ವಿಷಯಕ್ಕೆ ಹೋಗಿ

ಕನ್ನಡ ಕಲರವ - ವಾರ್ಷಿಕೋತ್ಸವ ಸಾಹಿತ್ಯ ಸ್ಪರ್ಧೆಯ ವಿಜೇತ ಸ್ವರಚಿತ ಕವನಗಳು ಓದುಗರಿಗಾಗಿ


'ಕನ್ನಡ ಕಲರವ' ಸಾಹಿತ್ಯ ತಂಡವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಉಚಿತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವುಗಳಲ್ಲಿ ವಿಜೇತ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡ ಕವನ ವಾಚನ ಸ್ಪರ್ಧೆಯ ಕವನಗಳು ಓದುಗರಿಗಾಗಿ..


 ಪ್ರಥಮ ಬಹುಮಾನಿತ ಕವನ : ಕಣ್ಣಾಮುಚ್ಚೆ ಕಾಡೇಗೂಡೇ..
ಲೇಖಕರು : ವಿಕ್ರಮ್ ಬಿ ಕೆ

"ಒಮ್ಮೆ ಗರ್ಭಗುಡಿಯ ಸುತ್ತ
ಮತ್ತೆ ಗೋರಿಗಳ ಸುತ್ತ
ಮನೆಯವರ ಸುತ್ತ
ಎರಡು ಮನಸ್ಸುಗಳ ಮಧ್ಯ
ಕಟ್ಟುವೆವು ನಾವು ಗೋಡೆಗಳು! 

ಹಾರಿಬಂದ ಕಳ್ಳರೆಷ್ಟೋ,
ದೀಪವಚ್ಚಿ ಮಾತಾಡಿದವರೆಷ್ಟೋ,
ಕದ್ದು ಕದ್ದು ಕೇಳಿದವರಿನ್ನೆಷ್ಟೋ,
ಏಕಾಂತ ಬಯಸಿ ಬಂದವರ,
ಏಕಾಂಗಿಯಾಗಿಸಿದ 
ಆ ನಾಲ್ಕು ಗೋಡೆಗಳು! 

ಅವಳು ನರಳುವ,
ಬೆಳಕಿನ ರಾತ್ರಿಗಳು
ಅವನು ಕಾಯುವ 
ಅಧಿಕಾರದ ಕ್ಷಣಗಳು
ನಗ್ನತೆಯನ್ನ - ಮುಚ್ಚಿಡುವ
ಸಂಪ್ರದಾಯದ ಗಟ್ಟಿ ಗೋಡೆಗಳು! 

ಸಾಲಗಳಿಗೆ ಸಾಕ್ಷಿಯಾಗಿ
ನೆನಪಿನ ಚಿತ್ರಗಳ ಹೊತ್ತಿಕೊಂಡು
ಬಣ್ಣ ಬದಲಿಸಿಕೊಳ್ಳುವ,
ಒಂಟಿ ಗಡಿಯಾರದ ಒಳ್ಳೆ ಗೆಳೆಯನಾಗಿ
ಉಳಿದು - ಬೆಳೆದು - ಕಳೆದು ಹೋಗುವ ಗೋಡೆಗಳು !"

ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :



ದ್ವಿತೀಯ ಬಹುಮಾನಿತ ಕವನ : ವಿವಾಹ ವಿಚ್ಚೇದನವೆಂಬ ಗೆರೆ
ಲೇಖಕರು : ಸಂಗೀತ ಹೆಚ್ ಆರ್

"ನ್ಯಾಯ ದೇವತೆಯ ಕಣ್ಪಟ್ಟಿ ಒದ್ದೆಯಾಗಿದೆ
ಕರುಳು ಚುರುಕ್ ಎನಿಸುವ ಕಂದನ ಕೂಗಿಗೆ
ನನಗಿಬ್ಬರೂ ಬೇಕೆಂಬ ಆಕ್ರಂದನ ಬಡಿದು ಗೋಡೆಗೆ
ಅಲ್ಲಿದ್ದವರ ಕಂಗಳಲಿ ನೀರಾಗಿ ಹರಿದಿದೆ

ಹಾಸ್ಟೆಲ್ ನಲ್ಲಿ  ಆಟ, ಪಾಠ, ಊಟ ಬಗೆ ಬಗೆ
ಮೂಲೆಯಲಿ ಕೂತು ಬಿಕ್ಕಳಿಸುತಿದೆ ಮನಸು ಯಾವುದಕ್ಕೂ ಸಹಕರಿಸಿದೆ
ಪ್ರಿಯ ನಾಯಿಗಿಂದಿನಿಂದ ಊಟವಿಲ್ಲವೆಂಬ ಬೇಸರದ ಜೊತೆಗೆ
ಪುಟ್ಟ ತಮ್ಮ ಯಾರೊಂದಿಗಿಹನೋ ಎಂಬ ಆತಂಕವೂ ಇದೆ

ಸ್ನೇಹಿತರ, ಶಿಕ್ಷಕರ ಯಾವುದೇ ಮಾತಿಗೆ
ಕಣ್ಣೀರಲ್ಲದೆ ಬೇರೆ ಉತ್ತರವೆಲ್ಲಿದೆ
ಮರುಗುತಿವೆ ಪ್ರತಿ ಮನಸುಗಳು ಕಂದನ ನೋವಿಗೆ
ಕರಗದವರು ಅವರಿಬ್ಬರೇ, ಪ್ರೀತಿಯ ತಾಯಿ - ತಂದೆ

ಸ್ವಾರ್ಥವೆಂಬ ಚಾಕುವಿನಿಂದ ಇರಿದು ಮುದ್ದು ಕಂದನಿಗೆ
ನಿಷ್ಕರುಣೆಯಿಂದ ಭಾವನೆಗಳ ಬಲಿ ತೆಗೆದುಕೊಂಡಾಗಿದೆ
ಧಿಕ್ಕಾರವಿರಲಿ ಸವಿ ಬಾಲ್ಯವನು ನರಕವಾಗಿಸಿದ ಅನೀತಿಗೆ
ಮುಗ್ಧ ಪ್ರೀತಿಯನು ನಿರಾಕರಿಸಿದ ವಿಚ್ಛೇದನವೆಂಬೀ ಕ್ರೂರತೆಗೆ"

ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :



ತೃತೀಯ ಬಹುಮಾನಿತ ಕವನ : ವ್ಯಾಘ್ರಗಳ ನಡುವೆ ಕುರಿ
ಲೇಖಕರು : ರಾಘವೇಂದ್ರ ಈ ಹೋರಬೈಲು

"ಅಮಲೇರಿದ ಜಗ
ಮಾರಿಕೊಂಡ ಮನಸು
ಕಳೆದುಹೋದ ಸೊಗಸು
ಮಾನವೀಯತೆ ಮರೀಚಿಕೆ

ಕುಂಕುಮದ ಬೆಲೆಗೆ ನೆತ್ತರು
ಬೆವರಿಗೆ ಶೂನ್ಯ ಬೆಲೆ
ಸುಳ್ಳಿಗೆ ಸಾವಿರ ಕಾಲು ಲಕ್ಷ ನೆಂಟರು
ಒಂಟಿ ಕಾಲಲಿ ಕುಂಟುತ್ತಿರುವ ಒಂಟಿ ಸತ್ಯ

ಗೆದ್ದಲು ಹುಳುಗಳ ನಡುವೆ ಮತಿ
ದ್ವೇಷದಿಂದ ದ್ವೇಷ ಗೆಲುವ ಹುಂಬತನ
ನೆತ್ತರು ನೆತ್ತರ ತೊಳೆದಂತೆ
ಮಿತ್ರತನದ ಮುಖವಾಡ ಹೊದ್ದು ತಿರುಗುವ ವ್ಯಾಘ್ರ

ಕುರಿತನದ ಕತ್ತು ಕೊಯ್ಯಲು
ಭಾರೀ ಕತ್ತಿಗಳ ಮಸೆತ
ವ್ಯಾಘ್ರದ ಸಹವಾಸ ಸಾಕು ಸಾಕು
ಕುರಿತನಕೆ ಉಳಿವಿಲ್ಲ

ವ್ಯಾಘ್ರ ಕಾದಿದೆ ಕುರಿ ಬಲಿಗೆ
ತಪ್ಪಿಸಿಕೊಳ್ಳೋ ಮಾರ್ಗವಾವುದೋ
ತಿಳಿಯದ ಕುರಿ ಕಂಗಾಲು
ಕುರಿಯೂ ಬದುಕಬೇಕು ದಾರಿಯಿಲ್ಲ"


ವಾಚನದ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ :




ಧನ್ಯವಾದಗಳು..💐
- ಅನಂತ ಕುಣಿಗಲ್
ಅಧ್ಯಕ್ಷರು, ಕನ್ನಡ ಕಲರವ

ನಮ್ಮ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ :

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಓದಬೇಕಾದ ಕನ್ನಡದ ಮಹತ್ತರ ಪುಸ್ತಕಗಳು - ಅವ್ವ ಪುಸ್ತಕಾಲಯ

" ಓದಬೇಕಾದ ಕೆಲವು ಕನ್ನಡ ಸಾಹಿತ್ಯ ಪುಸ್ತಕಗಳು " (ಇದು ನನ್ನ ಸುತ್ತಲಿನವರ ಅಭಿಪ್ರಾಯದ ಮೇರೆಗೆ ಓದುಗರಲ್ಲಿ ಅಭಿರುಚಿ ಹೆಚ್ಚಿಸಲು ಕಟ್ಟಿರುವ ಪಟ್ಟಿ. ನೀವು ಓದಿರುವ ಬೆಸ್ಟ್ ಪುಸ್ತಕಗಳು ಬಿಟ್ಟುಹೋಗಿದ್ದರೆ ದಯವಿಟ್ಟು ಸೇರಿಸಿ) ತೇಜಸ್ವಿ : ಮಹಾಪಲಾಯನ ಕರ್ವಾಲೋ ಪ್ಯಾಪಿಲಾನ್ ಚಿದಂಬರ ರಹಸ್ಯ ಜುಗಾರಿಕ್ರಾಸ್ ಭಯಾನಕ ನರಭಕ್ಷಕ ಕಿರಗೂರಿನ ಗಯ್ಯಾಳಿಗಳು ಅಬಚೂರಿನ ಫೋಸ್ಟಾಫೀಸು ಕೃಷ್ಣೇಗೌಡನ ಆನೆ ಅಣ್ಣನ ನೆನಪು ಹೊಸ ವಿಚಾರಗಳು  ಕೆ ಎನ್ ಗಣೇಶಯ್ಯ : ಶಾಲಭಂಜಿಕೆ ಆರ್ಯವೀರ್ಯ ಗುಡಿಮಲ್ಲಮ್ ಚಿತಾದಂತ ಬೆಳ್ಳಿಕಾಳಬಳ್ಳಿ ಶಿಲಾಕುಲವಲಸೆ ಕನಕಮುಸುಕು  ಕರಿಸಿರಿಯಾನ ಕಪಿಲಿಪಿಸಾರ ಎಸ್ ಎಲ್ ಬಿ : ಭಿತ್ತಿ ವಂಶವೃಕ್ಷ ಗೃಹಭಂಗ ನಾಯಿ ನೆರಳು ಕವಲು ಯಾನ ಸಾರ್ಥ ಪರ್ವ ದಾಟು ಮಂದ್ರ ಆವರಣ  ಅನ್ವೇಷಣ ತ.ರಾ.ಸು : ನಾಗರಹಾವು ಮಸಣದ ಹೂ ಹಂಸಗೀತೆ ಶಿಲ್ಪಶ್ರೀ ರಕ್ತರಾತ್ರಿ ತಿರುಗುಬಾಣ ದುರ್ಗಾಸ್ತಮಾನ  ಗಿರೀಶ್ ಖಾರ್ನಾಡ್ : ಆಡಾಡತ ಆಯುಷ್ಯ ತುಘಲಕ್ ತಲೆದಂಡ ಹಯವದನ ನಾಗಮಂಡಲ ಯಯಾತಿ  ವಸುದೇಂಧ್ರ : ಮೋಹನಸ್ವಾಮಿ ಹಂಪಿ ಎಕ್ಸ್ ಪ್ರೆಸ್ ತೇಜೋ ತುಂಗಭದ್ರ ನಮ್ಮಮ್ಮ ಅಂದ್ರೆ ನಂಗಿಷ್ಟ ಐದು ಪೈಸೆ ವರದಕ್ಷಿಣೆ  ಜೋಗಿ : L ಅಶ್ವತ್ಥಾಮನ್ ಬೆಂಗಳೂರು ಸೀರೀಸ್  ಹಲಗೆ ಬಳಪ ಜಾನಕಿ ಕಾಲಂ ಚಂ. ಶೇ. ಕಂ : ಜೋಕುಮಾರಸ್ವಾಮಿ ಸಂಗ್ಯಾಬಾಳ್ಯ ಸಾಂಬಶಿವ ಪ್ರಹಸನ ಸಿರಿಸಂಪಿಗೆ ಮಹಾಮಾಯಿ ಸಿಂಗಾರೆವ್ವ & ಅರಮನೆ...

ಸಾಹಿತ್ಯ ಸ್ಪರ್ಧೆಗಳು 2023

ವಾರ್ಷಿಕೋತ್ಸವ ಸ್ಪರ್ಧೆಗಳು 2023 ಅವ್ವ ಪುಸ್ತಕಾಲಯ ಸಾಹಿತ್ಯ ಬಳಗದ ವತಿಯಿಂದ ವಾರ್ಷಿಕೋತ್ಸವದ ಪ್ರಯುಕ್ತ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರೆಲ್ಲರೂ ಭಾಗವಹಿಸಬಹುದು. ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ನೊಂದಣಿ ಇರುವುದಿಲ್ಲ. ಸ್ಪರ್ಧೆ 01 - ಪದಬಂದ ರಚನೆ * 4×4 ಮನೆಯ ಪದಬಂಧ ರಚಿಸಬೇಕು. * ಹಾಳೆ ಮೇಲೆ ಬರೆದು ಫೋಟೋ ಕಳಿಸಬಹುದು. * ಕನ್ನಡ ಸಾಹಿತ್ಯ ಪುಸ್ತಕಗಳ ಹೆಸರು, ಲೇಖಕರು, ಪ್ರಶಸ್ತಿಗಳು, ಕೃತಿಯಲ್ಲಿ ಬರುವ ಊರು, ಪಾತ್ರ ಇವುಗಳನ್ನು ಬಳಸಿಕೊಳ್ಳಬಹುದು. ಸ್ಪರ್ಧೆ 02 - ಸ್ವರಚಿತ ಕವನ ಸ್ಪರ್ಧೆ * ಗರಿಷ್ಟ 20 ಸಾಲುಗಳ ಕವನ ರಚಿಸಬೇಕು. * ಯಾವುದೇ ವಿಷಯದ ಮೇಲೆ ಕವಿತೆ ರಚಿಸಬಹುದು. ಸ್ವರಚಿತವಾಗಿರಬೇಕು. ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. * ಆಯ್ಕೆಯಾದರೆ 2024ರ ಜನೆವರಿಯಲ್ಲಿ ನಡೆಯುವ ಅವ್ವ ಪುಸ್ತಕಾಲಯ ವಾರ್ಷಿಕೋತ್ಸವದ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪದಬಂಧ ಹಾಗೂ ಸ್ವರಚಿತ ಕವಿತೆಯನ್ನು ಮೇಲ್ ಮಾಡಲು ಡಿಸೆಂಬರ್ - 31- 2023 ಕೊನೆಯ ದಿನ. ತೀರ್ಪುಗಾರರ ತೀರ್ಮಾನವೇ ಅಂತಿಮ. ಮೇಲ್ : avvapustakaalaya@gmail.com ಪದಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮವೆನಿಸಿದ ಐವರಿಗೆ & ಸ್ವರಚಿತ ಕವನ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಹತ್ತು ಜನರಿಗೆ ಪ್ರಶಸ್ತಿಪತ್ರ, ಪುಸ್ತಕ ಬಹುಮಾನ ಹಾಗೂ ನಗದು ಬಹುಮಾನವಿರುತ್ತದೆ.

ಯಾರ ಸ್ವಾತಂತ್ರ್ಯ? - ಕವಿತೆ - ಚಂದ್ರಪ್ಪ ಬೆಲವತ್ತ

ಯಾರ ಸ್ವಾತಂತ್ರ್ಯ ? ಬಂತಪ್ಪ ಸ್ವಾತಂತ್ರ್ಯ  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  47ರ  ಮಧ್ಯ ರಾತ್ರಿಯ ಸ್ವಾತಂತ್ರ್ಯ  ಭೂಮಿ ನುಂಗುವರ ಪಾಲಿಗೆ ಬಂತು ಅನುದಾನ ತಿನ್ನುವರ ನಾಲ್ಗೆಗೆ  ಬಂತು ಸುಳ್ಳು ಬುರುಕರ ಪಾಲಿಗೆ ಬಂತು  ಆಗಷ್ಟ್ ಹದಿನೈದರ ಸ್ವಾತಂತ್ರ್ಯ  ಕಾಳ ಧನಿಕರ ಜೇಬಿಗೆ ಬಂತು  ಬಡವರ ಕೊರಳಿಗೆ ಉರುಳೆ ಆಯ್ತು  ಹೆಣ್ಣು ಮಕ್ಕಳ ಕಣ್ಣೀರಾಯ್ತು  47ರ ಸ್ವಾತಂತ್ರ್ಯ ಮಧ್ಯರಾತ್ರಿಯ ಸ್ವಾತಂತ್ರ್ಯ  ಧರ್ಮಗಳ ನಡುವಿನ ಕಂದರವಾಯ್ತು ಜಾತಿಯ ಆಳದ ಬೇರು ಬಿಟ್ಟಾಯ್ತು  ಮಾನವ ಧರ್ಮವ ಮರೆಯಿಸಿ ಬಿಟ್ಟಿತು  ಆಗಷ್ಟ್ 15ರ ಸ್ವಾತಂತ್ರ್ಯ  ಸಮಾನ ಆರೋಗ್ಯ ತರಲೇ ಇಲ್ಲ  ಸಮಾನ ಶಿಕ್ಷಣ ಕೊಡಿಸಲೇ ಇಲ್ಲ  ಸಮಾನ ಸಂಪತ್ತು ಹಂಚಲೇ ಇಲ್ಲ  47ರ ಮಧ್ಯರಾತ್ರಿಯ ಸ್ವಾತಂತ್ರ್ಯ  ಜಾತಿಯ ಸೋಂಕು ತೊಲಗಲೇ ಇಲ್ಲ  ಅಸಮಾನತೆಯ ನೀಗಿಸಲಿಲ್ಲ  ಹಸಿದವರತ್ತ ಸರಿಯಲೂ ಇಲ್ಲ  ಆಗಷ್ಟ್ 15ರ ಸ್ವಾತಂತ್ರ್ಯ  ಸುಳ್ಳು ಬುರುಕರ ಪಾಲಿಗೆ ಬಂತೆ  ಕೋಮುವಾದಿಗಳ ಬಾಯಿಗೆ ಬಂತೆ ರಿವಾಜು ದಿಕ್ಕರಿಸುವವರ ಜೊತೆಗೆ ಇತ್ತೇ  47ರ ಸ್ವಾತಂತ್ರ್ಯ  ಕಾಲಿನ ಕೋಳವು ಮುರಿಯಲು ಇಲ್ಲ ಜೀತದ ದುಡಿಮೆಯು ನಿಲ್ಲಲೇ ಇಲ್ಲ  ದಣಿಗಳ  ದನಿಯು ಕುಗ್ಗಲೇ ಇಲ್ಲ  ಬಡವನ ಬವಣೆ  ತಗ್ಗಿಸಲಿಲ್ಲ  47ರ ಸ್ವಾತ...