ವಿಷಯಕ್ಕೆ ಹೋಗಿ

ಅತ್ಯಾಚಾರ - ಲೇಖನ - ಸ್ವಾತಿ ಶೆಟ್ಟಿ


ಅತ್ಯಾಚಾರ

     ಈ ಪ್ರಪಂಚದಲ್ಲಿ ಅತ್ಯಾಚಾರಕ್ಕೆ ಕೊನೆಯೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಹೆಣ್ಣೆಂದರೆ ಏನು? ಅವಳು ಅಬಲೇ,ತ್ಯಾಗಮಯಿ,ಮೃದು ಸ್ವಭಾವದ ಮುಗುದೆ.
ಪ್ರತಿ ಹೆಣ್ಣಲ್ಲೂ ಲಕ್ಷ್ಮೀ ನೆಲೆಸಿರುತ್ತಾಳೆ. ಪ್ರತಿ ಹೆಣ್ಣಲ್ಲೂ ಸೀತೆ ವಾಸವಿರುತ್ತಾಳೆ.ಅದಕ್ಕಿಂತ‌ ಮಿಗಿಲಾಗಿ ಪ್ರತಿ ಹೆಣ್ಣಲ್ಲೂ ಒಬ್ಬ ತಾಯಿ, ತಂಗಿ, ಅಕ್ಕ ಇರುತ್ತಾಳೆ.‌ ಹೆಣ್ಣು ಎಂಬುವವಳು ಮಗುವಿಗೆ ತಾಯಿಯಾಗುತ್ತಾಳೆ, ತಮ್ಮನಿಗೆ ಅಕ್ಕನಾಗುತ್ತಾಳೆ, ಅಣ್ಣನಿಗೆ ತಂಗಿಯಾಗುತ್ತಾಳೆ, ಗಂಡನಿಗೆ ಹೆಂಡತಿಯಾಗುತ್ತಾಳೆ. ಹೀಗೆ ಹಲವಾರು ಆಕೆಯ ಬಂಧನದ ಬದುಕು. ಯಾಕೆ ಇಂದು ಈ ಪ್ರಪಂಚದಲ್ಲಿ ಹೆಣ್ಣಿಗೆ‌ ರಕ್ಷಣೆ  ಸಿಗುತ್ತಿಲ್ಲ. ಗಂಡೆಂದರೆ ಹೆಣ್ಣಿಗೆ ರಕ್ಷಣೆ ಕೊಡುವವನು ಎಂಬ ತಪ್ಪು ತಿಳುವಳಿಕೆಯ? 
ಅಂದು ದ್ರೌಪದಿಗೆ ತುಂಬಿದ ಸಭೆಯಲ್ಲಿ  ಅವಮಾನ ಆಗುತ್ತಿದ್ದರೂ, ವಸ್ತ್ರಾಪಹರಣ ಆಗುತ್ತಿದ್ದರೂ‌, ಹೆಣ್ಣಿಗೆ ದೌರ್ಜನ್ಯ ಆಗುತ್ತಿದ್ದರೂ  ಸುಮ್ಮನೆ ಕುಳಿತು ನೋಡುತ್ತಿದ್ದರೇ ವಿನಹ ಅವಳ ಸಹಾಯಕ್ಕೆ ಯಾರು ಒಂದು ಹೆಜ್ಜೆ ಮುಂದಿಡಲಿಲ್ಲ. 
ಎಲ್ಲಾ ಪಾಂಡವರಾಗಲಿ, ಭೀಷ್ಮ, ಗುರು ದ್ರೋಣ, ಎಲ್ಲಾ ಸಭಿಕರು ಮೂಖರಾದಂತೆ, ಕುರುಡ ದೃತರಾಷ್ಟ್ರ ನಂತೆ ಎಲ್ಲರೂ ಕಣ್ಣಿದ್ದು ಕುರುಡರಂತೆ ವರ್ತಿಸಿದ್ದರು. ಅಂದು ಕೃಷ್ಣನ ಸಹಾಯವೂ ಇಲ್ಲದಿದ್ದರೆ‌ ಏನಾಗುತ್ತಿತ್ತೊ‌ ಏನೋ? ‌ಇಂದು‌ ಕೂಡ‌ ಇಂತಹ ಇಷ್ಟು ಮುಂದುವರೆದ ಪ್ರಪಂಚದಲ್ಲೂ ತಿಳುವಳಿಕೆಯ ವಿಶ್ವದಲ್ಲೂ  ಅನ್ಯಾಯ, ಅತ್ಯಾಚಾರ ನಡೆಯುತ್ತಿದ್ದರೂ ಕೂಡ ಜನರು ಮೂಖರಾದಂತೆ, ನ್ಯಾಯದೇವತೆಯ ಹಾಗೇ ಕಣ್ಣಿಗೆ ಬಟ್ಟೆ ಕಟ್ಟಿದಂತೆ ನೋಡುತ್ತಾರೆ‌ ಹೊರತು ಸಹಾಯಕ್ಕಾಗಲಿ, ನ್ಯಾಯಕ್ಕಾಗಲಿ ಹೋರಾಡುವವರಿಲ್ಲ. ಇಂತವರ ನಡುವಲ್ಲಿ ಬೂದಿಯಾಗಿ‌ ಮಸಣ ಸೇರಿದವಳು ಹೆಣ್ಣು. ಇಂತಹ ದುಷ್ಕರ್ಮಿಗಳಿಗೆ ಎಂತಹ ಶಿಕ್ಷೆ ವಿಧಿಸಿದರು ಕಮ್ಮಿಯೆ. ಅವರು ಒಬ್ಬ ತಾಯಿಯ ಹೊಟ್ಟೆಯಲ್ಲಿ ಜನಿಸಿದ್ದರೂ, ಅವರ ಮನೆಯಲ್ಲಿಯೂ ಅಕ್ಕ ತಂಗಿ ಇದ್ದರೂ ಅವರನ್ನು ಕೂಡ ಕಾಮುಕ ದೃಷ್ಟಿಯಿಂದ ನೋಡುವರೋ ಏನೋ?  
ಅತ್ಯಾಚಾರಿಗಳ ಕಾಮುಕ ತನಕ್ಕೆ, ಅತ್ಯಾಚಾರಿಯ ತೆವಲಿಗೆ, ಚಪಲಕ್ಕೆ ಬಲಿಯಾದಳು ಹೆಣ್ಣು, ಭಸ್ಮವಾದಳು‌ ಹೆಣ್ಣು. ಒಂದು ಹೆಣ್ಣಿಗೆ ಅವಮಾನವಾದರೆ ಅದು ಸ್ವತಃ ಗಂಡು ತನಗೆ ತಾನೇ ಮಾಡಿಕೊಳ್ಳುವ ಅವಮಾನ. ಹೆಣ್ಣಿಗೆ ಗೌರವ ಕೊಡದ ಗಂಡು‌ ಹೇಗೆ‌ ಹೆಣ್ಣಿಗೆ ರಕ್ಷಕನಾಗುವ? ಇದೆಲ್ಲಾ ಅರಿವಾಗುವುದು ಯಾವಾಗ? ಇನ್ನು ಕಲಿಯುಗದ ವಿಷ್ಣುವಿನ ಅವತಾರವಾಗಬೇಕೋ ಏನೋ? 
ಅಂದೇ ಇಂತಹ ಅನಾಚಾರದ, ಅತ್ಯಾಚಾರಿಗಳ ಅಂತ್ಯವಾಗುವುದಾ ಏನೋ? ಎಲ್ಲಾ ಹೆಣ್ಣುಮಕ್ಕಳಿಗೆ ಹೇಳುವುದೊಂದೇ ನಿಮ್ಮ ರಕ್ಷಣೆಯಲ್ಲಿ ನೀವಿರಿ.. ಇಲ್ಲಿ ರಕ್ಷಕರಿಲ್ಲ ಭಕ್ಷಕರಿದ್ದಾರೆ. ಸ್ವಯಂ ರಕ್ಷಣೆಗೆ ಮುಂದಾಗಿ.

                           - ಸ್ವಾತಿ ಶೆಟ್ಟಿ

ಕಾಮೆಂಟ್‌ಗಳು

  1. ಕಾಮ ಎನ್ನುವುದು ಪ್ರಚೋದಿಸಬಹುದಾದ ಜೈವಿಕ ಪ್ರಕ್ರಿಯೆ. ಪ್ರಚೋದನೆ ಇಲ್ಲದ ಕಾಮ ಅಸಾಧ್ಯ. ಅತ್ಯಾಚಾರದ ಬಗ್ಗೆ ಸೊಲ್ಲು ಎತ್ತುವ ಹೆಣ್ಣು ಕುಲ ಸ್ತ್ರೀ ಸ್ವಾತಂತ್ರದ ಹೆಸರಲ್ಲಿ ಮಾಡುತ್ತಿರುವುದರ ಬಗ್ಗೆಯೂ ಮಾತಾಡಬೇಕು. ದುಡ್ಡಿಗಾಗಿ, ಚಲನ ಚಿತ್ರಗಳಲ್ಲಿ, ನೀಲಿ ಚಿತ್ರಗಳಲ್ಲಿ ಅರೆನಗ್ನ ಮತ್ತು ನಗ್ನ ಪ್ರಚೋದನೆ ಕಾರಕಳು ಒಬ್ಬಳು ಹೆಣ್ಣು ಅನ್ನುವುದನ್ನು ಅಲ್ಲಗೆಳೆಯುತ್ತೆರ? ಅಷ್ಟೇ ಏಕೆ ಶೋಕಿಯ ಹೆಸರಲ್ಲಿ ತುಂಡು ಬಟ್ಟೆಗಳ ತೊಟ್ಟು ಮಿಂಚುವ ಇಂದಿನ ಪೀಳಿಗೆ, ಆ ತುಂಡು ಬಟ್ಟೆಯ ಪ್ರಚೋದನೆಯು ಒಂದು ಹೆಣ್ಣು ಅನ್ನುವುದು ಮರೆತಿದ್ದೆರ.
    ಸ್ತ್ರೀ ಎಲ್ಲದರಲ್ಲೂ ಸಮಾನಳು ಎನ್ನುವುದಾದರೆ, ರಾಕ್ಷಸರ ವಧಿಸಲು ಸ್ತ್ರೀ ದೇವತೆಗಳೆ ಅವತರಿಸಿದ ಮೇಲೆ, ಅವಳೆಕೆ ಅಬಲೆಯಂತೆ ಪ್ರಶ್ನಿಸುವ ಕೆಲಸದಲ್ಲೆ ಮಗ್ನಲಾಗಿದ್ದಾಳೆ.
    ಸಮಸ್ಯೆ ಎಲ್ಲರಿಗೂ ತಿಳಿದಿದೆ..ಉತ್ತರ ಅಥವಾ ಪರಿಹಾರ ನೀಡುವ ಕಾರ್ಯ ಬೇಕಾಗಿದೆ. ಗುಲಾಬಿಯಂತ ಸುಂದರ ಹೂ ಬಿಟ್ಟ ಗಿಡ ಜೊತೆಗೇ ಮುಳ್ಳಿನ ಸರಪಳಿ ಹೆಣೆದು ಕಾಯುತ್ತದೆ ಹೊರತು, ನಾನು ಅಬಲಿ, ಯಾರೂ ಕಾಯರು ಎಂದು ಕೊರಗುವುದಿಲ್ಲ ಅಥವಾ ಮರುಗುವುದಿಲ್ಲ. ನಾವು ಪ್ರಕೃತಿಯ ನೋಡಿ ಕಲಿಯಬೇಕಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಮತ್ತೊಂದು ಹೆಣ್ಣೇ ಬಂದು ತೋರುವ, ಹೀನ ಸಂಸ್ಕೃತಿ ಕೊನೆಯಾಗದೆ ಇದಕೆ ಮುಕ್ತಿ ಇಲ್ಲ. ನಿಮ್ಮದೇ ಜಾತಿಯ ಎಲ್ಲ ಹೆಣ್ಣಿಗೂ ಇದರ ಅರಿವು ಮೂಡುವ ಕೃತಿಗಳು ಮುಂದೆ ಬರಲಿ ಎಂಬುದು ಆಶಯ.

    ಪ್ರತ್ಯುತ್ತರಅಳಿಸಿ


  2. ನಮ್ಮ ಈ ಪ್ರಪಂಚದಲ್ಲಿ ಯಾರೂ. ಹೆಣ್ಣಿಗೆ ಬೆಲೆ ಕೊಡುತ್ತಿಲ್ಲ ಅದರಲ್ಲೂ ನಮ್ಮ ದೇಶದಲ್ಲಿ ಹೆಣ್ಣಿನ ಮೇಲೆ ಹಾಗುವ ದೌರ್ಜನ್ಯ ಮತ್ತು ರೆಪ್. ದಿನೆ ದಿನೆ ಹೆಚ್ಚುತ್ತಿದೆ . ಇದನ್ನು ಮಾಡಿದವರಿಗೆ ಕಠಿಣ ಶಿಕ್ಷೆ ಕೊಡಬೇಕು .. ಇನ್ನೊಮ್ಮೆ ಯಾರನ್ನು ಆ ದೃಷ್ಟಿಯಿಂದ ನೊಡದಂತೆ ಮಾಡಬೇಕು.......plz. Plz. ಹೆಣ್ಣಿಗೆ ಗೌರವ ಕೊಡಿ..........

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಕೂರೋನಾದಲ್ಲೂ ಕರುಣಾಮಯಿ ಅಮ್ಮ - ಲೇಖನ - ಸಿಂಚನ ಜಿ ಎನ್

ಕೊರನದಲ್ಲೂ ಕರುಣಾಮಯಿ ಅಮ್ಮ " ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ "  ಎಂಬ ಮಾತಿನಂತೆ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವರಾದರೂ, ಅವರ ತಾಯಿಗೆ ಅವರು ಚಿಕ್ಕಮಗು  ಅಲ್ಲವೇ? ಈ ಕೊರೊನಾ ಕಾಲದಲ್ಲಿ ನಿಜವಾದ ದೊಡ್ಡ ತ್ಯಾಗಗಳು ನಮ್ಮೆಲ್ಲರ ತಾಯಂದಿರಿಂದ ನಡೆಯುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ, ಮನೆಯ ಸ್ವಚ್ಛತೆ, ಪೂಜೆ ಪುರಸ್ಕಾರ, ತಿಂಡಿ-ಊಟ, ಕಾಫಿ, ಟೀ, ಕುಟುಂಬದ ಸದಸ್ಯರ ಸ್ವಚ್ಛತೆ, ಅತಿಥಿಗಳ ಸತ್ಕಾರ, ಕುಟುಂಬದ ಆರ್ಥಿಕ ಪರಿಸ್ಥಿತಿಯ ಸುಧಾರಣೆ, ಗಂಡ ಮಕ್ಕಳ ಆರೋಗ್ಯ ಸುಧಾರಣೆ, ಮನೆಯಲ್ಲಿನ ಹಿರಿಯರ ಆರೋಗ್ಯ ಸುಧಾರಣೆ ನಿಜಕ್ಕೂ ಶ್ಲಾಘನೀಯ. ಯಾವುದೇ ಗೌರವ ಪ್ರತಿಷ್ಠೆಗಳಿಲ್ಲದೆ, ಯಾವುದೇ ಸಂಬಳವಿಲ್ಲದೆ ದುಡಿಯುವ ತ್ಯಾಗಮಯಿ ಅಮ್ಮ. ಈ ಕೊರೋನಾ ಕಾಲದಲ್ಲಿ ಇವೆಲ್ಲಾ ಕೆಲಸಗಳು ಇನ್ನಷ್ಟು ಹೆಚ್ಚಾಗಿವೆ. ಕುಟುಂಬದ ವಿವಿಧ ಸದ್ಯಸರ ವಿವಿಧ ಅಭಿರುಚಿಯ ಅಡುಗೆ, ಹಾಗೇ ವಿವಿಧ ರೀತಿಯ ಜೀವನಶೈಲಿ ರೂಪಿಸಿಕೊಳ್ಳುವುದು, ಜೊತೆಗೆ ಕುಟುಂಬಕ್ಕೆ ರೂಪಿಸಿಕೊಡುವುದು , ನಾವುಗಳೆಲ್ಲಾ ಕಲ್ಪಿಸುವಷ್ಟು ಸುಲಭವಲ್ಲ!! ಹಾಗೆಯೇ ಎಲ್ಲಾದಕ್ಕೂ ಬಹುಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ. ಮನೆಯಲ್ಲಿ ಚಿಕ್ಕಪುಟ್ಟ ಮಕ್ಕಳಿದ್ದರೆ ಅವರನ್ನು ಮನೆಯ ಒಳಗಡೆ ಇರಿಸಿಕೊಂಡು, ಹೊಸ ಹೊಸ ಅಭ್ಯಾಸಗಳು ಮನೆಯ ಪಾಠಗಳನ್ನು ಹೇಳಿ ಕೊಡಬೇಕಾಗುತ್ತದೆ. ದಿನಕ್ಕೊಮ್ಮೆ ಬೇಬಿ ಸಿಟ್ಟಿಂಗ್ ಟೀಚರ್ ಆಗಬೇಕಾಗುತ್ತದೆ, ತುಂಟ ಮಕ್ಕಳು ನಿಯಂತ್ರಣಕ್ಕೆ ಸಿಕ್ಕದ...