ವಿಷಯಕ್ಕೆ ಹೋಗಿ

ಲೆಕ್ಕಾಚಾರ - ಪೀಠಿಕೆ - ಅನಂತ ಕುಣಿಗಲ್



" ನೊಂದವರ ನೋವ ನೋಯದವರೆತ್ತಬಲ್ಲರೋ.. "

     ಬರೆಯುತ್ತಿರುವುದು ಅಂಕಣವಾದರೂ, ಈ ಸರಣಿಯಲ್ಲಿ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿಯ ತೊಳಲಾಟಗಳು ಹೇಗಿರುತ್ತವೆಂದು ನನ್ನದೇ ಕುಟುಂಬವನ್ನು ಉದಾಹರಿಸಿ ನಿಮಗೆ ಉಣ್ಣಲು ಸಿದ್ದಪಡಿಸುತ್ತಿದ್ದೇನೆ. ಹಾಗಂತ ಇದನ್ನು ನಾನು ಖಂಡಿತ ಆತ್ಮಕಥನ ಎಂದು ಕರೆದುಕೊಳ್ಳುವುದಿಲ್ಲ. ಹಾಗೆಯೇ ಇಲ್ಲಿ ನಮೂದಿಸುವ ವಿಷಯಗಳು ಸುಳ್ಳಾಗಿರುವುದಿಲ್ಲ (ಅಗತ್ಯವಿದ್ದಲ್ಲಿ ವ್ಯಕ್ತಿಗಳ ಹಾಗೂ ಸ್ಥಳಗಳ ಹೆಸರನ್ನು ಬದಲಾಯಿಸಿರುತ್ತೇನೆ). ಬಡತನ ಎಲ್ಲರಿಗೂ ಬೇಡವಾದರೂ ಕೂಡ ಅದರ ಕತೆಗಳು ಎಲ್ಲರಿಗೂ ಹತ್ತಿರವಾಗುತ್ತವೆ ಎಂದು ನಾನಾದರೂ ಭಾವಿಸಿದ್ದೇನೆ. ಈ ಅಂಕಣವನ್ನು ನಾನು ಯಾಕೆ ಬರೆಯಲೇಬೇಕು? ಎಂಬುದಕ್ಕೆ ಸ್ಪಷ್ಟವಾದ ಕಾರಣವನ್ನು ಕೊನೆಯ ಅಂಕಣದಲ್ಲಿ ನಿಮ್ಮೆಲ್ಲರಿಗೂ ತಿಳಿಸುವೆ. ಅಲ್ಲಿಯವರೆಗೂ ಕಾದು, ಎಲ್ಲ ಅಂಕಣಗಳನ್ನ ಓದಿ, ಕಮೆಂಟ್ ಮೂಲಕ ಅಭಿಪ್ರಾಯಗಳನ್ನು ತಿಳಿಸಿ ಪ್ರೋತ್ಸಾಹಿಸಬೇಕೆಂದು ಓದುಗದೊರೆಗಳಲ್ಲಿ ನಾನು ವಿನಮ್ರತೆಯಿಂದ ಪ್ರಾರ್ಥಿಸಿಕೊಳ್ಳುತ್ತೇನೆ.


ಲೆಕ್ಕಾಚಾರ ಎಂದರೆ ಎಲ್ಲರಿಗೂ ತಿಳಿದದ್ದೇ.. ಸರಿಯಾದ ಲೆಕ್ಕಾಚಾರವಿಲ್ಲದೆ ಯಾವೊಬ್ಬ ಮನುಷ್ಯನೂ ಅರ್ಥಪೂರ್ಣ ಹಾಗೂ ಸಮರ್ಥ ಬದುಕನ್ನು ಬದುಕಲು ಸಾಧ್ಯವಿಲ್ಲವೆಂಬುದು ನನ್ನ ಅಭಿಪ್ರಾಯ. ಪ್ರತೀ ಕ್ಷಣವೂ ನಾವು ಯಾವುದಾದರೊಂದು ಲೆಕ್ಕಾಚಾರದಲ್ಲಿ ಬದುಕುತ್ತಿರುತ್ತೇವೆ. ಎಷ್ಟು ಗಂಟೆಗೆ, ಯಾವ ದಿಕ್ಕಿಗೆ ಎದ್ದು, ಯಾವ ದೇವರ ಫೋಟೋ ನೋಡಬೇಕು ಎಂಬುದರಿಂದ ಹಿಡಿದು, ರಾತ್ರಿಗೆ ಊಟ ಏನು, ಎಷ್ಟು ಜನಕ್ಕೆ, ಎಷ್ಟು ಉಪ್ಪು ಹಾಕಬೇಕು, ಎಷ್ಟು ಹುಳಿ ಹಾಕಬೇಕು, ಖಾರ ಎಷ್ಟಿದ್ದರೆ ಚೆನ್ನ ಎಂಬ ದೈನಂದಿನ ಲಕ್ಷಾಂತರ ಪ್ರಶ್ನೆಗಳಿಗೆ ನಮ್ಮ ಮನದಲ್ಲಿ ಈಗಾಗಲೇ ಉತ್ತರಗಳು ಮನನಗೊಂಡಿದ್ದರೂ.. ಪ್ರತಿಬಾರಿಯೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ನಮ್ಮೆಲ್ಲರದ್ದು ಭಿನ್ನ ಭಿನ್ನವಾದ ಲೆಕ್ಕಾಚಾರಗಳು. ಅವುಗಳಲ್ಲಿ ನನ್ನದೂ ಒಂದು. ಈ ಭಿನ್ನವಾದ ಲೆಕ್ಕಾಚಾರ ತಮ್ಮೆಲ್ಲರಿಗೂ ಮುದ ನೀಡಬಹುದು, ಮನ ತಿಳಿಯಾಗುವಂತೆ ಕಲಕಬಹುದು ಅಥವಾ ಕೆಲವೊಮ್ಮೆ ತಟ್ಟಿ ಎಚ್ಚರಿಸಬಹುದು. ಒಟ್ಟಿನಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಅದು ನಿಮ್ಮನ್ನು ಮುಟ್ಟಿ, ರುಚಿಸುತ್ತದೆ ಎಂಬುದು ನನ್ನ ಲೆಕ್ಕಾಚಾರ.

ಅಚ್ಚ ಹಳ್ಳಿಯಾದ ನನ್ನೂರು, ಮಿಡಲ್ ಕ್ಲಾಸ್ ಫ್ಯಾಮಿಲಿ, ಕುಡುಕ ತಂದೆ, ಬಡತನ, ಬಾಡಿಗೆ ಮನೆ, ಹೋರಾಟ, ಕಣ್ಣೀರು, ಬಿಸಿಲು, ಹಸಿವು, ಮಮತೆ, ಕೂಲಿ-ನಾಲಿ, ಮೈಕ್ ಸೆಟ್, ಅಪ್ಪನ ಆತ್ಮಹತ್ಯೆ, ಬಾರ್ ಸಫ್ಲೈಯರ್, ಕನ್ನಡದ ಹುಚ್ಚು, ಸಿನೆಮಾ, ರಂಗಭೂಮಿ, ಪುಸ್ತಕಗಳ ಕಳವು, ಸ್ಕೂಲ್ ಲೈಫ್, ಗುರುಗಳು ಮತ್ತು ಅಣ್ಣನ ಸುತ್ತ ಬೆಸೆದುಕೊಂಡಿರುವ ನೆನಪುಗಳ ಬುತ್ತಿಯನ್ನು ನಿಮ್ಮುಂದೆ ಬಿಚ್ಚಿಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ನಿಮ್ಮೆಲ್ಲರ ಸಹಕಾರ ಎಂದಿನಂತೆ ಇರಲಿ.


ಜೀವನಾನುಭವವನ್ನು ತೆರೆದಿಡುವಷ್ಟು ವಯಸ್ಸಾಗದಿದ್ದರೂ ಕೂಡ, ಈ ಆಧುನಿಕ ಯುಗದಲ್ಲಿ ನೆನಪುಗಳು ಮಾಸಬಾರದು ಎಂಬ ಚಿಕ್ಕ ಕಾರಣಕ್ಕಾಗಿ ಬೇಗನೆ ನನ್ನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ಧೇನೆ. ತಪ್ಪಿದ್ದರೆ ತಿದ್ದಿ ನಡೆಸಿ. ಈ ಅಂಕಣದಲ್ಲಿ ನನ್ನ ಕುಟುಂಬ ಒಂದು ಉದಾಹರಣೆಯಷ್ಟೇ.. ನನ್ನ ಕುಟುಂಬದಷ್ಟು ನಾನು ಇನ್ನೊಂದು ಬೇರೆ ಕುಟುಂಬವನ್ನು ಅರಿಯಲು ಸಾಧ್ಯವಿಲ್ಲ. ಹಾಗಾಗಿ ಅಂಕಣದಲ್ಲಿ ನನ್ನದೇ ಕುಟುಂಬವನ್ನು ಉದಾಹರಿಸುವುದರಿಂದ ಪ್ರಮಾದವೇನೂ ಆಗದೆಂದು ಭಾವಿಸಿದ್ದೇನೆ. ಎಲ್ಲರಿಗೂ ಇಷ್ಟವಾಗದಿದ್ದರೂ ಕೂಡ ಇಲ್ಲಿನ ಕೆಲವು ಅಸಂಭವನೀಯ ಘಟನೆಗಳು ನಿಮ್ಮನ್ನು ಕೆಲಹೊತ್ತು ಮೌನಿಯಾಗಿಸುತ್ತವೆ ಎಂದು ನಂಬಿದ್ದೇನೆ. ಹಾಗೇ ಈ ಜಗವನ್ನು ಕ್ಷಣಕಾಲ ಮೌನದಲ್ಲೇ ನೋಡುವ ಬಹು ದಿನಕ ಬಯಕೆ ನನ್ನದು. ಕೆಲವರಾದರೂ ಮೌನಿಯಾಗುವಿರೆಂಬ ಭರವಸೆ ಇದೆ. ಮುಂದೆ, ತಿಳಿಯದೆ ಆಗಬಹುದಾದ ತಪ್ಪುಗಳಿಗೆ ಮೊದಲೇ ಕ್ಷಮೆಯಾಚಿಸುತ್ತಾ.. ಇನ್ನು ಮುಂದೆ ನಿಮ್ಮೆಲ್ಲರನ್ನು ಪ್ರತೀವಾರವೂ ಭೇಟಿಯಾಗಬಯಸುತ್ತೇನೆ. ಎಲ್ಲರೂ ಕಾತುರದಿಂದ ಕಾಯುವ, ಹಾಗೂ ಅವರೆಲ್ಲರ ಕಾತುರವನ್ನು ನಿರಾಶೆ ಪಡಿಸದ ನನ್ನ ಉತ್ಸಾಹಕ್ಕೆ ನಿಮ್ಮೆಲ್ಲರ ಬೆಂಬಲ ಇದೆ ಎಂಬ ಹೆಬ್ಬಯಕೆಯೊಂದಿಗೆ ಅತಿ ಶೀಘ್ರದಲ್ಲಿ ಲೆಕ್ಕಾಚಾರ ಬರೆಯಲು ಮುಂದಾಗುತ್ತಿದ್ದೇನೆ.


               ಎಲ್ಲರ ಆಶೀರ್ವಾದವಿರಲಿ..🙏💐🥰
                         ಅನಂತ ಕುಣಿಗಲ್
                 ಯುವ ನಿರ್ದೇಶಕ & ಬರಹಗಾರ
            ananthangowda97@gmail.com

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಆಕೆಗೆ ಅದು ಮೊದಲ ರಾತ್ರಿಯಲ್ಲ! - ಕವಿತೆ - ಅನಂತ ಕುಣಿಗಲ್

" ಆಕೆಗೆ ಅದು ಮೊದಲ ರಾತ್ರಿಯಲ್ಲ! " ಆಕೆಗೆ ಅದು ಮೊದಲ ರಾತ್ರಿಯಲ್ಲ ಯಾಕೆಂದರೆ, ಅವಳು ಮದುವೆಯೇ ಆಗಿರಲಿಲ್ಲ!! ಇಪ್ಪತ್ತೆರೆಡು ವರ್ಷದ ಆ ಬಾಲಕಿ ಹೆಚ್ಚು ಓದಲಾಗಲಿಲ್ಲ, ಕಾರಣ ನೂರಾರು  ಅಪ್ಪ ಕುಡಿದು ಕುಡಿದು ಸತ್ತ ಇಲ್ಲ, ಮಗನಿಂದಲೇ ಕೊಲೆಯಾದ ಅಪರಾಧಿ ತಮ್ಮ ಜೈಲಿಗೆ ಹೋದ ಅಮ್ಮ ಒಬ್ಬಳೇ ಹಾಸಿಗೆ ಮೇಲೆ ದಿನ ಎಣಿಸುತ್ತಿದ್ದಾಳೆ ಹಾಳಾದ ಕ್ಯಾನ್ಸರ್ ರೋಗ ಆರು ವರ್ಷಗಳಿಂದ ಅವಳ ನಗು ಕಿತ್ತುಕೊಂಡಿದೆ  ಈಗಲೂ ಅವಳು ಸ್ವಾರ್ಥಿಯಾದರೆ..? ಆ ಬದುಕಿಗೆ ಅರ್ಥವುಂಟೆ?! ಓದಿಗೆ ತಕ್ಕನಾದ ಕೆಲಸವಿಲ್ಲ ತನ್ನವರು ಅಂತ ಯಾರೂ ಇಲ್ಲ ಒಬ್ಬಳಿಗೊಬ್ಬಳೇ.. ಒನಕೆ ಓಬವ್ವನೂ ಅಲ್ಲ  ಮದುವೆಯಾದರೆ ಸರಿಯಾಗುವುದೇ ಎಲ್ಲ? ನಂತರವೂ ಎಲ್ಲ ಹೀಗೆ ಇದ್ದರೆ.. ಮದುವೆ ಅನರ್ಥ ಹೀಗೇ ಇದ್ದುಬಿಡೋಣ.. ಅದೊಂದು ಗಟ್ಟಿ ನಿರ್ಧಾರ  ಎಷ್ಟು ದುಡಿಯಬಹುದು? ಎರಡೇ ಎರಡು ಕೈಗಳು?! ಪಾಪ ಪುಟ್ಟ ಕೈಗಳು ಸೂರ್ಯನಿಗೂ ಸಮಯದ ಅರಿವಿಲ್ಲ ಬೇಗ ಬಂದು ಬೇಗ ಹೋಗುತ್ತಾನೆ ಸಿಗುವುದು ಚಿಲ್ಲರೆ ರೂಪಾಯಿಗಳಷ್ಟೇ ಅದರಿಂದ ಅವಳ ಹೊಟ್ಟೆ ತುಂಬೀತೇ?? ಹೆತ್ತಾಕೆಯ ರೋಗ ಹೋದೀತೇ?? ಮತ್ತೆ ಎಲ್ಲವೂ.. ಹಾಗೇ!!  ಇನ್ನೊಂದು ನಿರ್ಧಾರವಾಗಬೇಕಿದೆ ಹಳ್ಳಿ ಬಿಟ್ಟು ಪಟ್ಟಣ ಸೇರುವುದು ಅದೂ ಆಯ್ತು.. ಕೆಲಸಕ್ಕಾಗಿ ಅಲೆದಲೆದು ಸಾಕಾಯ್ತು ಕಣ್ಣಿನಲ್ಲಡಗಿರುವ ನೋವು ನೋಡಿದವರಿಗಿಂತ ಅವಳೆದೆಯ ಉಬ್ಬು ಸವಿದವರೇ ಹೆಚ್ಚು ಅವರ ಕಣ್ಣಿನ ದಾಹಕ್ಕೆ ಎದೆಯೇ ಹಿಂಗುತ್ತಿವೆ ದಿನವೂ ...