ವಿಷಯಕ್ಕೆ ಹೋಗಿ

ನಾನು ಹೊರಗಿನವನು - ಕವಿತೆ - ದೀಕ್ಷಿತ್ ಕುಮಾರ್


    ನಾನು ಹೊರಗಿನವನು
(ಸ್ಮಶಾನದಲ್ಲಿ ಮೂಡಿದ ಕವಿತೆ)

ಭೂಮಿ ಗರ್ಭದಲ್ಲಿ ಕೊರಡುಗಟ್ಟುವಂಥ 
ಚಳಿಯಲ್ಲಿ; ಭೂತ ಕಾಲದ
ಆತ್ಮೀಯರು ಸುಟ್ಟು ಕರಕಲಾಗಿ
ಮತ್ತು ಒಂದಷ್ಟು ಮಂದಿ ಮಣ್ಣ
ಹೊದ್ದು ಮಲಗಿದ್ದಾರೆ; 
ದಿರಿಸಿನ ಗೊಡವೆಯಿಲ್ಲದೆ
ಬೆತ್ತಲಾಗಿ ಮತ್ತು ನಿಶ್ಚೇಷ್ಟಿತವಾಗಿ!

ಮತ್ತೆ ಸೇರಿರುವ ಖುಷಿಯಲ್ಲಿ
ಲೋಕಾಭಿರಾಮವಾಗಿ ಮಾತಿಗಿಳಿದಿದ್ದಾರೆ;
ಊಳಿಡುತ್ತಾ,ಆಕಳಿಸುತ್ತಾ 
ಮಗ್ಗಲು ಬದಲಿಸಿದ್ದಾರೆ;
ಬದುಕಿದ್ದಾಗ ಸಿಗದ ಈರ್ಷ್ಯೆಗಾಗಿ 
ಹಪ ಹಪಿಸಿದ್ದಾರೆ;
ಮುಖವಾಡ ಧರಿಸುವ ಜನರಿಗೆ
ಪ್ರವೇಶ ನಿರಾಕರಿಸಿ 
ಅಷ್ಟ ದಿಗ್ಭಂಧನ ಹೂಡಿದ್ದಾರೆ!

ಗೆಲ್ಲುವ ಮತ್ತು ದುಡಿಯುವ
ಹರಕತ್ತು ಅವರಲ್ಲಿಲ್ಲ ಈಗ;
ಹೆಣ ಎಂಬ ಹೆಸರು ಬಂದಾಯ್ತು! ಇನ್ನು ನಿರುಮ್ಮುಳವಾಗಿ ಉಸಿರಾಡ್ತಾರೆ;
ತಾಯಿ ಮೊಗವ ಕಾಣದ 
ಹಾಲು ಗಲ್ಲದ ಮಕ್ಕಳು ಖಿಲ್ಲೆನ್ನುತ್ತಿವೆ
ನೆರೆ ಕೂದಲಿನ ಮುದುಕ ಮುದುಕಿಯರು ಕ್ಯಾಕರಿಸುತ್ತಿದ್ದಾರೆ; ಪ್ರಾಯದಲ್ಲಿಯೇ ಕಮರಿ ಹೋದ ಜೀವಗಳು ಕೊರಗುತ್ತಿವೆ
ನೇಣು ಬಿಗಿದುಕೊಂಡ ಭಗ್ನ 
ಪ್ರೇಮಿ ಬಿಕ್ಕುತ್ತಿದ್ದಾನೆ;

ಆದರೆ ತುಸುವಾದರೂ ಕೇಳಬಾರದೆ?
ಇದೇನಾ ಸ್ಮಶಾನ ಮೌನ ಅಂದ್ರೆ?

ನನ್ನದೇ ಮನೆಯಲ್ಲಿ ಸಿಗದ,
ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ 
ಸೌಧದಲ್ಲೂ ಕಾಣದ ಶಾಂತಿ ಇಲ್ಲಿದೆ!
ಬಣ್ಣ ಬಣ್ಣದ ಮಾತುಗಳನ್ನಾಡುವ 
ಜನ ಇಲ್ಲಿಲ್ಲವಲ್ಲ ಅದಕ್ಕಿರಬಹುದ?
ಇಲ್ಲಿಯ ಜನರ ನಾಲಿಗೆಯೂ 
ಸತ್ತು ಹೋಗಿದೆ ಪುಣ್ಯ!

ಒಳಗೆ ಕಾಲಿಡುವಾಗ ಇದ್ದ
ನಿಗಿ ನಿಗಿ ಬೆವರು ಈಗಿಲ್ಲ;
ಮಣ್ಣ ತೋಡಿ ಅವರೊಂದಿಗೆ
ಇಡೀ ದಿನ ಮಲಗುವ ಧೈರ್ಯ ಬಂದಿದೆ; 
ಆದರೂ ಒಂದು ರೀತಿಯ ವ್ಯಾಕ್ಯುಲತೆ!
ಅರ್ಧರ್ಧ ತಿಂದ ಕನಸನ್ನು 
ನನಸು ಮಾಡುವ ಉಮ್ಮೇದಿ ಮೂಡಿದೆ;
ಇಲ್ಲ್ಯಾರು ಕಾಲೆಳೆಯುವವರಿಲ್ಲವಲ್ಲ?

ಕಪ್ಪನೆ ಗೋರಿಯ ಮೇಲೆ
ಟಿಸಿಲೊಡೆದಿದೆ ಪ್ರೇಮವೆಂಬುದು; 
ಅಲ್ಲಲ್ಲಿ ಬಿದ್ದ ಪುರಿ, ಒಣಗಿದ ಹೂವುಗಳ ನೋಡುತ್ತಲೇ ಹಸಿವು ನೀಗಿದೆ
ಆದರೆ ಇಲ್ಲಿ ವಾಸಿಸುವ ಅರ್ಹತೆ   
ನನಗೆಲ್ಲಿದೆ?
ಎಷ್ಟೆ ಆದರೂ ನಾನು ಹೊರಗಿನವನು
ನಾನು ಹೊರಗಿನವನು!


ದೀಕ್ಷಿತ್ ನಾಯರ್ ಮಂಡ್ಯ
ಯುವ ಬರಹಗಾರ,ವಾಗ್ಮಿ ಮತ್ತು ನಿರೂಪಕ

ಕಾಮೆಂಟ್‌ಗಳು

  1. ಜೀವಂತಿಕೆಯ ಬರಹ..! ಹೊರಗಿದ್ದೂ ಒಳಗನ್ನು ಅರಿಯುವ ಮೌನದ ಹಾದಿಯ ನಡಿಗೆ. ಉತ್ತಮ ಭವಿಷ್ಯ ನಿಮ್ಮದಾಗಲಿ. ಶುಭಾಶಯಗಳು.

    ಪ್ರತ್ಯುತ್ತರಅಳಿಸಿ
  2. ಎಲ್ಲೂ ಸಿಗದ ಮೌನ, ಮತ್ತೆಲ್ಲೂ ದಕ್ಕದ ಏಕಾಂತ. ಸ್ಮಶಾನದಲ್ಲಿ ಹುಟ್ಟಿದ ಕವಿತೆ ಮನ ಮುಟ್ಟುವಂತಿದೆ. ಹೆಣ ಎಂಬ ಹೆಸರು ಬಂದಾಯ್ತು ಇನ್ನು ನಿರುಮ್ಮಳವಾಗಿ ಉಸಿರಾಡುತ್ತಾರೆ 👌

    ಪ್ರತ್ಯುತ್ತರಅಳಿಸಿ
  3. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸೌಧದಲ್ಲೂ ಕಾಣದ ಶಾಂತಿ ಸ್ಮಶಾನದಲ್ಲಿ ಸಿಕ್ಕಿದೆ ಎಷ್ಟು ನಿಜ ಅಲ್ವಾ. ಜೀವ ಹೋದ ಮೇಲೆ ಶ್ರೀಮಂತ, ಬಡವ ಎಂಬ ಪ್ರಶ್ನೆ ಮೂಡದೆ ಇರುವ ಕಾರಣವೇನೋ ಅದಕ್ಕೆ ಅಲ್ಲಿ ಎಲ್ಲರೂ ಒಂದೇ ಕೋಟಿ ರೂಪಾಯಿ ಇದ್ದವನಾದರು, ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದವನಾದರು ಕೊನೆಗೆ ಹೆಣ ಆಗೇ ಆಗುವನು ನಿಮ್ಮ ಈ ಕವನ ತುಂಬಾ ಅಂದ್ರೆ ತುಂಬಾ ಇಷ್ಟ ಆಯಿತು ಸರ್ ಈ ಕವನ ರಚಿಸಿದ್ದಕ್ಕೆ ತುಂಬೊಲವಿನ ಧನ್ಯವಾದಗಳು ಹಾಗೂ ಧನ್ಯೋಸ್ಮಿ ನಾನು.

    ಪ್ರತ್ಯುತ್ತರಅಳಿಸಿ
  4. ಅದ್ಭುತವಾದ ಬರಹ..... ಬರಹ ಮೂಡಿದ ಜಾಗ ಉತ್ತಮವಾದ ಆಯ್ಕೆ..... ನಿಮಗೆ ಶುಭವಾಗಲಿ

    ಪ್ರತ್ಯುತ್ತರಅಳಿಸಿ
  5. ಇರುವಾಗ ನಾನೇ ಎಂಬ ಅಹಮ್ಮಿನಲ್ಲಿ ಬದುಕಿದ ಈ ನರ ಮಾನವ, ಸತ್ತ ಮೇಲೆ ಅಲ್ಲಿ ಒಂದಷ್ಟು ದುಗುಡ, ಧುಮ್ಮಾನ ಗಳಿದ್ದರು ಏನು ಮಾಡಲಾಗದೆ ಸುಮ್ಮನೆ ಹೊರಗಿನವಾಗಿದ್ದಾನೆ, ಮನದ ಮೌನತೆಯನ್ನು ಬಡಿದೆಬ್ಬಿಸುವಂತೆ ಗೆಳೆಯ 👌✨️❤🥰🥰

    ಪ್ರತ್ಯುತ್ತರಅಳಿಸಿ
  6. ಉಸಿರಿಲ್ಲದ ದೇಹದಲ್ಲಿ ಭಾವಲಹರಿಯ ಸೃಷ್ಟಿಸಿದಂತಹ ಬಲು ಗಾಂಭೀರ್ಯ ಬರಹ ನಿಮ್ಮದು, ಮಣ್ಣೊಳಗಿನವರ ಅರ್ಥನಾದ ಆಲಿಸಿ ಅಕ್ಷರ ರೂಪ ಕೊಟ್ಟು ಕೇಂದ್ರಿಕರಿಸಿರುವ ಸ್ಥಳವು ಕೂಡ ಅಷ್ಟೇ ತೂಕಬದ್ಧವಾಗಿದೆ. ಅತ್ಯುತ್ತಮ ಕಾವ್ಯ ರಚನೆಗೆ ಅಭಿನಂದನೆಗಳು ಸರ್, ಶುಭವಾಗಲಿ ನಿಮ್ಮ ಸಾಹಿತ್ಯದ ಕೃಷಿಗೆ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...