ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಉಚಿತ ಸಾಹಿತ್ಯ ಸ್ಫರ್ಧೆಗಳು - 2023

ಅವ್ವ ಪುಸ್ತಕಾಲಯ ಹಾಗೂ ಸಾಹಿತ್ಯಮೈತ್ರಿ ಅಂತರ್ಜಾಲ ಪತ್ರಿಕೆ ಬಳಗಗಳ ವಾರ್ಷಿಕೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆ : 01 - ನ್ಯಾನೋ ಕಥಾ ಸ್ಪರ್ಧೆ 250 ಪದಮಿತಿಯ ಕತೆ ರಚಿಸಬೇಕು. ಕತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು. ಸ್ಪರ್ಧೆ : 02 - ಸ್ವರಚಿತ ಕವನ ಸ್ಪರ್ಧೆ 25 ಸಾಲುಗಳ ಮಿತಿಯ ಕವಿತೆ ರಚಿಸಬೇಕು. ಕವಿತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು. ಸ್ಪರ್ಧೆ : 03 - ಮಂಕುತಿಮ್ಮನ ಕಗ್ಗ ವಾಚನ ಸ್ಪರ್ಧೆ ನಿಮಗಿಷ್ಟವಾದ ಯಾವುದಾದರೊಂದು ಕಗ್ಗವನ್ನು ಆಯ್ಕೆ ಮಾಡಿಕೊಂಡು, ಅದನ್ನು ವಾಚಿಸಿದ (ಕೇವಲ ವಾಚನ ಮಾತ್ರ, ನಿರೂಪಣೆ ಇಲ್ಲ) ವೀಡಿಯೋ ಅನ್ನು ನಮಗೆ ಕಳಿಸಿಕೊಡಬೇಕು. ಕಗ್ಗಗಳನ್ನು ಇಲ್ಲಿ ಆರಿಸಿಕೊಳ್ಳಬಹುದು. https://kagga.sanchaya.net/poems?page=2&start_letter=%E0%B2%AA ಮೂರು ಸ್ಪರ್ಧೆಗಳಿಗೂ ಯಾವುದೇ ವಯಸ್ಸಿನ ಮತ್ತು ವಿಷಯದ ಮಿತಿ ಇಲ್ಲ. ಒಬ್ಬರು ಮೂರು ಸ್ಫರ್ಧೆಗಳಲ್ಲೂ ಭಾಗವಹಿಸಬಹುದು.  ದಿನಾಂಕ 15/04/2023 ರ ಒಳಗೆ ಈ ಕೆಳಗೆ ಸೂಚಿಸಿರುವ ಈಮೇಲ್ ವಿಳಾಸಕ್ಕೆ ನುಡಿ ಅಥವಾ ಯೂನಿಕೋಡ್ ನಲ್ಲಿ ಟೈಪ್ ಮಾಡಿದ  ನ್ಯಾನೋ ಕತೆ & ಕವಿತೆಯನ್ನು ಪಿಡಿಎಫ್ ರೂಪದಲ್ಲಿ ಕಳಿಸಿಕೊಡಬೇಕು. ಮತ್ತು ಕಗ್ಗ ವಾಚಿಸಿದ ವೀಡಿಯೋ ಅನ್ನು ವಾಟ್ಸಪ್ ಮಾಡಬೇಕು.  ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸ್ಪರ್ಧೆಗಳಲ್ಲಿ ವ...

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ - ಅವ್ವ ಪುಸ್ತಕಲಯ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಪ್ರಕಟ  ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ 15 ಕೃತಿಗಳಲ್ಲಿ ಸೃಜನಶೀಲವೆನಿಸುವ ಆರು ಕೃತಿಗಳನ್ನು ತೀರ್ಪುಗಾರರಾಗಿ ಡಾ. ನೇತ್ರಾವತಿ ಹರಿಪ್ರಸಾದ್ (ಪ್ರಾಧ್ಯಾಪಕರು, ರೇವಾ ವಿಶ್ವವಿದ್ಯಾಲಯ, ಬೆಂಗಳೂರು) ಅವರು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ಐದು ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಮೆಚ್ಚುಗೆ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಪ್ರಶಸ್ತಿಗೆ ಹಾಗೂ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.   2022ರ ಅ...

ಅವ್ವ ಪುಸ್ತಕಾಲಯ ಸಾಹಿತ್ಯ ಸ್ಪರ್ಧೆಗಳು 2022

ಹಲವಾರು ಸಾಹಿತ್ಯಕ ಚಟುವಟಿಕೆಗಳಿಂದ ಸಾಹಿತ್ಯಾಸಕ್ತರ ಮನೆಮಾತಾಗಿರುವ ಅವ್ವ ಪುಸ್ತಕಾಲಯ ಬಳಗವು ಮೂರನೆ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿದೆ.  ಸ್ಪರ್ಧೆ 01 - ಸ್ವರಚಿತ ಕವನ ವಾಚನ : "ಅವ್ವ" ವಿಷಯಾಧಾರಿತ ಸ್ವರಚಿತ ಕವನವೊಂದನ್ನು 4 ನಿಮಿಷಗಳ ಒಳಗೆ ವಾಚಿಸಿ ನಮಗೆ ಕಳುಹಿಸಬಹುದಾಗಿದೆ.  ಸ್ಪರ್ಧೆ 02 - ಪೂರ್ಣಚಂದ್ರ ತೇಜಸ್ವಿ ಕುರಿತ ಲೇಖನ ಸ್ಪರ್ಧೆ : ಕನ್ನಡ ಸಾರಸ್ವತ ಲೋಕ ಕಂಡ ಅತ್ಯದ್ಭುತ ಸಾಹಿತಿ, ಅಕ್ಷರ ಲೋಕದ ಮಾಯಾವಿ, ಆಲ್ರೌಂಡರ್ ಪೂರ್ಣಚಂದ್ರ ತೇಜಸ್ವಿಯವರ ವ್ಯಕ್ತಿತ್ವ, ಹವ್ಯಾಸಗಳು, ಕೃತಿಗಳನ್ನು ಕುರಿತಂತೆ 500 ಪದಗಳನ್ನು ಮೀರದ ಲೇಖನವನ್ನು ಬರೆದು ನಮಗೆ ಕಳುಹಿಸಬಹುದಾಗಿದೆ.  ಎರಡೂ ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಾಗಲೀ, ವಯೋಮಿತಿಯಾಗಲಿ ಇಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನ ವಾಚನದ ವೀಡಿಯೋ ಮತ್ತು ಲೇಖನವನ್ನು (ಪಿಡಿಎಫ್ ರೂಪದಲ್ಲಿರಲಿ) 8548948660 ನಂಬರಿನ ವಾಟ್ಸಾಪಿಗೆ ದಿನಾಂಕ 25-12-2022 ರ ಒಳಗೆ ಕಳುಹಿಸಬಹುದಾಗಿದೆ.  ಪ್ರತಿ ಸ್ಪರ್ಧೆಯಲ್ಲಿ ಮೂರು ಜನ ವಿಜೇತರನ್ನು ಆಯ್ಕೆ ಮಾಡಿ, ಜನವರಿ ತಿಂಗಳಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣಪತ್ರದೊಂದಿಗೆ ಅಭಿನಂದಿಸಲಾಗುತ್ತದೆ.

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಕಿರುಕಟ್ಟಿ ಪ್ರಕಟ

2022ರ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ಕಿರುಕಟ್ಟಿ ಪ್ರಕಟ  ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ಕಳೆದ ಎರಡು ವರ್ಷಗಳಿಂದ ದಿ. ಶ್ರೀಮಾನ್ ನರಸಯ್ಯ ಅವರ ಸ್ಮರಣಾರ್ಥ ಪ್ರಕಟಿತ ಕೃತಿಗಳನ್ನು ಆಹ್ವಾನಿಸಿ, ಆಯ್ಕೆಯಾದ ಕೃತಿಗಳಿಗೆ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ವರ್ಷ ಪ್ರಶಸ್ತಿಗೆ ಸುಮಾರು 80ಕ್ಕೂ ಹೆಚ್ಚು ಕೃತಿಗಳು ಬಂದಿದ್ದು, ನಿರ್ಣಾಯಕರ ಆಯ್ಕೆಯಂತೆ  (ನಿರ್ಣಾಯಕರ ಬಗ್ಗೆ ಅಂತಿಮ ಪಟ್ಟಿಯಲ್ಲಿ ತಿಳಿಸಲಾಗುವುದು)  ಸೃಜನಶೀಲವೆನಿಸುವ 15 ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. 15 ಕೃತಿಗಳಲ್ಲಿ 5 ಕೃತಿಗಳನ್ನು ಆಯ್ಕೆ ಮಾಡಿ, ಅದರಲ್ಲಿ ಸೃಜನಶೀಲವೆನಿಸುವ ಒಂದು ಕೃತಿಗೆ 2022ರ ಸೃಜನ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಯನ್ನು, ಅದರ ನಂತರದ ನಾಲ್ಕು ಕೃತಿಗಳಿಗೆ ಅವ್ವ ಪುಸ್ತಕ ಬಹುಮಾನವನ್ನು ನೀಡಿ ಅಭಿನಂದಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆಯುವ ಅವ್ವ ಪುಸ್ತಕಾಲಯ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಅವ್ವ ಪುಸ್ತಕಾಲಯದ ಅಧ್ಯಕ್ಷರಾದ ನಾರಾಯಣ್ ಕೆ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಯಾವುದೇ ಕ್ರಮಾಂಕವಿಲ್ಲದೆ ಕಿರುಪಟ್ಟಿಗೆ ಆಯ್ಕೆಯಾದ ಕೃತಿಗಳ ಹೆಸರು ಮತ್ತು ಲೇಖಕರ ಹೆಸರನ್ನು ಈ ಕೆಳಗೆ ನೀಡಲಾಗಿದೆ.  * ಆರನೆಯ ಬೆರಳು ...

ಆ ಹೊತ್ತು - ಕವಿತೆ - ಅನಂತ ಕುಣಿಗಲ್

                     (ಚಿತ್ರ : ಅಂತರ್ಜಾಲ ಕೃಪೆ) ಆ ಹೊತ್ತು ಭವಿಷ್ಯ ಹೇಳುವ ಕನಸ ಬರೆದಿಡುವ ಹೊತ್ತದು ನಿದ್ದೆ ಹತ್ತದ ಹೊತ್ತು ಏನನ್ನೋ ಕಾದಿರಿಸಿ ಕಾಡುವ ಹೊತ್ತು ಬರೆಯುತ್ತಾಹೋದೆ ಬದುಕಿದ ದಿನಗಳ ಬದುಕಬಹುದಾದ ಕ್ಷಣಗಳ ನನ್ನದೇ ನಿರೂಪಣೆಯಲ್ಲಿ ಕೆತ್ತುತ್ತಾಹೋದೆ ಹಾಳೆಗಳ ಮೇಲೆ ಗೀಚಿದಂತೆ ಕಾಣಿಸಿದರೆ ಅದು ನನ್ನದೇ ತಪ್ಪು! ಆಕಾಶ, ಭೂಮಿ, ನಕ್ಷತ್ರ ಯಾವೂ ಇರಲಿಲ್ಲ ಅಲ್ಲಿ ಗುಡುಗಿನ ಸದ್ದಾದರೂ ಮಳೆಯಿರಲಿಲ್ಲ ಅಲ್ಲಿ ಗಾಳಿಯ ಸ್ಪರ್ಶವಿರಲಿಲ್ಲ ಹಸಿರಸಿರಿಯ ಬಯಲು ಕಾಣಲೇ ಇಲ್ಲ ಅದೇನು ಮಾಯೆಯೋ.. ಬಿಟ್ಟೆನೆಂದರೂ ಬಿಡದು ಕೈಕಾಲುಗಳಿಗೆ ಕಟ್ಟು ಇರಲಿಲ್ಲ ದೇಹವನ್ನು ಬರಸಿಳೆದಂತಿತ್ತು ಉಸಿರು ಸರಾಗವಾಗಿತ್ತು ಹಾರುವ ಹದ್ದುಗಳಿಗೆ ನನ್ನ ಹಿಡಿಯಲಾಗಲಿಲ್ಲ ಬಲಿಷ್ಠನಾಗಿದ್ದೆ ನನ್ನದೇ ಪ್ರಪಂಚದಲ್ಲಿ ಚಿನ್ನದ ಪದಕ ಪೋಷಾಕು ನೆತ್ತಿಗೆ ಕಿರೀಟ ಧಾರಣೆ ರೆಡ್ ಕಾರ್ಪೆಟ್ಟಿನ ಮೇಲೆ ಯುದ್ಧ ಗೆದ್ದು ಬಂದ ಆಚರಣೆ ಭಕ್ಷ್ಯ ಭೋಜನಗಳ ಮೆಲ್ಲುತ್ತಾ ಹದಿಹರೆಯ ಯುವತಿಯರ ಒಡೆಯನಾಗಿದ್ದೆ ನನ್ನನ್ನೇ ಹೋಲುವ ಕನ್ನಡಿಯೊಳಗೆ ಬಂಧಿಯಾಗಿ ಬಹಳ ಹೊತ್ತು ಕಳೆದಿದ್ದೆ ಆ ಹೊತ್ತು ಹೆತ್ತವ್ವ ನೆನಪಾಗಲಿಲ್ಲ ಗುರುಗಳು ವೈರಿಗಳಂತೆ ಗೆಳೆಯರು ಕಾರ್ಕೋಟಕದಂತೆ ನನ್ನೂರು ನನ್ನನ್ನೇ ತಿನ್ನುವಂತೆ ಎಲ್ಲವನ್ನೂ ಹಿಡಿಮುಷ್ಠಿಯಲ್ಲೇ ನಿಗ್ರಹಿಸಿದ್ದೆ ಹ...

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2022 - ಕೃತಿಗಳ ಆಹ್ವಾನ - ಅವ್ವ ಪುಸ್ತಕಾಲಯ

2022 ರ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ ಪ್ರಕಟಿತ ಕೃತಿಗಳ ಆಹ್ವಾನ  * ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ " ಶ್ರೀಮಾನ್ ಲೇ. ನರಸಯ್ಯ " ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.  * 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು  ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (ರಿಜಿಸ್ಟರ್ ಪೋಸ್ಟ್) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  * ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಗಜಲ್, ಹನಿಗವನ, ನಾಟಕ, ಲೇಖನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .  * ನವೆಂಬರ್ ತಿಂಗಳಲ್ಲಿ ಕಿರುಪಟ್ಟ...

ಕುರುಡು ಕಾಣ್ಕೆಯ ಕವಿತೆ - ಅನಂತ ಕುಣಿಗಲ್

ಕುರುಡು ಕಾಣ್ಕೆಯ ಕವಿತೆ (ಚಿತ್ರ : ಅಂತರ್ಜಾಲ ಕೃಪೆ https://bit.ly/3akWHkH) ಪ್ರಿಯ, ಏನದು ನಾಡಿನಲ್ಲಿ ಗಲಭೆ? ಎಲ್ಲರೂ ಕಿರುಚುತ್ತಿದ್ದಾರೆ ನನಗೆ ಕಣ್ಣಿದ್ದರೆ ನೋಡಬಹುದಿತ್ತು! ಆದರೇನು ಮಾಡಲಿ.. ಎಲ್ಲ ದನಿಗಳು ಒಟ್ಟಿಗೆ ದಾಳಿ ಮಾಡುವಾಗ ಯಾವುದಕ್ಕೆ ಕಿವಿಕೊಡಲಿ?? ಈಗ ನೀನೇ ನನಗೆ ಕಣ್ಣು!! ಪ್ರಿಯೆ, ನನಗೆ ಕಣ್ಣಿದ್ದೂ ಅರ್ಥವಾಗುತ್ತಿಲ್ಲ ಇನ್ನು ನಿನಗೇನು ಹೇಳಲಿ? ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲವಂತೆ! ಈಕಡೆಯವರು ಈಕಡೆಗೆ ತೂಗುವಂತೆ ಪತ್ರ ಬರೆಯುತ್ತಿದ್ದಾರೆ.. ಆಕಡೆಯವರು ಆಕಡೆಗೆ ತೂಗುವಂತೆ ಭಾಷಣ ಮಾಡುತ್ತಿದ್ದಾರೆ.. ನನಗೂ ತಲೆಕೆಟ್ಟಿಹೋಗಿದೆ!! ಪ್ರಿಯ, ಪಠ್ಯವಿಲ್ಲದೆ ಮಕ್ಕಳೇನು ಓದುತ್ತಾರೆ? ಸರ್ಕಾರ ಈಗ ನಿದ್ದೆ ಮಾಡುತ್ತಿಲ್ಲ ತಾನೇ?? ಯಾಕೆ ಇಷ್ಟೊಂದು ತಡವಾಗುತ್ತಿದೆ.. ಮಕ್ಕಳ ದಿನಗಳಿಗೆ ಬೆಲೆಯೇ ಇಲ್ಲವೇ?? ಇದೇನು ಹುನ್ನಾರವೇ??? ಪ್ರಿಯೆ, ಸರ್ಕಾರ ನಿದ್ದೆಯಲ್ಲಿದ್ದಿದ್ದರೆ ಎದ್ದಮೇಲಾದರೂ ತಿಳಿಯುತ್ತಿತ್ತು ಆದರೆ ಈಗ ಸತ್ತಂತೆ ನಟಿಸುತ್ತಿದೆ ನಟಿಸುವವರನ್ನು ಪ್ರಶಂಸಿಸುವುದೇ ಪ್ರೇಕ್ಷಕರ ಧರ್ಮವಲ್ಲವೇ?! ಬೇಡದಿದ್ದನ್ನು ತೆಗೆದು ಇತಿಹಾಸವನ್ನು ತಿರುಚಿ ಅವಮಾನಿಸಲಾಗುತ್ತಿದೆಯಂತೆ! ಈಗ ಸತ್ಯ-ಮಿಥ್ಯಗಳೆರಡಕ್ಕೂ ವ್ಯತ್ಯಾಸವಿಲ್ಲದಂತಾಗಿದೆ ಪದವಿಗಳೇ ಇಲ್ಲದವರು ಪಠ್ಯ ಆರಿಸಿದ್ದಾರಂತೆ ಅದರಲ್ಲಿ ಅವರಿಗೆ ಬೇಕಾದ್ದೇ ಹೆಚ್ಚಿದೆಯಂತೆ! ಅದು ಸಮಸಮಾಜದ ಕನಸನ್ನು ನುಂಗುತ್ತಿದೆಯಂತೆ ಇವರಿವರ ರಾಜಕೀಯದಲ್...