ವಿಷಯಕ್ಕೆ ಹೋಗಿ

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್


" ಆಕೆಗೆ ಅದು ಮೊದಲ ರಾತ್ರಿಯಲ್ಲ! "


ಆಕೆಗೆ ಅದು ಮೊದಲ ರಾತ್ರಿಯಲ್ಲ

ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!!

ಇಪ್ಪತ್ತೆರೆಡು ವರ್ಷದ ಆ ಬಾಲಕಿ

ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು 


ಅಪ್ಪ ಕುಡಿದು ಕುಡಿದು ಸತ್ತ

ಇಲ್ಲ, ಮಗನಿಂದಲೇ ಕೊಲೆಯಾದ

ಅಪರಾಧಿ ತಮ್ಮ ಜೈಲಿಗೆ ಹೋದ

ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ

ಹಾಳಾದ ಕ್ಯಾನ್ಸರ್ ರೋಗ

ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ 


ಈಗಲೂ ಅವಳು ಸ್ವಾರ್ಥಿಯಾದರೆ..?

ಆ ಬದುಕಿಗೆ ಅರ್ಥವುಂಟೆ?!

ಓದಿಗೆ ತಕ್ಕನಾದ ಕೆಲಸವಿಲ್ಲ

ತನ್ನವರು ಅಂತ ಯಾರೂ ಇಲ್ಲ

ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ 


ಮದುವೆಯಾದರೆ ಸರಿಯಾಗುವುದೇ ಎಲ್ಲ?

ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ

ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ 


ಎಷ್ಟು ದುಡಿಯಬಹುದು?

ಎರಡೇ ಎರಡು ಕೈಗಳು?!

ಪಾಪ ಪುಟ್ಟ ಕೈಗಳು

ಸೂರ್ಯನಿಗೂ ಸಮಯದ ಅರಿವಿಲ್ಲ

ಬೇಗ ಬಂದು ಬೇಗ ಹೋಗುತ್ತಾನೆ

ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ

ಅದರಿಂದ ಅವಳ ಹೊಟ್ಟೆ ತುಂಬೀತೇ??

ಹೆತ್ತಾಕೆಯ ರೋಗ ಹೋದೀತೇ??

ಮತ್ತೆ ಎಲ್ಲವೂ.. ಹಾಗೇ!! 


ಇನ್ನೊಂದು ನಿರ್ಧಾರವಾಗಬೇಕಿದೆ

ಹಳ್ಳಿ ಬಿಟ್ಟು ಪಟ್ಟಣ ಸೇರುವುದು

ಅದೂ ಆಯ್ತು..

ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು

ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ

ಅವಳೆದೆಯ ಉಬ್ಬು ಸವಿದವರೇ ಹೆಚ್ಚು

ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ

ದಿನವೂ ಶೃಂಗಾರ ಮಾಡಲಿಕ್ಕೆ ಹಣ ಬೇಕಲ್ಲ!! 


ಗೊತ್ತಾಯಿತು! ಅವಳಿಗೆ

ತನ್ನ ಕೆಲಸಕ್ಕಿಂತ ಅವರಿಗೆ ತಾನೇ ಹೆಚ್ಚೆಂದು

ಅಲ್ಲ, ತನ್ನ ದೇಹವೇ ಹೆಚ್ಚು!!

ಅದರಲ್ಲೂ ಆ ಎದೆ, ಸೊಂಟ ಮತ್ತು ಅದು!

ಛೇ..!

ಮುಂಗುರುಳು, ಮೂಗುತಿ, ಜಡೆ ನೋಡಿ

ಪ್ರೀತಿ ಮಾಡುವವರು ಇಲ್ಲಿ ಇಲ್ಲವೇ ಇಲ್ಲ!!

ಪ್ರೀತಿ ಕೂಡ ಅನಾಥ 


ಮತ್ತೊಂದು ದೃಢ ನಿರ್ಧಾರ

ಮಂಚಕ್ಕೂ ದುಡಿಮೆಯ ರುಚಿ ತೋರಿಸುವುದು

ಕಾಲುಗಳನ್ನು ಮತ್ತಷ್ಟು ಗಟ್ಟಿಯಾಗುವಂತೆ

ದಿನವೂ ಪೆವಿಕಾಲ್ ಹಚ್ಚುವುದು

ರೂಮು ಯಾವಾಗಲೂ ಘಮ್ಮೆನ್ನುವಂತೆ

ಮಲ್ಲಿಗೆ ಸಂಪಿಗೆ ಮುಡಿಯುವುದು

ಬೆಳಕನ್ನು ಸೀಳುವ ಕತ್ತಲೆಯನ್ನು ಆಹ್ವಾನಿಸಿ

ಶೃಂಗಾರಭರಿತ ನಗುವನ್ನು ರಾತ್ರಿ ಇಡೀ ನುಂಗಿಕೊಳ್ಳುವುದು 

ಬಂಧಿಯಾದ ದೇಹವನ್ನು ಕಾಪಾಡಿಕೊಳ್ಳಲಾಗದ

ಅಸಹಾಯಕ ಕೈಗಳಲ್ಲಿನ ರೋಷವನ್ನು

ಸಮ್ಮನೆ ಹರಿಯಬಿಡುವುದು


ಬಂದವನು ಯಾರೋ..

ಹಣದ ವಾಸನೆ ಮಾತ್ರ ಒಂದೇ..

ಮೊದಲ ರಾತ್ರಿಯ ಉತ್ಸಾಹವಿಲ್ಲದಿದ್ದರೂ

ಹಾಸಿಗೆ ಮಾತ್ರ ಹಸಿಹಸಿಯಾಗಿತ್ತು

ಅವನು ಬಹಳ ಆತುರದಲ್ಲಿದ್ದ

ನಿರೀಕ್ಷೆಯಂತೆ ಏನೂ ಆಗಲಿಲ್ಲ

ನೋವು ಮಾತ್ರ ನಿರಂತರ 


ಅದುವರೆಗೂ ಅನುಭವಿಸದ ನೋವು ಅದು

ನವೋಲ್ಲಾಸದಿಂದ ಸವಿಯಬೇಕಾಗಿದ್ದ ಆ ನೋವು

ಅವಳ ಪಾಲಿಗೆ ಬೇಗ ಒಲಿದಿತ್ತು

ಮೊದಲ ರಾತ್ರಿ ಎಂಬ ಸಂತೋಷ ಅಲ್ಲೇ ಮುಗಿದಿತ್ತು

ಕಳೆದು ಪಡೆದುಕೊಳ್ಳುವ ಆಸೆಯೂ ಬತ್ತಿತ್ತು 


ಮಾರಿಕೊಂಡದ್ದು ಏನನ್ನಾ??

ದೇಹ? ನಗು? ಶೃಂಗಾರ? ನೋವು? ಪ್ರಾಮಾಣಿಕತೆ?

ಬಹುಶಃ ಅವನನ್ನೇ ಹುಡುಕಿ ಮದುವೆಯಾದರೆ..

ಆ ರಾತ್ರಿ ಅವಳಿಗೆ ಮೊದಲ ರಾತ್ರಿಯೇ ಆಗಬಹುದು! 


- ಅನಂತ ಕುಣಿಗಲ್

ಕಾಮೆಂಟ್‌ಗಳು

  1. 😥ನೊಂದ ಹೆಣ್ಣಿನ ದಾರುಣ ಕಥೆ.. ಹೊಟ್ಟೆ ಪಾಡು ಬಡತನ ಅಸಾಹಾಯಕತೆ ಯಾವ ಸ್ಥಿತಿಗೆ ಬೇಕಾದರೂ ಕರೆದೊಯ್ಯಬಹುದು😒

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿದೆ ಅನಂತ

    ಪ್ರತ್ಯುತ್ತರಅಳಿಸಿ
  3. ತುಂಬಾ ಬೇಸರವಾಗುತ್ತದೆ. ಎಷ್ಟೋ ಅಸಹಾಯಕ ಮುಗ್ಧ ಹೆಣ್ಣು ಮಕ್ಕಳ ವ್ಯಥೆ ಇದು.

    ಪ್ರತ್ಯುತ್ತರಅಳಿಸಿ
  4. ಕರುಳು ಹಿಂಡುವುದು
    ಹೃದಯ ಕದಡುವುದು
    ಮನವು ಬಿರುಗಾಳಿಗೆ ಸಿಲುಕಿಹುದು
    ರೋಷದೊಳು ಮುಷ್ಟಿ ಬಿಗಿಯಾಗಿಹುದು
    ಅದೇಕೋ ಒಂದಷ್ಟು ದ್ವೇಷವು ಪುಟ್ಟಿಹುದು ಮನದಲಿ ಈ ಮನುಜರೆಡೆ ಈ ದುರುಳರೆಡೆ
    ಅದೆಕೋ ಒಂದಷ್ಟು ಕೋಪವು ಪುಟ್ಟಿಹುದು
    ಆ ದೈವದೆಡೆಗೆ ಆ ವಿಧಿಯೆಡೆಗೆ
    ಅದೆಕೋ ಒಂದಷ್ಟು ಕೋಪವು ಪುಟ್ಟಿಹುದು
    ಎನ್ನೆಡೆಗೆ ತನ್ನ ಅಸಹಾಯಕತೆಯೆಡೆಗೆ
    ಎನ್ನ ದುರ್ವಿಧಿಯೆಡೆಗೆ

    - 🔴 ಕವಿಚಂದಮ 🔴 -

    ಪ್ರತ್ಯುತ್ತರಅಳಿಸಿ
  5. [14/05, 11:22 pm] Dr.K.C.CHANDRA PRAKASH: ನಿಮ್ಮ ಕವನಗಳಲ್ಲಿ ವ್ಯಕ್ತವಾಗುವ ಮಹಿಳೆರೆಡೆಗಿನ ನಿಮ್ಮ ಕಾಳಜಿಗೆ ಎಷ್ಟು ವಂದಿಸಿದರು ಸಾಲದು.

    ನಿಮ್ಮ ಕವನಗಳಲ್ಲಿ ಈ ಸಮಾಜದ ಕೊಳೆಯನ್ನು ಎಳೆ ಎಳೆಯಾಗಿ ಬಿಡಿಸಿಡುವಿರಿ.

    ಈ ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲೂ ಬಂದರೆ ನಮ್ಮ ಸಮಾಜ ಸುಧಾರಿಸಬಹುದೇನೋ.
    [14/05, 11:23 pm] Dr.K.C.CHANDRA PRAKASH: ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಮಗೆ ಹೃದಯಪೂರ್ವಕ ವಂದನೆಗಳು.

    💐💐💐💐💐💐💐💐💐

    ಶುಭರಾತ್ರಿ

    🙏🙏🙏🙏🙏🙏🙏

    ಪ್ರತ್ಯುತ್ತರಅಳಿಸಿ
  6. ನಿಮ್ಮ ಕವನಗಳಲ್ಲಿ ವ್ಯಕ್ತವಾಗುವ ಮಹಿಳೆರೆಡೆಗಿನ ನಿಮ್ಮ ಕಾಳಜಿಗೆ ಎಷ್ಟು ವಂದಿಸಿದರು ಸಾಲದು.

    ನಿಮ್ಮ ಕವನಗಳಲ್ಲಿ ಈ ಸಮಾಜದ ಕೊಳೆಯನ್ನು ಎಳೆ ಎಳೆಯಾಗಿ ಬಿಡಿಸಿಡುವಿರಿ.

    ಈ ಸಾಮಾಜಿಕ ಕಾಳಜಿ ಪ್ರತಿಯೊಬ್ಬರಲ್ಲೂ ಬಂದರೆ ನಮ್ಮ ಸಮಾಜ ಸುಧಾರಿಸಬಹುದೇನೋ.

    ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಮಗೆ ಹೃದಯಪೂರ್ವಕ ವಂದನೆಗಳು.

    💐💐💐💐💐💐💐💐💐

    ಶುಭರಾತ್ರಿ

    🙏🙏🙏🙏🙏🙏🙏

    ಪ್ರತ್ಯುತ್ತರಅಳಿಸಿ
  7. ನೊಂದ ಹೆಣ್ಣಿನ ಬದುಕಿನ ಚಿತ್ರಣವನ್ನು ಒಂದು ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದೀರಿ..ಬಹಳ ಭಾವನಾತ್ಮಕವಾದ ಕವಿತೆ...ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  8. ಮಾರ್ಮಿಕವಾದ ಕವಿತೆ, ಎರಡು ಸಾಲಿನಲ್ಲಿ ಪ್ರತಿಕ್ರಿಯೆ ನೀಡಲಾಗದು. ಅಭಿನಂದನೆಗಳು ಅನಂತ💐

    ಪ್ರತ್ಯುತ್ತರಅಳಿಸಿ
  9. ಹೊಟ್ಟೆ ಪಾಡಿಗಾಗಿ ದೇಹವನ್ನೇ ಅಡವಿಟ್ಟುಕೊಂಡು ಬಾಳುವುದರಿಂದ ಆಕೆಯನ್ನು ವೈಶ್ಯೆಯನ್ನಾಗಿಸುವ ಗಂಡು ಮನಸ್ಸುಗಳು ಬದಲಾಗಬೇಕು,ಹೊಟ್ಟೆಪಾಡಿಗೆ ಶ್ರಮವಿಟ್ಟು ದುಡಿದು ತಿನ್ನುವ ದಾರಿ ತೋರುವ ಮಹಾನುಬಾವ ಹುಟ್ಟಲಿ..ಹೆಣ್ಣು ದುಡಿದು ಬದುಕಬಲ್ಲಳು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...