ವಿಷಯಕ್ಕೆ ಹೋಗಿ

ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!! - ಕವಿತೆ - ಅನಂತ ಕುಣಿಗಲ್


ನನಗಿಂತ ದೊಡ್ಡದಾಗಿಬಿಟ್ಟೆಯಲ್ಲಾ!!

ಪ್ರತಿ ದಿನ ಸಾವಿನ ಸುದ್ಧಿ ಕೇಳಿ
ಭಯವಾಗುತ್ತಿತ್ತು
ನನಗ್ಯಾರು ಮಕ್ಕಳಿಲ್ಲವೆಂದು
ಏಕಾಂತ ಕಾಡುತ್ತಿತ್ತು
ಅದಕ್ಕಾಗಿ ತುಂಬಾ ಹುಡುಕಾಡಿದೆ
ನನ್ನೊಂದಿಗಿರಲು ಯಾರೂ ಒಪ್ಪಲಿಲ್ಲ
ನಾಲ್ಕು ಪುಟ್ಟ ಗಿಡಗಳು ಸಿಕ್ಕವು
ಹೊಂದಾಣಿಕೆ ಇಲ್ಲದೆಯೂ ಬಾಳಲು

ಅಷ್ಟು ದಿನ ಒಂಟಿಯಾಗಿ ಕಳೆದಿದ್ದರಿಂದ
ನನ್ನ ಮೇಲೆ ನನಗೆ ಅಸಹ್ಯ ಅನಿಸಿತ್ತು
ಆದರೆ ಯಾರ ಬಳಿ ಹೇಳಬೇಕಿತ್ತು?
ನನಗೂ ಬಿಡುವಿಲ್ಲದೆ,
ದುಡಿಮೆಯಲ್ಲಿ ನಿರಂತರವಾಗಿ ಓಡಿದ್ದೆ
ಈಗ ನಡೆಯಲೂ ಶಕ್ತಿ ಇಲ್ಲ
ಎಲ್ಲದರ ನಡುವೆ ನಾನೇ ಊತು ಹೋಗಿದ್ದೆ
ಯಾವುದರ ಪರಿವೆಯಿಲ್ಲದೆ
ಈಗ ಬಾಲ್ಯ ಬೇಕೆನಿಸುತ್ತಿದೆ
ಸಾವು ಹತ್ತಿರವಾಗುತ್ತಿದೆಯಲ್ಲಾ..

ನನ್ನ ಅಸಹಾಯಕ ಸ್ಥಿತಿಯನ್ನು
ಯಾರೂ ಗುರುತಿಸಲಿಲ್ಲ
ಹೆಚ್ಚಾಗಿ ನಾನು ಬೆರೆಯಲೇ ಇಲ್ಲ ಬಿಡಿ
ಗಳಿಸಿದ್ದೆಲ್ಲವನ್ನೂ ಬಿಟ್ಟು ಬಂದೆ
ಈಗ ಪರವಾಗಿಲ್ಲ,
ಉಸಿರಾಡುತ್ತಿದ್ದೇನೆ
ನನಗೆ ಸಿಕ್ಕ ಗಿಡಗಳಿಂದ

ಅದೆಷ್ಟು ಬೇಗನೆ ಬೆಳೆದುಬಿಟ್ಟವು
ನನಗೆ ಕನಸಲ್ಲಿಯೂ ತಿಳಿಸಿರಲಿಲ್ಲ
ನಾನೇ ಚಿಕ್ಕವನೆಂಬಂತೆ ಕಾಣುತ್ತಿದ್ದೇನೆ
ನಾನೇ ನೆಟ್ಟು, ನೀರುಣಿಸಿದ ಮರಗಳ ಕೆಳಗೆ
ಈಗ ಆವ ಚಿಂತೆಯೂ ಇಲ್ಲದೆ
ಸಾಯುವ ಯೋಜನೆಯನ್ನು
ಮುಂದೂಡಲಾಗಿದೆ
ಸಂತಸದ ಹಬ್ಬ ನಡೆದಿದೆ ಪ್ರತಿದಿನವೂ
ಹಸಿರು, ನೆರಳು, ಗಾಳಿ, ತಂಪು, ಮಧುರ
ಹಕ್ಕಿಗಳ ಕಲರವ, ಮೊರೆತ, ಹಣ್ಣು-ಬೇರು
ಎಲ್ಲವೂ ನನ್ನದಾಗಿವೆ;
ನನಗೆ ಸಿಕ್ಕ ನಾಲ್ಕು ಪುಟ್ಟ ಗಿಡಗಳಿಂದ
ಈಗ ನಾನೇ ಶ್ರೀಮಂತ

ಆದರೂ ಒಂದು ಹಿಂಜರಿಕೆಯಿದೆ
ನಾನೇ ನೆಟ್ಟ ಮರಗಳ ಕೆಳಗೆ
ನಾನೀಗ ಚಿಕ್ಕವನಾಗಿದ್ದೇನೆ;
ದೊಡ್ಡವರಾಗಲು ಎಷ್ಟು ಉದಾರಿಗಳಾಗಬೇಕಲ್ಲವೇ??
ಈ ಮರಗಿಡಗಳ ಥರ!

                         ಅನಂತ ಕುಣಿಗಲ್
            ananthangowda97@gmail.com

ಕಾಮೆಂಟ್‌ಗಳು



  1. ಪ್ರಕೃತಿಯ ಹಿರಿಮೆಯೇ ಅಂಥದ್ದು....ಹಸಿರು ಉಸಿರಾಗಿ ಮಾನಸಿಕ ನೆಮ್ಮದಿಗೆ ಸೂಕ್ತ ಸ್ಥಳವೇ ಪ್ರಕೃತಿ....ಬಹಳ ಮಾರ್ಮಿಕವಾಗಿದೆ ಸರ್....ಇಷ್ಟ ಆಯಿತು.

    ಪ್ರತ್ಯುತ್ತರಅಳಿಸಿ
  2. ದೊಡ್ದದಾದ ಮರಗಳ ದೊಡ್ಡತನ ಅರಿವ ಮನಸ್ಸು ಎಲ್ಲಿದೆ, ಈ ದಡ್ಡ ಸಮಾಜಕೆ.
    ನಾ ನೆಟ್ಟ ನಾಲ್ಕು ಮರ ನನ್ನ ಹಿಂದೆಯೇ ಸತ್ತು ಬಂದವೇ!
    ಮೊದಲನೆಯದ್ದು ಚಟ್ಟಕ್ಕೆ, ಎರದನೆಯದ್ದು ಎನ್ನ ಸುಡುವುದಕೆ
    ಉಳಿದೆರಡು ನನ್ನ ಸಮಾಧಿಯ ತೋರುಗಂಬಕ್ಕೆ.
    ತಮ್ಮದೇ ಬೇರ ಕಿತ್ತ, ಕಂದಕದಲ್ಲಿ ತೊಳಲಾಟದಿ ಮಲಗುವಂತೆ,,
    ಅಲ್ಲ ಮಲಗದಂತೆ ಮಾಡಿಹವಲ್ಲಾ..
    ಭವಿಷ್ಯದ ದಡ್ಡತನಕ್ಕೆ, ಈ ಭೂತದ ಮನಸಿನ ಅರಿವು ಇರಬಾರದಿತ್ತೆ???

    ಪ್ರತ್ಯುತ್ತರಅಳಿಸಿ
  3. ಅರ್ಥಗರ್ಭಿತವಾದ ಸಾಲುಗಳಿಂದ ಕೂಡಿದ ಗದ್ಯ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...