ಮನ್ವಂತರ ಬದಲಾಗುತಿದೆ ಜಗವು ಜಗದ ನಿಯಮವೂ ಯಾರ ಹಂಗೂ ಇಲ್ಲದೆ ಎಲ್ಲೆ ಮೀರಿ, ಕೇಳಿಬರುತಿವೆ ತವಕ-ತಲ್ಲಣಗಳು ಕ್ಷಣಗಳಿಗೆಗೊಮ್ಮೆ.. ನಾನು,ತಾನು ಎಂಬುದ ತೊರೆದು ನಮ್ಮವರೊಂದಿಗೂ ಬೆರೆಯಬೇಕಿದೆ ಮನದಿ ಪ್ರೀತಿ, ನಲಿವುಗಳ ಬೆಸುಗೆಯೊಂದಿಗೆ.. ಅತ್ತ ಅಶ್ರುಧಾರೆಯೊಂದಿಗೆ ಉಮ್ಮಳಿಸಿ ಬರುವ ಆರ್ತನಾದ ಮನಕಲಕುತಿದೆ; ಹಾದಿ-ಬೀದಿಗಳಲಿ ಬೆತ್ತಲೆಯಾದ ಹಸಿವಿನ ಅಳಲಿನೊಂದಿಗೆ. ಈಗಲಾದರೂ ಮಿಡಿಯಬೇಕಿದೆ ಹೃದಯ ವೈಶಾಲ್ಯತೆಯು.. ಸ್ವಾರ್ಥದ ಬೆಪ್ಪುತನಕೆ ಇತಿ ಹೇಳಿಬಿಡಿ, ಚಿತ್ತಗ್ಲಾನಿಯೊಳಿನ ನೊಂದ ನಿನಾದಗಳಿಗೆ ಸ್ಪಂದಿಸಿ, ಸಂತೈಸಬೇಕಿದೆ ತುಸು ಮಾನವೀಯತೆಯ ಮನುಜತನದಿಂದ; ಸತ್ಯದರಿವು ಮೂಡಿಸಿದ ವಾಸ್ತವದಲ್ಲಾದರೂ... - ಮೇಘನಾ ಕರಿಸೋಮನಗೌಡ್ರ
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"