ಅಷ್ಟದಿಗ್ಭಂಧನ
ಅದೆಷ್ಟೋ ದಿನಗಳಿಂದ
ಯಾರಿಗೂ ಕಾಣಿಸಿಕೊಳ್ಳದೆ
ಸ್ವಯಿಚ್ಚೆಯಿಂದ ಬಂಧಿತರಾಗಿ
ಕತ್ತಲ್ಲನ್ನೇ ಅಪ್ಪಿ ಮುದ್ದಾಡಿದ ನಮಗೆ
ಅಪರೂಪಕ್ಕೆ ಕಂಡ ಬೆಳಕು
ಕಣ್ಕುಕ್ಕಿತ್ತಲ್ಲ!
ಮಾಸ್ಕ್ ಮೇಲೆ ಮಾಸ್ಕ್ ಧರಿಸಿ
ವಾಹಗಳನ್ನು ಬೀದಿಯಿಂದ ಬಿಡಿಸಿ
ಹಸು ಕರುಗಳು ನಿರ್ಭೀತಿಯಿಂದ
ಓಡಾಡುವ ಹಾಗೆ ಏರ್ಪಡಿಸಿ
ಕೈಗಳಿಗೆ ಮೊಬೈಲ್ ಕೊಟ್ಟು
ಹೊಟ್ಟೆಗೆ ಪಿಜ್ಜಾ-ಬರ್ಗರ್ ಇಟ್ಟು
ಅಲರಾಂ ಹೊಡೆತಕ್ಕೆ ಎಚ್ಚರವಾಗುವ
ನಮ್ಮಯ ಅಸಹಾಯಕ ಸ್ಥಿತಿ
ಯಾರಿಗೂ ಬಾರದಿರಲಿ!
ಒಮ್ಮೆ ಜೋರಾಗಿ ಗಾಳಿ ಬೀಸಿದಾಗ
ಹೋಗಿದ ಜೀವ ಮತ್ತೆ ಬಂದಂತಾಗುತ್ತದೆ
ಅಷ್ಟು ಉಸಿರುಗಟ್ಟೆದ್ದೇವೆ ನಾವೆಲ್ಲರೂ..
ನಾಲ್ಕು ಗೋಡೆಗಳ ಗಬೆಯಲ್ಲಿ
ಮೂಳೆಯೂ ತುಕ್ಕಿಡಿಯುವಂತೆ
ಕೊಳೆತು ನಾರುತ್ತಿದ್ದೇವೆ
ಮೂಗು ಮುಚ್ಚಿಕೊಂಡು
ಭಯದಿಂದ ಮೌನವಾಗಿ ನಿಂತಿದ್ದೇವೆ!
ದಿನವೂ ಅದೇ ವಿಚಾರಗಳು
ಕೊಂಕು ನುಡಿಯುವುದೊಂದೇ ವಿಶೇಷ
ಬಸ್ಸಿನ ಹಿಂದೆ ಓಡುವ ಜನಕೆ
ಬಸ್ಸೇ ಪ್ರಪಂಚ
ಹಾಗಾದರೆ ಬಸ್ಸಿನ ಮುಂದೆ ಓಡುವವರು?
ಹೆಗಲಿನಲ್ಲಿ ಸಾವ ಕಟ್ಟಿಕೊಂಡವರು!
ಧೈರ್ಯವಿದ್ದವರಿಗೆ ಬೆದರಿಕೆ
ಬಾಯ್ಬಿಟ್ಟರೆ ಬಾಂಬು
ಬಿಡದಿದ್ದರೆ ರಕ್ತಾಘಾತ ಸಂಕಟ
ಏನಾಗಿದೆ ಈ ಜಗಕೆ
ಆಗಬೇಕಾದ್ದೇನೂ ಆಗುತ್ತಿಲ್ಲ
ಬೆಲೆ ಏರಿಕೆ ಮತ್ತು ಜನಸಂಖ್ಯಾಸ್ಟೋಟ
ಇದಲ್ಲವೇ ನಮ್ಮ ಪ್ರಗತಿ?
ಎಲ್ಲಿಯ ದೇವರು? ಎಲ್ಲಿಯ ತಂತ್ರಜ್ಞಾನ
ಇನ್ನೆಲ್ಲಿಯ ವಿಜ್ಞಾನ?
ಸಾಯುವವನಿಗೆ ಎಲ್ಲವೂ ಶೂನ್ಯ
ಆಡಳಿತವೊಂದೇ ಸಾಕು
ಕುರಿ ಕೊಟ್ಟಿಗೆಯ ಕಟ್ಟಲು
ನಕ್ಷತ್ರಗಳು ಉದುರುತ್ತವೆ
ಭಾಷಣಗಳ ಬಿಗಿ ತಾಳಲಾರದೆ!
ಬೈಕು, ಕಾರುಗಳ ಸೀಟಿನ ಮೇಲೆ
ಕುಂಡೆಗಳು ನೋಯುತ್ತಿವೆ
ಮಂಚದ ಮೇಲೆ ಬೆತ್ತಲೆಯ ದೇಹ ಮಲಗಿದೆ
ಸಿಗರೇಟು, ಮಧ್ಯದ ವಾಸನೆಗೆ
ಗುಂಡಿಗೆಯಿಲ್ಲದ ಬಂದೂಕು ಹಪಾಹಪಿಸುತ್ತಿದೆ
ಯಾರ ಕೂರಳಿಗೆ ರಾಗಿ ಪೈರಿನ ಪಾಶ ಕಟ್ಟುವರೋ..
ಆತ್ಮಹತ್ಯೆ ಎಂದು ಖುಲಾಸು ಮಾಡುವರು
ಓದದಿದ್ದರೂ ಎಲ್ಲರೂ ಪ್ಯಾಸು
ಕೆಲಸವಿಲ್ಲದೆ ವಯಸ್ಸು ಲಾಸು
ಅರಿವಿಲ್ಲದೆ ದಿನ ಕಳೆದಿವೆ
ಮೂಲೆಯಲ್ಲಿದ್ದ ಯಂತ್ರದ ಲೆಕ್ಕಾಚಾರ
ಮಾತನಾಡುವುದು ಮರೆತಿದ್ದೇವೆ
ಓದುವುದು ಬಿಟ್ಟಿದ್ದೇವೆ
ಬೆರಳುಗಳು ಬರೆಯುತ್ತಿವೆ ಸೆಳೆಯಲು
ಪ್ಯಾಡು-ಕಾಂಡೋಮುಗಳು ಪೈಪೋಟಿಗೆ ಬಿದ್ದಿವೆ
ಯಾರೂ ಕೇಳುಗರಿಲ್ಲದೆ
ಖುರ್ಚಿ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದೆ
ಉಳಿದವರು ಕೂಗುತ್ತಿದ್ದಾರೆ
ಉರಿದವರು ಬೇಯುತ್ತಿದ್ದಾರೆ
ರುಚಿ ನೋಡಿದವರು ಆಕಾಶದಲ್ಲಿ ಹಾರಾಡುತ್ತಿದ್ದಾರೆ
ನಾವೀಗ ಯಂತ್ರಗಳು
ಯಂತ್ರಗಳೆಂಬ ಮನುಷ್ಯ ಗುಲಾಮರಿಗಾಗಿ
ಹುಡುಕಾಟ ನಡೆಸಿದ್ದೇವೆ!!
ಅದೆಷ್ಟೋ ದಿನಗಳಿಂದ
ಯಾರಿಗೂ ಕಾಣಿಸಿಕೊಳ್ಳದೆ
ಸ್ವಯಿಚ್ಚೆಯಿಂದ ಬಂಧಿತರಾಗಿ
ಕತ್ತಲ್ಲನ್ನೇ ಅಪ್ಪಿ ಮುದ್ದಾಡಿದ ನಮಗೆ
ಅಪರೂಪಕ್ಕೆ ಕಂಡ ಬೆಳಕು
ಕಣ್ಕುಕ್ಕಿತ್ತಲ್ಲ!
ಮಾಸ್ಕ್ ಮೇಲೆ ಮಾಸ್ಕ್ ಧರಿಸಿ
ವಾಹಗಳನ್ನು ಬೀದಿಯಿಂದ ಬಿಡಿಸಿ
ಹಸು ಕರುಗಳು ನಿರ್ಭೀತಿಯಿಂದ
ಓಡಾಡುವ ಹಾಗೆ ಏರ್ಪಡಿಸಿ
ಕೈಗಳಿಗೆ ಮೊಬೈಲ್ ಕೊಟ್ಟು
ಹೊಟ್ಟೆಗೆ ಪಿಜ್ಜಾ-ಬರ್ಗರ್ ಇಟ್ಟು
ಅಲರಾಂ ಹೊಡೆತಕ್ಕೆ ಎಚ್ಚರವಾಗುವ
ನಮ್ಮಯ ಅಸಹಾಯಕ ಸ್ಥಿತಿ
ಯಾರಿಗೂ ಬಾರದಿರಲಿ!
ಒಮ್ಮೆ ಜೋರಾಗಿ ಗಾಳಿ ಬೀಸಿದಾಗ
ಹೋಗಿದ ಜೀವ ಮತ್ತೆ ಬಂದಂತಾಗುತ್ತದೆ
ಅಷ್ಟು ಉಸಿರುಗಟ್ಟೆದ್ದೇವೆ ನಾವೆಲ್ಲರೂ..
ನಾಲ್ಕು ಗೋಡೆಗಳ ಗಬೆಯಲ್ಲಿ
ಮೂಳೆಯೂ ತುಕ್ಕಿಡಿಯುವಂತೆ
ಕೊಳೆತು ನಾರುತ್ತಿದ್ದೇವೆ
ಮೂಗು ಮುಚ್ಚಿಕೊಂಡು
ಭಯದಿಂದ ಮೌನವಾಗಿ ನಿಂತಿದ್ದೇವೆ!
ದಿನವೂ ಅದೇ ವಿಚಾರಗಳು
ಕೊಂಕು ನುಡಿಯುವುದೊಂದೇ ವಿಶೇಷ
ಬಸ್ಸಿನ ಹಿಂದೆ ಓಡುವ ಜನಕೆ
ಬಸ್ಸೇ ಪ್ರಪಂಚ
ಹಾಗಾದರೆ ಬಸ್ಸಿನ ಮುಂದೆ ಓಡುವವರು?
ಹೆಗಲಿನಲ್ಲಿ ಸಾವ ಕಟ್ಟಿಕೊಂಡವರು!
ಧೈರ್ಯವಿದ್ದವರಿಗೆ ಬೆದರಿಕೆ
ಬಾಯ್ಬಿಟ್ಟರೆ ಬಾಂಬು
ಬಿಡದಿದ್ದರೆ ರಕ್ತಾಘಾತ ಸಂಕಟ
ಏನಾಗಿದೆ ಈ ಜಗಕೆ
ಆಗಬೇಕಾದ್ದೇನೂ ಆಗುತ್ತಿಲ್ಲ
ಬೆಲೆ ಏರಿಕೆ ಮತ್ತು ಜನಸಂಖ್ಯಾಸ್ಟೋಟ
ಇದಲ್ಲವೇ ನಮ್ಮ ಪ್ರಗತಿ?
ಎಲ್ಲಿಯ ದೇವರು? ಎಲ್ಲಿಯ ತಂತ್ರಜ್ಞಾನ
ಇನ್ನೆಲ್ಲಿಯ ವಿಜ್ಞಾನ?
ಸಾಯುವವನಿಗೆ ಎಲ್ಲವೂ ಶೂನ್ಯ
ಆಡಳಿತವೊಂದೇ ಸಾಕು
ಕುರಿ ಕೊಟ್ಟಿಗೆಯ ಕಟ್ಟಲು
ನಕ್ಷತ್ರಗಳು ಉದುರುತ್ತವೆ
ಭಾಷಣಗಳ ಬಿಗಿ ತಾಳಲಾರದೆ!
ಬೈಕು, ಕಾರುಗಳ ಸೀಟಿನ ಮೇಲೆ
ಕುಂಡೆಗಳು ನೋಯುತ್ತಿವೆ
ಮಂಚದ ಮೇಲೆ ಬೆತ್ತಲೆಯ ದೇಹ ಮಲಗಿದೆ
ಸಿಗರೇಟು, ಮಧ್ಯದ ವಾಸನೆಗೆ
ಗುಂಡಿಗೆಯಿಲ್ಲದ ಬಂದೂಕು ಹಪಾಹಪಿಸುತ್ತಿದೆ
ಯಾರ ಕೂರಳಿಗೆ ರಾಗಿ ಪೈರಿನ ಪಾಶ ಕಟ್ಟುವರೋ..
ಆತ್ಮಹತ್ಯೆ ಎಂದು ಖುಲಾಸು ಮಾಡುವರು
ಓದದಿದ್ದರೂ ಎಲ್ಲರೂ ಪ್ಯಾಸು
ಕೆಲಸವಿಲ್ಲದೆ ವಯಸ್ಸು ಲಾಸು
ಅರಿವಿಲ್ಲದೆ ದಿನ ಕಳೆದಿವೆ
ಮೂಲೆಯಲ್ಲಿದ್ದ ಯಂತ್ರದ ಲೆಕ್ಕಾಚಾರ
ಮಾತನಾಡುವುದು ಮರೆತಿದ್ದೇವೆ
ಓದುವುದು ಬಿಟ್ಟಿದ್ದೇವೆ
ಬೆರಳುಗಳು ಬರೆಯುತ್ತಿವೆ ಸೆಳೆಯಲು
ಪ್ಯಾಡು-ಕಾಂಡೋಮುಗಳು ಪೈಪೋಟಿಗೆ ಬಿದ್ದಿವೆ
ಯಾರೂ ಕೇಳುಗರಿಲ್ಲದೆ
ಖುರ್ಚಿ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದೆ
ಉಳಿದವರು ಕೂಗುತ್ತಿದ್ದಾರೆ
ಉರಿದವರು ಬೇಯುತ್ತಿದ್ದಾರೆ
ರುಚಿ ನೋಡಿದವರು ಆಕಾಶದಲ್ಲಿ ಹಾರಾಡುತ್ತಿದ್ದಾರೆ
ನಾವೀಗ ಯಂತ್ರಗಳು
ಯಂತ್ರಗಳೆಂಬ ಮನುಷ್ಯ ಗುಲಾಮರಿಗಾಗಿ
ಹುಡುಕಾಟ ನಡೆಸಿದ್ದೇವೆ!!
ಅನಂತ ಕುಣಿಗಲ್
ಯುವಬರಹಗಾರ & ರಂಗಕಲಾವಿದ
ತುಂಬಾ ಚೆನ್ನಾಗಿದೆ ಸರ್.....ಎಲ್ಲವೂ ಬದಲಾಗಬೇಕು ಎಲ್ಲವನ್ನೂ ಬದಲಾಯಿಸಬೇಕು...
ಪ್ರತ್ಯುತ್ತರಅಳಿಸಿಆ ಬದಲಾವಣೆ ನಮ್ಮಿಂದಾಗಬೇಕು..ತುಂಬಾ ಚೆನ್ನಾಗಿದೆ..
Epic brother! Keep rocking!
ಪ್ರತ್ಯುತ್ತರಅಳಿಸಿ