ಅವ್ವ ಪುಸ್ತಕಲಯ ಸಾಹಿತ್ಯ ಬಳಗವು ದಿ. ನರಸಯ್ಯ ಅವರ ಸ್ಮರಣಾರ್ಥ ಕೊಡಮಾಡುವ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2023 ಫಲಿತಾಂಶ ಈ ಕೆಳಗಿನಂತಿದೆ.
ಅಹರ್ನಿಶಿ ಪ್ರಕಾಶನದ ಫಾತಿಮಾ ರಲಿಯಾ ಅವರು ಬರೆದಿರುವ "ಕಡಲು ನೋಡಲು ಹೋದವಳು" ಪ್ರಬಂಧ ಸಂಕಲನಕ್ಕೆ ಈ ವರ್ಷದ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಸಂತೋಷಕುಮಾರ ಮೆಹೆಂದಳೆ ಅವರ "ವೈಜಯಂತಿಪುರ" ಕಾದಂಬರಿ, ಚೈತ್ರಾ ಶಿವಯೋಗಿಮಠ ಅವರ "ಪೆಟ್ರಿಕೋರ್" ಕವನಸಂಕಲನ, ಗಾಯತ್ರಿರಾಜ್ ಅವರ "ಟ್ರಾಯ್" ಕಾದಂಬರಿ, ಮುನವ್ವರ್ ಜೋಗಿಬೆಟ್ಟು ಅವರ "ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಕಥಾಸಂಕಲನ ಕೃತಿಗಳು ಈ ವರ್ಷದ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ.
ಲೇಖಕ, ವಿಮರ್ಶಕರಾದ ಮಹೇಶ ಅರಬಳ್ಳಿ ಅವರು ಕೃತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದರು.
ಐದು ಕೃತಿಯ ಲೇಖಕರಿಗೆ 2024ರ ಜನೆವರಿ ತಿಂಗಳಲ್ಲಿ ನಡೆಯುವ ಅವ್ವ ವಾರ್ಷಿಕೋತ್ಸವದಲ್ಲಿ ಗೌರವಿಸಲಾಗುವುದು.
ಅಹರ್ನಿಶಿ ಪ್ರಕಾಶನದ ಫಾತಿಮಾ ರಲಿಯಾ ಅವರು ಬರೆದಿರುವ "ಕಡಲು ನೋಡಲು ಹೋದವಳು" ಪ್ರಬಂಧ ಸಂಕಲನಕ್ಕೆ ಈ ವರ್ಷದ ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ ದೊರಕಿದೆ.
ಸಂತೋಷಕುಮಾರ ಮೆಹೆಂದಳೆ ಅವರ "ವೈಜಯಂತಿಪುರ" ಕಾದಂಬರಿ, ಚೈತ್ರಾ ಶಿವಯೋಗಿಮಠ ಅವರ "ಪೆಟ್ರಿಕೋರ್" ಕವನಸಂಕಲನ, ಗಾಯತ್ರಿರಾಜ್ ಅವರ "ಟ್ರಾಯ್" ಕಾದಂಬರಿ, ಮುನವ್ವರ್ ಜೋಗಿಬೆಟ್ಟು ಅವರ "ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಕಥಾಸಂಕಲನ ಕೃತಿಗಳು ಈ ವರ್ಷದ ಮೆಚ್ಚುಗೆ ಬಹುಮಾನಕ್ಕೆ ಆಯ್ಕೆಯಾಗಿವೆ.
ಲೇಖಕ, ವಿಮರ್ಶಕರಾದ ಮಹೇಶ ಅರಬಳ್ಳಿ ಅವರು ಕೃತಿಗಳ ಆಯ್ಕೆಯಲ್ಲಿ ತೀರ್ಪುಗಾರರಾಗಿದ್ದರು.
ಐದು ಕೃತಿಯ ಲೇಖಕರಿಗೆ 2024ರ ಜನೆವರಿ ತಿಂಗಳಲ್ಲಿ ನಡೆಯುವ ಅವ್ವ ವಾರ್ಷಿಕೋತ್ಸವದಲ್ಲಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ avvapustakaalaya@gmail.com ಗೆ ಬರೆಯಿರಿ..
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ