"ಜ್ಞಾನ ಸಂಪಾದಿಸಿಕೊಳ್ಳದ ಹೊರತು
ನಿಮ್ಮಿಂದ ಸೃಜನಶೀಲತೆ ಹರಹೊಮ್ಮಲು ಸಾಧ್ಯವೇ ಇಲ್ಲ!!"
ಇತ್ತೀಚಿನ ಯುವಬರಹಗಾರರು ಹಾದಿ ತಪ್ಪುವ ವಿಷಯವಾಗಿ ಈ ಸಾಲುಗಳನ್ನು ಹೇಳಬೇಕಾಯ್ತು.
ಯಾವುದೋ ಒಂದು ಘಟನೆಯಿಂದಲೇ ಪ್ರೇರೇಪಿತರಾಗಿ ಬರೆದ ಎಲ್ಲವನ್ನೂ ಪುಸ್ತಕ ಮಾಡಿಸಬೇಕು. ಫೇಸ್ಬುಕ್, ವಾಟ್ಸಪ್ ಗೆಳೆಯರು ಕೊಂಡು ಓದುತ್ತಾರೆ. ಎಂಬ ಜೊಳ್ಳು ನಿರೀಕ್ಷೆಯಿಂದ ಮೌಲ್ಯಯುತವಲ್ಲದ ಬರಹಗಳನ್ನು ಕೂಡಿಸಿಕೊಂಡು ಪ್ರಕಾಶಕರ ಬಳಿ ಹೋಗುತ್ತಾರೆ. ಅಲ್ಲಿ ಮುಖಭಂಗ ನಡೆದ ನಂತರ ವಾಪಾಸ್ಸಾಗಿ ಸಾಹಿತ್ಯದ ಘಮಲಿನಿಂದ ದೂರವೇ ಉಳಿದುಬಿಡುತ್ತಾರೆ.
ಪ್ರಕಾಶಕರು ನಿಮ್ಮ ಪುಸ್ತಕ ಪ್ರಕಟಿಸಬೇಕೆಂದರೆ, ನಿಮ್ಮ ಬರಹಗಳಲ್ಲಿ ಮೌಲ್ಯಯುತ ಅಂಶಗಳಿರಬೇಕು. ಭಾಷಾಶುದ್ಧಿ ಇರುಬೇಕು. ಮತ್ತು ನೀವು ಕೆಲವರಿಗಾದರೂ ಪರಿಚಯವಿರಬೇಕು (ಅಂದರೆ, ನಿಮ್ಮ ಪುಸ್ತಕಗಳನ್ನು ಕೊಳ್ಳುವ ಜನರಿರಬೇಕು).
ಅಥವಾ, ಪ್ರಕಟ ಮಾಡಲು ಹಣ ಕೊಟ್ಟು, ಪ್ರಕಟಿಸಿದ ಪುಸ್ತಕಗಳನ್ನು ನೀವೇ ಕೊಂಡುಕೊಳ್ಳಬೇಕು.
ಎರಡೂ ವಿಷಯಗಳು ನಿಮ್ಮ ನೆಮ್ಮದಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಹೆಚ್ಚೆಚ್ಚು ಓದಿ, ನಿಮ್ಮ ಬರಹಗಳನ್ನು ಗೆಳೆಯರಿಂದಲೇ ತಿದ್ದುಪಡಿ ಮಾಡಿಸಿ, ನೀವೇ ಸ್ವಂತ ಪ್ರಕಟಿಸಿ. ಮೊದಲ ಪ್ರಕಟಣೆಯ ಫಲವೇ ನಿಮ್ಮ ಮುಂದಿನ ಪ್ರಯತ್ನಕ್ಕೆ ನಾಂದಿಯಾಗಬಹುದು. ಅಥವಾ ಆಗದೇ ಇರಬಹುದು. ಆಗದಿದ್ದರೆ ಇನ್ನಷ್ಟು ಓದಿ ನಂತರ ಬರೆಯಿರಿ..
ಈಗಾಗಲೇ ಬರೆದಿದ್ದನ್ನು ಬಿಟ್ಟು ಹೊಸತನ್ನು ಹುಡುಕಿ. ಹೊಸತು ಸಿಗುವವರೆಗೂ ಬರೆಯಲು ಮುಂದಾಗಬೇಡಿ. ಬರೆದಿದ್ದನ್ನು ಸ್ವಲ್ಪ ಸ್ವಲ್ಪವೇ ಸಾಮಾಜಿಕ ಜಾಲತಾಣಗಳಲ್ಲಿ, ಲೋಕಲ್ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟಿಸಿ. ಪ್ರತ್ಯುತ್ತರವನ್ನು ಕಂಡುಕೊಂಡು ನಂತರ ಮುಂದುವರೆಯಿರಿ.
ಒಂದು ತಿಳಿಯಿರಿ, ಈ ಯೋಜನೆಯಲ್ಲಿ ಎಷ್ಟು ಉಷಾರಾಗಿರ್ತೀವೋ ಅಷ್ಟು ಒಳ್ಳೆಯದು. ನೀವೇ ಪ್ರಕಟಿಸುವುದರಿಂದ. ಅದರ ಏಳು-ಬೀಳುಗಳು ನಿಮ್ಮದೇ ಆಗಿರುತ್ತವೆ. ನಿಮ್ಮ ಬರಹಗಳ ಮೇಲೆ ನಿಮಗೆ ನಂಬಿಕೆ ಬರುವವರೆಗೂ ಯಾವುದಕ್ಕೂ ಹಾತೊರೆಯಬೇಡಿ. ಎಲ್ಲದರೊಳಗೆ ಆಳವಾಗಿ ಹೋಗಿ ಬನ್ನಿ.. ಸಾಹಿತ್ಯದೊಳಗೂ ಕೂಡ..
ಇದಿಷ್ಟು ನನ್ನ ಸ್ವ-ಅನುಭವಕ್ಕೆ ಬಂದದ್ದು. ಇದರಿಂದ ಯಾರೂ ನನ್ನ ಟಾರ್ಗೆಟ್ ಅಲ್ಲ. ವಿಷಯ ತಿಳಿಸುವುದಷ್ಟೇ ನನ್ನ ಕೆಲಸ. 'ನೀವು ಬೇರೆಯವರ ಪುಸ್ತಕಗಳನ್ನು ಕೊಂಡು ಓದದ ಹೊರತು, ನಿಮ್ಮ ಪುಸ್ತಕಗಳನ್ನು ಅದ್ಯಾರು ಓದುತ್ತಾರೋ ನನಗಂತೂ ತಿಳಿದಿಲ್ಲ.'
ನೀವು perfect ಆಗುವವರೆಗೂ..
"ಆ paperನವರ ನಂಬರ್ ಕೊಡಿ. ಪ್ರಕಾಶನ ಹೇಗೆ ಮಾಡುವುದು. ಸಾವಿರ ಕವನಗಳನ್ನು ಬರೆದಿದ್ದೇನೆ. ಪುಸ್ತಕ ಮಾಡಿಸ್ತೀನಿ ಮುನ್ನುಡಿ ಬರ್ಕೊಡಿ."
ಈ ಯಾವ ಕೊರಗುತನವೂ ನಿಮ್ಮ ಕೈ-ಹಿಡಿಯುವುದಿಲ್ಲ.
ಎಲ್ಲರಿಗೂ ಶುಭವಾಗಲಿ..
ನಮ್ಮ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ..
ನಿಮ್ಮಿಂದ ಸೃಜನಶೀಲತೆ ಹರಹೊಮ್ಮಲು ಸಾಧ್ಯವೇ ಇಲ್ಲ!!"
ಇತ್ತೀಚಿನ ಯುವಬರಹಗಾರರು ಹಾದಿ ತಪ್ಪುವ ವಿಷಯವಾಗಿ ಈ ಸಾಲುಗಳನ್ನು ಹೇಳಬೇಕಾಯ್ತು.
ಯಾವುದೋ ಒಂದು ಘಟನೆಯಿಂದಲೇ ಪ್ರೇರೇಪಿತರಾಗಿ ಬರೆದ ಎಲ್ಲವನ್ನೂ ಪುಸ್ತಕ ಮಾಡಿಸಬೇಕು. ಫೇಸ್ಬುಕ್, ವಾಟ್ಸಪ್ ಗೆಳೆಯರು ಕೊಂಡು ಓದುತ್ತಾರೆ. ಎಂಬ ಜೊಳ್ಳು ನಿರೀಕ್ಷೆಯಿಂದ ಮೌಲ್ಯಯುತವಲ್ಲದ ಬರಹಗಳನ್ನು ಕೂಡಿಸಿಕೊಂಡು ಪ್ರಕಾಶಕರ ಬಳಿ ಹೋಗುತ್ತಾರೆ. ಅಲ್ಲಿ ಮುಖಭಂಗ ನಡೆದ ನಂತರ ವಾಪಾಸ್ಸಾಗಿ ಸಾಹಿತ್ಯದ ಘಮಲಿನಿಂದ ದೂರವೇ ಉಳಿದುಬಿಡುತ್ತಾರೆ.
ಪ್ರಕಾಶಕರು ನಿಮ್ಮ ಪುಸ್ತಕ ಪ್ರಕಟಿಸಬೇಕೆಂದರೆ, ನಿಮ್ಮ ಬರಹಗಳಲ್ಲಿ ಮೌಲ್ಯಯುತ ಅಂಶಗಳಿರಬೇಕು. ಭಾಷಾಶುದ್ಧಿ ಇರುಬೇಕು. ಮತ್ತು ನೀವು ಕೆಲವರಿಗಾದರೂ ಪರಿಚಯವಿರಬೇಕು (ಅಂದರೆ, ನಿಮ್ಮ ಪುಸ್ತಕಗಳನ್ನು ಕೊಳ್ಳುವ ಜನರಿರಬೇಕು).
ಅಥವಾ, ಪ್ರಕಟ ಮಾಡಲು ಹಣ ಕೊಟ್ಟು, ಪ್ರಕಟಿಸಿದ ಪುಸ್ತಕಗಳನ್ನು ನೀವೇ ಕೊಂಡುಕೊಳ್ಳಬೇಕು.
ಎರಡೂ ವಿಷಯಗಳು ನಿಮ್ಮ ನೆಮ್ಮದಿಗೆ ಪೂರಕವಾಗಿರುವುದಿಲ್ಲ. ಹಾಗಾಗಿ ಹೆಚ್ಚೆಚ್ಚು ಓದಿ, ನಿಮ್ಮ ಬರಹಗಳನ್ನು ಗೆಳೆಯರಿಂದಲೇ ತಿದ್ದುಪಡಿ ಮಾಡಿಸಿ, ನೀವೇ ಸ್ವಂತ ಪ್ರಕಟಿಸಿ. ಮೊದಲ ಪ್ರಕಟಣೆಯ ಫಲವೇ ನಿಮ್ಮ ಮುಂದಿನ ಪ್ರಯತ್ನಕ್ಕೆ ನಾಂದಿಯಾಗಬಹುದು. ಅಥವಾ ಆಗದೇ ಇರಬಹುದು. ಆಗದಿದ್ದರೆ ಇನ್ನಷ್ಟು ಓದಿ ನಂತರ ಬರೆಯಿರಿ..
ಈಗಾಗಲೇ ಬರೆದಿದ್ದನ್ನು ಬಿಟ್ಟು ಹೊಸತನ್ನು ಹುಡುಕಿ. ಹೊಸತು ಸಿಗುವವರೆಗೂ ಬರೆಯಲು ಮುಂದಾಗಬೇಡಿ. ಬರೆದಿದ್ದನ್ನು ಸ್ವಲ್ಪ ಸ್ವಲ್ಪವೇ ಸಾಮಾಜಿಕ ಜಾಲತಾಣಗಳಲ್ಲಿ, ಲೋಕಲ್ ಪತ್ರಿಕೆಗಳಲ್ಲಿ ಹಾಗೂ ಬ್ಲಾಗ್ ಗಳಲ್ಲಿ ಪ್ರಕಟಿಸಿ. ಪ್ರತ್ಯುತ್ತರವನ್ನು ಕಂಡುಕೊಂಡು ನಂತರ ಮುಂದುವರೆಯಿರಿ.
ಒಂದು ತಿಳಿಯಿರಿ, ಈ ಯೋಜನೆಯಲ್ಲಿ ಎಷ್ಟು ಉಷಾರಾಗಿರ್ತೀವೋ ಅಷ್ಟು ಒಳ್ಳೆಯದು. ನೀವೇ ಪ್ರಕಟಿಸುವುದರಿಂದ. ಅದರ ಏಳು-ಬೀಳುಗಳು ನಿಮ್ಮದೇ ಆಗಿರುತ್ತವೆ. ನಿಮ್ಮ ಬರಹಗಳ ಮೇಲೆ ನಿಮಗೆ ನಂಬಿಕೆ ಬರುವವರೆಗೂ ಯಾವುದಕ್ಕೂ ಹಾತೊರೆಯಬೇಡಿ. ಎಲ್ಲದರೊಳಗೆ ಆಳವಾಗಿ ಹೋಗಿ ಬನ್ನಿ.. ಸಾಹಿತ್ಯದೊಳಗೂ ಕೂಡ..
ಇದಿಷ್ಟು ನನ್ನ ಸ್ವ-ಅನುಭವಕ್ಕೆ ಬಂದದ್ದು. ಇದರಿಂದ ಯಾರೂ ನನ್ನ ಟಾರ್ಗೆಟ್ ಅಲ್ಲ. ವಿಷಯ ತಿಳಿಸುವುದಷ್ಟೇ ನನ್ನ ಕೆಲಸ. 'ನೀವು ಬೇರೆಯವರ ಪುಸ್ತಕಗಳನ್ನು ಕೊಂಡು ಓದದ ಹೊರತು, ನಿಮ್ಮ ಪುಸ್ತಕಗಳನ್ನು ಅದ್ಯಾರು ಓದುತ್ತಾರೋ ನನಗಂತೂ ತಿಳಿದಿಲ್ಲ.'
ನೀವು perfect ಆಗುವವರೆಗೂ..
"ಆ paperನವರ ನಂಬರ್ ಕೊಡಿ. ಪ್ರಕಾಶನ ಹೇಗೆ ಮಾಡುವುದು. ಸಾವಿರ ಕವನಗಳನ್ನು ಬರೆದಿದ್ದೇನೆ. ಪುಸ್ತಕ ಮಾಡಿಸ್ತೀನಿ ಮುನ್ನುಡಿ ಬರ್ಕೊಡಿ."
ಈ ಯಾವ ಕೊರಗುತನವೂ ನಿಮ್ಮ ಕೈ-ಹಿಡಿಯುವುದಿಲ್ಲ.
ಎಲ್ಲರಿಗೂ ಶುಭವಾಗಲಿ..
ನಮ್ಮ ತಂಡ ಸೇರಲು ಇಲ್ಲಿ ಕ್ಲಿಕ್ ಮಾಡಿ..
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ