ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ - ಲೇಖನ - ಶ್ರೀನಾಥ್ ವಿ ಸಿ

ಪಟ್ಟುಹಿಡಿದು ಓದಿಸಿಕೊಳ್ಳುವ ರೋಚಕ ಕಾದಂಬರಿ ರೌದ್ರಾವರಣಂ ಆಪ್ತ ಗೆಳೆಯ ಅನಂತನ ಮೊದಲ ಕಾದಂಬರಿ “ರೌದ್ರವರಣಂ” ಕೃತಿಯು ಬಹಳ ಬೇಗ ಓದಿಸಿಕೊಳ್ಳುತ್ತದೆ. ಏಕೆಂದರೆ ಪ್ರತೀ ಅಧ್ಯಾಯಗಳಲ್ಲಿಯೂ  ಕುತೂಹಲ ಮತ್ತು ರೋಚಕಭರಿತ ಪ್ರೇರಣೆಗಳು ಭರ್ಜರಿಯಾಗಿ ಇರುವುದರಿಂದ. ಸುನೀತವಾದ ಸ್ವಚ್ಛ, ಹಳ್ಳಿ ಸೊಗಡಿನ ಭಾಷೆ ಸುಲಲಿತವಾಗಿ ಆಸ್ವಾದಿಸಲಿಕ್ಕೆ ಸಹಾಯ ಮಾಡುತ್ತದೆ. ರೌದ್ರದ ಆವರಣ ಎಲ್ಲ ಪಾತ್ರಗಳಲ್ಲಿಯೂ ಬಹಳ ಆಚ್ಚುಕಟ್ಟಾಗಿ ಆಗಿದೆ. ಕೆಲವೊಮ್ಮೆ,  ಕೌತುಕದ  ಪತ್ತೇದಾರಿಯಲ್ಲಿ ಸಾಗುತ್ತಿರುವಂತೆ ಅನಿಸುತ್ತದೆ. ಅದನ್ನ ಪೋಷಿಸುವಂತೆ ತಕ್ಕ  ಪ್ರೆಶ್ನೆಗಳು, ಗೊಂದಲಗಳು, ವಿಭಿನ್ನವಾದ ತಿರುವುಗಳು ಕೂಡ ಅಡಗಿವೆ. ಚಂದ್ರ(ನಾಯಿ)ನೆಂಬ ಭಾವ ಜೀವಿಯ ಸುತ್ತ ಭಾವನೆಗಳನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಬಲ್ಲ ಮನುಜ ಪಾತ್ರಗಳ ಚಿತ್ರಣ ಸಹಜವಾಗಿವೆ. ಸಹಜವಾಗಿ ಮನುಷ್ಯರನ್ನು ಆಕ್ರಮಿಸುವ ಅರಿಷಡ್ವರ್ಗಗಳು ಪಾತ್ರಗಳಲ್ಲಿ ನೈಜವಾಗಿ  ತುಂಬಿದ್ದಾರೆ  ಕಾದಂಬರಿಕಾರರು. ಅವಾಸ್ತವಿಕತೆಯನ್ನೇ ಹೆಚ್ಚು ನೆಚ್ಚಿಕೊಂಡಿರುವ ಮತ್ತು ಒಪ್ಪಿಕೊಂಡಿರುವ ಈ ಸಮಾಜದಲ್ಲಿ ವಾಸ್ತವ ಜೀವನವನ್ನು ಬಿಚ್ಚಿಡಲು ಹೆಚ್ಚಿಗೆ ಯಾರೂ ಇಷ್ಟಪಡುವುದಿಲ್ಲ. ಅವರವರ ಹವ್ಯಾಸ, ಯೋಚನೆಗಳು, ವ್ಯಕ್ತಿತ್ವಗಳದೂ ಅದೇ ಕಥೆ. ಇರುವುದೊಂದು, ಮಾಡುವುದೊಂದು, ಹೇಳುವುದೊಂದು, ತೋರ್ಪಡಿಸಿಕೊಳ್ಳುವುದು ಮತ್ತೊಂದು. ಬಾಬಣ್ಣನ  ಹೊಟ್ಟೆಪಾಡಿಗೊಂದು ಕೆಲಸ (...

ನ್ಯಾನೋ ಕಥಾಸ್ಪರ್ಧೆ ಫಲಿತಾಂಶ - ಮೇ-2022 - ಅವ್ವ ಪುಸ್ತಕಾಲಯ

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು ಸಾಹಿತ್ಯಾಸಕ್ತರ ಬೇಸರ ಕಳೆಯಲು, ಅವರನ್ನು ಸದಾ ಸೃಜನಶೀಲ ಹಾಗೂ ಕ್ರಿಯಾಶೀಲರಾಗಿರುವಂತೆ ಕಾಪಾಡಿಕೊಳ್ಳಲು ಒಂದರ ಹಿಂದೆ ಮತ್ತೊಂದು ಎಂಬಂತೆ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಈ ಬಾರಿ ನ್ಯಾನೋ ಕಥಾಸ್ಪರ್ಧೆ ಹಮ್ಮಿಕೊಂಡಿತ್ತು ಕಡಿಮೆ ಪದಗಳನ್ನು ಬಳಸಿಕೊಂಡು ಹೇಳಬೇಕಾದ್ದನ್ನು ಚಿಕ್ಕದಾಗಿ ಹೇಳಿ ಮುಗಿಸುವ ಚಮತ್ಕಾರಿ ಸಾಹಿತ್ಯ ಪ್ರಕಾರ ಇದಾಗಿದ್ದು, ಐದು ದಿನಗಳಲ್ಲಿ ಸ್ಪರ್ಧೆಗೆ 60 ಕ್ಕೂ ಹೆಚ್ಚು ನ್ಯಾನೋ ಕಥೆಗಳು ಬಂದಿದ್ದವು. ಅವುಗಳಲ್ಲಿ ಮೂರು ಬಹುಮಾನಿತ ಕಥೆಗಳು ಮತ್ತು 7 ಮೆಚ್ಚಿಗೆ ಪಡೆದ ಕಥೆಗಳನ್ನಾಗಿ ಆರಿಸಲಾಗಿದೆ. ಬಹುಮಾನಿತರು ತಮ್ಮ ಹೆಸರು, ಪೂರ್ತಿ ಅಂಚೆ ವಿಳಾಸ ಮತ್ತು ಮೊಬೈಲ್ ನಂಬರನ್ನು ಈಕೂಡಲೆ  avvapustakaalaya@gmail.com ಗೆ ಕಳುಹಿಸಿಕೊಡಿ. ಮತ್ತು ಮೆಚ್ಚುಗೆ ಪಡೆದ ಕಥೆಗಾರರಿಗೆ ಇ-ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು. ಇನ್ನೆರೆಡು-ಮೂರು ದಿನಗಳಲ್ಲಿ ಪ್ರಮಾಣಪತ್ರಗಳನ್ನು ನಮ್ಮ ಅವ್ವ ಪುಸ್ತಕಾಲಯ ಫೇಸ್ಬುಕ್ ಫೇಜಿನಲ್ಲಿ ಮತ್ತು ವಾಟ್ಸಾಪ್ ತಂಡದಲ್ಲಿ ಹಂಚಲಾಗುವುದು. ಸ್ಪರ್ಧಾಳುಗಳು ತಮ್ಮ ತಮ್ಮ ಪ್ರಮಾಣಪತ್ರಗಳನ್ನು ಅಲ್ಲಿಂದಲೇ ಡೌನ್ಲೌಡ್ ಮಾಡಿಕೊಳ್ಳಬಹುದು. ಈ ವಾರದಲ್ಲಿ ನಿಮಗೆ ಪ್ರಮಾಣಪತ್ರ ತಲುಪದಿದ್ದಲ್ಲಿ ಅವ್ವ ಪುಸ್ತಕಾಲಯ ಮೇಲ್ ವಿಳಾಸಕ್ಕೆ ಮೇಲ್ ಮಾಡಿ ಪಡೆಯಬಹುದು.                  ...

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...

ನಿಮ್ಮಲ್ಲಿ ನಾನೂ ಒಬ್ಬಳು - ಲೇಖನ - ಪ್ರಿಯಾ ಡಿ

ನಿಮ್ಮಲ್ಲಿ ನಾನೂ ಒಬ್ಬಳು ಆಸ್ಪತ್ರೆಯಲ್ಲಿ ಪುಟ್ಟ  ಮಗುವಿನ ಚೀರಾಟವನ್ನು ಸುಮಾರು ಒಂದು ಗಂಟೆ ಕೇಳಿದ ಮನಸ್ಸು ಮಗುವನ್ನು ಹುಡುಕುತ್ತ ಹೊರಟಿತು. ಒಂದು ಬೆಡ್ ನ ಮೇಲೆ ದಾದಿಯ ಮಡಿಲಲ್ಲಿ ಹಾಲಿನ ಬಾಟಲಿಯನ್ನು ಬಾಯಿಯಲ್ಲಿ ಹಿಡಿದು ಒಂದೇ ಸಮನೆ ಅಳುತ್ತಿತ್ತು.ಹತ್ತಿರಕ್ಕೆ ಹೋದಂತೆಲ್ಲ ಅಯ್ಯೋ ಪಾಪ ಎಂಬ ಮಾತುಗಳು...!!! ಸಮೀಪಿಸಿದೆ.‌...., ಮುದ್ದು ಮುಖದ ಒಂದು ದಿನದ ಹೆಣ್ಣು ಮಗು....!! ನೋಡಿದ ತಕ್ಷಣವೇ ಮುದ್ದಾಡುವ ಅಂದ..!! ಮಗುವಿನ ಅಮ್ಮ ....? ಅಂದೆ ದಾದಿ ಮೌನವಾಗಿಯೇ ಇದ್ದರು..!! ಅಕ್ಕ-ಪಕ್ಕದವರು ಕಥೆ ಹೇಳ ತೊಡಗಿದರು...!! ನಿನ್ನೆ ಇಷ್ಟೊತ್ತಿಗಿನ್ನೂ ಇಲ್ಲೆ ಮಲಗಿದಳು, ಮಗುವಿಗೆ ಹಾಲು ಕುಡಿಸುತ್ತ ಇದ್ದಳು, ಇದು ಹೆಣ್ಣು ಮಗು ಅಂತ ಕೇಳಿದ ಕೂಡಲೇ ಉಸಿರು ಮೇಲೆ ಏಳೆಯೋಕೆ ಶುರುಮಡಿದಳು‌.‌.....!!! ಕೂಡಲೇ  ಆಂಬ್ಯುಲೆನ್ಸ್ ನಲ್ಲಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದರು.ದಾರಿ ಮಧ್ಯೆಯೇ ತೀರಿಕೊಂಡಳಂತೆ. ಆಕೆಗೆ ಮೂರು ಹೆಣ್ಣು ಮಕ್ಕಳು ಈ ಮಗುವೂ ಸೇರಿ ,ಆಕೆಯ ಗಂಡ ಈ ಬಾರಿ ಹೆಣ್ಣು ಮಗುವಾದರೆ ಮನೆಗೆ ಬರಬೇಡ ಅಂದಿದನಂತೆ.....!!! ಮನಸು ಏನು ತಿಳಿದುಕೊಳ್ಳತ್ತ ಪಾಪ ಉಸಿರೇ ಬಿಟ್ಟಳು....!!!! ಕಣ್ಣ ಹನಿಗಳು ಈ ಮಗುವಿಗೆ ಆಸರೆ...??? ಏನಲೂ  ದಾದಿ ಸದ್ಯಕ್ಕೆ ನಾವೇ..!!. ಅವರು ಈ ಮಗುವನ್ನು ಬೇಡ ಎಂದು ಇಲ್ಲೇ ಬಿಟ್ಟು ಹೋಗಿದ್ದಾರೆ...!!!.ಎಷ್ಟೊಂದು ಜನ ಮಕ್ಕಳ ಆಸೆಯಿಂದ ಇದ್ದರೆ ,ಅವರ ಮಡಿಲನ್ನು ಈ ...