ವಿಷಯಕ್ಕೆ ಹೋಗಿ

ಮಂಗಳಮುಖಿ ನಾನು, ಮೃತ್ಯುಸಖಿಯಲ್ಲ! - ಕವಿತೆ - ದೀಕ್ಷಿತ್ ನಾಯರ್


ಮಂಗಳಮುಖಿ ನಾನು ಮೃತ್ಯುಸಖಿಯಲ್ಲ

(ಆತ್ಮೀಯರಾದ ರಾಧಿಕಾ ರವರ ಜೀವನಾಧಾರಿತ)

ಕಪಟವ ಅರಿಯದವಳು ನನ್ನಮ್ಮ;
ಆಕೆಯ ಪ್ರಾರ್ಥನೆಗೆ ಮನಸೋತು ನನ್ನನ್ನು ಮಡಿಲಿಗಿರಿಸಿದ್ದ ಆ ದೇವ!
"ವಂಶವ ಬೆಳಗುವ ಕುವರನಿವನೋ"
ಎಂದು ಬೀಗುತ್ತಾ ಇಡೀ
ಊರಿಗೆ ಸಿಹಿಯ ಹಂಚಿದ್ದನಂತೆ
ನನ್ನ ಮಾವ

ಎಲ್ಲ ಶಿಶುವಿನಂತೆ ತೆವಳಿದೆ
ಕಾರಿದೆ, ಗುಡುಗು,ಸಿಡಿಲು
ಮಿಂಚುಗಳಿಗೆ ತತ್ತರಿಸುತ್ತಿದ್ದೆ
ಅಮ್ಮನ ಗೊಗ್ಗರು ದನಿಯ
ಲಾಲಿ ಹಾಡಿಗೂ ಖಿಲ್ಲೆನ್ನುತ್ತಿದೆ

ನಡಿಗೆಯಲ್ಲಿ ವ್ಯತ್ಯಾಸವಿರಲಿಲ್ಲ
ದನಿಯೂ ಲಯ ಬದ್ಧವಾಗಿತ್ತು
ಆದರೆ ಹನ್ನೆರಡು ದಾಟುವ 
ವೇಳೆಗೆ ಮಾಂಸಲಗಳು ದಷ್ಠ
ಪುಷ್ಟವಾಗಿ ಬೆಳೆದು ಬಿಟ್ಟಿತ್ತು

ಕಾಡಿಗೆ,ಕುಂಕುಮ,ಬಳೆ ಮತ್ತು
ಸರಗಳೆಂದರೆ  ಅದೆಂತಹದ್ದೋ
ಮೋಹ
ದಿಢೀರ್ ಬದಲಾವಣೆಗೆ 
ಖಿನ್ನತೆಯಂತೂ ಕಾಡಲಿಲ್ಲ
ಆದರೆ ಸಂಗಡಿಗರ ಮಾತಿಗೆ
ಇಬ್ಬನಿ ಏಟಿಗೆ ತತ್ತರಿಸಿ ಹೋದ
ಹೂವಿನ ಪಕಳೆಯಂತಾಗಿದ್ದೆ

ಪೋಷಕರು ಗರ ಬಡಿದು
ಗಂವ್ವೆನ್ನುತ್ತಿದ್ದ ಕತ್ತಲೆ ಕೋಣೆಗೆ
ದೂಡಿ ಬಿಟ್ಟಿದ್ದರು
ಗಂಡಸ್ತನ ತೋರಿಸುವ 
ಆ ಭಾಗದ ನಿಮಿರುವಿಕೆಯು
ನಿಂತು ಹೋಗಿತ್ತು

ದಿನ ಕಳೆದಂತೆ ರಸ್ತೆಗಿಳಿದು ಬಿಟ್ಟೆ
ಕೈ ತಟ್ಟುತ್ತಾ; 
ಬಸ್ಸಿನಲ್ಲಿ ಒತ್ತರಿಸಿದರು,
ಸೆರಗಿನೊಳಗೆ ಕೈ ತೂರಿಸಿದರು,
ಕೋಜ,ಮಾಮ,ಮಂಗಳಮುಖಿ 
ಎಂದರು ಹೌದು
 ಆದರೆ ನಾನು ಮೃತ್ಯು ಸಖಿಯಲ್ಲ

ಗಂಡಸಂತೆ ಹಣ್ಣಿನ ಬೆನ್ನ ಮೇಲೆ
ಶೃಂಗಾರದ ಚಿತ್ರ ಬಿಡಿಸಲಾಗಲಿಲ್ಲ
ಹೆಣ್ಣಿನ ಸ್ಥಾನಮಾನವೂ
ಸಮಾಜದಲ್ಲಿ ಸಿಗಲಿಲ್ಲ
ಹೇಳಿದೆನಲ್ಲ ನಾನು ಮಂಗಳಮುಖಿ
ಆದರೆ ಮೃತ್ಯು ಸಖಿಯಲ್ಲ

ಕಾಮಕ್ಕೆ ಪರ್ಯಾಯ ಮಾರ್ಗವ 
ನನ್ನಲ್ಲಿ 
ಹುಡುಕಿದರು ಅದೆಷ್ಟೋ
ಜನ;
ಮೃಗದಂತೆ ಪರಚಿ ಇಷ್ಟ
ಬಂದಂತೆ ಉಂಡು ಮುಗಿಸಿ
ಕೈ ತೊಳೆದು 
ನಡೆದು ಬಿಟ್ಟರು;
ಸುಖದ ವಾಂಛೆಯ ನೀಗಿಸಿಕೊಂಡು ಮಂಗಳಮುಖಿ
ಎಂದು ಬಿಟ್ಟರು
ಹೌದು ಆದರೆ ನಾನು
ಮೃತ್ಯು ಸಖಿಯಲ್ಲ

ನಿರ್ಮಾನುಷ ಜಾಗಗಳೆಡೆಗೆ
ಅಂಜದೆ ಹೆಜ್ಜೆ ಹಾಕುವೆ;
ಭಯವೆಂಬುದು ಎಂದೋ
ಸತ್ತು ಹೋಗಿದೆ
ಮೊರೆವ ಪ್ರೀತಿಯ ಘಂಟೆಯು
ನಿಂತು ಹೋಗಿದೆ
ಭಗ ಭಗನೆ ಉರಿವ ನೆನಪುಗಳೊಂದಿಗೆ
ಸಾಗುತ್ತಿರುವೆ
ನಾನು ಮಂಗಳಮುಖಿ
ಆದರೆ ಮೃತ್ಯು ಸಖಿಯಲ್ಲ

         ದೀಕ್ಷಿತ್ ನಾಯರ್, ಮಂಡ್ಯ
ಯುವ ವಾಗ್ಮಿ, ಬರಹಗಾರ ಮತ್ತು ನಿರೂಪಕ

ಕಾಮೆಂಟ್‌ಗಳು

  1. ಮಂಗಳಮುಖಿಯರ ಬವಣೆಗಳನು ಚಿತ್ರಿಸುವ ಕವನ ಚೆಂದವಿದೆ

    ಪ್ರತ್ಯುತ್ತರಅಳಿಸಿ


  2. ಅರ್ಥಗರ್ಭಿತವಾಗಿದೆ ಸರ್...... ವಾಸ್ತವದ ಚಿತ್ರಣ ಅದ್ಭುತವಾಗಿದೆ.....ಒಳ್ಳೆಯ ಬರಹ

    ಪ್ರತ್ಯುತ್ತರಅಳಿಸಿ

  3. ಉತ್ತಮ ಬರಹ... ಶೀರ್ಷಿಕೆ ತುಂಬಾ ಇಸ್ಟ ಆಯ್ತು

    ಪ್ರತ್ಯುತ್ತರಅಳಿಸಿ
  4. ನಿಜ, ಅದೇಕೋ ನಮ್ಮ ಸಮಾಜ ಮಂಗಳಮುಖಿಯರನ್ನು ಮೃತ್ಯು ಸಖಿಯೇನೋ ಎಂಬಂತೆ ನೋಡುತ್ತಾರೆ. ಆಕೆಯದೇನು ತಪ್ಪು? ಎಲ್ಲರಂತೆ ಅವರೂ ಜನ್ಮ ತಳೆಯುತ್ತಾರೆ. ಬೆಳೆಯುತ್ತಿದ್ದಂತೆ ಹಾರ್ಮೋನುಗಳ ವ್ಯತ್ಯಯದಿಂದಾಗಿ ಬದಲಾಗುತ್ತಾರೆ. ಮಂಗಳ ಮುಖಿಯಾದರೇನು ಅವರಿಗೂ ನಮ್ಮಂತೆ ಜೀವವಿದೆ, ಆ ಜೀವದೊಳಗೆ ಮಿಡಿವ ಭಾವವಿದೆ ಅನ್ನೋದನ್ನ ಸಮಾಜದ ತುಂಬಾ ಜನ ಅರ್ಥ ಮಾಡ್ಕೊಳ್ಳೋದೇ ಇಲ್ಲಾ. ಅವರ ನೋವುಗಳಿಗೆ ದನಿಯಾದಂತಿದೆ ನಿಮ್ಮ ಕವನ. ನಿಮ್ಮ ಹರಿತ ಲೇಖನಿಯಿಂದ ಇಂತಹವರ ಮೇಲೆ ಬೆಳಕು ಚೆಲ್ಲುವಂತಹ ಇನ್ನಷ್ಟು ಬರಹಗಳು ಹೊರಹೊಮ್ಮಲ್ಲಿ ಎಂಬ ಆಶಯದೊಂದಿಗೆ ನಮನಗಳು 🙏

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...