ವಿಷಯಕ್ಕೆ ಹೋಗಿ

ಒಂದು ಸ್ನೇಹದ ಕಥೆ - ಕಥೆ - ಚೈತ್ರ ಗೋವರ್ಧನ್


ಶೀರ್ಷಿಕೆ : ಒಂದು ಸ್ನೇಹದ ಕಥೆ.

ರಂಗೇನಹಳ್ಳಿ ಎಂಬ ಊರಿನಲ್ಲಿ ರಂಗಸ್ಥಳ ಎಂಬ ಒಂದು ಸಂಸ್ಥೆ ಇತ್ತು. ಈ ಸಂಸ್ಥೆಯಲ್ಲಿ ಅನೇಕ ರಂಗಭೂಮಿ ಕಾರ್ಮಿಕರು ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇದರಲ್ಲಿ ಮೂರು ಜನ ತುಂಬಾ ಆತ್ಮೀಯ ಗೆಳೆಯರು ಇದ್ದರು. ಅವರ ಹೆಸರು ವಸುಂಧರಾ, ನಿರಂಜನ್, ಚಿರಂತನ ಎಂದು.

ಈ ವಸುಂಧರಾ ಮತ್ತು ನಿರಂಜನ್ ತುಂಬಾ ತುಂಬಾ ಆತ್ಮೀಯರು. ಹೇಗಂತೀರಾ? ಇವರಿಬ್ಬರೂ ಹುಟ್ಟಿದಾಗಿನಿಂದ ಸ್ನೇಹಿತರು. ಈ ಚಿರಂತನ ಹೇಗೆ ಫ್ರೆಂಡ್ ಆದದ್ದು ಅಂತ ಹೇಳ್ತೀನಿ ಕೇಳಿ ಅಲ್ಲಲ್ಲ ಓದಿ ಆಯ್ತಾ. 

ಚಿರಂತನಾಳಿಗೆ ಕಥೆ ಬರೆಯೋದು ಅಂದರೆ ತುಂಬಾ ಇಷ್ಟ. ಅವಳು ಮೂಲತಃ ಕಥೆಗಾರ್ತಿ ಏನಲ್ಲ. ಅವಳಿಗೆ ಬೇರೆಯವರ ಕಥೆ ಬರೆದದ್ದನ್ನು ಓದುತ್ತಾ ಓದುತ್ತಾ ಹವ್ಯಾಸಿ ಕಥೆಗಾರ್ತಿ ಆದಳು. ಈ ಕಥೆ ಬರೆಯಲು ಅವಳಿಗೆ ಈ ರಂಗಸ್ಥಳದಲ್ಲಿ ಅವಕಾಶ ದೊರೆಯಿತು. ಏಕೆಂದರೆ ಇಲ್ಲಿ ಅನೇಕ ನಾಟಕಗಳನ್ನು ಪ್ರದರ್ಶನ ಮಾಡುತಿದ್ದರು. ಜೊತೆಗೆ ಈ ಕಿರುಚಿತ್ರ ಪ್ರದರ್ಶನ ಕೂಡ ಮಾಡುತಿದ್ದರು. ಆದ್ದರಿಂದ ಚಿರಂತನಾಳ ಪರಿಚಯದವರು ಕರೆದು ಕೊಂಡು ಬಂದು ಇಲ್ಲಿ ಸೇರಿಸಿದ್ದರು.

ಇನ್ನು ಈ ವಸುಂಧರಾ ನಿರಂಜನ್ ಏನು ಮಾಡ್ತಾ ಇದ್ದರು ಇಲ್ಲಿ ಎಂಬುದಕ್ಕೆ ಉತ್ತರ ಇಲ್ಲಿದೆ ಓದಿ. ವಸುಂಧರಾ ಗೆ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ. ಆದ್ದರಿಂದ ಅವರು ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಈ ರಂಗಸ್ಥಳದಲ್ಲಿ ನಡೆಯುವ ಪ್ರತಿಯೊಂದು ನಾಟಕಗಳಿಗೆ ಬೇಕಾದ ಚಿತ್ರಗಳನ್ನು ಬಿಡಿಸುವುದು. ಮತ್ತೆ ಅಲ್ಲಿನ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಚಿತ್ರಕಲೆ ಹೇಳಿಕೊಡುತ್ತಿದ್ದರು.

ಇನ್ನು ನಿರಂಜನ್ ಗೆ ಏನು ಕೆಲಸ ಇಲ್ಲಿ ಎಂದರೆ, ತಮ್ಮ ಆತ್ಮೀಯ ಗೆಳತಿ ವಸುಂಧರಾಳಿಗೆ ಚಿತ್ರ ಬಿಡಿಸಲು ಬೇಕಾದ ಮಾಹಿತಿ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಅಗತ್ಯ ವಸ್ತುಗಳನ್ನು ಪೂರೈಸುವುದು ಇವರ ದಿನ ನಿತ್ಯ ಕಾಯಕ.

ಹೀಗೆ ಒಂದು ದಿನ ಚಿರಂತನ ರಂಗಸ್ಥಳದಲ್ಲಿ ಓಡಾಡುತ್ತಿದ್ದ ವೇಳೆ ವಸುಂಧರಾ ಬಿಡಿಸಿದ ಒಂದು ಚಿತ್ರ ಕಣ್ಣಿಗೆ ಬಿತ್ತು. ಆ ಚಿತ್ರದ ಬಗ್ಗೆ ಒಂದು ಕಥೆ ಬರೆದು ಅಲ್ಲಿನ ರಂಗಕಲಾವಿದರ ಬಳಿ ಕಿರುಚಿತ್ರ ನಿರ್ಮಾಣ ಮಾಡಿ ಪ್ರದರ್ಶನ ಮಾಡಿಸಿದಳು ಚಿರಂತನ. ಇದನ್ನು ಕಂಡ ನಿರಂಜನ್ ಮತ್ತು ವಸುಂಧರಾ, ಚಿರಂತನ ಬಳಿ ಬಂದು ಸ್ನೇಹ ಹಸ್ತ ಚಾಚಿದರು. 

ಮೊದಲೇ ಸ್ನೇಹ ಜೀವಿ ಆಗಿದ್ದ ಚಿರಂತನಾಳಿಗೆ ಒಲ್ಲೆ ಎಂದು ಹೇಳಲು ಮನಸ್ಸಾಗಲಿಲ್ಲ. ಹೀಗೆ ಮೂರು ಜನ ಕೂಡ ಆತ್ಮೀಯರಲ್ಲಿ ಆತ್ಮೀಯರಾದರು. ವಸುಂಧರಾಳನ್ನು ವರು ಎಂದು, ನಿರಂಜನನ್ನು ನಿರು ಎಂದು ಕರೆಯಲು ಶುರು ಮಾಡಿದಳು. ಅವರಿಬ್ಬರೂ ಚಿರಂತನಾಳನ್ನು ಚಿರು ಎನ್ನಲು ಶುರು ಮಾಡಿದರು. 

ಮೂರು ಜನರು ರಂಗಸ್ಥಳದಲ್ಲಿ ಭೇಟಿ ಮಾಡಿ ದಿನನಿತ್ಯ ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳುತ್ತಾ ತಮ್ಮ ಜೀವನ ನಡೆಸುತ್ತಿದ್ದರು. ಅಷ್ಟು ಆತ್ಮೀಯ ಸ್ನೇಹಿತರಾದರು ಒಬ್ಬರಿಗೊಬ್ಬರು ಮೊಬೈಲ್ ನಂಬರ್ ಪಡೆದಿರಲಿಲ್ಲ. ಏನಿದ್ದರೂ ರಂಗಸ್ಥಳದಲ್ಲಿ ಭೇಟಿ ಅಷ್ಟೇ ಇದ್ದದ್ದು. 

ಒಂದು ದಿನ ಈ ಚಿರಂತನ ವಸುಂಧರಾ ಮತ್ತು ನಿರಂಜನ್ ಗೆ ತನ್ನ ಮೊಬೈಲ್ ನಂಬರ್ ಕೊಟ್ಟು ಈ ನಂಬರ್ ಗೆ ಫೋನ್ ಅಥವಾ ಮೆಸೇಜ್ ಮಾಡಿ ಎಂದು ಹೇಳಿದಳು. ಚಿರಂತನಾಳ ಮಾತಿಗೆ ಬೆಲೆ ಕೊಟ್ಟು ನಿರು ಮತ್ತು ವರು, ಚಿರು ಗೆ ಮೆಸೇಜ್ ಮಾಡಿದರು.

ಈ ಚಿರು ಅಲಿಯಾಸ್ ಚಿರಂತನ ನಿರು ಮತ್ತು ವರು ನಂಬರಿನಿಂದ ಮೆಸೇಜ್ ಬಂದದ್ದೆ ತಡ ತುಂಬಾ ಖುಷಿ ಆಗಿ ಅವರ ಅನುಮತಿ ಇಲ್ಲದೆ ಒಂದು ವಾಟ್ಸ್ ಆ್ಯಪ್ ಗುಂಪು ತೆರೆದಳು. ಆ ಗುಂಪಿನ ಹೆಸರು ಮೂರು ರತ್ನಗಳು.  ಅದರಲ್ಲಿ ಅವರಿಬ್ಬರಿಗೂ ಸ್ವಾಗತ ಕೋರಿಯೇ ಬಿಟ್ಟಳು.

ವರು ಮತ್ತು ನಿರು ಕೂಡ ತಡಮಾಡದೆ ಚಿರುಗೂ ಸ್ವಾಗತ ಹೇಳಿ ಮಾತು ಶುರು ಮಾಡಿದರು. ದಿನೇ ದಿನೇ ಈ ಮೂರು ಜನರ ನಡುವೆ ತುಂಬಾ ಆತ್ಮೀಯತೆ ಬೆಳೆಯಿತು. 

ಒಮ್ಮೆ ವರು ಅನಾರೋಗ್ಯ ನಿಮಿತ್ತ ಮಾತಾಡಲಿಲ್ಲ ಅಂತ ಈ ಚಿರು ವರುಗೆ ತುಂಬಾ ಬೇಜಾರು ಮಾಡಿದಳು. ನಂತರ ನಿರು, ಚಿರುವನ್ನು ಸಮಾಧಾನ ಮಾಡಿದನು. ನಂತರ ವರು ತುಂಬಾ ಒಳ್ಳೆಯ ಮನಸುಳ್ಳವಳು ಆದ್ದರಿಂದ ಚಿರು ಮಾಡಿದ ಬೇಸರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಚಿರು ಮತ್ತು ನಿರು ಜೊತೆ ಖುಷಿ ಖುಷಿಯಾಗಿ ಮಾತಾಡ್ತಾ ಇದ್ದಳು.

ಹೀಗೆ ಕೆಲವು ದಿನಗಳ ನಂತರ ವರು ತನ್ನ ವೈಯಕ್ತಿಕ ವಿಷಯದ ಸಲುವಾಗಿ, ರಂಗಸ್ಥಳದಿಂದ ಹೊರಬರಬೇಕಾದ ಸಮಯ ಬಂತು. ರಂಗಸ್ಥಳದ ಎಲ್ಲರಿಗೂ ವರು ವಿದಾಯ ಹೇಳಿ ಹೊರಡಲು ಅನುವಾದಳು. ಆದರೆ ಈ ಚಿರು ಮತ್ತು ನಿರುಗೆ ಮಾತ್ರ ವರುವನ್ನು ಕಳುಹಿಸಲು ಮನಸ್ಸಿಲ್ಲ. ಆದರೆ ಏನು ಮಾಡುವುದು ವಸುಂಧರಾಳ ವೈಯಕ್ತಿಕ ಬದುಕಿನ ಬಗ್ಗೆ ಕೂಡ ಯೋಚಿಸಬೇಕು ಅಲ್ವಾ? ಆದ್ದರಿಂದ ಒಲ್ಲದ ಮನಸ್ಸಿನಿಂದ ವರುವನ್ನು ಬೀಳ್ಕೋಟ್ಟರು ಚಿರು ಮತ್ತು ನಿರು.

ವರು ರಂಗಸ್ಥಳ ಬಿಟ್ಟು ಹೋದರು ಕೂಡ ದಿನದಲ್ಲಿ ಅದೆಷ್ಟು ಬಾರಿ ನಿರು ಮತ್ತು ಚಿರು ಜೊತೆ ವಾಟ್ಸ್ ಆ್ಯಪ್ ಲೀ ಮೆಸೇಜ್ ಮಾಡಿ ಮಾತಾಡ್ತಾ ಇದ್ದಳು ಗೊತ್ತಾ? ಈ ಮೂರು ಜನ ತುಂಬಾ ತುಂಬಾನೇ ಆತ್ಮೀಯರಾದರು. ಹೇಗೆಂದರೆ ಈ ಚಿರುವನ್ನು ರೇಗಿಸುವುದು ಅಂದರೆ ಈ ನಿರು ಮತ್ತು ವರು ಗೆ ತುಂಬಾ ಇಷ್ಟ. ನಿರು ಚಿರುವನ್ನು ರೇಗಿಸುವುದ ಕಂಡು ವರು ಖುಷಿ ಪಡುವುದು. ಒಟ್ಟಿನಲ್ಲಿ ಮೂರು ಜನ ಸಂತೋಷದಿಂದ ಇದ್ದರು.

ಮತ್ತೆ ಒಂದು ದಿನ ಈ ಚಿರು ತಾನು ಬರೆದ ಕಥೆ ಓದಿಲ್ಲ ನನಗೆ ಸಹಕರಿಸಲಿಲ್ಲ ಎಂದು ನಿರುವನ್ನು ಮೋಸ ಮಾಡ್ತೀಯ ಅಂತ ಹೇಳಿದಳು. ಇದಕ್ಕೆ ನಿರು ನೀನು ಬರೆದ ಅಷ್ಟು ಕಥೆಯನ್ನು ಓದಿದ ನಂತರವೇ ನಿನ್ನ ಜೊತೆ ಮಾತಾಡೋದು ಎಂದು ಮಾತು ನಿಲ್ಲಿಸಿಯೇ ಬಿಟ್ಟ. ಚಿರು ನಿರುವಿನ ಮೌನ ತಾಳಲಾರದೆ ನಾನು ಸುಮ್ಮನೆ ಹೇಳಿದ್ದು ದಯಮಾಡಿ ಕ್ಷಮಿಸು ಎಂದು ಎಷ್ಟು ಹೇಳಿದರೂ ಕೇಳಲಿಲ್ಲ ನಿರು.

ಹೀಗೆ ಐದು ದಿನಗಳ ಕಾಲ ನಿರಂತರವಾಗಿ ಚಿರು ನಿರುವಿಗೆ ಮಾತಾಡ್ಸು ಎಂದು ಬೆಂಬಿಡದ ಬೇತಾಳದಂತೆ ಹಿಂಸೆ ನೀಡಿದಳು. ನಂತರ ವರುವಿಗೂ ಈ ವಿಷಯ ತಿಳಿಸಿದಳು ಚಿರು. ಏನೋ ಗೊತ್ತಿಲ್ಲಾ ನಮ್ಮ ವರು ನಿರುಗೆ ಏನೇಳಿದಳೋ ಗೊತ್ತಿಲ್ಲ. ನಿರು ಚಿರುವನ್ನು ಮಾತಾಡಿಸಿದನು.

ಎಲ್ಲರಿಗೂ ವಿಶ್ವ ಸ್ನೇಹ ದಿನಾಚರಣೆಯ ಶುಭಾಶಯಗಳು                         💐💐💐💐💐
           ಚೈತ್ರ ಗೋವರ್ಧನ್, ಬೆಂಗಳೂರು

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...