ವಿಷಯಕ್ಕೆ ಹೋಗಿ

ಕುರುಡು ಕಾಣ್ಕೆಯ ಕವಿತೆ - ಅನಂತ ಕುಣಿಗಲ್

ಕುರುಡು ಕಾಣ್ಕೆಯ ಕವಿತೆ

(ಚಿತ್ರ : ಅಂತರ್ಜಾಲ ಕೃಪೆ https://bit.ly/3akWHkH)

ಪ್ರಿಯ,
ಏನದು ನಾಡಿನಲ್ಲಿ ಗಲಭೆ?
ಎಲ್ಲರೂ ಕಿರುಚುತ್ತಿದ್ದಾರೆ
ನನಗೆ ಕಣ್ಣಿದ್ದರೆ ನೋಡಬಹುದಿತ್ತು!
ಆದರೇನು ಮಾಡಲಿ..
ಎಲ್ಲ ದನಿಗಳು ಒಟ್ಟಿಗೆ ದಾಳಿ ಮಾಡುವಾಗ
ಯಾವುದಕ್ಕೆ ಕಿವಿಕೊಡಲಿ??
ಈಗ ನೀನೇ ನನಗೆ ಕಣ್ಣು!!

ಪ್ರಿಯೆ,
ನನಗೆ ಕಣ್ಣಿದ್ದೂ ಅರ್ಥವಾಗುತ್ತಿಲ್ಲ
ಇನ್ನು ನಿನಗೇನು ಹೇಳಲಿ?
ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲವಂತೆ!
ಈಕಡೆಯವರು ಈಕಡೆಗೆ ತೂಗುವಂತೆ
ಪತ್ರ ಬರೆಯುತ್ತಿದ್ದಾರೆ..
ಆಕಡೆಯವರು ಆಕಡೆಗೆ ತೂಗುವಂತೆ
ಭಾಷಣ ಮಾಡುತ್ತಿದ್ದಾರೆ..
ನನಗೂ ತಲೆಕೆಟ್ಟಿಹೋಗಿದೆ!!

ಪ್ರಿಯ,
ಪಠ್ಯವಿಲ್ಲದೆ ಮಕ್ಕಳೇನು ಓದುತ್ತಾರೆ?
ಸರ್ಕಾರ ಈಗ ನಿದ್ದೆ ಮಾಡುತ್ತಿಲ್ಲ ತಾನೇ??
ಯಾಕೆ ಇಷ್ಟೊಂದು ತಡವಾಗುತ್ತಿದೆ..
ಮಕ್ಕಳ ದಿನಗಳಿಗೆ ಬೆಲೆಯೇ ಇಲ್ಲವೇ??
ಇದೇನು ಹುನ್ನಾರವೇ???

ಪ್ರಿಯೆ,
ಸರ್ಕಾರ ನಿದ್ದೆಯಲ್ಲಿದ್ದಿದ್ದರೆ
ಎದ್ದಮೇಲಾದರೂ ತಿಳಿಯುತ್ತಿತ್ತು
ಆದರೆ ಈಗ ಸತ್ತಂತೆ ನಟಿಸುತ್ತಿದೆ
ನಟಿಸುವವರನ್ನು ಪ್ರಶಂಸಿಸುವುದೇ ಪ್ರೇಕ್ಷಕರ ಧರ್ಮವಲ್ಲವೇ?!
ಬೇಡದಿದ್ದನ್ನು ತೆಗೆದು
ಇತಿಹಾಸವನ್ನು ತಿರುಚಿ ಅವಮಾನಿಸಲಾಗುತ್ತಿದೆಯಂತೆ!
ಈಗ ಸತ್ಯ-ಮಿಥ್ಯಗಳೆರಡಕ್ಕೂ ವ್ಯತ್ಯಾಸವಿಲ್ಲದಂತಾಗಿದೆ
ಪದವಿಗಳೇ ಇಲ್ಲದವರು ಪಠ್ಯ ಆರಿಸಿದ್ದಾರಂತೆ
ಅದರಲ್ಲಿ ಅವರಿಗೆ ಬೇಕಾದ್ದೇ ಹೆಚ್ಚಿದೆಯಂತೆ!
ಅದು ಸಮಸಮಾಜದ ಕನಸನ್ನು ನುಂಗುತ್ತಿದೆಯಂತೆ
ಇವರಿವರ ರಾಜಕೀಯದಲ್ಲಿ ಮಕ್ಕಳ ನಗು ಕರಗುತ್ತಿದೆ

ಪ್ರಿಯ,
ಹಾಗಾದರೆ ಮುಂದಿನ ಕತೆ?
ನೀನು ಹೇಳುವ ಪ್ರಕಾರ
- ಕಣ್ಣಿಲ್ಲದ ನಾನೇ ಅದೃಷ್ಟವಂತೆ ಎನಿಸುತ್ತಿದೆ
ಇದಕ್ಕೆಲ್ಲ ಪರಿಹಾರವಿಲ್ಲವೇನು??

ಪ್ರಿಯೆ,
ಖಂಡಿತ ನೀನು ಪುಣ್ಯವಂತೆ!
ಕವಿತೆ ಬರೆದ ನಾನೇ ಈಗ ಹಲ್ಲಿಲ್ಲದವರಿಗೂ ಕಡಲೆ
ಹೇಗಾದರೂ ತಪ್ಪಿಸಿಕೊಂಡು
ಅವರ ಹೊಟ್ಟೆಯಲ್ಲಿ ಗಿಡವಾಗಿ ಬೆಳೆದು
ಹೊಟ್ಟೆ ಬಗೆಯುವ ಆಸೆಯಾಗುತ್ತಿದೆ ನೋಡು!
ಮುಂದಿನ ಕತೆಯನ್ನು ಇನ್ನೊಂದು ಕವಿತೆ ಹೇಳುತ್ತದೆ
ಇದ್ದವರು ಉಣ್ಣುತ್ತಾರೆ
ಇಲ್ಲದವರು ಸಾಯುತ್ತಾರೆ
ನಮ್ಮಂಥವರು ದಿನ ಬೇಯುತ್ತಾರೆ
ಅವರು ಉರಿಯುತ್ತಲೇ ಇರುತ್ತಾರೆ
ಮಳೆ ಬಂದಾಗ ಅಡಗಿಹೋಗುತ್ತಾರೆ
ಈಗ ಮಳೆ ಬರಬೇಕಿದೆ ಪ್ರಿಯೆ
ನಾನು ಹೊಟ್ಟೆಯೊಳಗೆ ಚಿಗುರುತ್ತೇನೆ
- ಅದೇ ಪರಿಹಾರ

ಅನಂತ ಕುಣಿಗಲ್


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....