ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನಂತ ಅವರ 'ಮೂರನೆಯವಳು' ಕೃತಿ ಕುರಿತು ಕವಯಿತ್ರಿ ಎಂ ಆರ್ ಕಮಲ ಅವರು ಬರೆದ ಬೆನ್ನುಡಿ ಓದುಗರಿಗಾಗಿ..

ಅನಂತ ಅವರ ಹೆಚ್ಚಿನ ಕವನಗಳು ಸ್ತ್ರೀ ಕೇಂದ್ರಿತವಾದವು. ಹೆಣ್ಣಿನ ಅಂತರಂಗವನ್ನು ಹೊಕ್ಕು, ಅವಳ ಸೂಕ್ಷ್ಮ, ಸಂಕೀರ್ಣ ಅನುಭವಗಳನ್ನು ತನ್ನದಾಗಿಸಿಕೊಳ್ಳುತ್ತಾ.. ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅಭಿವ್ಯಕ್ತಿಸುವ ರೀತಿಯಲ್ಲಿ ಇಲ್ಲಿಯ ಕವಿತೆಗಳಿವೆ. ಹೆಣ್ಣನ್ನು ಅನೇಕ ಬಗೆಯಲ್ಲಿ ಶೋಷಣೆಗೆ ಗುರಿ ಮಾಡುತ್ತಿರುವ ಪುರುಷ ಪ್ರಧಾನ ಸಮಾಜವನ್ನು ಟೀಕಿಸುವ, ಪ್ರಶ್ನಿಸುವ ಕವಿಯ ಒಳಕುದಿ ಹೆಚ್ಚಿನ ಬಾರಿ ನಿಗಿ ನಿಗಿಸುವ ಕೆಂಡದಂತೆ ಪ್ರಜ್ವಲಿಸಿ ನೇರವಾಗಿಯೇ ಎದೆಯನ್ನು ಸುಡುತ್ತದೆ. ಹೊರಗಿನ ಸಂಗತಿಗಳಿಂದ ವಿಚಲಿತನಾದ ಕವಿ ಬೇಕೆಂದೇ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಪರಂಪರೆಯಲ್ಲಿ ಕಾಣುತ್ತಲೇ ಬಂದಿದ್ದೇವೆ. . ಹೊರಗಿನ ಚೆಲ್ಲಾಪಿಲ್ಲಿಯಾದ ಲೋಕದಿಂದಲೇ ಅನಂತ ಅವರ ಕವಿತೆಗಳ ರೂಪಕಗಳು ಹುಟ್ಟಿಕೊಂಡಿವೆ. ಹೆಣ್ಣೊಬ್ಬಳು ಕಲ್ಲು, ಬಂಡಿ, ಹೂವು, ಬುಟ್ಟಿ, ನಳ, ತಂತಿ, ನೇಗಿಲು ಹೀಗೆ ಉಪಯೋಗಕ್ಕೆ ಬರುವ ಭೌತಿಕ ವಸ್ತುಗಳಾಗಿ ಕಾಣುತ್ತಾಳೆ ಎನ್ನುವುದನ್ನು ಮಾರ್ಮಿಕವಾಗಿ ಹೇಳುತ್ತಾರೆ. ಹೆಣ್ಣನ್ನು ಭೋಗದ ವಸ್ತು ಎಂದು ಪರಿಗಣಿಸಿರುವುದನ್ನು 'ಭೋಜನ'ದ ರೂಪಕದ ಮೂಲಕ ಕವಿಯು ಹೇಳುವುದು ವಿಶಿಷ್ಟವಾಗಿದೆ. ಇಡೀ ಕಪ್ಪು ಜನಾಂಗವನ್ನು ವರ್ಣ ರಾಜಕಾರಣಕ್ಕಾಗಿ ಶೋಷಣೆಗೆ ಗುರಿಪಡಿಸಿದ್ದನ್ನು ಹೇಳುವಾಗ ಮಹತ್ವದ ಆಫ್ರಿಕನ್-ಅಮೇರಿಕನ್ ಕವಯತ್ರಿ ಆಲೀಸ್ ವಾಕರ್ ಇಂತಹದ್ದೇ ರೂಪಕಕ್ಕೆ ಮೊರೆ ಹೋಗುವುದನ್ನು ನಾವಿಲ್ಲಿ ನ...

ತುಮಕೂರು ಪ್ರತಿಭೆ 'ಅನಂತ' ಅವರಿಗೆ ರಾಜ್ಯ ಯುವ ರತ್ನ ಪ್ರಶಸ್ತಿ ಪುರಸ್ಕಾರ

ತುಮಕೂರು ಜಿಲ್ಲೆಯ ಯುವ ಪ್ರತಿಭೆಗೆ ರಾಜ್ಯ ಯುವ ರತ್ನ ಪ್ರಶಸ್ತಿ ಶ್ರೀನಿವಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊಡಲಾಗುವ "ರಾಜ್ಯ ಯುವರತ್ನ ಪ್ರಶಸ್ತಿ 2021" ಕ್ಕೆ ಕಲಾವಿದರಾದ ಅನಂತ್ ಕುಣಿಗಲ್ ಅವರು ಆಯ್ಕೆಯಾಗಿದ್ದಾರೆ. ಅನಂತ ಅವರ ಕನ್ನಡ ಸಾಹಿತ್ಯ ಸೇವೆ ಮತ್ತು ರಂಗಭೂಮಿ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ಫೆ. 1 ಕ್ಕೆ ಯಲಹಂಕ ಶೇಷಾದ್ರಿಪುರಂ ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿಗಳಾದ ನವೀನ್ ಕುಮಾರ್ ಕೆ ಎಸ್ ಅವರು ತಿಳಿಸಿದ್ದಾರೆ. ಅನಂತ ಅವರು ಬಿ.ಎಸ್ಸಿ ಹಾಗೂ ಡ್ರಾಮಾ ಡಿಪ್ಲೊಮಾ ಪದವೀಧರರು. ಸಾಹಿತ್ಯ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರಗಳೆಂದರೆ ಅಚ್ಚುಮೆಚ್ಚು. ಈವರೆಗೆ ನಾಟಕಗಳಲ್ಲಿ ಅಭಿನಯಿಸುವುದರೊಂದಿಗೆ ಕಿರು ನಾಟಕಗಳನ್ನು ಬರೆದು ಶಾಲಾಕಾಲೇಜು ಮಕ್ಕಳಿಗೆ ನಿರ್ದೇಶನ ಮಾಡಿರುತ್ತಾರೆ. ಅವರ ಮೊದಲ ಕೃತಿ 'ಋಣಭಾರ' ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಯುವಬರಹಗಾರರ ಚೊಚ್ಚಲ ಕೃತಿ ಪುರಸ್ಕಾರ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪುಸ್ತಕ ಬಹುಮಾನ ದೊರೆತಿವೆ. ಸಧ್ಯ ಕನ್ನಡ ಚಲನಚಿತ್ರಗಳ ನಿರ್ದೇಶನ ತಂಡಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ಕಿರುಚಿತ್ರಗಳಿಗೆ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಋಣಭಾರ ಕಥಾಸಂಕಲನ ಕೊಳ್ಳಲು ಸಂಪರ್ಕಿಸಿ ಅನಂತ : 974202...

ಓದಬೇಡಿ! - ಕವಿತೆ - ಆನಂತ್ ಕುಣಿಗಲ್

ಓದಬೇಡಿ!! ಮೊದಲೇ ಎಚ್ಚರಿಸುತ್ತಿದ್ದೇನೆ ನನ್ನನ್ನು ಓದಬೇಡಿ!! ಯಾಕೆಂದರೆ, ನಾನು ಸರಿ ಇಲ್ಲ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತೇನೆ ಅದಕ್ಕೆ ನನ್ನನ್ನು ಕವಿತೆ ಎಂಬರು ಹೇಳಿದೆನಲ್ಲಾ.. ಓದಬೇಡಿ ಎಲ್ಲಿಯೋ ವಿಚಾರಗಳನ್ನು ನಾಲ್ಕು ಸಾಲಿನಲ್ಲೇ ಹಿಡಿದಿಡುತ್ತೇನೆ ಸತ್ಯವನ್ನು ಉಸುರುತ್ತೇನೆ ಯಾವ ಭಯವಿಲ್ಲದೆ ಯಾರಿಗೂ ಅಂಜದೆ ತಲೆ ಎತ್ತಿ ನಡೆಯುತ್ತೇನೆ ಎಲ್ಲರ ಮುಂದೆಯೂ.. ಮತ್ತೆ ಯಾಕೆ ಓದುತ್ತಿದ್ದೀರಿ ನೀವು? ನನ್ನ ಸಂಗ ಮಾಡಿದರೆ ಬಾಂಬನ್ನು ಬಗಲಲ್ಲಿ ಇಟ್ಟುಕೊಂಡಂತೆ ಯಾವಾಗ ಸಿಡಿಯುವುದೋ ನಾನೂ ಕಾಣೆ! ಉಷಾರಾಗಿರಿ.. ಸಧ್ಯಕ್ಕೆ ಓದಬೇಡಿ ನೀವು ನಿಜಕ್ಕೂ ತಪ್ಪುಮಾಡುತ್ತಿದ್ದೀರಿ!! ನನ್ನ ಬಗ್ಗೆ ಪೂರ್ತಿ ತಿಳಿಯದ ಹೊರತು ನನ್ನನ್ನು ಓದಬೇಡಿ ದಯವಿಟ್ಟು ನಾನು ಪದಪುಂಜಗಳ ಕಟ್ಟು ನ್ಯಾಯದ ತೂಕಕ್ಕೆ ತೂಗುವ ಬೊಟ್ಟು ತಲೆಹೋದೀತು ನನ್ನನ್ನು ಮೆಚ್ಚಿದರೆ ಅಥವಾ ತಲೆ ಕೆಟ್ಟೀತು ನನ್ನನ್ನು ಬರೆದರೆ ಅಯ್ಯೋ ನಿಲ್ಲಿಸಿ ಪ್ಲೀಸ್.. ಶುರುವಾಯಿತು ನಿಮ್ಮ ಟೈಮ್ ಮನೆಯಲ್ಲಿ ಹೇಳಿಬಿಡಿ ಬೇಗ ಚಟ್ಟ ಸಿದ್ಧಪಡಿಸಿಕೊಳ್ಳಿ ನನ್ನನ್ನು ಓದಿದ ತಪ್ಪಿಗೆ ನಿಮ್ಮನ್ನು ಈಗಲೇ ತಳ್ಳುವೆ ಕವಿತೆ ಎಂಬ ಗುಂಡಿಯಲ್ಲಿ ಇನ್ನೆಂದೂ ಎದ್ದೇಳಲಾರಿರಿ ಮುಂದೆಯಾದರೂ ನನ್ನನ್ನು ಓದದಿರಿ..                       ✍ ಅನಂತ್ ಕುಣಿಗಲ...

ಪುಸ್ತಕ ಮಾಡಿಸುವವರಿಗೆ ಮಾರ್ಗಸೂಚಿ - ಸೋನು ಸೌಮ್ಯ, ಯುವ ಕಾದಂಬರಿಗಾರ್ತಿ

ಪುಸ್ತಕ ಪ್ರಕಟಿಸುವ ಮುನ್ನ ಈ ಅಂಶಗಳನ್ನು ತಿಳಿಯಿರಿ ನೀವು ಪುಸ್ತಕ ಹೊರತರಬೇಕೆಂದಿದ್ದೀರೆ? ಹಾಗಾದರೆ ಈ ವಿವರಗಳನ್ನು ನೋಡಿ.. ಪುಸ್ತಕವೆಂಬುದು ಕೇವಲ ಕಾಗದಗಳಿಂದ ಕೂಡಿದ್ದಲ್ಲ. ಬದಲಿಗೆ ಪ್ರತಿಯೊಬ್ಬ ಬರಹಗಾರರ ಭಾವನೆಯ ಸಮಾಗಮವೇ ಈ ಪುಸ್ತಕ. ಆ ಪುಸ್ತಕ ಮತ್ತೊಬ್ಬರ ಮಸ್ತಕಕ್ಕೆ ಸೇರಿ ಒಂದೊಳ್ಳೆ ಅನಿಸಿಕೆ, ಅಭಿಪ್ರಾಯ ಬಂದಾಗ ಪ್ರತಿಯೊಬ್ಬ ಬರಹಗಾರನಿಗೂ ಆಗುವ ಸಂತೋಷವಿದೆಯಲ್ಲಾ.. ಅದನ್ನು ಬರಹದಲ್ಲಿ ಹೇಳಿ ವ್ಯಕ್ತ ಪಡಿಸಲಾಗದು. ಹಾಗೆಯೇ ಒಂದು ಪುಸ್ತಕ ಹೊರತರುವುದು ಸುಲಭವೇ ಎಂದು ನೋಡಿದಾಗ ಅದೆಷ್ಟೋ ಬರಹಗಾರರು ಹೇಳುವುದು "ಇಲ್ಲ ರೀ ತುಂಬಾ ಕಷ್ಟ, ಆಗಲ್ಲ.. ಹಾಕಿರೋ ಬಂಡವಾಳವೂ ಕೈಗೆ ಸಿಗಲ್ಲ. ಪುಸ್ತಕ ಮಾರಾಟವೂ ಆಗಲ್ಲ" ಅಂತ.  ಪುಸ್ತಕ ಮಾರಾಟ ಯಾಕಾಗಲ್ಲ? ಎಂಬುವ ಪ್ರಶ್ನೆಯನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು ನಿಮ್ಮ ಹಣ ಯಾಕೆ ವಾಪಸ್ ಬರಲ್ಲ ಎಂದು ನೋಡೋಣ. ಅದಕ್ಕೂ ಮುಂಚೆ ಯಾರ ಬಳಿಯಾದರೂ ನೀವು ಹೋಗಿ ಪುಸ್ತಕ ಮಾಡ್ದೆ ಮಾರಾಟವೇ ಆಗಿಲ್ಲ ಲಾಸ್ ಆಯಿತು ಗುರು ಅಂದ್ರೆ.. "ನೀನು ಆತ್ಮತೃಪ್ತಿಗಾಗಿ ಬರೆದ್ಯ? ಅಥವಾ ಹಣಕ್ಕಾಗಿ ಬರೆದ್ಯ? ನೀನು ಸಾಹಿತ್ಯ ಮಾರಾಟ ಮಾಡ್ತೀಯ? " ಎಂದು ಕೇಳಿ ತರಾಟೆಗೆ ಎಳೆಯುವವರೂ ಇದ್ದಾರೆ ಅಲ್ಲವೇ?  ಈಗ ನನ್ನ ಸ್ವಂತ ಅನುಭವ ನಿಮಗೆ ಹೇಳ್ತೀನಿ. ಇತ್ತೀಚೆಗಷ್ಟೇ ಅದೂ ಕೊರೋನ ಮೊದಲ ಲಾಕ್ಡೌನ್ ಮುಗಿದು ಜನ ಆಗಷ್ಟೆ ಮೊದಲಿಂದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದ ಅದೇ ಸಂದರ್ಭದ...

ಪುಸ್ತಕ ಮಾಡಿಸಲು ಹೊರಟಿರುವ ಯುವಬರಹಗಾರರ ಗಮನಕ್ಕೆ..!

110 ಪುಟದ 1000 ಪ್ರತಿಗಳನ್ನು ಸ್ವಂತ ಪ್ರಕಾಶನದಿಂದ ಮಾಡಲು 27500 (ಮುಖಪಟ, ಒಳಪುಟ, ಅಕ್ಷರ ಜೋಡಣೆ, ಪ್ರಿಟಿಂಗ್, ನರ್ಲಿಂಗ್) ಮತ್ತು ಅಂಚೆ ವೆಚ್ಚ 3500 ಸಾದರ ಸ್ವೀಕಾರ, ಪತ್ರಿಕೆಗಳಿಗೆ, ಲೇಖಕರಿಗೆ : 150 ಪ್ರತಿ ಗೆಳೆಯರಿಗೆ, ಗುರುಗಳಿಗೆ, ಕುಟುಂಬಸ್ಥರಿಗೆ 150 ಪ್ರತಿ ಪ್ರಾಧಿಕಾರ, ಪ್ರಶಸ್ತಿ ಹಾಗೂ ಆಶ್ರಮಗಳಿಗೆ 100 ಪ್ರತಿ ಮಾರಾಟವಾದ ಪ್ರತಿಗಳು 250 ಉಳಿದ ಪ್ರತಿಗಳು ಗ್ರಂಥಾಲಯಕ್ಕೆ ನಾನು ಖರ್ಚು ಮಾಡಿದ ಹಣ 31000 ಪ್ರಾಧಿಕಾರದಿಂದ ಬರಬೇಕಿರುವ ಹಣ 15000 ಮಾರಾಟದಿಂದ ಬಂದ ಹಣ 20000 (10000 ರೂ ಮೌಲ್ಯದ ಪುಸ್ತಕಗಳನ್ನು ಸಂಗಾತ, ಬುಕ್ಸ್ ಲೋಕ ಮತ್ತು ಗೋಮಿನಿಯಿಂದ ತರಿಸಿಕೊಂಡಿದ್ದೇನೆ. 6000 ರೂ ಮೌಲ್ಯದ ಪುಸ್ತಕ ಇಡುವ ಬೀರು ತರಿಸಿದ್ದೇನೆ, 4000 ವರೆಗೂ ಅಂಚೆ ವೆಚ್ಚವಾಗಿದೆ) ಈ ಪ್ರಕ್ರಿಯೆ ಇಂದ ನಾನು ಕಲಿತುಕೊಂಡ ಅಂಶವೆಂದರೆ, ಯಾವ ಪ್ರಕಾಶಕರ ಬೆನ್ನು ಬೀಳದೆ, ಹಿರಿಯರಿಂದ ಮಾಹಿತಿ ಪಡೆದು ನನ್ನ ಮೊದಲ ಪುಸ್ತಕವನ್ನು ಯಾವುದೇ ಸ್ವಂತ ಕರ್ಚುಗಳಿಲ್ಲದೆ (ಖರ್ಚು ಮಾಡಿರುವ ಅಷ್ಟೂ ಹಣ ವಾಪಾಸ್ಸಾಗಿದೆ) ಸ್ವಂತ ಪ್ರಕಾಶನದಿಂದ ಪ್ರಕಟಿಸಿ ಯಶಸ್ವಿಯಾಗಿ ಸುಮಾರು ಜನರನ್ನು ತಲುಪಿದ್ದೇನೆ. ಹಾಗಾಗಿ ಯಾವುದೇ ಯುವಬರಹಗಾರರು ನಿಮ್ಮ ಬರಹಗಳನ್ನು ದುಡ್ಡು ಹೀರುವ ಕೆಲವು ಪ್ರಕಾಶಕರಿಗೆ ಒಪ್ಪಿಸುವ ಬದಲು, ನೀವೇ ಧೈರ್ಯವಾಗಿ ಮಾಹಿತಿ ಸಂಗ್ರಹಿಸಿ ಪ್ರಕಟಿಸಿ, ಯಶಸ್ವಿಯಾಗಬಹುದು. ಪುಸ್ತಕ ಮಾಡಿಸಲು ಅಷ್ಟೊಂದು...