ವಿಷಯಕ್ಕೆ ಹೋಗಿ

ಮದುವೆ - ಲೇಖನ - ಅಶ್ವಿನಿ ಭೀ ಬರಗಾಲಿ


ಮದುವೆ
ಎಂಬ ಮೂರಕ್ಷರ ನಂಟಿನ‌ ಜಾಡು ಹಿಡಿದು

ಕೋಪದ ನಂಜಿಗೆ, ನಗುವೇ ಸಾಕು
ದ್ವೇಷದ ಮಂಜಿಗೆ, ಸ್ನೇಹದ ಕಡಲು ಸಾಕು
ಬದುಕ ಬಂಡಿಗೆ, ನಮ್ಮಿಬ್ಬರ ಮಿಲನವಾಗಬೇಕು
ಮದುವೆಯ ಮೂರು ಗಂಟಿಗೆ, ನೀನೆ ಜೊತೆಯಾಗಬೇಕು...!!

      "ಮದುವೆ" ಎಂಬುದು ಕೇವಲ ಮನಗಳ‌ ಮಿಲನ ಅಲ್ಲ, ಅದು ಎರಡು ಮನೆಗಳ ಸಂಕಲನ‌‌ ಎಂದು ಹಿರಿಯರು ನುಡಿದರು.‌ ಶಾಸ್ತ್ರಗಳ ಸುರಿಮಳೆ, ಬಂಧು- ಬಳಗ ಆನಂದದಿ‌ ಒಂದೆಡೆ ಸೇರುವಿಕೆ, ಸಡಗರ, ಸಂಭ್ರಮ‌ ಎಲ್ಲರಲ್ಲೂ... ಆದರೆ ಆ ಸಂಭ್ರಮ ಮದುವೆಯ ಹಸೆಮಣೆ ಏರಲು ಸಿದ್ಧರಿರುವ ಆ ಎರಡು ಮನಗಳಲ್ಲೂ ಇರಬೇಕೆಂದರೆ ಅವರ ನಡುವೆ ಒಪ್ಪಿಗೆಯ ಬಂಧ ಬಿಗಿದಿರಬೇಕು.
      "ಮದುವೆ" ಎನ್ನುವದು ಒಂದು ಸಮಾಜದ ವ್ಯವಸ್ಥೆ. ಶಿಸ್ತು ಬದ್ಧ ಜೀವನಕ್ಕೆ ಹಾಕಿಕೊಂಡ ಸರಪಳಿಯ ಗಂಟು. ಕೌಟುಂಬಿಕ ಕರ್ತವ್ಯಗಳ ನಿರ್ವಹಣೆಗೆ ಮದುವೆ ಎಂಬುದು ಸಮಾಜ ನಿರ್ಮಾಣದ ಸಾಂಸ್ಥಿಕ ವ್ಯವಸ್ಥೆ. ಇದು ಎಲ್ಲರಿಗೂ ಅಗತ್ಯ,  ನಿಜ. ಅನೂಕೂಲಿಸಿದವರಿಗೆ ಅವಶ್ಯ. ಅನಾನೂಕೂಲಿಸಿದವರಿಗೆ ಅನಗತ್ಯ. ಮದುವೆ ಎಂಬುದು ಮನುಷ್ಯ ಜೀವಿಸುತ್ತಿರೋ ಅವನ‌ ಪರಿಸರ ಮತ್ತು ಅವನು ನೋಡೋ ಜಗದ  ದೃಷ್ಟಿಕೋನವ ಅವಲಂಬಿಸಿದೆ.
       ಮನುಷ್ಯನ ವಯೋಸಹಜಕ್ಕನುಗುಣವಾಗಿ " ಮದುವೆ. ". ಮದುವೆ ಎಂದರೆ ಹೆಣ್ಣು- ಗಂಡು ಇಬ್ಬರಲ್ಲೂ ಏನೋ ಹೇಳಲಾಗದ ಪುಳಕ. ಮದುವೆಯಾಗಿ ಅದರ ಸವಿಯ ಸವೆದು ಸಿಪ್ಪೆ ಮಾಡಿಕೊಂಡವರ ಮುಖದಲ್ಲಿ ಹೊಸದಾಗಿ ಮದುವೆ ಆಗುವವರ ಕಂಡು ಏನಿದೆ ಇದರಲ್ಲಿ ಎಂಬ ಜಿಗುಪ್ಸೆಯ ಭಾವ. ಹೆಣ್ಣಾಗಲೀ, ಗಂಡಾಗಲೀ ಮದುವೆ ಎಂದರೆ ನೂರಾರು ಕನಸು, ಆಸೆಗಳು ಮನದಿ ಮೂಡುವದು ಸಹಜ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುವದು ಎನ್ನುವರು. ಹಾಗಾದರೆ ಈ ಭೂಮಿಯ ಮೇಲೆ ನಾವು ಇಷ್ಟಪಟ್ಟವರ ಕೂಡ ಮದುವೆ ಅಸಾಧ್ಯ. ಕಾರಣ ದೇವರ ನಿಶ್ಚಯ ಬೇರೆ ಇರುವದು. ಈ ಪ್ರೀತಿ- ಪ್ರೇಮ ಎಲ್ಲ ಕೇವಲ ನಮ್ಮ ಕೆಲ ದಿನಗಳ ನೆಮ್ಮದಿಯ ಜೀವನಕ್ಕಾಗಿ ನಾವು ಮಾಡಿಕೊಂಡಿರುವ ಬಂಧನ ಎಂದಷ್ಟೇ ಅನಿಸುವದು.
       ಕೆಲವು ಸಲ ಇಷ್ಟಪಟ್ಟವರನ್ನೇ ಮದುವೆ ಆದರೆ ಮದುವೆಯಾದ ಜೀವನ , ಜೀವಗಳ ಬದುಕು ಸ್ವಚ್ಛಂದದ ಬಾನಲಿ ರೆಕ್ಕೆ ಬಿಚ್ಚಿ ಹಾರುವ ಹಕ್ಕಿಯಂತಾಗುವದು. ಕೆಲವು ಸಲ ರಕ್ಕೆ ಕಳಚಿ ಬಿದ್ದು,  ಸೋಲು ಉಚಿತವಾಗಿರುವದು... ಮನೆಯವರು ಹುಡುಕಿ ಮಾಡಿದ ಜೋಡಿಗಳು ಎಲ್ಲವೂ ಖುಷಿಯಾಗಿರುತ್ತವೆ ಅಂತಲ್ಲ...‌ಎಲ್ಲವೂ ಮುಳುಗುತ್ತವೆ ಅಂತೆಯೂ ಅಲ್ಲ... ಅದು ಅವರವರ ಹೊಂದಾಣಿಕೆ ಬುನಾದಿ ಮೇಲೆ ನಿಂತಿದೆ.
      ಮದುವೆ ಎಂದರೇನೆ ಹೊಂದಾಣಿಕೆ. ಜೀವ ಜೀವಗಳ ಬೆಸುಗೆ. ಭಾವ ಭಾವಗಳ ಬೆಸುಗೆ. ಅನುರಾಗ ಅನುಗಾಲ ಹೀಗೆ ಬೆಸೆದುಕೊಂಡಿರಬೇಕು. ಸದಾ ಸಂಚಾರದ ಮನಕೆ ಈ ಮದುವೆ ಒಂದು ತಳಪಾಯವೇ ಸರಿ.
       ಮದುವೆ ಒಂದು ಅನುಬಂಧ. ಜನುಮ ಜನುಮಗಳ ಬಂಧ. ಆತ್ಮಗಳ ಮಿಲನ. ಅನುರಾಗವ ಅನುಗಾಲದಿ ಉಳಿಸೋ ಸಂಬಂಧ. ಹಿರಿಯರ ಹಾರೈಕೆ, ಸದಾಚಾರ, ಸದ್ವಿಚಾರ, ಸಹಕಾರ, ಸಹಬಾಳ್ವೆ, ಸಂತೋಷಗಳ ಸಮ್ಮೀಲನವೇ ಮದುವೆ.
       ಹಣದ ದುರಾಸೆಯ ಹಿಂದೆ ಬಿದ್ದು ಜೊತೆಯಿದದ್ದು ಮದುವೆಯಾಗಲಾರದು. ಅನುಮಾನ ಬಿರುಕು ಬಿಟ್ಟ ಗೋಡೆಯಂತೆ ಬದುಕಲಿ. ನಂಬಿಕೆಯೇ ಜೀವಾಳ ಎರಡು ಮನಸುಗಳ ಮಿಲನಕೆ.
     ಅನಾದಿ ಕಾಲದಿಂದಲೂ ಒಂದು ಹೆಣ್ಣಿಗೆ ಒಂದು ಗಂಡು ಅದುವೇ ಮದುವೆ ಎಂಬುದು ಜಗದ ನಿಯಮ‌. ಅನುಸರಿಸಿಕೊಂಡು ನಡೆದರೆ ಅನುದಿನವೂ ಹೊಸದಿನ. ಪ್ರತಿಕ್ಷಣವೂ ಅವನು ಅವಳಿಗೆ, ಅವಳು ಅವನಿಗೆ.
       ಇಂದಿನ ಕಾಲಕ್ಕೆ " ಮದುವೆ " ಮಾರಾಟದ ಮಳಿಗೆ. ಹುಡಗ, ಹುಡುಗಿ ಇಬ್ಬರಿಗೂ ನೌಕರಿ ಅಗತ್ಯ. ಅವರ ಭಾವನೆಗಳೇ ಸತ್ತಂತೆ ಬದುಕುವರು. ಬೆಳೆಯುತ್ತಿರುವ ಈ ವೈಜ್ಞಾನಿಕ ಯುಗದಲ್ಲಿ ಎಲ್ಲವೂ ಬದಲಾಗಿದೆ. ಹಣಕ್ಕಿರುವ ಬೆಲೆ ಭಾವನೆಗಳಿಗಿಲ್ಲ. ಎಂಟತ್ತು ದಿನಗಳ ಕಾಲ, ನೂರಾರು ಶಾಸ್ತ್ರಗಳಿಗೆ ಮೀಸಲಾಗಿದ್ದ ಮದುವೆ, ಇಂದು ಕೇವಲ ನೀ ಹ್ಞು, ನಾ ಹ್ಞು ಅಷ್ಟಕ್ಕೇ ಮುಗಿಯಿತು ಮದುವೆ. ಸಾಂಪ್ರದಾಯಿಕ ಮದುವೆಯ ಮನೆಗಳೇ ಖಾಲಿ ಖಾಲಿ.
     ಸಪ್ತಪದಿ ತುಳಿದು ಏಳು ಹೆಜ್ಜೆಗಳಲಿ ಬೆಸೆವ ಬಂಧ , ಏಳೇಳು ಜನುಮಕ್ಕೂ ನೀನೆ ನನ್ನವಳು, ನೀನೆ ನನ್ನವನು ಎಂಬ ಅನುಬಂಧ ...‌ಇಂದಿಗೆ ಏನಾದರೂ ಸ್ವಲ್ಪ ತೊಂದರೆಯಾದರೂ ಸಾಕಪ್ಪ ಇವನ /ಇವಳ ಸಹವಾಸ ಎಂಬಲ್ಲಿಗೆ ಬಂದು ನಿಂತಿದೆ.
        ಮನುಷ್ಯನ ಜೀವನ ಧರ್ಮ, ಅರ್ಥ, ಕಾಮಗಳಲ್ಲಿ ಲೀನವಾದುದು. ಆದರೆ ಆ ಎಲ್ಲ ಪುರುಷಾರ್ಥಗಳು ಮದುವೆಯ ಯಾವ ನಿಯಮಕ್ಕೂ ಅನ್ವಯಿಸದೇ ಹೋಗುತ್ತಿವೆ. ನಿಜವಾಗಿಯೂ ಹೇಳಬೇಕೆಂದರೆ ಮನುಷ್ಯನ ಸಣ್ಣ- ಪುಟ್ಟ ಆಸೆಗಳ ಪೂರೈಕೆ ಕಾಮ ಮತ್ತು ಅರ್ಥ. ಅರ್ಥ, ಕಾಮಗಳು ಮಿತಿಮೀರದಂತೆ ಕಡಿವಾಣ ಹಾಕುವದೇ ಧರ್ಮ. ಅರ್ಥ, ಕಾಮಗಳ ಹಂಗು ಕಳಚಿ , ವಿರಕ್ತಿ ಮೂಡಿದಾಗ ಮೋಕ್ಷದ ದಾರಿ. ಅವನ್ನೆಲ್ಲ ನಿಯಂತ್ರಿಸುವ, ಅವುಗಳ ಕಲ್ಪನೆ, ವಿಕಲ್ಪನೆಗಳ ರೂವಾರಿ ಈ ಮದುವೆ.
        ಅವಿವಾಹಿತರಾಗಿ ಉಳಿಯುವದು ತಪ್ಪಲ್ಲ, ಆದರೆ ವಿವಾಹದ ಬಾಂಧವ್ಯ, ಸಂಸಾರದ ಸಾಮರಸ್ಯ, ಕೌಟುಂಬಿಕ ಜೀವನದ ಅನುಭವ ಎಲ್ಲವೂ ಈ ಜೀವ ಜೀವನಕ್ಕೆ ನಿರಾಳ ಬದುಕಿಗೆ ದೇವರಿಟ್ಟ ರಹದಾರಿ. ಮದುವೆಯಲ್ಲಿ ಭೋಗ- ತ್ಯಾಗಗಳ ಸುಂದರ ಸಾಮರಸ್ಯವಿದೆ. ಅದೇ ಹಿರಿಯರು ಹೇಳುವರಲ್ಲ " ಉಂಡವನೇ ಬಲ್ಲ ಊಟದ ರುಚಿಯ" ಎಂದು. ಹಾಗೆಯೇ ಈ ಮದುವೆಯ ಬಂಧನ.
     ಕೊನೆಯದಾಗಿ, ಮದುವೆಯೆಂದರೆ ಹೊಸ ಜೀವನದ ಸಿಹಿ- ಕಹಿಯ ಬೆಸುಗೆ, ಎರಡು ಜೀವಗಳ ಆಜೀವ ದಿವ್ಯ ಒಡಂಬಡಿಕೆ. ಒಂದರಿಂದ ಏಳರವರೆಗಿನ ಗಂಟು, ನಂಟುಗಳ ಅವಿನಾಭಾವ ಬಂಧನವದು.


                    - ಅಶ್ವಿನಿ ಭೀ ಬರಗಾಲಿ
                ವೀವೆಕಾಂದ ನಗರ, ಗೋಕಾಕ

ಕಾಮೆಂಟ್‌ಗಳು

  1. ಮದುವೆಯ ಇಷ್ಟೊಂದು ವರ್ಣಮಯ ಚಿತ್ರಣಕ್ಕೆ ಶ್ಲಾಘಿಸಬೆಕು!. ಆದ್ರೆ ಮದುವೆಯ ನೈಜ ಜೀವನ ಸತ್ಯ ಮತ್ತು ಸತ್ವ ಕಾಣಲಿಲ್ಲ. ಆಶಾಭಾವನೆ ಅಷ್ಟೇ, ವಾಸ್ತವಕ್ಕೆ ದೂರವಾದುದು!
    ಮದುವೆ ಎನ್ನುವುದು 'ಬಂಧನ', ಸರ್ವ ಸ್ವಾತಂತ್ರಗಳಿಗೆ ಕಡಿವಾಣ. ಪ್ರಪಂಚದ ಎಲ್ಲ ಕ್ರೌರ್ಯಗಳ ಉಗಮ. ಸ್ವಾರ್ಥ, ಜಿದ್ದು, ಅಸೂಯೆ, ಜಗಳ, ಮನಸ್ತಾಪಗಳ ಹುಟ್ಟು ಕೂಡ.
    ಬುದ್ಧನ ಪ್ರಕಾರ "ಮದುವೆಯೇ ಮನುಷ್ಯನ ಸಂಕಷ್ಟಗಳ ಗರ್ಭಚೀಲ" ಎಂದು ಹೇಳುತ್ತಾರೆ. ಇದು ಸಹಿತ ತಿಳಿದಿರಲಿ, ಮದುವೆ ಒಂದೇ ಮನುಷ್ಯ ಮಾಡಿದ ಮುರಿಯಬಹುದಾದ ಸಂಬಂಧ. ಅದ್ರ ಕಡೆಗೂ ಲೇಖನ ಮತ್ತಷ್ಟು ಮಾತಾಡ ಬೆಕಿತ್ತೆನೂ? ಜಾತಿ ವ್ಯವಸ್ಥೆ, ವರದಕ್ಷಿಣೆ, ಬಾಲ್ಯವಿವಾಹ ದಂತ ಸಾಮಾಜಿಕ ಪಿಡುಗುಗಳು ಸುತ್ತಿದುದು ಇದೇ ಮದುವೆಯ ಬಂಧಕ್ಕೆ ಅಲ್ಲವೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನ‌ಉದ್ದೇಶ ಮದುವೆ ಒಂದು ಅನುರಾಗ ಅರಳಿಸೋ ಬಂಧ ಹೇಳುವದಾಗಿತ್ತು... ಕೊಂಡಿ ಮುರಿದ ಬಾಗಿಲು ಎಂದು ಹೇಳಲು ಇಷ್ಟವಾಗಲಿಲ್ಲ ...‌ನಿಮ್ಮ ಉತ್ತಮ‌ ಪ್ರತಿಕ್ರಿಯೆಗೆ ಧನ್ಯವಾದಗಳು.

      ಅಳಿಸಿ
    2. ಅರ್ಧ ಸತ್ಯದ ಹಾದಿ, ಸುಳ್ಳಿಗಿಂತ ಕಠಿಣ ಬಲೆ..ಪರಿಪೂರ್ಣ ಸಮತೋಲನದ ನಿಜ ಸತ್ಯಗಳ ಹುಡುಕಾಟ ತಮ್ಮದಾಗಲಿ...
      ಧನ್ಯವಾದಗಳು

      ಅಳಿಸಿ
  2. ಲೇಖನ ಬಹಳ ಅದ್ಭುತವಾಗಿ ಬಂದಿದೆ. ತಮ್ಮ ಚೋಚ್ಚಲ ಲೇಖನಕ್ಕೆ ಅಭಿನಂದನೆಗಳು ಮೇಡಂ.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...