ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬದುಕು ಮಾಯೆಯ ಆಟ - ಲೇಖನ - ಪುನೀತ್ ಕುಮಾರ್

ಬದುಕು ಮಾಯೆಯ ಆಟ ಅಂದು ಸೋಮವಾರ. ಹಿರಿಮಗನ ಲಗ್ನ ನಿಶ್ಚಯದ ಮಾತುಕತೆಯ ಸಂಭ್ರಮ ಮನೆಯಲ್ಲಿ. ಬಂಧು ಬಾಂಧವರು ಸೇರಿದ್ದಾರೆ. ಹೆಣ್ಣಿನ ಕಡೆಯವರು ಬಂದಿದ್ದಾರೆ. ಮಾತುಕತೆ ನಡೆದು ಎಲ್ಲರೂ ಒಪ್ಪಿ ಮದುವೆ ನಿಶ್ಚಯವಾಗಿ ಲಗ್ನ ಪತ್ರಿಕೆಯೂ ಬರೆಸಿಬಿಡುತ್ತಾರೆ. ಮನೆಯಲ್ಲಿ ಖುಷಿಯ ವಾತಾವರಣದ ಅನುರಣನ. ಇದಾದ ಸರಿಯಾಗಿ ಒಂದುವಾರಕ್ಕೆ (ಅಂದೂ ಸೋಮವಾರ) ಕಿರಿಮಗ ಇದ್ದಕ್ಕಿದ್ದಂತೆ ಹುಷಾರು ತಪ್ಪುತ್ತಾನೆ. ಹಿರಿಮಗ ಮನೆಯಲ್ಲಿರುವುದಿಲ್ಲ, ಪ್ರವಾಸಕ್ಕೆ ಹೋಗಿದ್ದಾನೆ . ಮನೆಯಲ್ಲಿದ್ದ ತಂದೆ ತಾಯಿ ಮಾಮುಲಿ ಜ್ವರ ಇರಬೇಕೆಂದು ಮೊದಲಿಗೆ ಮಗನೆಡೆಗೆ ಅಷ್ಟು ಗಮನ ಹರಿಸುವುದಿಲ್ಲ. ಎರಡು ದಿನಗಳ ಬಳಿಕ ಮಗನಿಗೆ ವಾಂತಿಯಾದಾಗ ತಂದೆ ತಾಯಿಗೆ ಗಾಬರಿಯಾಗುತ್ತದೆ. ತತ್‍ಕ್ಷಣ ತಂದೆ ಡಾಕ್ಟರನ್ನು ಕರೆತರುತ್ತಾರೆ. ಅವರು ಔಷಧಿ ಕೊಟ್ಟು ಹೋಗುತ್ತಾರೆ. ಆದರೆ ವಾಂತಿ ನಿಲ್ಲುವುದಿಲ್ಲ. ತಂದೆ-ತಾಯಿಗೆ ಗಾಬರಿ. ಸಾಮಾನ್ಯವಾಗಿ, ಜ್ವರ ಬಂದಾಗಲೆಲ್ಲ ಹುಡುಗನ್ನ ಪರೀಕ್ಷಿಸುತ್ತಿದ್ದ ಪರಿಚಯದ ಡಾಕ್ಟರು ಸಹ ಆಗ ಊರಲ್ಲಿರುವುದಿಲ್ಲ. ಬಹುಶಃ ಈ ಡಾಕ್ಟರ್ ಕೊಟ್ಟ ಔಷಧಿ ಒಗ್ಗಲಿಲ್ಲ ಅನಿಸತ್ತೆ. ಪರಿಚಯದ ಡಾಕ್ಟರು ಬಂದ ಮೇಲೆ ತೋರಿ ಇನ್ನೊಮ್ಮೆ ಔಷಧಿ ಪಡೆದರಾಯಿತು ಅಷ್ಟರಲ್ಲಿ ಜ್ವರ ಕಡಿಮೆಯಾಗಬಹುದು ಎಂದು ತಂದೆ-ಮಗ ವಿಚಾರ ಮಾಡಿ, ತೀರ್ಮಾನಕ್ಕೆ ಬಂದು ಸುಮ್ಮನಾಗುತ್ತಾರೆ. ಪರಿಚಯದ ಡಾಕ್ಟರ್ ಬಂದ ಮೇಲೆ ಅವರ ಬಳಿ ಪರೀಕ್ಷಿಸಿಕೊಳ್ಳಲು ಹೋಗುತ್ತಾರೆ. ಡಾಕ್ಟರ್ ಪರೀಕ್ಷಿಸಿ...

ಅನಂತ ಕುಣಿಗಲ್ - Anantha Kunigal - writer

ಯವ ಸಾಹಿತಿ ಅನಂತ ಕುಣಿಗಲ್ ಅವರು ಈಗಾಗಲೇ ಋಣಭಾರ ಕಥಾಸಂಕಲನ ಹಾಗೂ ಮೂರನೆಯವಳು ಕವನಸಂಕಲನ ಪ್ರಕಾರಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ದೃಢವಾದ ಹೆಜ್ಜೆಗಳ ಮೂಲಕ ಪರಿಚಯವಾಗಿದ್ದಾರೆ. ಇದೀಗ ರೌದ್ರಾವರಣಂ ಮೂಲಕ ಕಾದಂಬರಿ ಪ್ರಕಾರದಲ್ಲೂ ಗೆಲವು ಸಾಧಿಸಿದ್ದಾರೆ. ಬಿಡುಗಡೆಗೂ ಮುಂಚೆಯೇ ಅಪಾರ ಮೆಚ್ಚುಗೆಗೆ ಒಳಗಾಗಿದ್ದು, ಮೊದಲ ಮುದ್ರಣದ ಪ್ರತಿಗಳು ಭರ್ಜರಿ ಮಾರಾಟ ಕಾಣುತ್ತಿವೆ. ಹಲವಾರು ದಿನ ಪತ್ರಿಕೆ ಮತ್ತು ವೆಬ್ ಪತ್ರಿಕೆಗಳಲ್ಲಿ ಇವರ ಲೇಖನ ಮತ್ತು ಕವಿತೆಗಳು ಪ್ರಕಟವಾಗಿವೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸದಾ ಕ್ರಿಯಾಶೀಲರಾಗಿರುವ ಇವರು ಯುವ ಪೀಳಿಗೆಯ ಭರವಸೆಯ ಬರಹಗಾರನಾಗಿ ಛಾಪು ಮೂಡಿಸಿರುತ್ತಾರೆ. ಯುವ ಸಾಹಿತಿ, ರಂಗ ಕಲಾವಿದ ಮತ್ತು ಸಹಾಯಕ ನಿರ್ದೇಶಕನಾಗಿ ಹತ್ತು ಹಲವು ಕೆಲಸಗಳಲ್ಲಿ ತೊಡಗಿಕೊಂಡಿರುವ ಇವರ ಬಗ್ಗೆ ಹಾಗೂ ಇವರ ಕೃತಿಗಳ ಬಗ್ಗೆ ಪರಿಚಯ ಈ ಕೆಳಗಿನಂತಿವೆ. ಅನಂತ ಅವರ ಪರಿಚಯ : ಅನಂತ ಕುಣಿಗಲ್ ಅವ್ವ ಪುಸ್ತಕಾಲಯದ ಪರಿಚಯ : ಅವ್ವ ಪುಸ್ತಕಾಲಯ ಅನಂತ ಅವರ ಕಿರುಚಿತ್ರಗಳು : ಯೂಟ್ಯೂಬ್ ಚಾನೆಲ್ ಅನಂತ ಅವರ ಬರಹಗಳು : 1.  ಪ್ರತಿಲಿಪಿಯಲ್ಲಿ ಅನಂತ ಅವರ ಬರಹಗಳು 2.  ಅನಂತ ಅವರ ಕವಿತೆಗಳು ಋಣಭಾರ ಪುಸ್ತಕ ಪರಿಚಯ : ಋಣಭಾರ ಮೂರನೆಯವಳು ಪುಸ್ತಕ ಪರಿಚಯ : ಮೂರನೆಯವಳು ರೌದ್ರಾವರಣಂ ಪುಸ್ತಕ ಕುರಿತು : 1.  ಗೂಗಲ್; ವಿವಿಧ ವೆಬ್ ಗಳು 2.  ದಿನ ಪತ್...

ದಾದಾಪೀರ್ ಜೈಮನ್ ಹೊಸ ಕವಿತೆ - ಯುಗಾದಿ ವಿಶೇಷ 2022

ಆದಿ ಆಶಯ ಪದ್ಯ  ನಿಂತಿರುವೆ ನೆಲಕಂಟಿ ಮೋಹಗೊಂಡು ಬದುಕಿಯೇ ತೀರುವ ಹಸಿವನುಂಡು ಸ್ವೀಕರಿಸು ವಿಶ್ವವೇ ಈ ಕೃತಜ್ಞತೆಗಳನು ಈ ಭೂಮಿ ಈ ಬಾನು ಬದುಕಿಸುವ ತಂಗಾಳಿ ಈ ಬೆಳಕು ಸಿಹಿನೀರು ಹಸಿರಿಗಾಗಿ ಹಕ್ಕಿಗಳ ಎದೆಗೊರಳ ಹಾಡಿಗಾಗಿ ಒಡಹುಟ್ಟಿದವರ ಅಕ್ಕರೆಯ ಮಮತೆಗಾಗಿ  ಸ್ವೀಕರಿಸು ವಿಶ್ವವೇ ಪ್ರಾರ್ಥನೆಯ ಸೊಲ್ಲಹನಿ ಈಡೇರು ತಪ್ಪದೆ ಬೇಡಿದ ಹಾಗೆಲ್ಲ  ನನ್ನೂರ ಮಕ್ಕಳಿಗೆ ಶಾಲೆ ಸಿಗಲಿ ಹೃದಯದ ಧರ್ಮವದು ನೆತ್ತಿಗೇರದಿರಲಿ ಮಧ್ಯಾಹ್ನದ ಹೊತ್ತಿಗೆ ಅನ್ನದ ಬುತ್ತಿಯನವರು ಹಂಚಿಕೊಳ್ಳುತ್ತಿರಲಿ ಪ್ರೀತಿಯ ಸಂಕೇತವದು ರಕ್ತವರ್ಣವೇ ಇರಲಿ ಕರುಳಿನ ಕೂಗು ಸದಾ ಕೇಳುತಿರಲಿ ಹನಿಗಣ್ಣ ಭಾಷೆ ಗಡಿ ದಾಟುತಿರಲಿ ದುಡಿವ ಕೈಗಳಿಗೆ ಸಂಜೆ ಕಾಸಾಗಲಿ ತಿನ್ನುವ ಅನ್ನಕ್ಕೆ ಕುತ್ತು ಬಾರದಿರಲಿ ಓ ಎನ್ನ ವಿಶ್ವವೇ ಒಳಗಿರುವ ಶಕ್ತಿಯೇ ರಾತ್ರಿಗೊಂಚೂರು ಕಣ್ಣಿಗೆ ನಿದ್ದೆ ನೀಡು ಸಾಧ್ಯವಾದರೆ ಕನಸ ಲಾಲಿ ಹಾಡು ದಾಟಿಸು ಊರು ದೇಶ ಕಾಲಗಳನು  ಸೃಷ್ಟಿಸು ಯುಗಗಳನು ಮತ್ತೆ ಮತ್ತೆ ಹುಟ್ಟಿಸು ಬೆಳಗುಗಳ ಸಾಲು ಸಾಲು ಮರೆಯದಿರು ಮೋಹದ ನನ್ನ ನೆನಪಲಿರಿಸು ಹೆಜ್ಜೆ ಹೆಜ್ಜೆಗಳ ಆದಿ ಸುಲಭಗೊಳಿಸು ಹೇ ದಿವ್ಯ ಶಕ್ತಿಯೇ  ನಿನ್ನ ನೆನಪನುಳಿಸು                       ~ ದಾದಾಪೀರ್ ಜೈಮನ್