ವಿಷಯಕ್ಕೆ ಹೋಗಿ

ನ್ಯಾನೋ ಕಥಾಸ್ಪರ್ಧೆ ಫಲಿತಾಂಶ - ಮೇ-2022 - ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು ಸಾಹಿತ್ಯಾಸಕ್ತರ ಬೇಸರ ಕಳೆಯಲು, ಅವರನ್ನು ಸದಾ ಸೃಜನಶೀಲ ಹಾಗೂ ಕ್ರಿಯಾಶೀಲರಾಗಿರುವಂತೆ ಕಾಪಾಡಿಕೊಳ್ಳಲು ಒಂದರ ಹಿಂದೆ ಮತ್ತೊಂದು ಎಂಬಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ನ್ಯಾನೋ ಕಥಾಸ್ಪರ್ಧೆ ಹಮ್ಮಿಕೊಂಡಿತ್ತು

ಕಡಿಮೆ ಪದಗಳನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಚಿಕ್ಕದಾಗಿ ಹೇಳಿ ಮುಗಿಸುವ ಚಮತ್ಕಾರಿ ಸಾಹಿತ್ಯ ಪ್ರಕಾರ ಇದಾಗಿದ್ದು, ಐದು ದಿನಗಳಲ್ಲಿ ಸ್ಪರ್ಧೆಗೆ 60 ಕ್ಕೂ ಹೆಚ್ಚು ನ್ಯಾನೋ ಕಥೆಗಳು ಬಂದಿದ್ದವು. ಅವುಗಳಲ್ಲಿ ಮೂರು ಬಹುಮಾನಿತ ಕಥೆಗಳು ಮತ್ತು 7 ಮೆಚ್ಚಿಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ.

ಬಹುಮಾನಿತರು ತಮ್ಮ ಹೆಸರು, ಪೂರ್ತಿ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಈಕೂಡಲೆ avvapustakaalaya@gmail.com ಗೆ ಕಳುಹಿಸಿಕೊಡಿ. ಮತ್ತು ಮೆಚ್ಚುಗೆ ಪಡೆದ ಕಥೆಗಾರರಿಗೆ ಇ-ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು. ಇನ್ನೆರೆಡು-ಮೂರು ದಿನಗಳಲ್ಲಿ ಪ್ರಮಾಣಪತ್ರಗಳನ್ನು ನಮ್ಮ ಅವ್ವ ಪುಸ್ತಕಾಲಯ ಫೇಸ್ಬುಕ್ ಫೇಜಿನಲ್ಲಿ ಮತ್ತು ವಾಟ್ಸಾಪ್ ತಂಡದಲ್ಲಿ ಹಂಚಲಾಗುವುದು. ಸ್ಪರ್ಧಾಳುಗಳು ತಮ್ಮ ತಮ್ಮ ಪ್ರಮಾಣಪತ್ರಗಳನ್ನು ಅಲ್ಲಿಂದಲೇ ಡೌನ್ಲೌಡ್ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮಗೆ ಪ್ರಮಾಣಪತ್ರ ತಲುಪದಿದ್ದಲ್ಲಿ ಅವ್ವ ಪುಸ್ತಕಾಲಯ ಮೇಲ್ ವಿಳಾಸಕ್ಕೆ ಮೇಲ್ ಮಾಡಿ ಪಡೆಯಬಹುದು.


                     ಬಹುಮಾನಿತ ಕಥೆಗಳು :


ಮೆಚ್ಚುಗೆ ಪಡೆದ ಕಥೆಗಳು :

ಸಾಕ್ಷಿ ಶ್ರೀಕಾಂತ - ನಾದ-ನಿನಾದ
ಕೋಮಲ ಎಂ ವಿ - ನಂಬಿಕೆಯ ಬುನಾದಿ
ರಾಜಬಕ್ಷಿ ಕೆ - ರಜೆ-ಸಜೆ
ಸಂತೋಷ್ ಕುಮಾರ್ ಸಿ - ಗರ್ವ
ರಶ್ಮಿ ಶಮಂತ್ - ವಿಚ್ಚೇದನ
ಜಯರಾಮಚಾರಿ - ಪುನರಪಿ ಮರಣಂ
ಲೀಲಾವತಿ ಎಂ ಬಿ - ವಿಮರ್ಶೆ


ಬಹುಮಾನಿತ ಕಥೆಗಳು ಓದಿಗಾಗಿ :

1. ಬೂಟಾಟಿಕೆ
 "ಅವನು ನಿನ್ನ ಗಂಡ ತಾನೆ,ಹೊಡೆದರೆ ಹೊಡೆಸ್ಕೊ,ಬೈದರೆ ಬೈಸ್ಕೊ. ನಾವು ಅನುಭವಿಸದೇ ಇರೋದ" ಗಂಡ ಕೊಡುತ್ತಿದ್ದ ಕಾಟದ ಬಗ್ಗೆ ಅತ್ತೆಯ  ಸಮರ್ಥನೆಯ ಮಾತುಗಳಿವು.ಆದರೆ ಅವರು ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯವನ್ನು ಬಹಳ ಮಾರ್ಮಿಕವಾಗಿ ತನ್ನ ಕಥೆ, ಕಾದಂಬರಿಗಳಲ್ಲಿ ಚಿತ್ರಿಸಿ ಪ್ರಶಸ್ತಿಗಳನ್ನು ಪಡೆದ ಪ್ರಸಿದ್ಧ ಲೇಖಕಿ. 


2. ಮೌನಿ
ನನ್ನ ಗೆಳೆಯ ತನ್ನ ಬರ್ತ್ ಡೇ ಪಾರ್ಟಿಯನ್ನು ಅನಾಥಾಶ್ರಮವೊಂದರಲ್ಲಿ ಆಚರಿಸಿಕೊಳ್ಳುತ್ತಿದ್ದ.ನನಗೆ ಇಷ್ಟವಿಲ್ಲದಿದ್ದರು ಹೋಗಬೇಕಾಗಿ ಬಂತು, ಅವರೆಲ್ಲರ ನಡುವೆ ಮೌನಿಯಾಗಿ ಮೂಲೆಗುಂಪಾಗಿದ್ದೆ.  ನನಗಾಗಿಯೇ ಒಂದು ಪುಟ್ಟ ಹುಡುಗಿ ನನ್ನಂತೆಯೆ ಆ ರೂಮಿನ ಮೂಲೆಯಲ್ಲಿ ಒಂಟಿಯಾಗಿ ಕುಳಿತ್ತಿದ್ದಳು. ಅವಳೊಡನೆ ಕುಳಿತು ಕೇಕ್ ತಿನ್ನುವ ಪ್ಲಾನ್ ಮಾಡಿ ಎರಡು ಪೀಸ್ ಕೇಕನ್ನು ತೆಗೆದುಕೊಂಡು ಹೋಗಿ ಅವಳ ಪಕ್ಕ ಕುಳಿತುಕೊಂಡೆ.
"ಏನ್ ಪುಟ್ಟ ನಿನ್ನ ಹೆಸರು"
"ಸೌಮ್ಯಾ"
"ಹೆಸರಿಗೆ ತಕ್ಕಹಾಗೆ ಸೈಲೆಂಟ್ ಆಗಿ ಕುಳಿತಿದ್ದಿಯಾ" ಎಂದೆ ನನ್ನ ಕಡೆ ನೋಡಿ ನಕ್ಕಳು .
"ತಗೋ ಪುಟ್ಟ ಕೇಕ್ ತಿನ್ನು"
"ಬೇಡಾ ಅಣ್ಣಾ"
"ಯಾಕೆ ಪುಟ್ಟ ಕೇಕ್ ಅಂದ್ರೆ ನಿನಗೆ ಇಷ್ಟ ಇಲ್ವಾ ಅಲ್ನೋಡು ನಿನ್ ಫ್ರೆಂಡ್ಸೆಲ್ಲಾ ತಿಂತಿದ್ದಾರೆ"
"ಇಲ್ಲ ಅಣ್ಣಾ ಅವರಿಗೂ ಕೇಕ್ ಅಂದ್ರೆ ಇಷ್ಟ ಇಲ್ಲ.  ಡೈಲಿ ನಿಮ್ಮ ತರಾನೆ ನಾಲ್ಕೈದು ಜನ ಬರ್ತಾರೆ ಕೇಕ್ ಕಟ್ ಮಾಡ್ತಾರೆ ಹೊರಟು ಹೋಗ್ತಾರೆ. ವಾರ್ಡನ್ ಅಕ್ಕ ಹೇಳಿದ್ದಾಳೆ ಬರೋ ಜನಗಳಿಗೆ ಬೇಜಾರು ಮಾಡಬೇಡಿ, ಅವರ ಬಳಿ ಹಠ ಮಾಡಬೇಡಿ,ನಮ್ಮನ್ನ ಇದ್ದಾರೋ ಇಲ್ವೋ ಅಂತ ವಿಚಾರಿಸಿಕೊಳ್ಳೋಕೆ ಈ ಪ್ರಪಂಚದಲ್ಲಿ ಯಾರು ಇಲ್ಲ. ಅಂತಹುದರಲ್ಲಿ ಅವರಾದ್ರು ಬಂದು ತಮ್ಮ ಬರ್ತ್ ಡೇ ಆಚರಿಸಿಕೊಳ್ತಾರಲ್ಲ. ಅಷ್ಟಕ್ಕೇ ಖುಷಿ ಪಡಿ ಅಂತ ಹೇಳಿದ್ದಾಳೆ". 
ಇಷ್ಟೆಲ್ಲಾ ಕೇಳಿ ಮುಂದೇನು ಮಾತನಾಡಬೇಕೋ ತಿಳಿಯದೆ ಮಂಕಾಗಿ ಕುಳಿತ್ತಿದ್ದೆ. ಪುಟ್ಟ ಹುಡುಗಿಯ ಬಾಯಲ್ಲಿ ಭಾರವಾದ ಮಾತುಗಳು ನನ್ನನ್ನು ಮತ್ತಷ್ಟು ಮೌನಕ್ಕೆ ನೂಕಿತ್ತು.
"ಅಣ್ಣಾ ನೀವು ಬೇಜಾರು ಮಾಡ್ಕೋಬೇಡಿ ನಾನು ಕೇಕ್ ತಿಂತಿನಿ" ಎಂದು ಕೇಕ್ ತೆಗೆದುಕೊಂಡು ಗೆಳತಿಯರ ಗುಂಪಿಗೆ ಓಡಿಹೋದಳು.


3. ಅನುಕರಣೆ
ವಾರದ ಹಿಂದೆ ಮನೆಯ ಹಿರಿಯರನ್ನು ಆಶ್ರಮಕ್ಕೆ ಸೇರಿಸಿ ಬಂದಿದ್ದ ಗಂಡ ಹೆಂಡತಿ ಇಬ್ಬರೂ ಆಶ್ರಮದ ವಿಳಾಸ ಬರೆದು ಇಟ್ಟಿದ್ದ ಪುಸ್ತಕದ ಹುಡುಕಾಟದಲ್ಲಿದ್ದರು. ಆ ವಿಷಯ ತಿಳಿದ 12ನೇ ವಯಸ್ಸಿನ ಅವರ ಮಗ ತಾನು ಜತನವಾಗಿ ಬೀರುವಿನಲ್ಲಿ ತೆಗೆದು ಇರಿಸಿಕೊಂಡಿದ್ದ ಪುಸ್ತಕವನ್ನ ಹೊರಗೆ ತೆಗೆದ. ಅದನ್ನು ನೋಡಿದ ತಂದೆ ಆಶ್ಚರ್ಯದಿಂದ ಯಾಕಪ್ಪಾ ಈ ಪುಸ್ತಕ ಎತ್ತಿಟ್ಟುಕೊಂಡೆ? ಅಂತ ಪ್ರಶ್ನೆ ಮಾಡಿದರು. ಅವರ ಮುಖ ನೋಡಿದ ಮಗ, ಮುಂದೆ ನಿಮಗೆ ವಯಸ್ಸಾದಾಗ ನಾನು ನಿಮ್ಮನ್ನ ಆಶ್ರಮಕ್ಕೆ ಸೇರಿಸಲು ವಿಳಾಸ ಬೇಕಾಗುತ್ತಲ್ಲಪ್ಪ, ನೀವು ಹೆತ್ತವರನ್ನು ಸೇರಿಸಿದ್ದೀರ ಅಂದರೆ ಅದು ಒಳ್ಳೆಯ ಆಶ್ರಮವೇ ಆಗಿರಬೇಕು. ಈ ಪುಸ್ತಕ ಇದ್ದರೆ ನಾನು ಮುಂದೆ ಒಳ್ಳೆಯ ಆಶ್ರಮವನ್ನು ಹುಡುಕುವ ಕಷ್ಟ ತಪ್ಪುತ್ತದಲ್ಲ ಅದಕ್ಕೆ ಭವಿಷ್ಯದ ಸಹಾಯಕ್ಕೆ ಬೇಕು ಅಂತ ಎತ್ತಿಟ್ಟೆ ಅಂದ. ಹೆತ್ತವರ ಮಾತು ಮೌನವಾಗಿತ್ತು. ಅವರ ಕಾರ್ಯ ಮಾತ್ರ ಅನುಕರಣೆಗೆ ಸಿದ್ಧವಾಗಿತ್ತು. 


ಎಲ್ಲರಿಗೂ ಅಭಿನಂದನೆಗಳು. ತಮ್ಮ ಸಾಹಿತ್ಯ ಸೇವೆ ಕನ್ನಡವನ್ನು ಬೆಳಗಲಿ. ಇನ್ನಷ್ಟು ಸಾಹಿತ್ಯ ಕಾರ್ಯಕ್ರಮ ಮತ್ತು ಸ್ಪರ್ಧೆಗಳಿಗಾಗಿ ನಮ್ಮ ತಂಡವನ್ನು ಹಿಂಬಾಲಿಸಿ..


ಯೂಟ್ಯೂಬ್ : https://youtube.com/channel/UCEvSlHKHjYmcVln8QN-MEpw

ಬ್ಲಾಗ್ : avvapustakaalaya.blogspot.com

ಟೆಲಿಗ್ರಾಮ್ : https://t.me/kannadanalikali

ಪ್ರತಿಲಿಪಿ : https://pratilipi.page.link/YHYHtdYJ2UmCuyuq9

ಕ್ಲಬ್ ಹೌಸ್ : https://bit.ly/3wEPkMx

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...