ವಿಷಯಕ್ಕೆ ಹೋಗಿ

ನಾನು ನೋಡಿದ ಪರ್ವ - ಲೇಖನ - ಅನಂತ ಕುಣಿಗಲ್


ನಾನು ನೋಡಿದ ಪರ್ವ

" ಕತ್ತಲೆಯನ್ನು ಬೆಳಕು ಹಾಗೂ
ಬೆಳಕನ್ನು ಕತ್ತಲೆಯು ನುಂಗಿ,
ಜಗತ್ತನ್ನು ಪಾಪಕೃತ್ಯಗಳಿಂದ ತೊಳೆದು,
ಹೊಸ ಹೊಳಪನ್ನು ಕೊಟ್ಟ..
ದೀರ್ಘಾಯುಷ್ಯ ಅನುಭವ! "

     ವಿಸ್ಮಯಕಾರಿ ಸರಳ ರಂಗಸಜ್ಜಿಕೆ. ಬೆಳಕು ಅಲ್ಲಲ್ಲಿ ಸೋರುತ್ತಿತ್ತು. ಸಂಗೀತ ಮನಕ್ಕೆ ಅಣು ದೂರದಲ್ಲಿತ್ತು. ವಸ್ತ್ರ ವಿನ್ಯಾಸ ಕಣ್ಣಿಗೆ ಕಪ್ಪಾಗಿಯೇ ಇತ್ತು.
ಹದಿನೆಂಟರಿಂದ ಅರವತೈದು ವರ್ಷಗಳವರೆಗಿನ ರಂಗ ಕಲಾವಿದರ ಅದಮ್ಯ ಚೈತನ್ಯವನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಸವಿಯುವುದೆಂದರೆ..  ನಮ್ಮಂಥ ಕಲಾವಿದರಿಗೆ ಅದಕ್ಕಿಂತ ಖುಷಿಯೆಂಬುದು, ಅದ್ಭುತವೆನಿಸಬಹುದಾದದ್ದು ಮತ್ತೇನಾದರೂ ಇದೆ ಎಂದರೆ ಅದು ನಿಜಕ್ಕೂ ನಮ್ಮ ಹೊಗಳಿಕೆಯ ಭಂಡತನ! 

"ನಿಜ ಹೇಳೋದ್ರಿಂದ ಏನ್ ಸಿಗುತ್ತೆ?
ಭ್ರಮೆ ಕಳೆಯುತ್ತೆ." ಇಂಥಾ ಸರ್ವಕಾಲಿಕ ಸತ್ಯಗಳನ್ನು ಸಾರುವ ಗಾಂಧಾರಿಯ ಮಾತುಗಳಿಂದ ಶುರುವಾಗಿ, "ಪ್ರತಿಜ್ಞೆಗೆ ಕಾಲದ ಮಿತಿ ಹಾಕದಿರುವುದು ಕೂಡ ಒಂದು ಅದೃಷ್ಟ" ಎಂಬ ಮಾಯಾವಿ ಕೃಷ್ಣನ ಮಾತಿನವರೆಗೂ ಕೂತವರನ್ನು ಎದ್ದೇದಂತೆ ತಡೆದು, ಪ್ರೇಕ್ಷಕರನ್ನು ಪರ್ವದ ಒಂದೊಂದು ಗೌಣ ಪಾತ್ರಗಳನ್ನಾಗಿಸಿಕೊಂಡು, ಅಳಿಸಿ, ನಗಿಸಿ, ಕೆಲವು ತಾತ್ವಿಕತೆಯ ಮಹತ್ವ ಸಾರುವ ಮಹಾರಂಗಪ್ರಯೋಗ "ಪರ್ವ". ಕನ್ನಡ ಸಾಹಿತ್ಯದಲ್ಲಿ ಎಸ್. ಎಲ್ ಭೈರಪ್ಪನವರದು ದೊಡ್ಡ ಹೆಸರು. ಆ ದೊಡ್ಡ ಹೆಸರಿನಿಂದ ರಚಿತವಾದ ಮೇರು ಕೃತಿ ಪರ್ವ. ಆ ಬೃಹತ್ ಕೃತಿಯನ್ನು ಸುಲಭವಾಗಿ ಓದಿ ಅರ್ಥೈಸಿಕೊಳ್ಳುವುದೇ ಕಷ್ಟವಾಗಿರುವಾಗ ಅದನ್ನು ರಂಗಪಠ್ಯ ಮಾಡಿ, ಪರ್ವದ ಪ್ರತಿಯೊಂದು ಪಾತ್ರಗಳನ್ನು ಪ್ರೇಕ್ಷಕರ ಮನದಲ್ಲಿ ತುಂಬುವುದೆಂದರೆ ಅದೊಂದು ದೊಡ್ಡ ಸವಾಲೇ ಸರಿ. ಆ ಸವಾಲನ್ನು ಬಹಳ ಎಚ್ಚರಿಕೆಯಿಂದ ಸ್ವೀಕರಿಸಿ, ತಮ್ಮ ಅಧ್ಭುತ ರಂಗತಂತ್ರಗಳ ಮೂಲಕ ಸಮರ್ಥವಾಗಿ ರಂಗಪ್ರಯೋಗ ಮಾಡಿ ಸೈ ಎನಿಸಿಕೊಂಡವರು ಕನ್ನಡದ ನಟೋರಿಯಸ್ ನಟ ಹಾಗೂ ನಿರ್ದೇಶಕ ಪ್ರಕಾಶ್ ಬೆಳವಾಡಿ. ಇವರ ಸಾಹಸಕ್ಕೆ ಮುಂದಾಗಿ ಬಂದು ಹೆಗಲು ಕೊಟ್ಟವರೇ ಮೈಸೂರಿನ ರಂಗಾಯಣದ ಕಲಾ ಬಳಗದವರು. ಹೊರಗೆ ಹೆಜ್ಜೆ ಹಿಡದೆ ಭಯದ ಜ್ವರ ಬಂದು ಮನೆಯೊಳಗೆ ಮತ್ತು ಆಫೀಸಿನೊಳಗೆ ಕೂತ ಕಲಾ ರಸಿಕರಲ್ಲಿ ಆತ್ಮವಿಶ್ವಾಸ ಮೂಡಿಸಿ, ಅವರನ್ನು ಕರೆತಂದು ರಂಗಮಂಟಪದಲ್ಲಿ ಕೂರಿಸಿದ ಆ ನಟ-ನಟಿಯರಿಗೆ ನನ್ನ ಶಹಬ್ಬಾಶ್ ಗಿರಿಯಿದೆ. ಒಬ್ಬೊಬ್ಬ ಕಲಾವಿದ ನಾಲ್ಕೈದು ಪಾತ್ರಗಳನ್ನು ನಿಭಾಯಿಸಿದರೂ ಎಲ್ಲೂ ಎಳ್ಳಷ್ಟೂ ಸೋಲದೆ ಪಾತ್ರಗಳಿಗೆ ಶಾಶ್ವತ ಜೀವ ತುಂಬಿದ್ದರು. ಸಾಯೋದ್ರೊಳಗೆ ಜೋಗದ ಗುಂಡಿ ನೋಡಬೇಕೆನ್ನುವವರಿಗೆ.. ಒಮ್ಮೆ ಪರ್ವವನ್ನೂ ನೋಡಿಬಿಡಿ ಎಂಬುದು ನನ್ನ ಆಪ್ತ ಸಲಹೆ. 

     "ಗಂಡಿನ ಕಣ್ಣಲ್ಲಿ ಒಂದು ಹನಿ ಬಂದರೂ ಅದು ಗಂಗಾ ನದಿಗೆ ಸಮ", "ಪುಕ್ಕಲು ಯಾವಾಗಲೂ ಧರ್ಮದ ರೂಪವನ್ನೇ ತಾಳುವುದು",  "ಬದುಕಿರುವುದರಲ್ಲಿ ಯಾವ ಆರ್ಥವಿಲ್ಲದಮೇಲೆ ಸಾವು ಅನರ್ಥವಲ್ಲ" ಎಂಬ ಸಂಭಾಷಣೆಗಳು ಸೈದ್ಧಾಂತಿಕ ಉನ್ನಾರಕ್ಕೆ ಬಿದ್ದವರ ಎದೆ ಸೀಳಿ ಹಸಿರಿನ ಬೀಜ ಬಿತ್ತುವುದಂತು ಖಾತ್ರಿ. ಭೈರಪ್ಪನವರೇ ಹೇಳಿಕೊಂಡ ಹಾಗೆ "ಪರ್ವ ಬರೆದುದರಿಂದ ನನಗೆ ಮರುಜನ್ಮ ಸಿಕ್ಕಿತು" ಎಂಬುದಕ್ಕೆ ಸಮನಾಗಿ ಪರ್ವ ರಂಗಪ್ರಸ್ತುತಿಯನ್ನು ನೋಡಿದವರೆಲ್ಲ ಮರುಹುಟ್ಟು ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಇಷ್ಟು ದಿನಗಳವರೆಗೆ ಭೀಮ ಎಂದರೆ ಘರ್ಜನೆ, ಕುಂತಿ-ದ್ರೌಪದಿ ಎಂದರೆ ಬರೀ ದುಃಖ, ಧರ್ಮಜ ಎಂದರೆ ನ್ಯಾಯ-ಧರ್ಮ, ಕರ್ಣ ಎಂದರೆ ಶೌರ್ಯ, ಕೃಷ್ಣ ಎಂದರೆ ಮಾಯಾವಿ ಅಂತಲೂ ತಮ್ಮದೇ ಕಲ್ಪನೆ ಕಟ್ಟಿಕೊಂಡವರಿಗೆ ಪರ್ವ ಬದುಕಬೇಕಾದ ಇನ್ನೊಂದು ಆಯಾಮವನ್ನು ತೋರಿಸುತ್ತದೆ. ಮಹಾಭಾರತದಲ್ಲಿ ಬರುವ ಪಾತ್ರಗಳು ಇಲ್ಲಿ ಮಾತನಾಡುವುದಿಲ್ಲ. ಅವುಗಳ ಅಂತರಾಳ ಪ್ರೇಕ್ಷಕರೊಟ್ಟಿಗೆ ಮಾತನಾಡಿ ತಮ್ಮನ್ನು ತಾವೇ ಲೋಕ ವಿಮರ್ಶೆ ಮಾಡಿಕೊಳ್ಳುವುದರ ಮೂಲಕ ಆತ್ಮಾವಲೋಕನ ಮಾಡಿಕೊಳ್ಳುತ್ತವೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಯೂ ರೂಢಿಸಿಕೊಳ್ಳಬೇಕಾದ್ದು ಇದೇ ತತ್ವ. ನಾವು ನಮ್ಮೊಂದಿಗೆ ಜೀವಿಸುವುದು ಬೇರೆ, ಇತರರೊಂದಿಗೆ ನಮ್ಮನ್ನು ನಾವು ಪ್ರದರ್ಶಿಕೊಳ್ಳುವುದು ಬೇರೆ. ಆ ವಿಷಯಕ್ಕೆ ಬಂದರೆ ಪರ್ವದಲ್ಲಿ ಎಲ್ಲಾ ಪಾತ್ರಗಳು ಜೀವಂತಿಸಿವೆ.
ಯಾವ ಪಾತ್ರಗಳೂ ಕಮ್ಮಿ ಎನಿಸದಂತೆ ಎಸ್ ಎಲ್ ಭೈರಪ್ಪನವರು ಪರ್ವದಲ್ಲಿ ಭಿತ್ತಿಸಿರುವಂತೆ ಎಲ್ಲಾ ನಟರು ಕೂಡ ನೈಜವಾಗಿ ಪಾತ್ರಗಳಿಗೆ ಜೀವ ತುಂಬಿ ಪರ್ವದ ದೀರ್ಘಾಯುಷ್ಯಕ್ಕೆ ಕಾರಣರಾಗಿದ್ದಾರೆ. ಈ ಮರುಹುಟ್ಟಿನಿಂದ ಹೊರಬರಲು ನನಗೆ ಕನಿಷ್ಠ ಎರಡು ದಿನಗಳಾದರೂ ಬೇಕು. ತಮ್ಮನ್ನು ಸಮಾಜದ ಓರೆ-ಕೋರೆಗಳಿಗೆ ಹಚ್ಚಿಕೊಂಡು ನೋಡಬಯಸುವ ಎಲ್ಲಾ ಜೀವಿಗಳಿಗೂ ಮರುಹುಟ್ಟಿನ ಅಗತ್ಯತೆ ಇದೆ. ಆ ಮರುಹುಟ್ಟು ಸಧ್ಯಕ್ಕೆ ಪರ್ವದಲ್ಲಿ ಮಾತ್ರ ಸಿಗಬಹುದು. ಆ ಪರ್ವ ವಾರಾಂತ್ಯಗಳಲ್ಲಿ ನಿಮಗಾಗಿ ಕಾದಿದೆ. ಒಂದು ದಿನ ಮೈಸೂರಿನ ರಂಗಾಯಣಕ್ಕೆ ಹೋಗಿ ಬನ್ನಿ. ಬದುಕು ನಿಮಗೆ ಬೇರೆಯದಾಗಿಯೇ ಕಾಣುತ್ತದೆ.


                        ಅನಂತ ಕುಣಿಗಲ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...