಲ್ಲದಕ್ಕೂ ಪ್ರಶ್ನೆಗಳ ಸುರಿಮಳೆ...ಅವಳೋ ನಿರುತ್ತರೆ. ಮೌನಿಯಾಗುವಳು ಋತುಮತಿಯಾದ ನಂತರ ಅವಳು.
         ಇಷ್ಟವೋ, ಕಷ್ಟವೋ ಓದಿದ್ದಾಯ್ತು. ಬೇಕೋ, ಬೇಡವೋ ಮನೆಕೆಲಸಕ್ಜೆ ಅಣಿಯಾದದ್ದಾಯ್ತು. ನಾಲಿಗೆಯ ರುಚಿ ತಣಿಸಲು ಅಡುಗೆ ಕಲಿತದ್ದಾಯ್ತು. ತನ್ನ ಗೂಡನೂ ಕಟ್ಟುವ ಕಾಲ ಅವಳ ಕಾಲಡಿಗೆ ಬಂದು ನಿಂತು  'ಮದುವೆ' ಎಂಬ ಮೂರಕ್ಷರದ ಬಾಗಿಲು ತೆರೆದು ಅವಳ ಬರುವಿಕೆಗೆ ಹೂಹಾಸಿ ನಿಂತಾಯ್ತು...
       ಏಣಿಸದೇ ದಿನಗಳ ಕಳೆಯುತಿರಲು ಆಗೇ ಹೋಯ್ತು ಮದುವೆ‌. ಅವಳೊಳಗೂ ಇಹರು ರತಿ-ಕಾಮ ದೇವರು. ಪ್ರೀತಿ- ಪ್ರೇಮ , ಪ್ರಣಯಗಳು ನಾವು ನೋಡುವ ಸಿನಿಮಾಗಳಲ್ಲಿ ಮೂರು ತಾಸು ಮಾತ್ರ ...ಮುಗಿದ ಮೇಲೆ ನಿಜವಾದ ಬಣ್ಣದಾಟ ಎಂದು ನಕ್ಕಳು ಒಳಗೊಳಗೆ. ಅವಳ ನಗುವಿನ‌ಮರ್ಮವ ಅರಿಯದವನಾಗಿದ್ದ ಅವನು.
       ಅವಳ ಏಣಿಕೆ ತಪ್ಪಿತ್ತು. ಮೂರು ನಿಮಿಷದೊಳಗೆ ಮುಗಿದು ಹೋಗುವ ಅವನ ಪ್ರೀತಿ ಕಂಡು ಕಂಗಾಲಾದಳು. ಮದುವೆಯ ಸುಖವಿಷ್ಟೇ, ಪ್ರೀತಿಯ ಪರಮಾರ್ಥವಿಷ್ಟೇ ಎಂದು ಮನದೊಳಗೆ ಹಲುಬಿದಳು. ಹೆಣ್ಣಿಗೆ ಕಾಮ- ಪ್ರೇಮ ಎರಡೂ ದೇಹದ ತುಂಬೆಲ್ಲಾ ಇರುವಂತೆ ತಣಿಸಿದರೂ ತಣಿಯದಂತೆ. ಗಂಡಿನ ಕಾಮ ಕಾರ್ಯ ಸಿದ್ಧಿಯಂತೆ. ಮೂರು - ಆರರ ಮಧ್ಯೆ ಅಡಗಿಹುದಂತೆ ನಿಜವೇನೋ.....??? ಇವಳ ಬದುಕ ಕಂಡರೆ ತಿಳಿವುದಂತೆ.
       ವರ್ಷಗಳಿಂದ ಅವನಿಗಾಗಿ ರಂಗೋಲಿ ಬರೆದಳು. ಕಂಡು ಕಾಣದಂತಿದ್ದ. ಅದರ ಮೇಲೆಯೇ ನಡೆದ,‌ತನ್ನ‌ ಬೈಕ್ ಚಲಿಸಿದ, ಎಂದೂ ಅವಳ ಕಲೆಯ ಕಣ್ಣೆತ್ತಿ ನೋಡಲಿಲ್ಲ. ಅದ ಕಂಡು ಅವಳ ಎದೆ ಘಾಸಿಗೊಂಡರು ಸುಮ್ಮನಾದಳು. ಅಡುಗೆ ಮಾಡಿ ನಾಯಿಯಂತೆ ಕಾದಳು. ಊಟ ಮಾಡದೇ ಬಳಲಿದಳು. ಅಷ್ಟೊತ್ತು ಕಾದವಳಿಗೆ  'ಪಾಪ' ಎನ್ನದ ಅವನ ಕಂಡು ಕಣ್ಣೀರಿಟ್ಟಳು‌.
           ಈ ಗಂಡಸಿಗೆ ಮನಸ್ಸಿಲ್ಲವೇ, ಭಾವನೆಗಳಿಲ್ಲವೇ? ಅವನೇಕೆ ತನ್ನತನವ ತೋರಲಾರ ? ತನ್ನೆದೆಯ ತೆರೆದುಕೊಳ್ಳಲಾರ? ....ಕತ್ತಲಲ್ಲಿ ಬೆತ್ತಲಾಗುವ ಗಂಡಿಗೆ ಹಗಲಲ್ಲಿ ತನ್ನ ಮನಸ್ಸು ತರೆದಿಡಲು ನಾಚಿಕೆಯೇ?? ತನಗಾಗಿ ಹಗಲಿರುಳು ದುಡಿವ ಹೆಣ್ಣಿನ  ಮುಟ್ಟಿನಲ್ಲಿ ಹೇಸಿಗೆಯೇ? ತನ್ನ ವಂಶ ಬೆಳಗುವವಳ 'ಮೂರು ದಿನದ' ಬದುಕಿಗೆ ಸ್ಪಂದಿಸಲಾರನೇ??
           ಎಲ್ಲ ಗಂಡಸರೂ ಹೀಗೆಯೇ? ಅಥವಾ ತನ್ನ ಗಂಡ ಮಾತ್ರ ಹೀಗೆಯೇ ಎಂದು ಅವಳ ಮೇಲೆಯೇ ಅವಳಿಗೆ ಮುನಿಸು.
      ಪ್ರೀತಿಸಲು ದುಡ್ಡು ಬೇಕಿಲ್ಲ. ಓಲೈಸಿ ಮುದ್ದಿಸಲು ಟ್ಯಾಕ್ಸ್ ಕಟ್ಟ ಬೇಕಿಲ್ಲ. ಕಷ್ಟದ 'ಋತುಗಾನ' ಕ್ಕೆ ಸ್ಪಂದಿಸಲು ಯಾವ ಬಡ್ಡಿಯನ್ನೂ ನೀಡಬೇಕಿಲ್ಲ. ಹೀಗೆ ದಿನೇ ದೀನೇ ಕುಗ್ಗತಿರುವ ಯವ್ವನ ಅವಳದೊಬ್ಬಳದೇನಾ?? ಚಿಂತೆಯ ಚಿತೆ ಅವಳದಾಗಿತ್ತು.
       ಅವಳ ಬಾಲ್ಯ, ಯವ್ವನ , ಭವಿಷ್ಯತ್ತುಗಳ ನಡುವೆಯೂ ಅವನ ಆಸರೆಯಿದ್ದೂ ಇಲ್ಲದಂತಿರುವ ಜಗದೊಳಗೆ ಉತ್ತರಗಳಿಲ್ಲದ ಪ್ರಶ್ನೆಗಳೇ. ಅಂತ ಲೋಕದೊಳಗೆ ಕಾಲಚಕ್ರದಡಿಯಲ್ಲಿ ನಡೆದಿತ್ತು ಅವಳ 'ಋತುಗಾನ' ಮಾಸದೇ ಮಾಸಿಕವಾಗಿ ಅವಳನ್ನ ಮಾನಸಿಕವಾಗಿ ಕುಗ್ಗಿಸುತ್ತ.
       ಅವಳ ಆಂತರ್ಯವಿಷ್ಟೇ,
ಅವನು ಅವಳ ಮುಂಗುರುಳ ನೇವರಿಸಬೇಕು
ಬಾಗಿದ ನೆನ್ನ ಮೇಲೆ ಚಿತ್ತಾರ ಬಿಡಿಸಬೇಕು
ಬಳಕುವ ಸೊಂಟವ ನೇವರಿಸಿ ಕಾಡಬೇಕು
ಮುಟ್ಟೊಳಗೆ ಅವನು ಅಮ್ಮನಾಗಬೇಕು
ಮುಟ್ಟಿದರೆ ಅವನು ಅವಳು ನುಲಿಯಬೇಕು
ಮುಖದ ಮುಂದೆ ಸದಾ ಕನ್ನಡಿಯಂತಿರಬೇಕು
ತುಟಿಯ ದಾಹ ತಿದ್ದಿ ತಿದ್ದಿ ತೀರಿಸಬೇಕು
ಎದೆಯ ಅಹಂಕಾರ ಮುರಿಯಬೇಕು
ಅವ ನನ್ನಾವರಿಸಲಿ, ಮಾತಿನಲಿ ಮೈಮರೆಸಲಿ
ಎಂಬ ಅವಳ ಸ್ವಯಂ ರಚಿತ ಸಾಲುಗಳಲ್ಲಿ ಅವಳೊಬ್ಬಳೇ ನಿಂತಿದ್ದಳು.
       ವರ್ಷಗಳಲ್ಲಿನ ಹನ್ನೆರಡು ಋತುಗಳು ನೆಲೆಯಿಲ್ಲದೇ ಓಡುತಿರುವಾಗ ಅವಳ 'ಋತು'ಗಳು ಅವಳಿಗರಿವಿಲ್ಲದೇ ಹೊಸಗಾನವ ಹಾಡುತಿದ್ದವು.....


- ಅಶ್ವಿನಿ ಭೀ ಬರಗಾಲಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...