" ಗುರುತಿರದ ಸುಳಿಯಲ್ಲಿ ಪ್ರೇಮವನ್ನು ಧ್ಯಾನಿಸುವ ಕವಿತೆಗಳು " ನನ್ನಮ್ಮನೇ ಆಗಿಹೋಗಿರುವ ಮಧುರಾಣಿ ಎಚ್ ಎಸ್ ಅವರ ಎರಡನೇ ಕವನ ಸಂಕಲನ ' ನೀಲಿ ಚುಕ್ಕಿಯ ನೆರಳು '. ಈ ಕೃತಿಯು ಆಯ್ದ ನಲವತ್ತು ಪದ್ಯಗಳ ಗುಚ್ಚ. ಇಲ್ಲಿನ ಹೆಚ್ಚು ಕವಿತೆಗಳು ಸ್ತ್ರೀಯ ಒಳಧ್ವನಿಯಿಂದ ರಚನವಾಗಿವೆ. ಕೃತಿಗೆ ' ಈ ಹೊತ್ತಿಗೆ ಮೊದಲ ಕಾವ್ಯ ಪ್ರಶಸ್ತಿ ' ಸಿಕ್ಕಿರುವುದು ಮತ್ತೊಂದು ಶ್ಲಾಘನೀಯ ಸಂಗತಿ. ಸ್ತ್ರೀಸಂವೇದನೆಗಳನ್ನೊಳಗೊಂಡ ಕವಿತೆಗಳನ್ನು ನಾವು ಹಿಂದಿನಿಂದಲೂ ಓದುತ್ತಾ ಬಂದಿದ್ದೇವೆ. ಅಂತಹದೇ ಒಂದು ವಿಭಿನ್ನ ಪ್ರಯತ್ನ ಈ 'ನೀಲಿ ಚುಕ್ಕಿಯ ನೆರಳು'. ಪ್ರತೀ ಪದ್ಯಗಳು ವೈವಿಧ್ಯಮಯ ದೃಷ್ಟಿಕೋನದಿಂದ ಕೂಡಿದ್ದು, ಅವುಗಳ ಆಳದೊಳಗೆ ಬಿದ್ದವರು ಮೇಲೇಳುವುದು ಕೊಂಚ ಕಷ್ಟವೇ! ರಚ್ಚೆ ಹಿಡಿಸುವಷ್ಟು ಚಮತ್ಕಾರಿಕೆ ಇಲ್ಲಿನ ಸಾಲುಗಳಲ್ಲಿ ಅಡಕವಾಗಿವೆ. ಮತ್ತು ಅಷ್ಟೇ ಆರ್ದ್ರತೆಯಿಂದ ಕೂಡಿವೆ. " ಕತ್ತಿಗಳು ಮೊಂಡುಬಿದ್ದು ನೆಲಕಚ್ಛಿದ ಇತಿಹಾಸವಿದೆ ಹೂವುಗಳು ಅನವರತ ಹುಟ್ಟುತ್ತಲೇ ಇವೆ " ಪ್ರಸ್ತುತ ಧೃತಿಕೆಟ್ಟ ಸಮಾಜಕ್ಕೆ ಇಂಥಾ ಧೈರ್ಯ ತುಂಬುವ ಸಾಲುಗಳು ಅತ್ಯಗತ್ಯ. ಶತಮಾನಗಳಿಂದ ಯುದ್ಧಗಳು ನಡೆದು, ರಕ್ತದ ಹೊಳೆ ಹರಿದ ಕುರುಹುಗಳು ಮಾಸಿದರೂ.. ಹೂವುಗಳು ಅರಳುವುದನ್ನು ನಿಲ್ಲಿಸಿಲ್ಲ. ಯುದ್ಧ ಏರ್ಪಡಲು ವೈಷಮ್ಯ ಬೇಕು. ಹೂವು ಅರಳಲು ಸೂರ್ಯನ ಕಿರಣಗಳ ಸ್ಪರ್ಶಪ್ರೀತಿ ಸಾಕು. ಬೆಳ...
"ಓದುಗರಲ್ಲಿ ಸಾಹಿತ್ಯಾಭಿರುಚಿ ಹೆಚ್ಚಿಸಲು ರೂಪುಗೊಂಡ ಡಿಜಿಟಲ್ ಲೈಬ್ರರಿ"