ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ 2022 - ಕೃತಿಗಳ ಆಹ್ವಾನ - ಅವ್ವ ಪುಸ್ತಕಾಲಯ

2022 ರ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ ಪ್ರಕಟಿತ ಕೃತಿಗಳ ಆಹ್ವಾನ  * ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ " ಶ್ರೀಮಾನ್ ಲೇ. ನರಸಯ್ಯ " ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.  * 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ ಮೂರು ಪ್ರತಿಗಳನ್ನು  ಪ್ರತ್ಯೇಕ ಹಾಳೆಯಲ್ಲಿ ಬರೆದ ಸ್ವಪರಿಚಯ, ವಿಳಾಸ ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕವೇ (ರಿಜಿಸ್ಟರ್ ಪೋಸ್ಟ್) ತಮ್ಮ ಕೃತಿಗಳನ್ನು ಕಳಿಸಬಹುದಾಗಿದೆ. ಒಬ್ಬ ಲೇಖಕ ತನ್ನ ಎರಡು ಕೃತಿಗಳ ಮೂಲಕ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ.  * ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ. ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಆತ್ಮಕತೆ, ವಿಮರ್ಶಾ ಸಂಕಲನ, ಪಿ.ಹೆಚ್.ಡಿ ಪ್ರಬಂಧಗಳು, ಅನುವಾದ ಹಾಗೂ ಸಂಶೋಧನಾ ಕೃತಿಗಳನ್ನು ಹೊರತುಪಡಿಸಿ ಸಾಹಿತ್ಯದ ಯಾವುದೇ ಪ್ರಕಾರದ (ಕತೆ, ಕಾದಂಬರಿ, ಕವಿತೆ, ಗಜಲ್, ಹನಿಗವನ, ನಾಟಕ, ಲೇಖನ, ಪ್ರಬಂಧ, ಪ್ರವಾಸ ಕಥನ ಇತ್ಯಾದಿ) ಕೃತಿಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .  * ನವೆಂಬರ್ ತಿಂಗಳಲ್ಲಿ ಕಿರುಪಟ್ಟ...

ಕುರುಡು ಕಾಣ್ಕೆಯ ಕವಿತೆ - ಅನಂತ ಕುಣಿಗಲ್

ಕುರುಡು ಕಾಣ್ಕೆಯ ಕವಿತೆ (ಚಿತ್ರ : ಅಂತರ್ಜಾಲ ಕೃಪೆ https://bit.ly/3akWHkH) ಪ್ರಿಯ, ಏನದು ನಾಡಿನಲ್ಲಿ ಗಲಭೆ? ಎಲ್ಲರೂ ಕಿರುಚುತ್ತಿದ್ದಾರೆ ನನಗೆ ಕಣ್ಣಿದ್ದರೆ ನೋಡಬಹುದಿತ್ತು! ಆದರೇನು ಮಾಡಲಿ.. ಎಲ್ಲ ದನಿಗಳು ಒಟ್ಟಿಗೆ ದಾಳಿ ಮಾಡುವಾಗ ಯಾವುದಕ್ಕೆ ಕಿವಿಕೊಡಲಿ?? ಈಗ ನೀನೇ ನನಗೆ ಕಣ್ಣು!! ಪ್ರಿಯೆ, ನನಗೆ ಕಣ್ಣಿದ್ದೂ ಅರ್ಥವಾಗುತ್ತಿಲ್ಲ ಇನ್ನು ನಿನಗೇನು ಹೇಳಲಿ? ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ಸಿಕ್ಕಿಲ್ಲವಂತೆ! ಈಕಡೆಯವರು ಈಕಡೆಗೆ ತೂಗುವಂತೆ ಪತ್ರ ಬರೆಯುತ್ತಿದ್ದಾರೆ.. ಆಕಡೆಯವರು ಆಕಡೆಗೆ ತೂಗುವಂತೆ ಭಾಷಣ ಮಾಡುತ್ತಿದ್ದಾರೆ.. ನನಗೂ ತಲೆಕೆಟ್ಟಿಹೋಗಿದೆ!! ಪ್ರಿಯ, ಪಠ್ಯವಿಲ್ಲದೆ ಮಕ್ಕಳೇನು ಓದುತ್ತಾರೆ? ಸರ್ಕಾರ ಈಗ ನಿದ್ದೆ ಮಾಡುತ್ತಿಲ್ಲ ತಾನೇ?? ಯಾಕೆ ಇಷ್ಟೊಂದು ತಡವಾಗುತ್ತಿದೆ.. ಮಕ್ಕಳ ದಿನಗಳಿಗೆ ಬೆಲೆಯೇ ಇಲ್ಲವೇ?? ಇದೇನು ಹುನ್ನಾರವೇ??? ಪ್ರಿಯೆ, ಸರ್ಕಾರ ನಿದ್ದೆಯಲ್ಲಿದ್ದಿದ್ದರೆ ಎದ್ದಮೇಲಾದರೂ ತಿಳಿಯುತ್ತಿತ್ತು ಆದರೆ ಈಗ ಸತ್ತಂತೆ ನಟಿಸುತ್ತಿದೆ ನಟಿಸುವವರನ್ನು ಪ್ರಶಂಸಿಸುವುದೇ ಪ್ರೇಕ್ಷಕರ ಧರ್ಮವಲ್ಲವೇ?! ಬೇಡದಿದ್ದನ್ನು ತೆಗೆದು ಇತಿಹಾಸವನ್ನು ತಿರುಚಿ ಅವಮಾನಿಸಲಾಗುತ್ತಿದೆಯಂತೆ! ಈಗ ಸತ್ಯ-ಮಿಥ್ಯಗಳೆರಡಕ್ಕೂ ವ್ಯತ್ಯಾಸವಿಲ್ಲದಂತಾಗಿದೆ ಪದವಿಗಳೇ ಇಲ್ಲದವರು ಪಠ್ಯ ಆರಿಸಿದ್ದಾರಂತೆ ಅದರಲ್ಲಿ ಅವರಿಗೆ ಬೇಕಾದ್ದೇ ಹೆಚ್ಚಿದೆಯಂತೆ! ಅದು ಸಮಸಮಾಜದ ಕನಸನ್ನು ನುಂಗುತ್ತಿದೆಯಂತೆ ಇವರಿವರ ರಾಜಕೀಯದಲ್...