ವಿಷಯಕ್ಕೆ ಹೋಗಿ

ಕ್ಷಮಿಸಿಬಿಡಿ ಅಕ್ಕ - ಕಥನ ಕಾವ್ಯ - ದೀಕ್ಷಿತ್ ನಾಯರ್


ಕ್ಷಮಿಸಿ ಬಿಡಿ ಅಕ್ಕ

(ಕೇರಳದ ಯುವತಿಯ ಮೇಲಾದ ಪೈಶಾಚಿಕ ಕೃತ್ಯದ ಸುದ್ದಿ ಕೇಳಿ, ನೋವಿನಿಂದ ಬರೆದ ಹೃದ್ರ್ಯ ಕಾವ್ಯ)

"ಕ್ಷಮಿಸಿ ಬಿಡಿ ಅಕ್ಕ" ಅಗ್ನಿಗಾಹುತಿಯಾಗುತ್ತಿದ್ದ ಪತಿವ್ರತೆ ಸೀತೆಯನ್ನು ತಡೆಯದೆ ಅವಕ್ಕಾದಂತೆ ನಿಂತಿದ್ದ ಪ್ರಜೆಗಳಿರುವ ದೇಶದೊಳು। ಯಃಕಶ್ಚಿತ್ ನಾನೊಬ್ಬನೂ ಅಷ್ಟೆ ಇಂದು ನಿಮ್ಮ ಪರ ದನಿ ಎತ್ತಲಾಗುತ್ತಿಲ್ಲ ಗಂಟಲಿನ ಪಸೆ ಒಣಗಿದೆ।

"ಕ್ಷಮಿಸಿ ಬಿಡಿ ಅಕ್ಕ" ಸ್ತ್ರೀಯನ್ನು ಜಾರಿಣಿ,ಲೋಕನಿಂದಿತೆ ಎಂದ ಹೇವರಿಕೆಯ ದೇಶದೊಳು ಕಾನೂನಿನ ವಿರುದ್ಧ ಸೆಟೆದು ನಿಂತು ಸ್ತ್ರೀ ಸ್ವಾತಂತ್ರ್ಯದ ಪರ ಧ್ವನಿ ಎತ್ತಲು ನಮ್ಮ ಜನ ನಿಗಿ ನಿಗಿ ಬೆವರುತ್ತಿದ್ದಾರೆ। ಪೌರುಷತ್ವ ಕಳೆದುಕೊಂಡ ಅವರ ನೆನೆದು ನನಗೆ ಖೇದವಾಗಿದೆ।

"ಕ್ಷಮಿಸಿ ಬಿಡಿ ಅಕ್ಕ" ಹಾಸಿಗೆಯ ಮೇಲೆ ಮೈ ಚೆಲ್ಲಿ ಉದ್ರಿಕ್ತ ಉನ್ಮಾದಕ್ಕಾಗಿ ಇಷ್ಟ ಬಂದಂತೆಲ್ಲಾ ಬಳಸಿಕೊಂಡ ಜನರ ಸುತ್ತಲು ಇಂದು ಕಾಷ್ಠ ಮೌನ ಆವರಿಸಿದೆ। ಕತ್ತಲೆಯ ಕೋಣೆಯಲ್ಲಿ ತೊಡೆ ತಟ್ಟುವವರ ಪೌರುಷವು ಅರ್ಧಕ್ಕೆ ಮುರುಟಿ ಹೋಗಿದೆ।

"ಕ್ಷಮಿಸಿ ಬಿಡಿ ಅಕ್ಕ" ಪಾಪವನ್ನು ದ್ವೇಷಿಸ ಬೇಕು ಪಾಪಿಯನ್ನು ಪ್ರೀತಿಸ ಬೇಕು ಎಂಬ ಗಾಂಧಿ ತತ್ವದಡಿಯಲ್ಲಿ ಬದುಕುತ್ತಿದ್ದಾರೆ ನಮ್ಮ ದೇಶ ಬಾಂಧವರು। ರಸ್ತೆಯುದ್ದಕ್ಕೂ ಜಾಥಾ ಹೊರಟು ಮೋಂಬತ್ತಿ ಉರಿಸಿ "ನ್ಯಾಯ ಬೇಕು" ಎಂದು ಕೇಳಿದರೆ ಎಲ್ಲವೂ ಮುಗಿದು ಹೋಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ, ಆದರೆ ನಿಮ್ಮ ತಾಯ್ಗರಳು ಮಡತೆ ಬಿದ್ದು ಹೋಗಿರುವುದ ಮರೆತಿದ್ದಾರೆ।

"ಕ್ಷಮಿಸಿ ಬಿಡಿ ಅಕ್ಕ" ಸಾವಿರ ಕನಸುಗಳ ಮೂಟೆ ಹೊತ್ತು ಬದುಕ ಹೆಕ್ಕಿಕೊಂಡು ಹೊರಟ ನಿಮಗೆ ಹೀಗಾಗಬಾರದಿತ್ತು ಎಂದು ನನಗೆ ಅನಿಸುತ್ತಿದೆ। ಅನಾಮಧೇಯ ಕೋಣೆಯಲ್ಲಿ ಕಳೆದುಕೊಂಡ ಶೀಲವ ತರಲು ಸಾಧ್ಯವಿಲ್ಲವೆಂಬುದೂ ತಿಳಿದಿದೆ। ಆದರೆ ಲೋಕದ ವಾರ್ತೆಗಳು "ಸಂತ್ರಸ್ತೆಗೆ ನ್ಯಾಯ ಸಿಗುತ್ತದೆ" ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ

ಮತ್ತೊಮ್ಮೆ ನಿತ್ತರಿಸಿಕೊಳ್ಳಲಾಗದೆ ತೊಯ್ದು ಹೋದ ದನಿಯಲ್ಲಿ ಕೇಳುತ್ತಿದ್ದೇನೆ "ಕ್ಷಮಿಸಿ ಬಿಡಿ ಅಕ್ಕ"। ಕಾಮಕ್ಕೆ ಪರ್ಯಾಯ ಮಾರ್ಗವಿದೆ ಆದರೆ ಪ್ರೀತಿಗಿಲ್ಲ ಎಂಬುದ ಈಗಲಾದರೂ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭರವಸೆಯಲಿ ನಿಮ್ಮನ್ನು ಮತ್ತೂ ಕ್ಷಮೆ ಕೇಳುವೆ।

- ದೀಕ್ಷಿತ್ ನಾಯರ್, ಮಂಡ್ಯ

ಕಾಮೆಂಟ್‌ಗಳು



  1. "ಕ್ಷಮಿಸಿ ಬಿಡಿ ಅಕ್ಕ" ದೀಕ್ಷಿತ್ ನಾಯರ್ ರವರು ರಚಿಸಿರುವ ಕಥನ ಕಾವ್ಯವಿದು. ಇಲ್ಲಿ ಕವಿಯು ಸಮಾಜಿಕ ಅರಾಜಕತೆಯನ್ನ ಬಿಂಬಿಸುವಲ್ಲಿ ಮುಂದಾಗಿದ್ದಾನೆ. ಬೇರೇಯವರ ತಪ್ಪನ್ನು ಕೈಬೆರಳು ಮಾಡಿ ದೂಷಿಸುವಾಗ ಉಳಿದ ಬೆರಳುಗಳು ನಮ್ಮನ್ನೇ ತೋರಿಸ್ತುವಂತೆ. ಆದರೆ ಇಂತಹ ಬೆರಳುಗಳನ್ನ ನಿರ್ಲಕ್ಷ್ಯತನದಿಂದ ಬೆರೇಯವರತ್ತ ಬೆರಳು ಮಾಡತ್ತಲೇ ಇರುವ ಹುಂಬರ ನಡುವೆ ಕವಿ ವಿಭಿನ್ನ ಎನಿಸಿದ್ದು ಸುಳ್ಳಲ್ಲ. ಸಾಮಾಜಿಕ ಅರಾಜಕತೆಯ ವಿರುದ್ದದ ನನ್ನೊಬ್ಬನ ದ್ವನಿಗೆ ದ್ವನಿಗೂಡಿಸುವ ಮತ್ತೊಂದು ದ್ವನಿ ಕೇಳುತ್ತಿಲ್ಲ ಹಾಗಾಗಿ ನನ್ನ ಸಣ್ಣ ದ್ವನಿ ಬೀಳಬೇಕಾದವರ ಕಿವಿಗೆ ಕೇಳಲೇ ಇಲ್ಲ ಎನ್ನುವಲ್ಲಿ ಆ ಅಸಹಾಯಕತೆಯ ಹತಾಶೆಯ ಭಾವ ಓದುಗನ ಕಣ್ಣೀರಲ್ಲಿ ನೀರು ತರಿಸಿ, ಸಾಮಾಜಿಕ ಪ್ರಜ್ಞೆ ಮೂಡಿಸಿದರೂ ತಪ್ಪಿಲ್ಲ. ಹೌದು ನಾವು ನಮ್ಮ ಸ್ವಾರ್ಥಗಳನ್ನೆಲ್ಲ ಒಮ್ಮೆ ಪಕ್ಕಕ್ಕಿಟ್ಟು ದ್ವನಿ ಎತ್ತುವ ಧೈರ್ಯವಂತರಿಗೆ ನಮ್ಮ ಧ್ವನಿಯ ಹೆಗಲು ಕೊಡಬೇಕು. ಇಲ್ಲದಿದ್ದರೆ ಇಂತ ಪಾಪಕೃತ್ಯ ಎಸಗಿದ ಪಾಪಿಗಳ ಪಾಪಕ್ಕೆ ಪರೋಕ್ಷವಾಗಿ ನಾವು ಬೆಂಬಲ ನೀಡಿದಂತೆಯೇ ಸರಿ. ಗೆಳೆಯರೇ ಅಲ್ಪ ಸುಖಗಳಿಗಾಗಿ ದ್ವನಿ ಎತ್ತುನ ನಾವುಗಳು ಇನ್ಮುಂದಾದರೂ ಮಾನವೀಯತೆ ಮೆರೆಯೋಣ. ಇಂತ ಹೀನ ಕೃತ್ಯಗಳ ವಿರುದ್ದ ದ್ವನಿ ಎತ್ತೋಣ. ಹಾಗೂ ಹೀನ ಕೃತ್ಯಗಳು ನಡೆಯದಂತೆ ಎಚ್ಚರವಹಿಸೋಣ.


    ದೀಕ್ಷಿತ್ ನಿಮ್ಮಂತರಾಳದ ನೋವು ಹತಾಶೆ ಇಲ್ಲಿ ಚಾಟಿ ಏಟಿನಂತಿದ್ದು, ಪ್ರತಿಯೊಬ್ಬ ಓದುಗನಲ್ಲಿ ಸ್ವಅಪರಾದದ ಪ್ರಜ್ಜೆ ಮೂಡಿಸಿ ಮನಪರಿವರ್ತನೆಗೆ ದಾರಿದೀಪವಾಗುವಂತಿದೆ. ನಿಮ್ಮಿಂದ ಇಂತಹ ಅನೇಕಾನೇಕ ಸಾವಾಜಿಕ ಜಾಗೃತಿಯ ಸಾಲುಗಳು ಹೊರಹೊಮ್ಮಲಿ, ಶುಭವಾಗಲಿ
    ಇಂತೀ,
    ನಿಮ್ಮ ಆತ್ಮೀಯ
    ಶಂಭುಗೌಡ. ಆರ್. ಜಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

Avva Pustakalaya

ಅವ್ವ ಪುಸ್ತಕಾಲಯ ಸಾಹಿತ್ಯ ಬಳಗವು 2020 ರ ಏಪ್ರಿಲ್ 04 ರಂದು ಶ್ರೀಮಾನ್ ಲೇಟ್ ನಾರಸಯ್ಯ ಅವರ ಸ್ಮರಣಾರ್ಥವಾಗಿ ರೂಪುಗೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಓದುಗರ ಬಳಗವನ್ನು ಹೊಂದಿದೆ. ಇದು ಡಿಜಿಠಲ್ ಗ್ರಂಥಾಲಯವಾಗಿದ್ದು, ಓದಿನ ಅಭಿರುಚಿ ಹಬ್ಬಿಸಲು ಬಹಳಷ್ಟು ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ಜುಲೈ ತಿಂಗಳಲ್ಲಿ ಪ್ರಕಟಿತ ಕೃತಿಗಳನ್ನು ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿಗೆ ಆಹ್ವಾನಿಸಲಾಗುವುದು. ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಯ ಜೊತೆಗೆ ಐದು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಹಂಚಿ, ಅವರ ಪುಸ್ತಕಗಳನ್ನು ಅವ್ವ ಪುಸ್ತಕಾಲಯ ವೇದಿಕೆಯ ಮುಖೇನ ಓದುಗರಿಗೆ ಮುಟ್ಟಿಸಲಾಗುವುದು . ಈಗಾಗಲೇ ಅವ್ವ ಪುಸ್ತಕಾಲಯದಿಂದ ಪ್ರಧಾನ ಕಾರ್ಯದರ್ಶಿಗಳಾದ  ಯುವಲೇಖಕ ಅನಂತ ಅವರ ಮೂರು ಕೃತಿಗಳು ಪ್ರಕಟವಾಗಿದ್ದು ಅವುಗಳು ಓದುಗರಿಗೆ ರಿಯಾಯಿತಿ ದರದಲ್ಲಿ ಸಿಗುತ್ತಿವೆ. ಓದುಗರು ನಮ್ಮನ್ನು ಸಂಪರ್ಕಿಸುವ ಮೂಲಕ ಪುಸ್ತಕಗಳನ್ನು ಕೊಂಡು ಓದಬಹುದು. ಮತ್ತು ನಮ್ಮ ಸಾಹಿತ್ಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. 1). ಅವ್ವ ಪುಸ್ತಕಾಲಯ #189, ಕೆಂಚನಹಳ್ಳಿ ಅಂಚೆ ಹುಲಿಯೂರುದುರ್ಗ ಹೋಬಳಿ ಕುಣಿಗಲ್ ತಾಲ್ಲೂಕು ತುಮಕೂರು - 572123 ಮೊ : 8548948660 Mail :  avvapustakaalaya@gmail.com 2).  Facebook....